AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿದ್ವಾಯಿ ಆಸ್ಪತ್ರೆಯಲ್ಲಿ ಅನೇಕ ಲೋಪದೋಷ ಹಿನ್ನೆಲೆ ನಿರ್ದೇಶಕ ಲೋಕೇಶ್ ಎತ್ತಂಗಡಿ

ಔಷಧ ಟೆಂಡರ್ ವಿಚಾರದಲ್ಲಿ ಅನೇಕ ಲೋಪದೋಷ, ಆಸ್ಪತ್ರೆಯಲ್ಲಿ ಸಾಲು ಸಾಲು ಎಡವಟ್ಟು, ಕಳಪೆ ಚಿಕಿತ್ಸೆ, ಸಾಲುಸಾಲು ದೂರು ಹಿನ್ನೆಲೆ ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಲೋಕೇಶ್​​ ಅವರನ್ನು ಎತ್ತಂಗಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಲೋಕೇಶ್ ಅವರ ಸ್ಥಾನಕ್ಕೆ ಡಾ.ಸೈಯದ್ ಅಲ್ತಾಫ್ ನೇಮಕಗೊಂಡಿದ್ದಾರೆ.

ಕಿದ್ವಾಯಿ ಆಸ್ಪತ್ರೆಯಲ್ಲಿ ಅನೇಕ ಲೋಪದೋಷ ಹಿನ್ನೆಲೆ ನಿರ್ದೇಶಕ ಲೋಕೇಶ್ ಎತ್ತಂಗಡಿ
ಕಿದ್ವಾಯಿ ಆಸ್ಪತ್ರೆ
Vinay Kashappanavar
| Updated By: Digi Tech Desk|

Updated on:Feb 07, 2024 | 11:54 AM

Share

ಬೆಂಗಳೂರು, ಫೆ.07: ಕಿದ್ವಾಯಿ ಆಸ್ಪತ್ರೆಯಲ್ಲಿ (Kidwai Hospital) ಅನೇಕ ಲೋಪದೋಷ ಹಿನ್ನೆಲೆ ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಲೋಕೇಶ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಲೋಕೇಶ್ ಅವರ ಸ್ಥಾನಕ್ಕೆ ಡಾ.ಸೈಯದ್ ಅಲ್ತಾಫ್ ನೇಮಕಗೊಂಡಿದ್ದಾರೆ. ಔಷಧ ಟೆಂಡರ್ ವಿಚಾರದಲ್ಲಿ ಅನೇಕ ಲೋಪದೋಷ ಕಂಡು ಬಂದಿತ್ತು. ಹಾಗೂ ಆಸ್ಪತ್ರೆಯಲ್ಲಿ ಸಾಲು ಸಾಲು ಎಡವಟ್ಟು, ಕಳಪೆ ಚಿಕಿತ್ಸೆ, ಸಾಲುಸಾಲು ದೂರು ಹಿನ್ನೆಲೆ ಲೋಕೇಶ್​​ ಅವರನ್ನು ಎತ್ತಂಗಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್‌ ಆಸ್ಪತ್ರೆಯಾದ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿನ ಅವ್ಯವಹಾರ ಹಾಗೂ ಆಡಳಿತ ವ್ಯವಸ್ಥೆ ಕುಸಿದ ಹಿನ್ನೆಲೆಯಲ್ಲಿ ಹಾಲಿ ನಿರ್ದೇಶಕ ಡಾ. ವಿ. ಲೋಕೇಶ್‌ ಅವರನ್ನು ನಿರ್ದೇಶಕ ಸ್ಥಾನದಿಂದ ಎತ್ತಂಗಡಿ ಮಾಡಿ ಸರಕಾರ ಆದೇಶ ಹೊರಡಿಸಿದೆ. ಡಾ.ಲೋಕೇಶ್‌ ಅವರ ಸ್ಥಾನಕ್ಕೆ, ಸರ್ಜಿಕಲ್‌ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ.ಸೈಯದ್‌ ಅಲ್ತಾಫ್‌ ಅವರನ್ನು ತಾತ್ಕಾಲಿಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಕಿದ್ವಾಯಿಯಲ್ಲಿ ರೋಗಿಗಳಿಂದ ಹೆಚ್ಚಿನ ಶುಲ್ಕ ಪಡೆಯಲಾಗುತ್ತಿದೆ, ಅನುದಾನದ ದುರ್ಬಳಕೆ ಆಗುತ್ತಿದೆ, ಭ್ರಷ್ಟಾಚಾರ, ಸಂಸ್ಥೆಯ ಸಿಬ್ಬಂದಿಗಳು ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿದ್ದಾರೆ, ರೋಗಿಗಳಿಗೆ ಕಳಪೆ ಮಟ್ಟದ ಚಿಕಿತ್ಸೆ ನೀಡುತ್ತಿರುವುದು, ಔಷಧಗಳ ಕೊರತೆ, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡದಿರುವುದು ಹಾಗೂ ಕೆ.ಟಿ.ಪಿ.ಪಿ. ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಸಂಸ್ಥೆಗೆ ಹೆಚ್ಚಿನ ಲಾಭ ಬರುವಂತೆ ಟೆಂಡರ್‌ ನೀಡಿರುವುದರ ಕುರಿತು ಪತ್ರಿಕೆಯಲ್ಲಿ ವರದಿ ಹಾಗೂ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಖಜಾನೆ ಇಲಾಖೆ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ಇದನ್ನೂ ಓದಿ: ಕಿದ್ವಾಯಿ ಆಸ್ಪತ್ರೆಯಲ್ಲಿ ಕೆಟ್ಟುನಿಂತ MRI ಸ್ಕ್ಯಾನಿಂಗ್ ಮಷಿನ್, ಡಯಾಗ್ನೋಸ್ ಮಾಡಿಸಿಕೊಳ್ಳಲಾಗದೆ ರೋಗಿಗಳ ಪರದಾಟ

ಸಮಿತಿ ಒಂದು ತಿಂಗಳ ಕಾಲ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಟೆಂಡರ್‌ ಪ್ರಕ್ರಿಯೆಗಳಲ್ಲಿ ಕೆಟಿಪಿಪಿ ಕಾಯಿದೆ ಉಲ್ಲಂಘನೆ, ನಿರ್ಣಯ ಕೈಗೊಳ್ಳಲು ಅಸಾಧಾರಣ ವಿಳಂಬ, ಅಗತ್ಯ ಪೂರ್ವಭಾವಿ ಸಿದ್ಧತೆಯ ಕೊರತೆ, ಪರಿಣಿತರ ಸಮಿತಿಗಳ ಮರು ರಚನೆ, ಅನುಮೋದಿತ ದರಕ್ಕಿಂತಲೂ ಹೆಚ್ಚಿನ ದರ ಪಾವತಿಸಿಕೊಳ್ಳಲು ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಿರುವುದು, ಒಂದೇ ಪರೀಕ್ಷೆಗೆ ಪ್ರತ್ಯೇಕ ದರ ನಿಗದಿಪಡಿಸಿರುವುದು, ಒಂದೇ ಆವರಣದಲ್ಲಿರುವ ವಿವಿಧ ಔಷಧಾಲಯಗಳಲ್ಲಿ ಪ್ರತ್ಯೇಕ ದರಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದು ತಿಳಿದುಬಂದಿದೆ. ಹೀಗಾಗಿ ಹಾಲಿ ನಿರ್ದೇಶಕ ಡಾ. ವಿ. ಲೋಕೇಶ್‌ ಅವರನ್ನು ನಿರ್ದೇಶಕ ಸ್ಥಾನದಿಂದ ಎತ್ತಂಗಡಿ ಮಾಡಿ ಸರಕಾರ ಆದೇಶ ಹೊರಡಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:44 am, Wed, 7 February 24