
ISRO
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿದೆ. ಇಸ್ರೋ ವಿಶ್ವದ ಆರು ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿದೆ, ಅದು ಸಂಪೂರ್ಣ ಉಡಾವಣಾ ಸಾಮರ್ಥ್ಯಗಳನ್ನು ಹೊಂದಿದೆ. ಇದು ಬಾಹ್ಯಾಕಾಶ ಇಲಾಖೆಯ ಪ್ರಾಥಮಿಕ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವಾಗಿ ಕಾರ್ಯನಿರ್ವಹಿಸುತ್ತದೆ, ಇದನ್ನು ಭಾರತದ ಪ್ರಧಾನ ಮಂತ್ರಿಯವರು ನೇರವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಇಸ್ರೋ ಅಧ್ಯಕ್ಷರು ಬಾಹ್ಯಾಕಾಶ ಇಲಾಖೆಯ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಾರೆ. ಬಾಹ್ಯಾಕಾಶ-ಆಧಾರಿತ ಕಾರ್ಯಾಚರಣೆಗಳು, ಬಾಹ್ಯಾಕಾಶ ಪರಿಶೋಧನೆ, ಅಂತರಾಷ್ಟ್ರೀಯ ಬಾಹ್ಯಾಕಾಶ ಸಹಕಾರ ಮತ್ತು ಸಂಬಂಧಿತ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಇಸ್ರೋ ಪ್ರಾಥಮಿಕವಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಇದು ಸಂಪೂರ್ಣ ಉಡಾವಣಾ ಸಾಮರ್ಥ್ಯಗಳನ್ನು ಹೊಂದಿದೆ, ಕ್ರಯೋಜೆನಿಕ್ ಎಂಜಿನ್ಗಳನ್ನು ನಿಯೋಜಿಸಬಹುದು, ಭೂಮ್ಯತೀತ ಕಾರ್ಯಾಚರಣೆಗಳನ್ನು ಪ್ರಾರಂಭಿಸಬಹುದು ಮತ್ತು ಕೃತಕ ಉಪಗ್ರಹಗಳ ದೊಡ್ಡ ಫ್ಲೀಟ್ ಅನ್ನು ನಿರ್ವಹಿಸಬಹುದು.
ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ ರಾಮ, ನಾನು ಲಕ್ಷ್ಮಣ; ಭಾರತದ ಗಗನಯಾತ್ರಿ ಪ್ರಶಾಂತ್ ನಾಯರ್ ಸಂವಾದ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಐತಿಹಾಸಿಕ ಕಾರ್ಯಾಚರಣೆಯನ್ನು ನಡೆಸಿದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಭಾರತದ ಇನ್ನೋರ್ವ ಗಗನಯಾತ್ರಿ ಪ್ರಶಾಂತ್ ನಾಯರ್ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ. ಇಸ್ರೋ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾರತದ ಈ ಇಬ್ಬರು ಗಗನಯಾತ್ರಿಗಳು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
- Sushma Chakre
- Updated on: Aug 21, 2025
- 4:12 pm
ಡಿಸೆಂಬರ್ನಲ್ಲಿ ಇಸ್ರೋದಿಂದ ಮೊದಲ ಗಗನಯಾನ ಪರೀಕ್ಷಾ ಮಿಷನ್ ಪ್ರಾರಂಭ
ಇಸ್ರೋ ಡಿಸೆಂಬರ್ನಲ್ಲಿ ಮೊದಲ ಗಗನಯಾನ ಪರೀಕ್ಷಾ ಮಿಷನ್ ಅನ್ನು ಪ್ರಾರಂಭಿಸಲಿದೆ. ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಯಾದ ಗಗನಯಾನ-2025 ಕುರಿತು ಇಸ್ರೋ ಇಂದು ಪತ್ರಿಕಾಗೋಷ್ಠಿ ನಡೆಸಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ವಹಿಸಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಡಿಸೆಂಬರ್ನಲ್ಲಿ ತನ್ನ ಮೊದಲ ಗಗನಯಾನ ಪರೀಕ್ಷಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ದೃಢಪಡಿಸಿದರು. ಈ ವೇಳೆ ಅಮೆರಿಕದಿಂದ ಭಾರತಕ್ಕೆ ಮರಳಿದ ಭಾರತದ ಗಗನಯಾತ್ರಿಗಳು ಮಾಧ್ಯಮಗಳ ಜೊತೆ ಸಂವಾದ ನಡೆಸಿದ್ದಾರೆ.
- Sushma Chakre
- Updated on: Aug 21, 2025
- 3:29 pm
ಆಗಸಕ್ಕೆ ನಿಸಾರ್ ಸೆಟಿಲೈಟ್ ಹಾರಿಸಿದ ಭಾರತದ ರಾಕೆಟ್; ಇದು ಎರಡು ರಾಡಾರ್ ಫ್ರೀಕ್ವೆನ್ಸಿ ಬಳಸುವ ವಿಶ್ವದ ಮೊದಲ ಉಪಗ್ರಹ
Successful launch of NISAR satellite built by ISRO and NASA: ಭಾರತದ ಇಸ್ರೋ ಮತ್ತು ಅಮೆರಿಕದ ನಾಸಾ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿದ ನಿಸಾರ್ ಸೆಟಿಲೈಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇಸ್ರೋ ನಿರ್ಮಿತ ಜಿಎಸ್ಎಲ್ವಿ ಎಫ್-16 ರಾಕೆಟ್ ಮೂಲಕ ಜುಲೈ 30, ಬುಧವಾರ ಸಂಜೆ ಇದರ ಉಡ್ಡಯನ ಮಾಡಲಾಗಿದೆ. ಆಪ್ಟಿಕಲ್ ಕ್ಯಾಮರಾ ಬದಲು ಎರಡು ರಾಡಾರ್ ಕಣ್ಣುಗಳನ್ನು ಬಳಸಿ ತಯಾರಿಸಲಾದ ವಿಶ್ವದ ಮೊದಲ ಸೆಟಿಲೈಟ್ ಇದು.
- Vijaya Sarathy SN
- Updated on: Jul 30, 2025
- 6:30 pm
Shubhanshu Shukla: ಡ್ರ್ಯಾಗನ್ ಕ್ಯಾಪ್ಸುಲ್ನಿಂದ ಹೊರಬರುತ್ತಿದ್ದಂತೆ ನಗುತ್ತಾ ಕೈ ಬೀಸಿದ ಶುಭಾಂಶು ಶುಕ್ಲಾ
ಆಕ್ಸಿಯಮ್ ಸ್ಪೇಸ್ನ ಆಕ್ಸ್ -4 ಕಾರ್ಯಕ್ರಮದ ಭಾಗವಾಗಿದ್ದ 18 ದಿನಗಳ ವಿಸ್ತೃತ ಕಾರ್ಯಾಚರಣೆಯ ನಂತರ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಭೂಮಿಗೆ ಮರಳಿದ್ದಾರೆ. ಅವರು ಇಂದು ಮಧ್ಯಾಹ್ನ 3 ಗಂಟೆಗೆ ಭಾರತೀಯ ಕಾಲಮಾನ ಪ್ರಕಾರ ಕ್ಯಾಲಿಫೋರ್ನಿಯಾ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪೇಸ್ಎಕ್ಸ್ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿರುವ ಇತರ ಮೂವರು ಗಗನಯಾತ್ರಿಗಳೊಂದಿಗೆ ಇಳಿದಿದ್ದಾರೆ. ಇದೀಗ ಅವರನ್ನು ಡ್ರ್ಯಾಗನ್ ಕ್ಯಾಪ್ಸುಲ್ನಿಂದ ಹೊರಗೆ ಕರೆತರಲಾಗಿದೆ.
- Sushma Chakre
- Updated on: Jul 15, 2025
- 4:50 pm
ಭಾರತದ ಪಾಲಿಗೆ ಐತಿಹಾಸಿಕ ಕ್ಷಣ; ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಐತಿಹಾಸಿಕ ಕ್ಷಣದಲ್ಲಿ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿದ್ದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಆಕ್ಸಿಯಮ್-4 ಸಿಬ್ಬಂದಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 18 ದಿನಗಳ ಕಾಲ ಉಳಿದ ನಂತರ ಪೆಸಿಫಿಕ್ ಮಹಾಸಾಗರದಲ್ಲಿ ಭೂಮಿಗೆ ಹಾರಿದ್ದಾರೆ. ಡ್ರ್ಯಾಗನ್ ಕ್ಯಾಪ್ಸುಲ್ ಕೆಳಗೆ ಬೀಳುತ್ತಿದ್ದಂತೆ ಶುಭಾಂಶು ಶುಕ್ಲಾ ISSನಿಂದ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಕೆಲವೇ ಕ್ಷಣಗಳಲ್ಲಿ ಅವರನ್ನು ಕ್ಯಾಪ್ಸುಲ್ನಿಂದ ಹೊರಗೆ ಕರೆತರಲಾಗುವುದು.
- Sushma Chakre
- Updated on: Jul 15, 2025
- 3:40 pm
Space Centre: ಇಸ್ರೋದ ಎರಡನೇ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ ಗುಜರಾತ್ನಲ್ಲಿ ನಿರ್ಮಾಣ
ISRO to build its second largest space station in Gujarat: ಗುಜರಾತ್ನ ಡಿಯು ಸಮೀಪ ಇಸ್ರೋದಿಂದ ಮೂರನೇ ಸ್ಪೇಸ್ ಸೆಂಟರ್ ನಿರ್ಮಾಣವಾಗಲಿದೆ. 10,000 ಕೋಟಿ ರೂ ವೆಚ್ಚದಲ್ಲಿ ಸಿದ್ಧವಾಗಲಿರುವ ಇದು ಇಸ್ರೋದ ಎರಡನೇ ಅತಿದೊಡ್ಡ ಬಾಹ್ಯಾಕಾಶ ಕೇಂದ್ರವಾಗಲಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿ ಅತಿದೊಡ್ಡ ಸ್ಪೇಸ್ ಸೆಂಟರ್ ಇದೆ. ಮತ್ತೊಂದು ಸ್ಪೇಸ್ ಸೆಂಟರ್ ಕೇರಳದ ತಿರುವನಂತಪುರಂನಲ್ಲಿದೆ.
- Vijaya Sarathy SN
- Updated on: Jul 6, 2025
- 6:08 pm
ಬಾಹ್ಯಾಕಾಶ ನಿಲ್ದಾಣದಲ್ಲಿರುವ ಮೊದಲ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿರುವ ಮೊದಲ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂವಾದ ನಡೆಸಿದ್ದಾರೆ. ಬಾಹ್ಯಾಕಾಶ ನಿಲ್ದಾಣ ತಲುಪಿದ ಕೂಡಲೆ ಭಾರತದ ದೇಶವಾಸಿಗಳಿಗೆ ಹಿಂದಿಯಲ್ಲಿ ಸಂದೇಶವನ್ನು ನೀಡಿದ್ದ ಶುಭಾಂಶು ಶುಕ್ಲಾ, ಭಾರತೀಯ ಜನರ ಪ್ರೀತಿ ಮತ್ತು ಆಶೀರ್ವಾದವೇ ತಮ್ಮನ್ನು ಸುರಕ್ಷಿತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆತಂದಿದೆ ಎಂದು ಹೇಳಿದ್ದರು.
- Sushma Chakre
- Updated on: Jun 28, 2025
- 6:57 pm
Axiom-4: ಬಾಹ್ಯಾಕಾಶದ ಜೀವನಕ್ಕೆ ಒಗ್ಗಿಕೊಂಡ ಆಕ್ಸಿಯಮ್-4 ಸಿಬ್ಬಂದಿ; ಡ್ರ್ಯಾಗನ್ನಲ್ಲಿ ನಿದ್ರಿಸಿದ ಶುಭಾಂಶು ಶುಕ್ಲಾ
ಆಕ್ಸಿಯಮ್-4 ಮಿಷನ್ನಲ್ಲಿನ ಸಿಬ್ಬಂದಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಜೀವನಕ್ಕೆ ಹೊಂದಿಕೊಂಡಿದ್ದಾರೆ. ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಡ್ರಾಗನ್ನಲ್ಲಿ ನಿದ್ರಿಸುತ್ತಿದ್ದಾರೆ. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ನಾಸಾದ ಅನುಭವಿ ಪೆಗ್ಗಿ ವಿಟ್ಸನ್ ಅವರನ್ನು ಒಳಗೊಂಡ ಆಕ್ಸಿಯಮ್-4 ಸಿಬ್ಬಂದಿ ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ್ದಾರೆ. ಅವರು ಶೂನ್ಯ ಗುರುತ್ವಾಕರ್ಷಣೆಯ ಜೀವನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ.
- Sushma Chakre
- Updated on: Jun 28, 2025
- 3:26 pm
ಶುಭಾಂಶು ಶುಕ್ಲಾ ಜತೆ ಬಾಹ್ಯಾಕಾಶಕ್ಕೆ ಮೆಂತ್ಯ, ಹಸಿರು ಕಾಳು ಹೋಗಲು ಕಾರಣವೇನು, ಗಗನಯಾನಕ್ಕೂ ಧಾರವಾಡ ಕೃಷಿ ವಿವಿಗೂ ಲಿಂಕ್ ಹೇಗೆ? ಇಲ್ಲಿದೆ ವಿವರ
ಆಕ್ಸಿಯಮ್ 4 ಅಂತರಿಕ್ಷಯಾನದಲ್ಲಿ ಭಾರತೀಯ ಶುಭಾಂಶು ಶುಕ್ಲಾ ಜೊತೆಗೆ ಹೋಗಿರುವುದು ನಮ್ಮ ಕರ್ನಾಟಕದ ಹಸಿರು ಮತ್ತು ಮೆಂತೆ ಕಾಳುಗಳು. ಇವು ಮುಂದೆ ಮೊಳಕೆಯೊಡೆದು ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಶೋಧನೆಗೆ ಬರಲಿವೆ ಎಂಬುವುದು ಈಗ ಗೊತ್ತಾಗಿರುವ ವಿಚಾರ. ಇದೇ ಕಾರಣದಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಖ್ಯಾತಿ ಇದೀಗ ಮುಗಿಲೆತ್ತರಕ್ಕೆ ವ್ಯಾಪಿಸಿದೆ. ಹಾಗಾದರೆ ಕೃಷಿ ವಿವಿ ಈ ವಿಚಾರವಾಗಿ ಕೆಲಸ ಮಾಡುತ್ತಿರುವುದು ಇದೇ ಮೊದಲನೇ ಸಲನಾ? ಗಗನಯಾನಕ್ಕೂ ಈ ಕೃಷಿ ವಿವಿಗೆ ಲಿಂಕ್ ಬೆಳೆದಿದ್ದು ಹೇಗೆ? ಇಲ್ಲಿದೆ ವಿವರ.
- Narasimha Murti Pyati
- Updated on: Jun 27, 2025
- 4:38 pm
ನಿಮ್ಮ ಆಶೀರ್ವಾದದಿಂದ ಸುರಕ್ಷಿತವಾಗಿ ಐಎಸ್ಎಸ್ ತಲುಪಿದೆ, ಈ 14 ದಿನ ಅದ್ಭುತವಾಗಿರಲಿದೆ; ಶುಭಾಂಶು ಶುಕ್ಲಾ ಮೊದಲ ಸಂದೇಶ
ಬಾಹ್ಯಾಕಾಶದಿಂದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮೊದಲ ಸಂದೇಶ ಕಳುಹಿಸಿದ್ದು, ‘ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಸುರಕ್ಷಿತವಾಗಿ ಐಎಸ್ಎಸ್ ತಲುಪಿದ್ದೇನೆ. ಮುಂದಿನ 14 ದಿನಗಳು ಅದ್ಭುತವಾಗಿರಲಿವೆ’ ಎಂದಿದ್ದಾರೆ. ಇತರ ಮೂವರು ಗಗನಯಾತ್ರಿಗಳೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಪ್ರವೇಶಿಸಿದ ಶುಭಾಂಶು ಶುಕ್ಲಾ ಅವರಿಗೆ ಅಪ್ಪುಗೆಯ ಸ್ವಾಗತ ಸಿಕ್ಕಿತು.
- Sushma Chakre
- Updated on: Jun 26, 2025
- 10:03 pm