AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ದಿನದ 24 ಗಂಟೆಗಳ‌ ಕಾಲ ತೆರೆಯಲಿವೆ ಹೋಟೆಲ್​ಗಳು; ಗೃಹ ಸಚಿವರಿಂದ ಹೋಟೆಲ್ ಅಸೋಸಿಯೇಷನ್​ಗೆ ಭರವಸೆ

ಹೋಟೆಲ್​ಗಳನ್ನ ದಿನದ 24 ಗಂಟೆಗಳ ಕಾಲ ತೆಗೆಯಬೇಕು ಎಂದು ಹೋಟೆಲ್ ಮಾಲೀಕರು ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು.‌ ಈ ಬೇಡಿಕೆ ಈ ವರ್ಷ ಇಡೇರುವ ಹಾಗೇ ಕಾಣಿಸುತ್ತಿದೆ. ಇನ್ಮುಂದೆ ದಿನದ 24 ಗಂಟೆಗಳ‌ ಕಾಲ ಹೋಟೆಲ್​ಗಳು ತೆರೆಯಲಿವೆ. ಗೃಹ ಸಚಿವರಿಂದ ಹೋಟೆಲ್ ಅಸೋಸಿಯೇಷನ್​ಗೆ ಭರವಸೆ ಸಿಕ್ಕಿದೆ.

ಇನ್ಮುಂದೆ ದಿನದ 24 ಗಂಟೆಗಳ‌ ಕಾಲ ತೆರೆಯಲಿವೆ ಹೋಟೆಲ್​ಗಳು; ಗೃಹ ಸಚಿವರಿಂದ ಹೋಟೆಲ್ ಅಸೋಸಿಯೇಷನ್​ಗೆ ಭರವಸೆ
ಜಿ ಪರಮೇಶ್ವರ್​
Poornima Agali Nagaraj
| Updated By: ಆಯೇಷಾ ಬಾನು|

Updated on: Feb 07, 2024 | 9:31 AM

Share

ಬೆಂಗಳೂರು, ಫೆ.07: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ವಲಯ ಅಂದ್ರೆ ಅದು ಹೋಟೆಲ್ ಉಧ್ಯಮ.‌ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಹೋಟೆಲ್​ಗಳು (Hotels) ಓಪನ್ ಆಗುತ್ತಿದ್ದಂತೆ ಉದ್ಯೋಗ ಸೃಷ್ಟಿಯು ಕೂಡ ಹೆಚ್ಚಳವಾಗುತ್ತಿದೆ.‌ ಈ ಮಧ್ಯೆ ಹೋಟೆಲ್ ಗಳನ್ನ ದಿನದ 24 ಗಂಟೆಗಳ ಕಾಲ ತೆರೆಯಲು ಅನುಮತಿ ಕೊಡುವಂತೆ ಹೋಟೆಲ್ ಅಸೋಸಿಯೇಷನ್ (Hotel Association) ಸರ್ಕಾರದ ಮುಂದೆ ಬೇಡಿಕೆ ಇಡುತ್ತಲೇ ಬಂದಿತ್ತು.‌ ಆದರೆ ಹಿಂದಿನ ಸರ್ಕಾರವು ಇವರ ಬೇಡಿಕೆಯನ್ನ ಇಡೇರಿಸಿರಲಿಲ್ಲ.‌ ಈ ಬಾರಿ ಕಾಂಗ್ರೆಸ್ ಸರ್ಕಾರ (Congress Government) ಇವರ ಬೇಡಿಕೆಯನ್ನ ಇಡೇರಿಸಲು ಮುಂದಾಗಿದೆ.

ಸಿಲಿಕಾನ್ ಸಿಟಿ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿರುವಂತೆ ಮಾರ್ನಿಂಗ್, ಇವ್ನಿಂಗ್, ಮಧ್ಯರಾತ್ರಿವರೆಗೂ ಕೆಲಸ ನಿರ್ವಹಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೂ ಕೆಲಸ ನಿರ್ವಹಿಸುವ ಜನರಿಗೆ ಸಧ್ಯ ಹೋಟೆಲ್​ಗಳಲ್ಲಿ ಊಟಗಳೇನೋ ಸಿಗುತ್ತಿವೆ.‌ ಆದರೆ ಮಧ್ಯರಾತ್ರಿಯ ಸಂಧರ್ಭದಲ್ಲಿ ಊಟ- ತಿಂಡಿ ಸರಿಯಾಗಿ ಸಿಗದೇ ಪರದಾಡುತ್ತಿರುವವರು ಸಾಕಷ್ಟು ಮಂದಿ ಇದ್ದಾರೆ. ‌ಈ‌ ಕಾರಣದಿಂದಾಗಿ ಹೋಟೆಲ್ ಅಸೋಸಿಯೇಷನ್ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯುವಂತೆ ಸರ್ಕಾರಕ್ಕೆ ಮನವಿಯನ್ನ ಸಲ್ಲಿಸುತ್ತಲೇ ಬಂದಿದೆ.‌ ಆದರೆ ಈ ಹಿಂದಿನ ಬಿಜೆಪಿ ಸರ್ಕಾರ ಮಾತ್ರ ಇವರ ಬೇಡಿಕೆಗೆ ಸ್ಪಂದಿಸಿರಲಿಲ್ಲ.‌ ಇದೀಗಾ ಕಾಂಗ್ರೆಸ್ ಸರ್ಕಾರ ಈ ಬೇಡಿಕೆಯನ್ನ ಇಡೇರಿಸುವ ಭರವಸೆ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಾರ್ಗಸೂಚಿಯನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಕೈ’ ಮುಖಂಡ, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷನ ಮೇಲೆ ಹಲ್ಲೆ; ಕಟ್ಟಿಗೆಯಿಂದ ಹಲ್ಲೆ ಮಾಡಿ ಕಾರಿನಲ್ಲಿ ಪರಾರಿಯಾದ ಕಿಡಿಗೇಡಿ

ಇನ್ನು, ದಿನದ 24 ಗಂಟೆಗಳ‌ ಕಾಲ ಹೋಟೆಲ್ ಗಳನ್ನ ತೆರೆಯುವುದಕ್ಕೆ ಅನುಮತಿ ನೀಡುವುದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ರಾತ್ರಿ ಪಾಳಯದಲ್ಲಿ ಕೆಲಸ ಮಾಡಲು ಸಾಕಷ್ಟು ಯುವಕರು ಬರ್ತಾರೆ.‌ ಅಲ್ಲದೇ ಇಂದಿಗೂ ರಾತ್ರಿ ವೇಳೆ ಪ್ರಯಾಣ ಮಾಡುವವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸಧ್ಯ ಕೇರಳದಲ್ಲಿ ದಿನದ 24 ಗಂಟೆಗಳ‌ ಕಾಲ ಹೋಟೆಲ್‌ ತೆರೆಯಲು ಅನುಮತಿ ಇದೆ. ಅದರಂತೆ ನಮ್ಮ ಸರ್ಕಾರಕ್ಕೂ ಬೇಡಿಕೆ ಇಟ್ಟಿದ್ದೀವಿ.‌ ಸರ್ಕಾರ ಭರವಸೆ ಕೊಟ್ಟಿದೆ. ಆ ಭರವಸೆ ಕಾರ್ಯರೂಪಕ್ಕೆ ಬಂದಿದ್ದೆ ಆದಾಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ಹೋಟಲ್ ಮಾಲೀಕರು ಹೇಳಿದರು.

ದಿನದ 24 ಗಂಟೆಗಳ ಕಾಲ ಹೋಟೆಲ್ ಓಪನ್ ಮಾಡಲು ಅನುಮತಿ ಕೊಡುವುದು ಒಳ್ಳೆಯ ಸಂಗತಿ.‌ ರಾತ್ರಿ ವೇಳೆ ಪ್ರಯಾಣ ಮಾಡುವಾಗ ತುಂಬ ಕಷ್ಟವಾಗುತ್ತದೆ.‌ ಸರ್ಕಾರ ಒಪ್ಪಿಗೆ ಕೊಟ್ಟಿದ್ದೆ ಆದಲ್ಲಿ ತುಂಬ ಉಪಯೋಗವಾಗಲಿದೆ ಎಂದು ಗ್ರಾಹಕರೊಬ್ಬರು ಸಂತಸ ಹಂಚಿಕೊಂಡಿದ್ದಾರೆ. ಒಟ್ನಲ್ಲಿ‌,‌ ಹೋಟೆಲ್​ಗಳನ್ನ 24 ಗಂಟೆಗಳ ಕಾಲ‌ ಓಪನ್ ಮಾಡುವುದಕ್ಕೆ ಅನುಮತಿಯನ್ನ ನೀಡಿದ್ರು ಕೂಡ ಟಫ್ ರೂಲ್ಸ್ ಗಳನ್ನ ಜಾರಿ ಮಾಡುವ ಸಾಧ್ಯತೆ ಇದೆ.‌ ಅದ್ರಲ್ಲಿ, 10 ಕ್ಕಿಂತ ಹೆಚ್ಚು ನೌಕರರು ಇರಬೇಕು. ವಾಚ್ ಮ್ಯಾನ್ ಇರಬೇಕು, ಸಿಸಿ ಟಿವಿ ಕ್ಯಾಮರಾಗಳು ಇರಬೇಕು, ಸುರಕ್ಷ ವ್ಯವಸ್ಥೆ ಇರಬೇಕು ಎನ್ನುವ ರೂಲ್ಸ್ ಗಳು ಜಾರಿಯಾಗುವ ಸಾಧ್ಯತೆ ಇದ್ದು, ಹೋಟೆಲ್ ಗಳಿಗೆ 10 ರಿಂದ 20 % ಲಾಭದ ಜೊತೆಗೆ 10 ರಿಂದ 20 ಸಾವಿರ ಉದ್ಯೋಗವು ಸೃಷ್ಟಿಯಾಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ