AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BMTC: ಕ್ಯೂಆರ್- ಕೋಡ್ ಟಿಕೆಟ್ ಪದ್ಧತಿಯನ್ನು ಮರುಪರಿಚಯಿಸಲಿದೆ ಬಿಎಂಟಿಸಿ; ಸಂಪೂರ್ಣ ಮಾಹಿತಿ ಇಲ್ಲಿದೆ

ಬಿಎಂಟಿಸಿಯ ಎಸಿ ಬಸ್​ಗಳಲ್ಲಿ ಕ್ಯೂಆರ್​ ಕೋಡ್ ಟಿಕೆಟ್ ಸೇವೆಯನ್ನು ಮರು ಪರಿಚಯಿಸಲು ನಿರ್ಧರಿಸಿದೆ. ಇದು ಯಾವೆಲ್ಲಾ ಬಸ್​ಗಳಿಗೆ ಅನ್ವಯವಾಗಲಿದೆ? ಇಲ್ಲಿದೆ ಮಾಹಿತಿ.

BMTC: ಕ್ಯೂಆರ್- ಕೋಡ್ ಟಿಕೆಟ್ ಪದ್ಧತಿಯನ್ನು ಮರುಪರಿಚಯಿಸಲಿದೆ ಬಿಎಂಟಿಸಿ; ಸಂಪೂರ್ಣ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Updated By: shivaprasad.hs|

Updated on:Dec 16, 2021 | 2:24 PM

Share

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೆಂಗಳೂರಿನ ಎಲ್ಲಾ ಎಸಿ ಬಸ್‌ಗಳಲ್ಲಿ ಕ್ಯೂಆರ್-ಕೋಡ್ ಟಿಕೆಟ್ ಅನ್ನು ಮರು ಪರಿಚಯಿಸಲು ನಿರ್ಧರಿಸಿದೆ. ಹಣ ಪಾವತಿಸಿದ ದೃಢೀಕರಣವು ತತ್​​ಕ್ಷಣ ಲಭ್ಯವಾಗುವುದಕ್ಕಾಗಿ ನಗರ ಸಾರಿಗೆ ನಿಗಮವು ಪೇಟಿಎಂ ಸೌಂಡ್‌ಬಾಕ್ಸ್‌ಗಳನ್ನು (ಸ್ಪೀಕರ್‌ಗಳು) ಕಂಡಕ್ಟರ್‌ಗಳಿಗೆ ಒದಗಿಸಲಿದೆ. ಪಾವತಿಯನ್ನು ಮಾಡಿದ ನಂತರ, ಅದು ಆಡಿಯೊ ಸಂದೇಶದ ಮೂಲಕ ಖಚಿತಪಡಿಸಲಿದೆ. ಸಮೂಹ ಸಾರಿಗೆಯಲ್ಲಿ ಡಿಜಿಟಲ್ ತಂತ್ರಜ್ಞಾನದತ್ತ ಸಾಗುತ್ತಿರುವ ಬಿಎಂಟಿಸಿ (BMTC) ಮುಖ್ಯವಾಗಿ ಎಸಿ ಬಸ್‌ಗಳಿಗೆ 500 ಸ್ಪೀಕರ್‌ಗಳನ್ನು ಖರೀದಿಸಲು ಯೋಜಿಸುತ್ತಿದೆ. ಏತನ್ಮಧ್ಯೆ, ಬೆಂಗಳೂರಿನ (Bengaluru) ರಸ್ತೆಗಳಲ್ಲಿ 190 ಎಸಿ ಬಸ್‌ಗಳು ಸಂಚರಿಸುತ್ತಿದ್ದು, ಸಾರಿಗೆ ಇಲಾಖೆಯು ಹೆಚ್ಚಿನ ಎಸಿ ಬಸ್‌ಗಳನ್ನು ನಿಯೋಜಿಸಲು ಚಿಂತನೆ ನಡೆಸುತ್ತಿದೆ. ಮಾರ್ಚ್ ಅಂತ್ಯದ ವೇಳೆಗೆ ಬಸ್‌ಗಳ ಸಂಖ್ಯೆ 400ಕ್ಕೆ ಏರಲಿದೆ ಎಂದು ಮೂಲಗಳು ತಿಳಿಸಿವೆ.

ಮೇ 2020 ರಲ್ಲಿ, ಎಲ್ಲಾ ಬಸ್‌ಗಳಲ್ಲಿ ಯುಪಿಐ ಕ್ಯೂಆರ್​ (UPI QR) ಕೋಡ್ ಆಧಾರಿತ ಪ್ರಯಾಣ ಸೌಲಭ್ಯವನ್ನು ಪ್ರಾರಂಭಿಸಲಾಯಿತು ಆದರೆ ಕೆಲವು ಕಾರಣಗಳಿಂದ ಅದನ್ನು ನಿಲ್ಲಿಸಲಾಗಿತ್ತು. ಈ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದ, ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎವಿ ಸೂರ್ಯ ಸೇನ್, “ನಾವು 500 ಸ್ಪೀಕರ್‌ಗಳನ್ನು ಖರೀದಿಸಲು ಯೋಜಿಸುತ್ತಿದ್ದೇವೆ. ಮುಖ್ಯವಾಗಿ ಎಸಿ ಬಸ್‌ಗಳಿಗೆ ಮತ್ತು ಬಸ್ ಕಂಡಕ್ಟರ್‌ಗಳು ಈ ಸ್ಪೀಕರ್‌ಗಳನ್ನು ತಮ್ಮ ಬ್ಯಾಗ್‌ಗಳಲ್ಲಿ ಇಡಬಹುದು” ಎಂದು ಖಾಸಗಿ ಮಾಧ್ಯಮವೊಂದು ಉಲ್ಲೇಖಿಸಿದೆ.

ಎಲ್ಲಾ ನಾನ್-ಎಸಿ ಬಸ್‌ಗಳಲ್ಲಿ ಕ್ಯೂಆರ್-ಕೋಡ್ ಟಿಕೆಟಿಂಗ್ ಅನ್ನು ಮರುಪ್ರಾರಂಭಿಸುವ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಅಧಿಕಾರಿಯೊಬ್ಬರು, ಎಲ್ಲಾ ಬಸ್‌ಗಳಲ್ಲಿ ನಗದು ರಹಿತ ಸೌಲಭ್ಯ ಲಭ್ಯವಿದೆ. ಆದರೆ ಸಾರಿಗೆ ನಿಗಮವು ನಾನ್-ಎಸಿ ಬಸ್‌ಗಳಿಗೆ ಸ್ಪೀಕರ್ ಖರೀದಿಸುವ ಯೋಜನೆ ಹೊಂದಿಲ್ಲ ಎಂದು ಹೇಳಿದ್ದಾರೆ.

BMTC

ಪ್ರಾತಿನಿಧಿಕ ಚಿತ್ರ

ಇದನ್ನೂ ಓದಿ:

ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳು: ಭುಗಿಲೆದ್ದ ಆಕ್ರೋಶ, ಘಟನೆಯನ್ನು ಖಂಡಿಸಿದ ನಟ ದ್ರುವ ಸರ್ಜಾ

ಲೈಂಗಿಕ ಹಗರಣ ಆರೋಪ: ಗೋವಾ ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸಚಿವ ಮಿಲಿಂದ್ ನಾಯಕ್ ರಾಜೀನಾಮೆ

Published On - 2:09 pm, Thu, 16 December 21

ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
ಉತ್ತಮ ಮಳೆಯಿಂದಾಗಿ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು
ಉತ್ತಮ ಮಳೆಯಿಂದಾಗಿ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು
ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಏಕಾಏಕಿ ಅಡ್ಡಬಂದ ಕಾಡಾನೆ: ವಿಡಿಯೋ ವೈರಲ್
ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಏಕಾಏಕಿ ಅಡ್ಡಬಂದ ಕಾಡಾನೆ: ವಿಡಿಯೋ ವೈರಲ್
ಸನಾತನ ಧರ್ಮದಲ್ಲಿ 9 ರ ಸಂಖ್ಯೆಯ ಮಹತ್ವ ಏನು ಗೊತ್ತೇ? ಇಲ್ಲಿದೆ ನೋಡಿ
ಸನಾತನ ಧರ್ಮದಲ್ಲಿ 9 ರ ಸಂಖ್ಯೆಯ ಮಹತ್ವ ಏನು ಗೊತ್ತೇ? ಇಲ್ಲಿದೆ ನೋಡಿ