ಇವಳೊಂದು ದಿಕ್ಕು- ಅವನೊಂದು ದಿಕ್ಕು: ವರ್ಗಾವಣೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಇಂಡೇನ್ ಕಂಪನಿ ಮಹಿಳಾ ಅಧಿಕಾರಿ!

|

Updated on: Apr 08, 2023 | 3:43 PM

ಬೆಂಗಳೂರಲ್ಲಿ 4ನೇ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯಸಂಗತಿಯೊಂದು ಹೊರಬಿದ್ದಿದೆ. ಮಹಿಳೆ ಆತ್ಮಹತ್ಯೆಗೆ ವರ್ಗಾವಣೆ ಚಿಂತೆಯೇ ಕಾರಣ ಎಂದು ತಿಳಿದುಬಂದಿದೆ.

ಇವಳೊಂದು ದಿಕ್ಕು- ಅವನೊಂದು ದಿಕ್ಕು: ವರ್ಗಾವಣೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಇಂಡೇನ್ ಕಂಪನಿ ಮಹಿಳಾ ಅಧಿಕಾರಿ!
ವರ್ಗಾವಣೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಇಂಡೇನ್ ಕಂಪನಿ ಮಹಿಳಾ ಅಧಿಕಾರಿ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಕಟ್ಟದ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ (Suicide) ಮಾಡಿಕೊಂಡ ಪ್ರಕರಣ ಸಂಬಂಧ ಪೊಲೀಸರ ತನಿಖೆಯಿಂದ ಸತ್ಯಸಂಗತಿಯೊಂದು ಹೊರಬಿದ್ದಿದೆ. ಮಹಿಳೆ ಆತ್ಮಹತ್ಯೆಗೆ ವರ್ಗಾವಣೆ (Transfer) ಚಿಂತೆಯೇ ಕಾರಣ ಎಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದ ಪೂರ್ಣಕುಮಾರಿಗೆ ವರ್ಗಾವಣೆ ಆರ್ಡರ್​ ಬಂದಿದೆ. ಇದರಿಂದ ಬೇಸತ್ತು ಕಣ್ಣೀರು ಹಾಕುತ್ತಿದ್ದ ಆಕೆ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಳ್ಳಲು ಸ್ಥಳ ನೋಡಿ ಸಂಜೆಯಾಗುತ್ತಲೇ ಸಿನಿಮೀಯ ಶೈಲಿಯಲ್ಲಿ ಓಡಿಬಂದು ಮಹಡಿ ಮೇಲಿಂದ ಜಂಪ್ ಮಾಡಿ ಪ್ರಾಣಬಿಟ್ಟಿದ್ದಾಳೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil Corporation) ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ ಪೂರ್ಣಕುಮಾರಿಗೆ 10 ದಿನದ ಹಿಂದೆ ಒಡಿಶಾಗೆ ವರ್ಗಾವಣೆಯ ಆದೇಶ ಬಂದಿತ್ತು. ಇದರಿಂದ ನೊಂದ ಪೂರ್ಣಕುಮಾರಿ ಒಂದು ವಾರ ಮನೆಯಲ್ಲೇ ಕಣ್ಣೀರು ಹಾಕುತ್ತಿದ್ದಳು. ವರ್ಗಾವಣೆಯಿಂದ ತೀರ ನೊಂದ ಆಕೆ ಏಪ್ರಿಲ್ 6ರಂದು ಸಂಜೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸ್ಥಳ ವೀಕ್ಷಣೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ನಿತ್ಯ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬರುತ್ತಿದ್ದ ಪೂರ್ಣಕುಮಾರಿ, ಆತ್ಮಹತ್ಯೆ ಮಾಡಿಕೊಳ್ಳುವ ದಿನ ಬೆಳಗ್ಗೆ 8.30ಕ್ಕೆ ಕಚೇರಿಗೆ ಹಾಜರಾಗಿದ್ದಾರೆ. ಹೀಗೆ ಬಂದಾಕೆ ನಾಲ್ಕನೇ ಮಹಡಿಯಲ್ಲಿರುವ ತನ್ನ ಚೇಂಬರ್​ನಲ್ಲಿರುವ ಓಪನ್ ವಿಂಡೋ ಪರಿಶೀಲಿಸಿದ್ದಾಳೆ. ಬಹುಬೇಗ ಜಿಗಿಯಬಹುದಾದ ಸ್ಥಳ ತನ್ನ ಚೇಂಬರ್​​ನಿಂದ ವೀಕ್ಷಣೆ ಮಾಡಿ ಕಿಟಕಿ ಓಪನ್ ಇಟ್ಟಿದ್ದಳು. ಬಳಿಕ ಸಂಜೆ ಕೆಲಸ ಮುಗಿಸಿ ಸಿಬ್ಬಂದಿ ಎಲ್ಲ ಹೊರ ಹೋದ ವೇಳೆ ಸಿನಿಮೀಯ ಶೈಲಿಯಲ್ಲಿ ಚೇಂಬರ್​​ನಿಂದ ಓಡಿಬಂದು ಕೆಳಗೆ ಹಾರಿದ್ದಾಳೆ.

ಇದನ್ನೂ ಓದಿ: ನೀಟ್ ಪರೀಕ್ಷೆ ಪ್ರವೇಶ ನಿರಾಕರಣೆ: ಮನನೊಂದು ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಕಟ್ಟಡದಿಂದ ಹಾರುವುದನ್ನು ನೋಡಿದ ಆಫೀಸ್ ಬಾಯ್ ಆಕೆಯನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಆದರೆ ಆಕೆಯ ಬಟ್ಟೆ ಮಾತ್ರ ಕೈಗೆ ಸಿಕ್ಕಿ ಹರಿದಿದೆ. ಅಷ್ಟರಲ್ಲೇ ಪೂರ್ಣಕುಮಾರಿ ಕೆಳಬಿದ್ದು ಎರಡು ಕಾಲು ಮುರಿದುಕೊಂಡು ತೀವ್ರ ರಕ್ತಸ್ರಾವದಲ್ಲಿ ಬಿದ್ದಿದ್ದಳು. ನಂತರ ಕೊನೆಯುಸಿರೆಳೆದಿದ್ದಳು. ಕಳೆದ 1 ವರ್ಷದಿಂದ ಈಕೆ ಖಿನ್ನತೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಸದ್ಯ ವರ್ಗಾವಣೆ ವಿಚಾರವಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ದೂರು ನೀಡಿದ್ದಾರೆ. ಪತಿಯೂ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ದೊಡ್ಡಬಳ್ಳಾಪುರದಲ್ಲಿ ಯುವತಿಯ ಅನುಮಾನಾಸ್ಪದ ಸಾವು

ದೊಡ್ಡಬಳ್ಳಾಪುರ: ಯುವತಿಯೊಬ್ಬಳು ತನ್ನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಟ್ಟೆಇಂದೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೇಘನಾ (22) ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದವಳು. ಕಳೆದ ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಮೇಘನಾ, ನಿನ್ನೆ ರಾತ್ರಿ ದಂಪತಿ ನಡುವೆ ಊಟದ ವಿಚಾರಕ್ಕೆ ಜಗಳ ನಡೆದಿತ್ತು. ಬಳಿಕ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆದರೆ ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ನಾಗೇಶ್ ಹೇಳುತ್ತಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Sat, 8 April 23