Bengaluru Karaga: ಬೆಂಗಳೂರು ಕರಗ ಮೆರವಣಿಗೆಯಲ್ಲಿ ಸಾಗುತ್ತಾ ತಪ್ಪದೆ ದರ್ಗಾಗೆ ಹೋಗುವುದೇಕೆ ಗೊತ್ತಾ!? ಮಿಸ್ ಮಾಡದೆ ವಿಡಿಯೋ ನೋಡಿ
ಆ ಘಟನೆಯ ನಂತರ, ಕರಗ ಹೊರುವವರು ಪ್ರತಿ ವರ್ಷ ತಪ್ಪದೇ ದರ್ಗಾಗೆ ಬಂದು ಹೋಗುವುದಾಗಿ ಆಣೆ ಮಾಡುತ್ತಾರೆ. ಇದು ಕರಗವು ದರ್ಗಾಗೆ ಬರಲು ಕಾರಣ ಎಂದು ಅಕ್ಕಿಪೇಟೆ ರಸ್ತೆಯ ತವಕ್ಕಲ್ ಮಸ್ತಾನ್ ದರ್ಗಾದ ಮುಜಾವರ್ ಇಂತಿಯಾಜ್ ಅಹ್ಮದ್ ಅವರು ವಿವರಿಸಿದ್ದಾರೆ. ಭಕ್ತಿ ಪ್ರಧಾನ ಕಹಾನಿ ಇಲ್ಲಿದೆ ಓದಿ.

ಕತ್ತಲ ರಾತ್ರಿ, ಪೂರ್ಣಿಮೆ ಬೆಳಕಲ್ಲಿ ಮುತ್ತೈದೆ ಉಡುಪು ಧರಿಸಿ ತಾಯಿ ದ್ರೌಪದಿಯ ಪ್ರತಿರೂಪದಂತೆ ತೋರುವ ಪೂಜಾರಿ. ಆತನ ಸುತ್ತ ಸಾವಿರಾರು ವೀರಗಾರರು ಕೈಯಲ್ಲಿ ಕತ್ತಿ ಹಿಡಿದು ಗೋವಿಂದ ಗೋವಿಂದ ಎಂಬ ಕೂಗು. ಬೀದಿ ಬೀದಿಯಲ್ಲಿ ರಾಜಕಳೆ. ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಮೇಳ. ಹೂವಿನ ಕರಗ ಹೊತ್ತ ಪೂಜಾರಿ ಮುಸ್ಲಿಂ ಸಂತನ ಸಮಾಧಿಗೆ ಭೇಟಿ ನೀಡಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರುವ ಈ ಆಚರಣೆ ಬಗ್ಗೆ ನಿಮಗೆ ತಿಳಿದಿರಬಹುದು. ಮಹಾಭಾರತದ ಸಮಯದ ಹುಟ್ಟಿಕೊಂಡ ಈ ಆಚರಣೆಯೇ ಬೆಂಗಳೂರು ಕರಗ. ಕರ್ನಾಟಕದಲ್ಲಿ ಕರಗ ಉತ್ಸವವನ್ನು ನಾನಾ ರೀತಿಯಲ್ಲಿ ಆಚರಿಸಲಾಗುತ್ತೆ. ಆದರೆ ಬೆಂಗಳೂರು ಕರಗ ಎಲ್ಲದಕ್ಕಿಂತ ದೊಡ್ಡದು. ಹಾಗೂ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ವಿಶ್ವವಿಖ್ಯಾತ ಜಾನಪದ ಆಚರಣೆ. ಇಲ್ಲಿ ಆದಿಶಕ್ತಿ ಶ್ರೀ ದ್ರೌಪದಿಯನ್ನು, ವಹ್ನಿಕುಲ ಕ್ಷತ್ರಿಯ ಜನಾಂಗದವರು ಕುಲದೇವತೆಯಾಗಿ ಆರಾಧಿಸುತ್ತಾರೆ. ಬೆಂಗಳೂರಿನ ತಿಗಳರಪೇಟೆಯಲ್ಲಿ ವಹ್ನಿಕುಲ ಅಥವಾ ತಿಗಳ ಸಮುದಾಯದವರು ಕರಗ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇವರ ನಂಬಿಕೆಗಳ ಪ್ರಕಾರ ದ್ರೌಪದಿ ಮತ್ತು ಪಾಂಡವರಲ್ಲಿ ಹಿರಿಯನಾದ ಧರ್ಮರಾಯನಿಗೆ ಮೀಸಲಿಟ್ಟು ಇಲ್ಲಿ ಸುಮಾರು 800 ವರ್ಷಗಳ ಹಿಂದೆ ದೇವಾಲಯ ನಿರ್ಮಿಸಿ ಪೂಜಿಸಿಕೊಂಡು ಬರಲಾಗುತ್ತಿದೆ. ಹಾಗೂ ಅಂದಾಜು 5 ಶತಮಾನಗಳಿಂದ ತಿಗಳರು ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಕರಗ ಉತ್ಸವವನ್ನು ಆಚರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪ್ರತೀ ವರ್ಷ ಯುಗಾದಿ ಹಬ್ಬದ ನಂತರ ಕರಗ ಉತ್ಸವಕ್ಕೆ ಚಾಲನೆ ಸಿಗುತ್ತೆ. ದ್ವಾದಶಿಯಂದು ಆರತಿ ಸೇವೆ ಮತ್ತು ದೀಪೋತ್ಸವ ನಡೆಯುತ್ತೆ. ಮತ್ತು ತ್ರಯೋದಶಿಯಂದು ಹಸಿಕರಗ. ಪೂರ್ಣಿಮೆಯಂದು ಕರಗದ ಉತ್ಸವ ನಡೆಯುತ್ತೆ. ಬೆಂಗಳೂರಿನ ತಿಗಳರ ಪೇಟೆಯಲ್ಲಿರುವ ದ್ರೌಪದಿ ಹಾಗೂ...
Published On - 4:24 pm, Wed, 10 April 24