AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ ವತಿಯಿಂದ ಯುವಕ-ಯುವತಿಯರಿಗೆ ಉಚಿತ ಡ್ರೈವಿಂಗ್ ಕ್ಲಾಸ್, ನೂರಾರು ಜನರಿಗೆ ಸಹಾಯಕವಾಯ್ತು ಈ ಯೋಜನೆ

ಇತ್ತೀಚೆಗೆ ಡ್ರೈವಿಂಗ್ ಸ್ಕೂಲ್ ಗಳು ಡ್ರೈವಿಂಗ್ ಹೇಳಿಕೊಡಲು ಒನ್ ಟೂ ಡಬಲ್ ದರ ಪೀಕುತ್ತಿದ್ದಾರೆ. ಇದರಿಂದ ಕಂಗಲಾಗಿದ್ದ ಯುವಕ ಯುವತಿಯರಿಗೆ ಸರ್ಕಾರ ಉಚಿತವಾಗಿ ಡ್ರೈವಿಂಗ್ ಹೇಳಿಕೊಡಲು ಮುಂದಾಗಿದೆ. ಅದು ಬಸ್ಸು ಮತ್ತು ಕಾರುಗಳನ್ನು ಓಡಿಸಲು ಟ್ರೈನಿಂಗ್ ನೀಡಲು ಮುಂದಾಗಿದೆ.

ಬಿಎಂಟಿಸಿ ವತಿಯಿಂದ ಯುವಕ-ಯುವತಿಯರಿಗೆ ಉಚಿತ ಡ್ರೈವಿಂಗ್ ಕ್ಲಾಸ್, ನೂರಾರು ಜನರಿಗೆ ಸಹಾಯಕವಾಯ್ತು ಈ ಯೋಜನೆ
ಬಿಎಂಟಿಸಿ ವತಿಯಿಂದ ಉಚಿತ ಡ್ರೈವಿಂಗ್ ಕ್ಲಾಸ್
Kiran Surya
| Edited By: |

Updated on: Feb 15, 2024 | 1:48 PM

Share

ಬೆಂಗಳೂರು, ಫೆ.15: ಖಾಸಗಿ ಡ್ರೈವಿಂಗ್ ಸ್ಕೂಲ್ (Free Driving Class) ಗಳಿಗೆ ಸೆಡ್ಡು ಹೊಡೆಯಲು ಸಾರಿಗೆ ಇಲಾಖೆ ಮುಂದಾಗಿದ್ದು ಬಿಎಂಟಿಸಿಯಿಂದ (BMTC) ಯುವಕ ಯುವತಿಯರಿಗೆ ಉಚಿತ ಬಸ್ಸು ಹಾಗೂ ಕಾರಿನ ಡ್ರೈವಿಂಗ್ ಕ್ಲಾಸ್ ನಡೆಸಲು ಮುಂದಾಗಿದೆ. ಮೂವತ್ತು ದಿನ ಉಚಿತವಾಗಿ ಕಾರು, ಬಸ್ ಡ್ರೈವಿಂಗ್ ತರಬೇತಿ ನೀಡಲಾಗುತ್ತದೆ. ಬೆಂಗಳೂರಿನ ವಡ್ಡರಹಳ್ಳಿಯ (Vaddarahalli) 22 ಎಕರೆ ಪ್ರದೇಶದಲ್ಲಿ ಈ ಕ್ಲಾಸ್‌ ನಡೆಯಲಿದೆ. ಬೇರೆ ಊರಿನಿಂದ ಬರುವವರಿಗೆ ಉಚಿತವಾಗಿ ಊಟ-ವಸತಿ ವ್ಯವಸ್ಥೆ ಕೂಡ ಮಾಡಲಾಗಿದೆ. ಮೂವತ್ತು ದಿನ ತರಬೇತಿ ಮುಗಿದ ನಂತರ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಕೂಡ ಮಾಡಿಸಿಕೊಡಲಾಗುತ್ತೆ.

ಬಡ ಹಾಗೂ ಮಧ್ಯಮ ವರ್ಗದವರಿಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ಯೋಜನೆ ಜಾರಿ ಮಾಡಲಾಗಿದ್ದು, ಯುವತಿಯರಿಗೆ ಕೂಡ ಚಾಲನಾ ತರಬೇತಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಲು ಇಷ್ಟ ಇದ್ದರೆ ಅದಕ್ಕೂ ಕೂಡ ಚಿಂತನೆ ನಡೆದಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಯುವಕ, ಯುವತಿಯರು ತರಬೇತಿ ಪಡೆಯಬಹುದು ಎಂದು ಬಿಎಂಟಿಸಿಯ ಅಧಿಕಾರಿ ತಿಳಿಸಿದ್ದಾರೆ.

ಬಿಎಂಟಿಸಿಯ ವಡ್ಡರಹಳ್ಳಿಯ ವಾಹನ ತರಬೇತಿ ಕೇಂದ್ರದಲ್ಲಿ ಸರ್ಕಾರದ ಕೆಲ ಯೋಜನೆಗಳ ಅಡಿಯಲ್ಲಿ ಯುವಕ ಯುವತಿಯರಿಗೆ ಉಚಿತವಾಗಿ ಡ್ರೈವಿಂಗ್ ಕ್ಲಾಸ್ ಹೇಳಿಕೊಡಲಾಗ್ತಿದೆ. ಮೂವತ್ತು ದಿನಗಳ ಕಾಲ ಹೆವಿ ಪ್ಯಾಸೆಂಜರ್ ವೆಹಿಕಲ್ ಮತ್ತು ಲೈಟ್ ಮೋಟಾರು ವೆಹಿಕಲ್ ಗಳ ಡ್ರೈವಿಂಗ್ ಹೇಳಿ ಕೊಡಲಾಗುತ್ತದೆ. ನೆಲಮಂಗಲ ಆರ್ಟಿಓ ದಲ್ಲಿ ಡಿಎಲ್ ಮಾಡಿಸಿಕೊಡಲಾಗುತ್ತದೆ. ರಾಜ್ಯದ ಯಾವುದೇ ಸ್ಥಳದ ಯುವಕ ಯುವತಿಯರು ಡ್ರೈವಿಂಗ್ ತರಬೇತಿ ಪಡೆಯಬಹುದು. ಮೊದಲ ಮತ್ತು ಎರಡನೇ ವಾರ ತರಬೇತಿ ಕೇಂದ್ರದಲ್ಲಿ, ಮೂರನೇ ವಾರ ವಿಲೇಜ್ ರೋಡ್ ನಲ್ಲಿ ಕೊನೆಯ ವಾರ ಹೈವೇ ಮತ್ತು ಟ್ರಾಫಿಕ್ ನಲ್ಲಿ ಟ್ರೈನಿಂಗ್ ನೀಡಲಾಗುತ್ತದೆ. ಮೂವತ್ತು ದಿನದೊಳಗೆ ಬಿಎಂಟಿಸಿಯಲ್ಲಿ 25 ವರ್ಷಗಳ ಅನುಭವವಿರುವ ಗೋಲ್ಡ್ ಮತ್ತು ಸಿಲ್ವರ್ ಮೆಡಲ್ ಪಡೆದಿರುವ ಮಹಿಳಾ ಮತ್ತು ಪುರುಷ ಡ್ರೈವರ್ ಗಳಿಂದ ಯುವಕ ಯುವತಿಯರಿಗೆ ಡ್ರೈವಿಂಗ್ ಹೇಳಿಕೊಡಲಾಗುತ್ತದೆ.

ಇದನ್ನೂ ಓದಿ: ರಾಜ್ಯದ ರೈತರು ಪೊಲೀಸರ ವಶಕ್ಕೆ: ಮಧ್ಯಪ್ರದೇಶ ಸಿಎಂಗೆ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ಡ್ರೈವಿಂಗ್ ಕ್ಲಾಸ್ ಸೇರೋದು ಹೇಗೆ?

ಕೇವಲ ಡ್ರೈವಿಂಗ್ ಕ್ಲಾಸ್ ಮಾತ್ರ ಹೇಳಿಕೊಡೋದಿಲ್ಲ ಟ್ರಾಫಿಕ್ ಪೋಲಿಸರು, ಆರ್ಟಿಓ ಅಧಿಕಾರಿಗಳಿಂದ ರಸ್ತೆ ಸಂಚಾರಿ ನಿಯಮಗಳ ಬಗ್ಗೆ ವಿಶೇಷ ತರಬೇತಿ, ಟ್ರಾಫಿಕ್ ಟಿಪ್ಸ್ ನೀಡಲಾಗುತ್ತೆ. ಈ ಡ್ರೈವಿಂಗ್ ಸ್ಕೂಲ್ ಸೇರಲು ಯುವಕ ಯುವತಿಯರು ಶಾಂತಿನಗರದ ಬಿಎಂಟಿಸಿಯ ಮುಖ್ಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ರೆ ನಿಮಗೆ ತರಬೇತಿ ನೀಡಲಾಗುತ್ತದೆ. 2023 – 24 ನೇ ಸಾಲಿನಲ್ಲಿ 970 ಯುವಕ ಯುವತಿಯರಿಗೆ ಡ್ರೈವಿಂಗ್ ಕ್ಲಾಸ್ ಹೇಳಿಕೊಡಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಮೊದಲ ಬ್ಯಾಚ್ ನಲ್ಲಿ ಜನವರಿಯಲ್ಲಿ 104 ಯುವಕ ಯುವತಿಯರು ಉಚಿತವಾಗಿ ತರಬೇತಿ ಪಡೆದು ಡಿಎಲ್ ಪಡೆದುಕೊಂಡಿದ್ದಾರೆ. ಸದ್ಯ ಎರಡನೇ ಬ್ಯಾಚ್ ನಲ್ಲಿ 34 ಜನರು ತರಬೇತಿ ಪಡೆಯುತ್ತಿದ್ದಾರೆ.

ಒಟ್ನಲ್ಲಿ ಡ್ರೈವಿಂಗ್ ಕಳಿತು ಕೆಎಸ್ಆರ್ಟಿಸಿ ಗೋ ಬಿಎಂಟಿಸಿಗೋ ಅಥವಾ ಸರ್ಕಾರದ ಯಾವುದಾರರು ಇಲಾಖೆಗೆ ಅಪ್ಲಿಕೇಶನ್ ಹಾಕಿ ಡ್ರೈವಿಂಗ್ ಕೆಲಸ ಪಡೆಯೋಣ ಅಂದರೆ ಈ ಡ್ರೈವಿಂಗ್ ಸ್ಕೂಲ್ ನವ್ರು ಒನ್ ಟೂ ಡಬಲ್ ಹಣ ಕೇಳುತ್ತಾರೆ. ಹಾಗಾಗಿ ಬಿಎಂಟಿಸಿಯಿಂದ ನೀಡುತ್ತಿರುವ ಈ ಉಚಿತ ಡ್ರೈವಿಂಗ್ ಕ್ಲಾಸ್ ಎಷ್ಟೋ ಬಡ ಯುವಕ ಯುವತಿಯರಿಗೆ ತುಂಬಾ ಸಹಾಯ ಆಗ್ತಿರೋದಂತೊ ಸುಳ್ಳಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!