AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂಭಮೇಳ ಮತ್ತು ಬೆಂಗಳೂರು ಕಾಲ್ತುಳಿತ ಪ್ರಕರಣಗಳನ್ನು ಹೋಲಿಸುವುದು ಬೌದ್ಧಿಕ ದಿವಾಳಿತನದ ಪ್ರತೀಕ: ಪ್ರಲ್ಹಾದ್ ಜೋಶಿ

ಕುಂಭಮೇಳ ಮತ್ತು ಬೆಂಗಳೂರು ಕಾಲ್ತುಳಿತ ಪ್ರಕರಣಗಳನ್ನು ಹೋಲಿಸುವುದು ಬೌದ್ಧಿಕ ದಿವಾಳಿತನದ ಪ್ರತೀಕ: ಪ್ರಲ್ಹಾದ್ ಜೋಶಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 09, 2025 | 2:04 PM

Share

ಜೂನ್ ಮೂರರ ನಡುರಾತ್ರಿಯಿಂದ ಬೆಳಗಿನ ಜಾವದವರೆಗೆ ಕೆಲಸ ಮಾಡಿ ಪೊಲೀಸರು ಮನೆಗಳಿಗೆ ತೆರಳಿ ಮಲಗಿದ್ದಾರೆ, ಬೆಳಗಿನ ರೂಟೀನ್ ಬ್ರೀಫಿಂಗ್ ನೀಡಲು ಬರಲಾಗಲ್ಲ ಅಂತ ಬೆಂಗಳೂರು ಪೊಲೀಸ್ ಕಮೀಷನರ್ ಗೃಹ ಮಂತ್ರಿಗೆ ಸಂದೇಶ ನೀಡಿದ್ದಾರೆ, ಸಿಎಂ, ಡಿಸಿಎಂ ಮತ್ತು ಹೆಚ್​ಎಂ; ಡಿಸಿಪಿಗಳ ಜೊತೆ ಮಾತಾಡಿ ಆರ್​ಸಿಬಿ ಆಟಗಾರರಿರಗೆ ಸತ್ಕಾರ ಕೂಟವನ್ನು ಏರ್ಪಡಿಸಿ ದುರಂತಕ್ಕೆ ಕಾರಣವಾಗಿದ್ದಾರೆ ಎಂದು ಜೋಶಿ ಹೇಳಿದರು.

ಹುಬ್ಬಳ್ಳಿ, ಜೂನ್ 9: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಬೆಂಗಳೂರಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಮತ್ತು ಪಹಲ್ಗಾಮ್ ಉಗ್ರರ ದಾಳಿ ಹಾಗೂ ಪ್ರಯಾಗ್​ರಾಜ್​ ಕುಂಭಮೇಳದಲ್ಲಿ ಸಂಭಸಿದ ಕಾಲ್ತುಳಿತಕ್ಕೆ ಹೋಲಿಕೆ ಮಾಡಿ ಕರ್ನಾಟಕದ ಮಂತ್ರಿಗಳು ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು. ಕುಂಭಮೇಳದಲ್ಲಿ ಯಾರದ್ದೋ ತಪ್ಪನಿಂದ ಕಾಲ್ತುಳಿತ ನಡೆದಿದ್ದು ಅದೊಂದು ಆಕಸ್ಮಿಕ, ಆದರೆ ಬೆಂಗಳೂರಲ್ಲಿ ನಡೆದ ದುರಂತಕ್ಕೆ ಸರಕಾರದ ಮೂಖರ್ತನವೇ ಕಾರಣ ಎಂದು ಹೇಳಿದ ಜೋಶಿ, ಮಾನ-ಮರ್ಯಾದೆ ಮತ್ತು ನಾಚಿಕೆಯಿಲ್ಲದೆ ಎರಡನ್ನು ಹೋಲಿಸುವ ಪ್ರಯತ್ನ ನಡೆದಿದೆ ಎಂದರು.

ಇದನ್ನೂ ಓದಿ:  ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು: ಪ್ರಶಾಂತ್ ಮನ ಮಿಡಿಯುವ ಮಾತು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 09, 2025 02:03 PM