ಬೆಂಗಳೂರು, ಜನವರಿ 30: ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ವಿಶ್ವ ವಿಖ್ಯಾತ ಬೆಂಗಳೂರು ಕರಗಕ್ಕೆ (Bengaluru Karaga) ದಿನಾಂಕ ನಿಗದಿ ಮಾಡಲಾಗಿದೆ. ಆದರೆ ದ್ರೌಪದಿದೇವಿ ಕರಗ ಬರುವ ರೋಡ್ ತುಂಬಾ ಗುಂಡಿಗಳನ್ನು ತೆಗೆದಿದ್ದಾರೆ. ಕೂಡಲೇ ಕಾಮಗಾರಿ ವೇಗವಾಗಿ ನಡೆಸಬೇಕು ಎಂದು ಧರ್ಮರಾಯಸ್ವಾಮಿ ದೇವಾಲಯ ವ್ಯವಸ್ಥಾಪನ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಕುರಿತಾಗಿ ಇಂದು ಸುದ್ದಿಗೋಷ್ಠಿಯಲ್ಲಿ ಧರ್ಮರಾಯ ಸ್ವಾಮಿ ದೇವಾಲಯದ ಅಧ್ಯಕ್ಷ ಕೆ. ಸತೀಶ್ ಮಾತನಾಡಿದ್ದು, ಈ ಬಾರಿ ವಿಶ್ವ ವಿಖ್ಯಾತ ಬೆಂಗಳೂರು ಕರಗ ರಥೋತ್ಸವ ಮಾಡಲು ಆಗಲ್ಲ, ಅಷ್ಟರ ಮಟ್ಟಿಗೆ ರಸ್ತೆ ಹಾಳು ಮಾಡಿದ್ದಾರೆ. ಧರ್ಮರಾಯಸ್ವಾಮಿ ದೇವಾಲಯದ ಸುತ್ತಮುತ್ತ ರಸ್ತೆ ಕಾಮಗಾರಿ ನಡೆಯುತ್ತಿದೆ. ಜನವರಿ ತಿಂಗಳಾಂತ್ಯಕ್ಕೆ ಕಾಮಗಾರಿ ಮುಗಿಸುತ್ತೇವೆ ಎಂದಿದ್ದರು. ಆದರೆ ಮುಗಿಸಿಲ್ಲ. ನಿಧಾನಗತಿಯ ಮತ್ತು ಕಳಪೆ ಕಾಮಗಾರಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Bengaluru Karaga: ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿ
ಇನ್ನು ವಿಶ್ವವಿಖ್ಯಾತ ಕರಗದ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕರಗದ ರಥೋತ್ಸವ ನಿಗದಿತ ಎಲ್ಲಾ ರಸ್ತೆ ಹೋಗುವುದು ಡೌಟಾಗಿದೆ. ವೈಟ್ ಟಾಪಿಂಗ್ ಕಾಮಗಾರಿ ಮಾಡುತ್ತೇವೆ ಅಂತಿದ್ದಾರೆ. ಒಳಚರಂಡಿ ಪೈಪ್ಗಳನ್ನು ಅಳವಡಿಸಲು ದೊಡ್ಡ ದೊಡ್ಡ ಗುಂಡಿಗಳ ಅಗೆದಿದ್ದಾರೆ. ತೇರು ಶಾರದಾ ಸರ್ಕಲ್ ಬಳಿ ಬಂದರಷ್ಟೇ ಕರಗ ದೇವಾಲಯದ ಹೊರಗೆ ಬರುವುದು. ಇನ್ನೊಂದು ತಿಂಗಳಲ್ಲಿ ಎಲ್ಲಾ ಕಾಮಗಾರಿ ಮುಗಿಸಿಕೊಡಲು ಒತ್ತಾಯಿಸಿದ್ದು, ಸಿಎಂ, ಡಿಸಿಎಂ, ಬಿಬಿಎಂಪಿಗೆ ದೂರು ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಒಳಚರಂಡಿ ಪೈಪ್ಗಳನ್ನು ಅಳವಡಿಸಲು ಗುಂಡಿಗಳನ್ನು ತೆಗೆದಿದ್ದಾರೆ ಆದರೆ ಇನ್ನೂ ಪೈಪ್ಗಳನ್ನು ಹಾಕಿಲ್ಲ. ಜೆಸಿಬಿಯಿಂದ ತೆಗೆದಿರುವ ದೊಡ್ಡ ದೊಡ್ಡ ಗುಂಡಿಗಳು ಹಾಗೆ ಇವೆ. ದಾಸಪ್ಪ ಆಸ್ಪತ್ರೆಯಿಂದ ಪೈ ವಿಹಾರ್ ಹೋಟೆಲ್ವರೆಗೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಫೆಬ್ರವರಿ- 7 ರಥಸಪ್ತಮಿ ಹಿನ್ನೆಲೆಯಲ್ಲಿ ಧರ್ಮರಾಯ ದೇವಾಲಯದಲ್ಲಿ ದ್ರೌಪದಿದೇವಿ ರಥೋತ್ಸವ ಇದೆ, ಆದರೆ ಈ ಬಾರಿ ರಥೋತ್ಸವ ನಡೆಯುವುದೇ ಡೌಟಾಗಿದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:44 pm, Thu, 30 January 25