AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ಯಾಗರಾಜನಗರದ ಹಿಂದೂ ದೇವಸ್ಥಾನದ ಗೋಪುರದ ಮೇಲಿನ ಯೇಸು ವಿಗ್ರಹ ತೆರವು, ಕಾರಣವೇನು?

ಬೆಂಗಳೂರಿನ ತ್ಯಾಗರಾಜನಗರದ ದೇವಸ್ಥಾನದ ಗೋಪುರದಲ್ಲಿದ್ದ ಯೇಸು ವಿಗ್ರಹ ತೆರವುಗೊಳಿಸಲಾಗಿದೆ. ಆ ಜಾಗಕ್ಕೆ ಆದ್ಯಂತ ಪ್ರಭು ವಿಗ್ರಹ ಸ್ಥಾಪನೆ ಮಾಡಲಾಗಿದೆ.

ತ್ಯಾಗರಾಜನಗರದ ಹಿಂದೂ ದೇವಸ್ಥಾನದ ಗೋಪುರದ ಮೇಲಿನ ಯೇಸು ವಿಗ್ರಹ ತೆರವು, ಕಾರಣವೇನು?
ಹಿಂದೂ ದೇವಸ್ಥಾನದ ಗೋಪುರದ ಮೇಲಿನ ಯೇಸು ವಿಗ್ರಹ
ಆಯೇಷಾ ಬಾನು
|

Updated on:Mar 06, 2023 | 9:35 AM

Share

ಬೆಂಗಳೂರು: ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ತ್ಯಾಗರಾಜನಗರದ ಹಿಂದೂ ದೇವಸ್ಥಾನದ ಗೋಪುರದ ಮೇಲಿದ್ದ ಕ್ರೈಸ್ತ ಪ್ರತಿಮೆ ತೆಗೆದು ಆ ಜಾಗಕ್ಕೆ ಆದ್ಯಂತ ಪ್ರಭು ವಿಗ್ರಹ ಸ್ಥಾಪನೆ ಮಾಡಲಾಗಿದೆ. ಆಡಳಿತ ಮಂಡಳಿ ಬೆಂಗಳೂರಿನ ತ್ಯಾಗರಾಜನಗರದ ದೇವಸ್ಥಾನದ ಗೋಪುರದಲ್ಲಿದ್ದ ಯೇಸು ವಿಗ್ರಹ ತೆರವುಗೊಳಿಸಿದೆ.

1968 ರಿಂದ ಗೋಪುರದಲ್ಲಿ ಯೇಸು ಕ್ರಿಸ್ತನ ವಿಗ್ರಹವಿತ್ತು. ಗಣೇಶನ ದೇವಸ್ಥಾನದ ಗೋಪುರದಲ್ಲಿ ಯೇಸುವಿನ ವಿಗ್ರಹ ಯಾಕೆ ಇರಬೇಕು? ಯೇಸು ವಿಗ್ರಹವನ್ನ ತೆರವುಗೊಳಿಸುವಂತೆ ನಾಲ್ಕು ವರ್ಷದಿಂದ ಹಿಂದೂ ಪರ ಸಂಘಟನೆಗಳು ಮನವಿ ಮಾಡಿದ್ದರು. ಈ ಹಿನ್ನಲೆ ಮಾರ್ಚ್ 2 ರಂದು ಯೇಸು ಕ್ರಿಸ್ತನ ವಿಗ್ರಹ ತೆರವುಗೊಳಿಸಿ, ಯೇಸು ಕ್ರಿಸ್ತ ಇದ್ದ ಜಾಗದಲ್ಲಿ ಆದ್ಯಂತ ಪ್ರಭು ವಿಗ್ರಹ ಸ್ಥಾಪನೆ ಮಾಡುವುದಾಗಿ ಗಣೇಶ ಮಂದಿರಂ ದೇವಸ್ಥಾನ ಟ್ರಸ್ಟಿ ಸುಮುಖ್ ರಾಜ್ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಆರ್ಕಿಡ್ ಇಂಟರ್ ನ್ಯಾಶನಲ್ ಶಾಲೆಯಿಂದ ದೋಖಾ; ಸಿಬಿಎಸ್​ಇ ಪಠ್ಯಕ್ರಮ ಎಂದು ಟೊಳ್ಳು ಭರವಸೆ ನೀಡಿ ಲಕ್ಷ ಲಕ್ಷ ಪೀಕಿದ ಶಾಲೆ

1968 ರಲ್ಲಿ ನಮ್ಮ ತಾತ ಈ ಗೋಪುರವನ್ನ ಸ್ಥಾಪಿಸಿದ್ರು. ಸರ್ವಧರ್ಮ ಸಹಿಷ್ಣುತೆ ಸಾರುವ ದೃಷ್ಟಿಯಿಂದ ಈ ಗೋಪುರವನ್ನ ನಿರ್ಮಿಸಿದ್ರು. ಈ ಗೋಪುರದಲ್ಲಿ ಯೇಸು ಕ್ರಿಸ್ತ ಮಾತ್ರ ಅಲ್ಲ. ಸಾಯಿಬಾಬಾ, ಬಸವಣ್ಣ, ವಿವೇಕಾನಂದ ಸೇರಿದಂತೆ ಒಂದಷ್ಟು ವಚನಾಕಾರರ ವಿಗ್ರಹ ಕೂಡ ಹಾಕಲಾಗಿತ್ತು. ಇಷ್ಟು ವರ್ಷಗಳ ಕಾಲ ಯಾರು ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಈಗ ಒಂದಷ್ಟು ತಿಂಗಳಿನಿಂದ ಹಿಂದೂ ಪರ ಸಂಘಟನೆಗಳು ಯೇಸು ವಿಗ್ರಹ ಗೋಪುರದಲ್ಲಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ರು. ದೇವಸ್ಥಾನಕ್ಕೆ ಬಂದು ಗಲಾಟೆ ಸಹ ಮಾಡಿದ್ರು. ನಂತ್ರ ರಾತ್ರೋರಾತ್ರಿ ಬಂದು ಯೇಸುವಿನ ವಿಗ್ರಹವನ್ನ ಭಿನ್ನಗೊಳಿಸಿದ್ರು. ಈ ಹಿನ್ನಲೆ ಭಿನ್ನವಾಗಿರುವ ವಿಗ್ರಹ ಗೋಪುರದಲ್ಲಿ ಇರಬಾರದೆಂದು ಯೇಸುವಿನ ವಿಗ್ರಹ ತೆರವುಗೊಳಿಸಿ ಆದ್ಯಂತ ಪ್ರಭು ವಿಗ್ರಹ ಪ್ರತಿಷ್ಠಾಪಿಸಿದ್ದೇವೆ ಎಂದು ಸುಮುಖ್ ರಾಜ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:35 am, Mon, 6 March 23

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?