AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ ಡಾಕ್ಯುಮೆಂಟ್ ಗೋಸ್ಕರ ವಾಹನ ತಡೆಯೋದು ಬೇಡ; 10 ಜನಕ್ಕಾಗಿ 100 ಜನರಿಗೆ ಸಮಸ್ಯೆ‌ ಆಗ‌ಬಾರದು – ಡಿಜಿ & ಐಜಿಪಿ ಪ್ರವೀಣ್ ಸೂದ್ ಪುನರುಚ್ಚಾರ

ಅನವಶ್ಯಕವಾಗಿ ವಾಹನ ತಡೆದು ಡಾಕ್ಯುಮೆಂಟ್ ಚೆಕ್ ಮಾಡೋದು ಬೇಡ. ಕಣ್ಣಿಗೆ ಕಾಣುವಂತೆ ರೂಲ್ಸ್ ಬ್ರೇಕ್ ಮಾಡಿದ್ರೆ ತಡೆದು ನಿಲ್ಲಿಸಿ. 100ರಲ್ಲಿ 10 ಜನರ ಬಳಿ ಡಾಕ್ಯುಮೆಂಟ್ ಇರಲ್ಲ ನಿಜ ಆದರೆ 10 ಜನಕ್ಕಾಗಿ 100 ಜನರಿಗೆ ಸಮಸ್ಯೆ‌ ಆಗ‌ಬಾರದು.

ಕೇವಲ ಡಾಕ್ಯುಮೆಂಟ್ ಗೋಸ್ಕರ ವಾಹನ ತಡೆಯೋದು ಬೇಡ; 10 ಜನಕ್ಕಾಗಿ 100 ಜನರಿಗೆ ಸಮಸ್ಯೆ‌ ಆಗ‌ಬಾರದು - ಡಿಜಿ & ಐಜಿಪಿ ಪ್ರವೀಣ್ ಸೂದ್ ಪುನರುಚ್ಚಾರ
ಪ್ರವೀಣ್ ಸೂದ್
TV9 Web
| Updated By: ಆಯೇಷಾ ಬಾನು|

Updated on: Jun 29, 2022 | 5:17 PM

Share

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಕಂಟ್ರೋಲ್ಗೆ(Traffic Control) ಪ್ರಧಾನಿ ಸೂಚನೆ ಹಿನ್ನೆಲೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಡಿಜಿ & ಐಜಿಪಿ ಪ್ರವೀಣ್ ಸೂದ್(Praveen Sood) ನೇತೃತ್ವದಲ್ಲಿ ಸಭೆ ನಡೆದಿದೆ. ನಗರ ಪೊಲೀಸ್ ಆಯುಕ್ತರು ಸೇರಿ 8 ಅಧಿಕಾರಿಗಳ ಜೊತೆ ಟ್ರಾಫಿಕ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಸಭೆ ಬಳಿಕ ಪ್ರವೀಣ್ ಸೂದ್ ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೇವಲ ಡಾಕ್ಯುಮೆಂಟ್ ಗೋಸ್ಕರ ವಾಹನ ತಡೆಯೋದು ಬೇಡ ಅನವಶ್ಯಕವಾಗಿ ವಾಹನ ತಡೆದು ಡಾಕ್ಯುಮೆಂಟ್ ಚೆಕ್ ಮಾಡೋದು ಬೇಡ. ಕಣ್ಣಿಗೆ ಕಾಣುವಂತೆ ರೂಲ್ಸ್ ಬ್ರೇಕ್ ಮಾಡಿದ್ರೆ ತಡೆದು ನಿಲ್ಲಿಸಿ. 100ರಲ್ಲಿ 10 ಜನರ ಬಳಿ ಡಾಕ್ಯುಮೆಂಟ್ ಇರಲ್ಲ ನಿಜ ಆದರೆ 10 ಜನಕ್ಕಾಗಿ 100 ಜನರಿಗೆ ಸಮಸ್ಯೆ‌ ಆಗ‌ಬಾರದು. ನನ್ನ ಆದೇಶ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ವೆಹಿಕಲ್ ತಡೆಯಲೇ ಬೇಡಿ ಅಂತ‌ ಹೇಳಿಲ್ಲ. ಕೇವಲ ಡಾಕ್ಯುಮೆಂಟ್ ಗೋಸ್ಕರ ತಡೆಯೋದು ಬೇಡ ಅಂತ ಹೇಳಲಾಗಿದೆ‌ ಎಂದು ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೋಲ್ಡ್ ಫೋಟೋ ಹಂಚಿಕೊಂಡು ಪಡ್ಡೆಗಳ ನಿದ್ದೆ ಕದ್ದ ನಟಿ ರಶ್ಮಿಕಾ ಮಂದಣ್ಣ; ಫ್ಯಾನ್ಸ್ ಹೇಳಿದ್ದೇನು?

ಇನ್ನು ಟೋಯಿಂಗ್ ಕುರಿತು DG & IGP ಸಭೆಯಲ್ಲಿ ಚರ್ಚೆ ನಡೆದಿದ್ದು ಸದ್ಯಕ್ಕೆ ಟೋಯಿಂಗ್ ಜಾರಿ ಮಾಡೊ ಆಲೋಚನೆ ಇಲ್ಲ. ಟೋಯಿಂಗ್ ನಲ್ಲೂ ಹಲವು ಲೂಪ್‌ ಹೋಲ್ಸ್ ಇದೆ. ಟೋಯಿಂಗ್ ನಲ್ಲಿ ಸ್ವಲ್ಪ ಅವ್ಯವಹಾರ ಕೂಡ ನಡೆದಿರೊ‌ ಮಾಹಿತಿ ಇದೆ‌. ಟೋಯಿಂಗ್ ಖಾಸಗಿ ಅವ್ರಿಗೆ ಕೊಡಲಾಗುವುದು. ಸಿಬ್ಬಂದಿ ಕೊರತೆಯಿಂದ ಪೊಲೀಸರೆ ನಿರ್ವಹಿಸೋದು ಕಷ್ಟ. ಮುಂದೆ ಅವಲೋಕನ ಮಾಡಿ ಟೋಯಿಂಗ್ ತರಲು ಚಿಂತನೆ ನಡೆದಿದೆ. ಆದ್ರೆ ಸದ್ಯ ಟೋಯಿಂಗ್ ಮಾಡೊಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ತಿಳಿಸಿದ್ದಾರೆ.

ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?