AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪ್ಪನ ಅಗ್ರಹಾರ ಜೈಲಿನ ಪಕ್ಕದಲ್ಲಿ ಬೆಂಕಿ: ಸ್ಫೋಟದಿಂದ ಬೆಚ್ಚಿ ಬಿದ್ದ ಕೈದಿಗಳು

ಪ್ರತ್ಯೇಕ ಬೆಂಕಿ ಅವಘಡ ನಡೆದಿದ್ದು, ಪರಪ್ಪನ ಅಗ್ರಹಾರ(Parappana Agrahara) ಜೈಲಿನ ಪಕ್ಕದ ಖಾಲಿ ಜಾಗದಲ್ಲಿ ಬೆಂಕಿ ಬಿದ್ದು, ಹೈಟೆಕ್ಷನ್ ವೈರ್​ಗಳು ಹಾದು ಹೋಗಿದ್ದ ಕಡೆ ಬೆಂಕಿ ಕಾಣಿಸಿಕೊಂಡಿದೆ. ಇತ್ತ ಆನೇಕಲ್ ತಾಲೂಕಿನ ರಾಯಸಂದ್ರ ಬಳಿಯ ಸೋಪಾ ಸೆಟ್​​ ತಯಾರಿಕಾ ಘಟಕದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.

ಪರಪ್ಪನ ಅಗ್ರಹಾರ ಜೈಲಿನ ಪಕ್ಕದಲ್ಲಿ ಬೆಂಕಿ: ಸ್ಫೋಟದಿಂದ ಬೆಚ್ಚಿ ಬಿದ್ದ ಕೈದಿಗಳು
ಪರಪ್ಪನ ಅಗ್ರಹಾರ ಜೈಲಿನ ಪಕ್ಕದಲ್ಲಿ ಬೆಂಕಿ
ರಾಮು, ಆನೇಕಲ್​
| Edited By: |

Updated on:Feb 07, 2024 | 7:23 PM

Share

ಬೆಂಗಳೂರು, ಫೆ.07: ಪರಪ್ಪನ ಅಗ್ರಹಾರ(Parappana Agrahara) ಜೈಲಿನ ಪಕ್ಕದ ಖಾಲಿ ಜಾಗದಲ್ಲಿ ಬೆಂಕಿ ಬಿದ್ದಿದ್ದು, ಹೈಟೆಕ್ಷನ್ ವೈರ್​ಗಳು ಹಾದು ಹೋಗಿದ್ದ ಕಡೆ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಬೆಂಕಿಯ ಬಿಸಿ ತಾಕಿ ಹೈಟೆಕ್ಷನ್ ವೈರ್ ಶಾರ್ಟ್ ಸರ್ಕ್ಯೂಟ್ ಆಗಿ ಸ್ಟೋಟಗೊಂಡಿದೆ. ಬಾಂಬ್ ಸ್ಪೋಟದಂತೆ ಬಾರಿ ಶಬ್ದ ಉಂಟಾಗಿದ್ದು, ಅದನ್ನು ಕೇಳಿ ಜೈಲಿನ ಕೈದಿಗಳು ಬೆಚ್ಚಿ ಬಿದ್ದಿದ್ದಾರೆ. ಇನ್ನು ಗಿಡಗಂಟೆಗಳು ಬೆಳೆದುಕೊಂಡಿದ್ದ ಪ್ರದೇಶದಲ್ಲಿ ದಟ್ಟ ಬೆಂಕಿ ಆವರಿಸಿದೆ. ಸ್ಥಳಕ್ಕೆ ಜೈಲು ಅಧಿಕಾರಿಗಳು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಇತ್ತ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಸೋಪಾ ಸೆಟ್ ತಯಾರಿಕಾ ಗೋದಾಮಿಗೆ ಬೆಂಕಿ

ಬೆಂಗಳೂರು: ಜಿಲ್ಲೆಯ ಆನೇಕಲ್ ತಾಲೂಕಿನ ರಾಯಸಂದ್ರ ಬಳಿಯ ಸೋಪಾ ಸೆಟ್​​ ತಯಾರಿಕಾ ಘಟಕದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮಾಲೀಕ ಪರಾರಿಯಾಗಿದ್ದಾನೆ. ಇನ್ನು ಗೋದಾಮಿನಲ್ಲಿದ್ದ ಲಕ್ಷಾಂತರ ಮೌಲ್ಯದ ಹತ್ತಿ ಸೇರಿದಂತೆ ಮತ್ತಿತರ ವಸ್ತುಗಳು ಸುಟ್ಟು ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ: ಚಲಿಸುತ್ತಿದ್ದ KSRTC ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ; ಅದೃಷ್ಟವಶಾತ್ ಪ್ರಯಾಣಿಕರು ಪಾರು

ಜಮೀನು ವಿಚಾರಕ್ಕೆ ಗಲಾಟೆ; ಖಾರದ ಪುಡಿ ಎರಚಿ ತಂದೆ-ಮಕ್ಕಳ ಮೇಲೆ ಹಲ್ಲೆ

ಕಲಬುರಗಿ: ಜಮೀನು ವಿಚಾರಕ್ಕೆ ಗಲಾಟೆ ಶುರುವಾಗಿ ಖಾರದ ಪುಡಿ ಎರಚಿ ತಂದೆ ಸೇರಿ ಇಬ್ಬರು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕು ನಿರನಕೋಡ ಗ್ರಾಮದಲ್ಲಿ ನಡೆದಿದೆ. ಶೇಶಪ್ಪಪ್ಪಗೌಡ , ಕನ್ಮಯ್ಯ , ಬಿಳಿಯಾನ ಸಿದ್ದ ಒಡೆಯರ್ ಹಲ್ಲೆಗೆ ಒಳಗಾದ ತಂದೆ ಮಕ್ಕಳು. ಬಿಳಿಯಾನಸಿದ್ದ ಒಡೆಯರ್‌ ಹಾಗೂ ಇಬ್ಬರು ಸಹೋದರರು ಮತ್ತು ಮಕ್ಕಳು ಸೇರಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಮಲ್ಲಪ್ಪ ಒಡೆಯರ್ ಹೆಸರಲ್ಲಿರುವ ಮೂರು ಎಕರೆ ಜಮೀನು ವಿಚಾರದಲ್ಲಿ ಗಲಾಟೆ ನಡೆದಿದ್ದು, ಒಂದೂವರೆ ಎಕರೆ ಜಮೀನು ನೀಡುವಂತೆ ಕೇಳಿದ್ದ ಬಿಳಿಯಾನ ಸಿದ್ದ ಒಡೆಯರ್. ಜಮೀನು ನೀಡುವಂತೆ ಕೇಳಿದಕ್ಕೆ ಆರೇಳು ಜನರಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:16 pm, Wed, 7 February 24