AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಸ್​ಆರ್​ಟಿಸಿ ಇಂಟರ್​ಸಿಟಿ ಎಸಿ ಇವಿ ಪವರ್​ ಪ್ಲಸ್ ಬಸ್​ಗಳಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ಬೆಂಗಳೂರಿನಿಂದ 6 ಜಿಲ್ಲೆಗಳಿಗೆ ಸಂಚರಿಸಲಿರುವ ಇವಿ ಪವರ್​ ಪ್ಲಸ್ ಬಸ್​ಗೆ ವಿಧಾನಸೌಧದ ಗ್ರ್ಯಾಂಡ್​ ಸ್ಟೆಪ್ಸ್​ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಇಂದು (ಮಾ. 20) ಚಾಲನೆ ನೀಡಿದರು.

ಕೆಎಸ್​ಆರ್​ಟಿಸಿ ಇಂಟರ್​ಸಿಟಿ ಎಸಿ ಇವಿ ಪವರ್​ ಪ್ಲಸ್ ಬಸ್​ಗಳಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
ಇವಿ ಪವರ್​ ಪ್ಲಸ್ ಬಸ್Image Credit source: timesnownews.com
ಗಂಗಾಧರ​ ಬ. ಸಾಬೋಜಿ
|

Updated on: Mar 20, 2023 | 4:40 PM

Share

ಬೆಂಗಳೂರು: ಬೆಂಗಳೂರಿನಿಂದ 6 ಜಿಲ್ಲೆಗಳಿಗೆ ಸಂಚರಿಸಲಿರುವ ಇವಿ ಪವರ್​ ಪ್ಲಸ್ ಬಸ್​ಗೆ ( AC EV Power Plus buses) ವಿಧಾನಸೌಧದ ಗ್ರ್ಯಾಂಡ್​ ಸ್ಟೆಪ್ಸ್​ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಇಂದು (ಮಾ. 20) ಚಾಲನೆ ನೀಡಿದರು. ಕೆಎಸ್​ಆರ್​ಟಿಸಿ ಇಂಟರ್​ಸಿಟಿ ಎಸಿ ಇವಿ ಪವರ್​ ಪ್ಲಸ್ ಬಸ್​​ ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಸಂಚರಿಸಲಿವೆ. ಒಮ್ಮೆ ಚಾರ್ಜ್​ ಮಾಡಿದರೆ 300 ಕಿಲೋಮೀಟರ್​ ಸಂಚರಿಸಲಿವೆ. ಮೇಘಾ ಇಂಜಿನಿಯರಿಂಗ್‌ ಕಂಪನಿಯ ಸೋದರ ಸಂಸ್ಥೆ ಒಲೆಕ್ಟ್ರಾ ಅಡಿಯಲ್ಲಿ ತಯಾರಿಸಲಾದ ಪವರ್‌ ಪ್ಲಸ್ ಎಲೆಕ್ಟ್ರಾನಿಕ್ ಬಸ್‌ಗಳು ಕರ್ನಾಟಕದಲ್ಲಿ ಕಮಾಲ್​ ಮಾಡಲಿವೆ. ಫೆಬ್ರವರಿಯಿಂದ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚಾರ ಮಾಡಲಿದ್ದು, ಅತಿ ಶೀಘ್ರವೇ ಇನ್ನೂ 50 ಎಲೆಕ್ಟ್ರಾನಿಕ್ ಬಸ್‌ಗೆ ಹಸಿರು ನಿಶಾನೆ ತೋರಲಿದ್ದಾರೆ.

ಇವಿ ಪವರ್​ ಪ್ಲಸ್ ಬಸ್​ನ ವಿಶೇಷತೆಗಳು

12 ಮೀಟರ್ ಉದ್ದವಿರುವ ಬಸ್ ಇದಾಗಿದೆ. ಸುಧಾರಿತ Li-on Phosphate battery ಹೊಂದಿರುವ ಇದು 200 ಗಂಟೆಗಳಲ್ಲೇ ಫಾಸ್ಟ್ ಚಾರ್ಜ್ ಮಾಡಬಹುದಾಗಿದೆ. ಚಾಲಕರು ನಿರ್ವಾಹಕರು ಸೇರಿದಂತೆ 45 ಆಸನಗಳನ್ನ ಹೊಂದಿದೆ. ಬಸ್​ನಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಅಗ್ನಿಶಾಮಕ ಸಾಧನ, ಎಮರ್ಜೆನ್ಸಿ ಬಟನ್, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮರ್ ಮುಂತಾದ ಸುರಕ್ಷಿತ ವೈಶಿಷ್ಟ್ಯಗಳನ್ನ ಅಳವಡಿಸಲಾಗಿದೆ. ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆಯಡಿಯಲ್ಲಿ 50 ಇವಿ ಬಸ್​ಗಳು ಸಂಚರಿಸಲಿವೆ.

ಇದನ್ನೂ ಓದಿ: ಶೀಘ್ರದಲ್ಲೇ ರಾಜ್ಯದ 5 ನಗರಗಳಿಗೆ ಇ-ಬಸ್​ ಸಂಪರ್ಕ, ಯಾವ್ಯಾವ ಊರುಗಳು, ಈ ಸ್ಟೋರಿ ಓದಿ

ಹೊಸ ಬೊಲೆರೋಗಳ ಲೋಕಾರ್ಪಣೆ

ಆರಂಭಿಕವಾಗಿ ಇಂದು 35 ಬಸ್​ಗಳಿಗೆ ಮತ್ತು ಇದರ ಜೊತೆಗೆ 68 ಹೊಸ ಬೊಲೆರೋ ವಾಹನಗಳಿಗೂ ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಸಾರಿಗೆ ಇಲಾಖೆಯ ಎನ್​ಫೋರ್ಸ್​​ಮೆಂಟ್ ಉಪಯೋಗಕ್ಕಾಗಿ ಹೊಸ ಬೊಲೆರೋಗಳ ಲೋಕಾರ್ಪಣೆ ಮಾಡಲಿದ್ದಾರೆ. ಮೋಟಾರು ವಾಹನ ನಿರೀಕ್ಷಕರುಗಳಿಗೆ ತೀವ್ರ ಹಾಗೂ ಚುರುಕಾಗಿ ಕೆಲಸ ನಿರ್ವಹಿಸಲು ಹೊಸ ಬೊಲೆರೋ ವಾಹನ ನೆರವಾಗಲಿದೆ.

ಬೆಂಗಳೂರು-ಮೈಸೂರು ಕೆಎಸ್​ಆರ್​ಟಿಸಿ ಎಲೆಕ್ಟ್ರಿಕ್​ ಬಸ್​

2023ರ ಜನವರಿ 16 ರಿಂದ ಕೆಎಸ್​​ಆರ್​ಟಿಸಿ ಎಲೆಕ್ಟ್ರಿಕ್​ ಬಸ್​ಗಳು ಬೆಂಗಳೂರು-ಮೈಸೂರು ಸಂಚಾರ ಪ್ರಾರಂಭಿಸಿದ್ದವು. ಇ-ಬಸ್‌ಗಳು ಆರಾಮದಾಯಕವಾದ ಆಸನ, ದೂರದರ್ಶನ, ಪ್ರೀಮಿಯಂ ಸೀಟ್‌ಗಳು, ಪ್ರತಿಯೊಂದು ಸೀಟ್​ಗು ಚಾರ್ಜಿಂಗ್ ಸಾಕೆಟ್‌, ಎಸಿ​ ವೆಂಟ್‌ಗಳು, ಓದುವ ದೀಪಗಳು ಇನ್ನೂ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ. ಎಲೆಕ್ಟ್ರಿಕ್​ ಬಸ್​ಗಳು 2022 ಡಿಸೆಂಬರ್​ 31 ರಂದು ರಾಜ್ಯಕ್ಕೆ ಬಂದಿದ್ದು, ಈಗಾಗಲೆ ಟ್ರಯಲ್​ ರೈಡ್​​ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಮೊದಲ ಇ-ಬಸ್ ಜನವರಿ 16ರಂದು​ ಬೆಂಗಳೂರಿನಿಂದ ಹೊರಟು ಮೈಸೂರು ತಲುಪಿತ್ತು. ಬೆಂಗಳೂರಿಂದ ಮೈಸೂರಿಗೆ ಹೊರಡುವ ಎಲೆಕ್ಟ್ರಿಕ್​ ಬಸ್​​ ತಡೆರಹಿತವಾಗಿದ್ದು, ಬಸ್​ಗೆ ಪ್ರಿಮಿಯಂ ಸರ್ವಿಸ್​ ಪಾಸ್​​ ಹೊಂದಿದೆ.

ಇದನ್ನೂ ಓದಿ: KSRTC EV ಪವರ್ ಪ್ಲಸ್ ಬಸ್​​​ಗೆ ಹಸಿರು ನಿಶಾನೆ ತೋರಿದ ಸಚಿವ ಶ್ರೀರಾಮುಲು; ಇಲ್ಲಿದೆ ಬಸ್​​ನ ವಿಶೇಷತೆಗಳು

ಎಲೆಕ್ಟ್ರಿಕ್​ ಬಸ್​​ಗಳನ್ನು ಒಂದು ಸಾರಿ ಚಾರ್ಜ್​ ಮಾಡಿದರೆ 300ಕೀಮಿ ಸಂಚರಿಸುತ್ತವೆ. ಈಗಾಗಲೆ ಬಸ್​ಗಳಿಗಾಗಿ ಮೈಸೂರು ಮತ್ತು ಬೆಂಗಳೂರಲ್ಲಿ ಚಾರ್ಜಿಂಗ್​ ಪಾಯಿಂಟ್​ಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ, ವಿರಾಜಪೇಟ, ದಾವಣಗೇರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಬಸ್​ ನಿಲ್ದಾಣಗಳಲ್ಲಿ ಚಾರ್ಜಿಂಗ್​ ಪಾಯಿಂಟ್​ ಇರಿಸಲಾಗುತ್ತದೆ.

ಎಲೆಕ್ಟ್ರಿಕ್​ ಬಸ್​ಗಳ ಕಾರ್ಯನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದ್ದು, ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (GCC) ನಿರ್ವಹಿಸುತ್ತಿದೆ. ಈ ನಿರ್ವಹಣೆಗೆ ಕೆಎಸ್​​ಆರ್​ಟಿಸಿ ಕೂಡ ಹಣ ನೀಡಲು ಮುಂದಾಗಿದ್ದು, ಕಾರ್ಯಾಚರಣೆಯ ವೆಚ್ಚವಾಗಿ ಕಿಮೀಗೆ 55 ರೂಪಾಯಿಗಳನ್ನು ಪಾವತಿಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಮನೆ ಗೋಡೆಗಳಲ್ಲಿ ಅರಳಿ ಗಿಡ ಚಿಗುರಿದರೆ ಅಪಾಯ ಖಂಡಿತ!
ಮನೆ ಗೋಡೆಗಳಲ್ಲಿ ಅರಳಿ ಗಿಡ ಚಿಗುರಿದರೆ ಅಪಾಯ ಖಂಡಿತ!