ಅಮ್ಮ, ಮಗನನ್ನ ಅಪಹರಿಸಿ ಕಿರುಕುಳ; ಇಬ್ಬರು ರೌಡಿಶೀಟರ್​ಗಳು ಸೇರಿ 9 ಆರೋಪಿಗಳ ಬಂಧನ

|

Updated on: Aug 18, 2024 | 9:51 PM

ಇತ್ತೀಚೆಗೆ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಇದೀಗ ಅಮ್ಮ, ಮಗನನ್ನು ಅಪಹರಿಸಿ ಕಿರುಕುಳ ನೀಡಿದ ಆರೋಪದ ಮೇಲೆ ನಗರದ ಚಂದ್ರಾಲೇಔಟ್​​ ಪೊಲೀಸರು(Chandra Layout Police) ಇಬ್ಬರು ರೌಡಿಶೀಟರ್​ಗಳು ಸೇರಿ 9 ಆರೋಪಿಗಳನ್ನು ಬಂಧಿಸಿದ್ದಾರೆ.

ಅಮ್ಮ, ಮಗನನ್ನ ಅಪಹರಿಸಿ ಕಿರುಕುಳ; ಇಬ್ಬರು ರೌಡಿಶೀಟರ್​ಗಳು ಸೇರಿ 9 ಆರೋಪಿಗಳ ಬಂಧನ
ಅಮ್ಮ, ಮಗನನ್ನ ಅಪಹರಿಸಿ ಕಿರುಕುಳ; ಇಬ್ಬರು ರೌಡಿಶೀಟರ್​ಗಳು ಸೇರಿ 9 ಆರೋಪಿಗಳ ಬಂಧನ
Follow us on

ಬೆಂಗಳೂರು, ಆ.18: ಅಮ್ಮ, ಮಗನನ್ನು ಅಪಹರಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ಚಂದ್ರಾಲೇಔಟ್​​ ಪೊಲೀಸರು(Chandra Layout Police) ಇಬ್ಬರು ರೌಡಿಶೀಟರ್​ಗಳು ಸೇರಿ 9 ಆರೋಪಿಗಳನ್ನು ಬಂಧಿಸಿದ್ದಾರೆ. ಆ.13 ರಂದು ಇಬ್ಬರನ್ನು ಕಿಡ್ನಾಪ್ ಮಾಡಿದ್ದ ರೌಡಿಶೀಟರ್ಸ್​ ಜೋಸೇಫ್ ಮತ್ತು ಶ್ರೀನಿವಾಸ್ ಅಲಿಯಾಸ್​ ಪಾಗಲ್ ಸೀನಾ, ನಂತರ ಪರಿಚಯಸ್ಥ ಪ್ರತಾಪ್ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಇರಿಸಿ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಕಿಡ್ನ್ಯಾಪ್​ಗೆ ಕಾರಣವೇನು?

ವರುಣ್​ ಮತ್ತು ಆತನ ತಾಯಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ವರುಣ್ ಹಾಗೂ ಆತನ ತಾಯಿ ಇಬ್ಬರು ಸೇರಿ ಕಳ್ಳತನ ಮಾಡಿರುವ ವಿಚಾರ ಆರೋಪಿಗಳಿಗೆ ತಿಳಿದಿತ್ತು. ಹೀಗಾಗಿ ಈ ಆರೋಪಿಗಳು, ಕಳ್ಳತನ ಮಾಡಿರುವ 2 ಲಕ್ಷ ರೂ. ಹಣ ನೀಡುವಂತೆ ಅಮ್ಮ, ಮಗನಿಗೆ ಬೆದರಿಕೆ ಹಾಕಿದ್ದಾರೆ. ಆದರೂ ಹಣ ನೀಡದಿದ್ದಕ್ಕೆ ಕೋಪಗೊಂಡ ಬಂಧಿತ ಆರೋಪಿಗಳು ತಾಯಿ, ಮಗನನ್ನು ಅಪಹರಿಸಿ, ಮಹಿಳೆಯೊಬ್ಬರ ಮನೆಯಲ್ಲಿ ಕೂಡಿಹಾಕಿ ಕಿರುಕುಳ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಅಶ್ಲೀಲ ಮೆಸೇಜ್​ ಮಾಡಿ ಕಿರುಕುಳ ಆರೋಪ; ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು

ಪ್ರಕರಣ ಸಂಬಂಧ 9 ಆರೋಪಿಗಳ ಬಂಧನ

ಬಳಿಕ ಇಬ್ಬರ ಬಳಿ ಹಣ ಇಲ್ಲ ಎಂದು ಗೊತ್ತಾದಾಗ ಬಿಟ್ಟು ಕಳಿಸಿದ್ದಾರೆ. ನಂತರ ಮಹಿಳೆ ಚಂದ್ರಲೇಔಟ್ ಠಾಣೆಗೆ ದೂರು ನೀಡಿದರು. ಪ್ರಕರಣ ಸಂಬಂಧ ಜೋಸೆಫ್ (ರೌಡಿ ಶೀಟರ್), ಶ್ರೀನಿವಾಸ್ @ ಪಾಗಲ್ ಸೀನಾ (ರೌಡಿ ಶೀಟರ್), ಸೌಮ್ಯಾ, ಪ್ರತಾಪ್,
ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಸೇರಿ 9 ಆರೋಪಿಗಳನ್ನು ಬಂಧಿಸಲಾಗಿದೆ. ಶಹಬುದ್ದೀನ್ ಮತ್ತು ವಿಘ್ನೇಶ್ ವಿರುದ್ಧ ಈ ಹಿಂದೆ ಹಲ್ಲೆ ಪ್ರಕರಣಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ