AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರೇಟರ್ ಬೆಂಗಳೂರು ವಾರ್ಡ್ ಪುನರ್ ವಿಂಗಡಣೆ: 198 ರ ಬದಲಿಗೆ ಅಸ್ತಿತ್ವಕ್ಕೆ ಬರಲಿವೆ 400 ವಾರ್ಡ್

ಬೆಂಗಳೂರಿನ ಶಕ್ತಿಕೇಂದ್ರ ಬಿಬಿಎಂಪಿಯ ಬದಲಿಗೆ ಜಿಬಿಎ ಜಾರಿ ಮಾಡಿರುವ ರಾಜ್ಯ ಸರ್ಕಾರ , ಇದೀಗ ರಾಜಧಾನಿಯ ವಾರ್ಡ್​ಗಳ ಮರು ವಿಂಗಡನೆ ಮೇಲೆ ಕಣ್ಣಿಟ್ಟಿದೆ. ಬಿಬಿಎಂಪಿ ತ್ಯಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿ ಮಾಡುವಾಗ 198 ವಾರ್ಡ್​​ಗಳನ್ನೇ ಮುಂದುವರಿಸಿದ್ದ ಸರ್ಕಾರ, ಇದೀಗ ಬೆಂಗಳೂರಿನ ವಾರ್ಡ್ ಗಳ ಪುನರ್ ವಿಂಗಡನೆಗೆ ಟಾಸ್ಕ್ ನೀಡಿದೆ. ಸರ್ಕಾರದ ಸೂಚನೆಯಂತೆ ಡಿಲಿಮೀಟೇಷನ್​ಗೆ ಇಳಿದಿರುವ ಜಿಬಿಎ, ನವೆಂಬರ್ ಒಳಗೆ ಜಿಬಿಎ ವಾರ್ಡ್​​ಗಳಿಗೆ ಮತ್ತೊಂದು ರೂಪ ನೀಡುವ ನೀರಿಕ್ಷೆ ಹೆಚ್ಚಾಗಿದೆ.

ಗ್ರೇಟರ್ ಬೆಂಗಳೂರು ವಾರ್ಡ್ ಪುನರ್ ವಿಂಗಡಣೆ: 198 ರ ಬದಲಿಗೆ ಅಸ್ತಿತ್ವಕ್ಕೆ ಬರಲಿವೆ 400 ವಾರ್ಡ್
ಗ್ರೇಟರ್ ಬೆಂಗಳೂರು ಅಥಾರಿಟಿ
ಶಾಂತಮೂರ್ತಿ
| Edited By: |

Updated on: Sep 18, 2025 | 7:32 AM

Share

ಬೆಂಗಳೂರು, ಸೆಪ್ಟೆಂಬರ್ 18: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಆಡಳಿತಕ್ಕೆ ಗ್ರೇಟರ್ ಬೆಂಗಳೂರು ಅಥಾರಿಟಿಯ (GBA) ರೂಪ ನೀಡಿದ್ದ ಸರ್ಕಾರ, ಇದೀಗ ಬೆಂಗಳೂರಿನ ವಾರ್ಡ್​​ಗಳ ಪುನರ್ ವಿಂಗಡಣೆಗೆ ಸಜ್ಜಾಗಿದೆ. ಸದ್ಯ ಬೆಂಗಳೂರಿನಲ್ಲಿರುವ 198 ವಾರ್ಡ್​ಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿರುವ ಸರ್ಕಾರ, ಇದೀಗ ಜಿಬಿಎ ಮೂಲಕ 198 ವಾರ್ಡ್​ಗಳ ಬದಲು 400 ವಾರ್ಡ್​ಗಳಾಗಿ ವಿಂಗಡಿಸುವ ಸಾಧ್ಯತೆ ಹೆಚ್ಚಾಗಿದೆ. ಸದ್ಯ ಸರ್ಕಾರದ ಸೂಚನೆಯಂತೆ ಜನಸಂಖ್ಯೆಯ ಆಧಾರದ ಮೇಲೆ ವಾರ್ಡ್ ವಿಂಗಡನೆಗೆ ಮುಂದಾಗಿರುವ ಜಿಬಿಎ ಅಧಿಕಾರಿಗಳು ಜಿಪಿಎಸ್ ಆಧಾರದಲ್ಲಿ ವಾರ್ಡ್​ಗಳನ್ನು ವಿಂಗಡಿಸಲು ಮುಂದಾಗಿದ್ದಾರೆ.

2011 ರ ಜನಗಣತಿಯ ಪ್ರಕಾರ ಜನಸಂಖ್ಯೆಯ ಆಧಾರದಲ್ಲಿ ವಾರ್ಡ್​ಗಳನ್ನು ಪುನರ್ ವಿಂಗಡನೆ ಮಾಡಲು ಹೊರಟಿರುವ ಜಿಬಿಎ, ಇದೀಗ ಕೆಲ ಮಾನದಂಡಗಳು ಹಾಗೂ ಸರ್ಕಾರ ನೀಡಿರುವ ಸಲಹೆಯಂತೆ ವಾರ್ಡ್​ಗಳನ್ನ ಪುನರ್ ರಚಿಸಲು ಹೊರಟಿದೆ.

ವಾರ್ಡ್ ಪುನರ್ ವಿಂಗಡಣೆ ಮುಖ್ಯಾಂಶಗಳೇನು?

  • 198 ವಾರ್ಡ್​ಗಳ ಬದಲು 400 ವಾರ್ಡ್​ಗಳ ರಚನೆ ಸಾಧ್ಯತೆ
  • ಜಿಪಿಎಸ್, ಜನಸಂಖ್ಯೆಯ ಆಧಾರದ ಮೇಲೆ ವಾರ್ಡ್ ಪುನರ್ ರಚನೆ
  • 4 ನಗರ ಪಾಲಿಕೆಗಳಿಗೆ 75ವಾರ್ಡ್, ಪಶ್ಚಿಮ ಪಾಲಿಕೆಗೆ 100 ವಾರ್ಡ್​ಗಳಾಗಿ ವಿಂಗಡನೆ ಸಾಧ್ಯತೆ
  • ಪ್ರತಿ ವಾರ್ಡ್​ಗೂ ಸುಮಾರು 17 ರಿಂದ 23 ಸಾವಿರ ಜನಸಂಖ್ಯೆ ನಿಗದಿ
  • 2011 ರ ಜನಗಣತಿಯ ಆಧಾರದ ಮೇಲೆ ವಾರ್ಡ್ ಪುನರ್ ರಚನೆಗೆ ಪ್ಲಾನ್

ಇದನ್ನೂ ಓದಿ: ಬೆಂಗಳೂರು: ಇನ್ಮುಂದೆ ಜಿಬಿಎ ವ್ಯಾಪ್ತಿಯಲ್ಲಿ 1200 ಚದರ ಅಡಿ ವರೆಗಿನ ನಿವೇಶನಗಳ ವಸತಿ ಕಟ್ಟಡಗಳಿಗೆ ಒಸಿ, ಸಿಸಿ ಅಗತ್ಯವಿಲ್ಲ!

ಸದ್ಯ ಬೆಂಗಳೂರಿನ ಅಭಿವೃದ್ಧಿಯ ದೃಷ್ಟಿಯಿಂದ ವಿಭಾಗಗಳನ್ನ ಮಾಡಿ ಆಡಳಿತ ವಿಕೇಂದ್ರೀಕರಣ ಮಾಡಿರೋ ಸರ್ಕಾರ, ಇದೀಗ ಬೆಂಗಳೂರಿನ ವಾರ್ಡ್ ಗಳ ರಚನೆ ಬಗ್ಗೆ ಜಿಬಿಎಗೆ ಜವಬ್ದಾರಿ ನೀಡಿದೆ. ಇತ್ತ ನವೆಂಬರ್ ಒಳಗಾಗಿ ಸರ್ಕಾರದ ಮುಂದೆ ವಾರ್ಡ್ ಪುನರ್ ವಿಂಗಡನೆ ಬಗ್ಗೆ ವರದಿ ಮುಂದಿಡಲಿರೋ ಜಿಬಿಎ, ಯಾವ ರೀತಿ ವರದಿಯನ್ನ ಸರ್ಕಾರದ ಮುಂದಿಡುತ್ತೆ, ಜಿಬಿಎ ವ್ಯಾಪ್ತಿಯಲ್ಲಿ ವಾರ್ಡ್​ಗಳಿಗೆ ಯಾವ ರೂಪುರೇಷೆ ರೆಡಿಯಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ