ಬೆಂಗಳೂರು: ಬಾರ್​ನಲ್ಲಿ ಬಿಲ್ ವಿಚಾರಕ್ಕೆ ಗಲಾಟೆ, ಪೊಲೀಸರ ಬೇಜವಾಬ್ದಾರಿತನದಿಂದ ಸಿಸಿಟಿವಿಯಲ್ಲಿ ಸೆರೆಯಾಗದ ಕಿಡಿಗೇಡಿಗಳ ಕೃತ್ಯ

| Updated By: ಆಯೇಷಾ ಬಾನು

Updated on: Nov 03, 2022 | 11:41 AM

ಬಾರ್​ನಿಂದ ಯುವಕರನ್ನು ಹೊರಹಾಕಿದ್ದಕ್ಕೆ ಸಿಟ್ಟಿಗೆದ್ದ ಯುವಕರು ದಾಂದಲೆ ಮಾಡಿದ್ದಾರೆ. ಬಿಯರ್ ಬಾಟಲ್ ಗಳನ್ನ ಬಾರ್ ಕಡೆ ಎಸೆದಿದ್ದಾರೆ. ಗ್ರಾಹಕರು ಇದ್ದಿದ್ದರೆ ದೊಡ್ಡ ಅನಾಹುತವೇ ನಡೆದುಹೋಗ್ತಿತ್ತು.

ಬೆಂಗಳೂರು: ಬಾರ್​ನಲ್ಲಿ ಬಿಲ್ ವಿಚಾರಕ್ಕೆ ಗಲಾಟೆ, ಪೊಲೀಸರ ಬೇಜವಾಬ್ದಾರಿತನದಿಂದ ಸಿಸಿಟಿವಿಯಲ್ಲಿ ಸೆರೆಯಾಗದ ಕಿಡಿಗೇಡಿಗಳ ಕೃತ್ಯ
ಘಟನೆ ನಡೆದ ಸ್ಥಳ
Follow us on

ಬೆಂಗಳೂರು: ಬಾರ್​ನಲ್ಲಿ ಬಿಲ್ ವಿಚಾರಕ್ಕೆ ಸಿಬ್ಬಂದಿ ಜೊತೆ ವಾಗ್ವಾದ, ದಾಂದಲೆ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾರ್​ನಿಂದ ಯುವಕರನ್ನು ಹೊರಹಾಕಿದ್ದಕ್ಕೆ ಸಿಟ್ಟಿಗೆದ್ದ ಯುವಕರು ದಾಂದಲೆ ಮಾಡಿದ್ದಾರೆ. ಬಿಯರ್ ಬಾಟಲಿ, ಕಲ್ಲು ತೂರಿ ಪರಾರಿಯಾಗಿದ್ದಾರೆ. ಪುಂಡರ ಅಟ್ಟಹಾಸಕ್ಕೆ ಬಾರ್​ನಲ್ಲಿದ್ದ ರೆಫ್ರಿಜರೇಟರ್​ಗೆ ಹಾನಿಯಾಗಿದೆ. ನಂದಿನಿ ಲೇಔಟ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನ.1ರಂದು ಬೆಂಗಳೂರಿನ ಲಗ್ಗೆರೆಯ ಕದಂಬ ಬಾರ್​ನಲ್ಲಿ ಈ ಗಲಾಟೆ ನಡೆದಿದೆ. ಮೊದಲಿಗೆ ಬಿಲ್ ವಿಚಾರದಲ್ಲಿ ಗಲಾಟೆ ಶುರುವಾಗಿದೆ. ನಂತರ ಯುವಕರನ್ನು ಬಾರ್ ಸಿಬ್ಬಂದಿ ಹೊರಗೆ ಕಳಿಸಿದ್ದಾರೆ. ಇದರಿಂದ ಕೋಪಗೊಂಡಿದ್ದ ಯುವಕರು ರಾತ್ರಿ ಹೊತ್ತು ಬೈಕ್ ನಲ್ಲಿ ವಾಪಸ್ ಬಾರ್ ಬಳಿ ಬಂದಿದ್ದಾರೆ. ಬಂದವರೇ ಬಿಯರ್ ಬಾಟಲ್ ಗಳನ್ನ ಬಾರ್ ಕಡೆ ಎಸೆದಿದ್ದಾರೆ. ಗ್ರಾಹಕರು ಇದ್ದಿದ್ದರೆ ದೊಡ್ಡ ಅನಾಹುತವೇ ನಡೆದುಹೋಗ್ತಿತ್ತು. ಅಲ್ಲದೆ ಈ ಹಿಂದೆ ಅಕ್ಟೋಬರ್ 29ರಂದು ಇದೇ ಬಾರ್​ನಲ್ಲಿ ಗಲಾಟೆ ನಡೆದಿತ್ತು. ಯುವಕರಾದ ಪ್ರಜ್ವಲ್, ಹರೀಶ್​ ಕುಡಿದು ಗಲಾಟೆ ಮಾಡಿದ್ದರು. ಪ್ರಕರಣದ ತನಿಖೆಗಾಗಿ ಮಹಾಲಕ್ಷ್ಮೀ ಲೇಔಟ್​ ಠಾಣೆ ಪೊಲೀಸರು ಸಿಸಿಟಿವಿ DVR​ ಪಡೆದಿದ್ದು ಹಿಂದಿರುಗಿಸಲಿಲ್ಲ. ಪೊಲೀಸರು ಡಿವಿಆರ್ ಹಿಂದಿರುಗಿಸದಿದ್ದರಿಂದ ನವೆಂಬರ್​ 1ರಂದು ನಡೆದ ಗಲಾಟೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ.

ಇದನ್ನೂ ಓದಿ: ಭ್ರಷ್ಟಾಚಾರದ ಅಡ್ಡೆಯಾಗಿದೆಯಾ ವಿಜಯಪುರ ಜಿಲ್ಲಾ ಅಬಕಾರಿ‌ ಇಲಾಖೆ? ಬಾರ್​ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟ ವಿಡಿಯೋ ವೈರಲ್

ಮೊಬೈಲ್​ ಕಳ್ಳತನ ಮಾಡುತ್ತಿದ್ದ ಐವರು ಅರೆಸ್ಟ್

ಬೆಂಗಳೂರು: ಮೊಬೈಲ್​ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ವಿಷ್ಣು, ಮಹೇಶ್​​, ಇಮ್ತಿಯಾಜ್, ರಿಯಾಜ್​ವುರ್​ ರೆಹಮಾನ್​, ಸಂಜಿತ್ ಕುಮಾರ್ ಬಂಧಿತರು. ಸಂಪಿಗೆಹಳ್ಳಿ, ಯಲಹಂಕ ಉಪನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮೂರು ಪ್ರತ್ಯೇಕ ಪ್ರಕರಣಗಳಿಂದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ದ್ವಿಚಕ್ರ ವಾಹನ, ಆಟೋದಲ್ಲಿ ಬಂದು ಮೊಬೈಲ್, ಹಣ ಕಸಿದು ಪರಾರಿಯಾಗುತ್ತಿದ್ದರು. ಸದ್ಯ ಈಗ ಅವರನ್ನು ಬಂಧಿಸಿದ್ದು ಮೊಬೈಲ್ ಫೋನ್‌ಗಳು, ಕೃತ್ಯಕ್ಕೆ ಬಳಸಿದ್ದ ಆಟೋ ವಶಕ್ಕೆ ಪಡೆಯಲಾಗಿದೆ.

ಪೊಲೀಸರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರಚಿ ಪರಾರಿಯಾದ ರೌಡಿಶೀಟರ್ ಬಂಧನ

ಕಳೆದ ವಾರ ಹೊಯ್ಸಳ ಸಿಬ್ಬಂದಿಗೆ ಪೆಪ್ಪರ್ ಸ್ಪ್ರೇ ಎರಚಿ ಪರಾರಿಯಾಗಿದ್ದ ರೌಡಿಶೀಟರ್ ಗೊಣ್ಣೆ ವಿಜಿಯನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ. ಗಿರಿನಗರ ಠಾಣಾ ಕಾನ್ಸ್ಟೇಬಲ್ ನಾಗೇಂದ್ರ, ಕಿರಣ್ ಹಾಗೂ ನೇತ್ರಾ ಎಂಬುವರ ಮೇಲೆ ರೌಡಿಶೀಟರ್ ಸ್ಪ್ರೇ ಎರಚಿದ್ದ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಕೃತ್ಯದ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ಆರೋಪಿ ವಿರುದ್ಧ ಈ ಹಿಂದೆ ಕೊಲೆಯತ್ನ, ದರೋಡೆ, ಸುಲಿಗೆಯಂತಹ ಪ್ರಕರಣಗಳು ದಾಖಲಾಗಿವೆ.

ಇತ್ತೀಚಿಗೆ ರಾಮನಗರ ಭಾಗದಲ್ಲಿ ದರೋಡೆ ಪ್ರಕರಣವೊಂದರಲ್ಲೂ ಬೇಕಾಗಿದ್ದ ವಿಜಿಯನ್ನು ಪೊಲೀಸರು ಹುಡುಕುತ್ತಿದ್ದರು. ರಾಮನಗರ ದರೋಡೆ ಪ್ರಕರಣದಲ್ಲಿ ವಿಜಿಯ ಸಹಚರರಾದ ರೇಣುಕುಮಾರ್, ಹಾಗೂ ಕಿರಣ್ ಬಂಧನವಾಗಿತ್ತು. ಸದ್ಯ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ರೌಡಿಶೀಟರ್ ವಿಜಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Published On - 11:34 am, Thu, 3 November 22