AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NPA: ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ರೂ ವಂಚನೆ ಮಾಡಿರುವ ರಿಲಯನ್ಸ್​ ಹೋಂ ಫೈನಾನ್ಸ್​, ಕಮರ್ಷಿಯಲ್​ ಫೈನಾನ್ಸ್​

Karnataka Bank: ರಿಲಯನ್ಸ್​ ಹೋಂ ಫೈನಾನ್ಸ್, ಕಮರ್ಷಿಯಲ್​ ಫೈನಾನ್ಸ್​ ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ರೂ ಸಾಲ ವಂಚನೆ ಮಾಡಿದೆ. ರಿಲಯನ್ಸ್​ ಕಂಪನಿಯ ಈ ಎರಡೂ ಬಾಬತ್ತುಗಳನ್ನು ಈಗಾಗಲೇ ಅನುತ್ಪಾದಕ ಆಸ್ತಿ ಎಂದು ಘೋಷಿಸಿರುವುದಾಗಿ ಕರ್ನಾಟಕ ಬ್ಯಾಂಕ್ ಸ್ಪಷ್ಟಪಡಿಸಿದೆ.

NPA: ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ರೂ ವಂಚನೆ ಮಾಡಿರುವ ರಿಲಯನ್ಸ್​ ಹೋಂ ಫೈನಾನ್ಸ್​, ಕಮರ್ಷಿಯಲ್​ ಫೈನಾನ್ಸ್​
NPA: ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ವಂಚನೆ ಮಾಡಿರುವ ರಿಲಯನ್ಸ್​ ಹೋಂ ಫೈನಾನ್ಸ್​, ಕಮರ್ಷಿಯಲ್​ ಫೈನಾನ್ಸ್​
TV9 Web
| Edited By: |

Updated on:Jun 21, 2021 | 11:56 AM

Share

ಬೆಂಗಳೂರು/ಮುಂಬೈ: ದೇಶದ ಖ್ಯಾತ ಉದ್ಯಮ ಕಂಪನಿಗಳಾದ ರಿಲಯನ್ಸ್​ ಹೋಂ ಫೈನಾನ್ಸ್ ಮತ್ತು ಕಮರ್ಷಿಯಲ್​ ಫೈನಾನ್ಸ್​ ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ (Karnataka Bank) 160 ಕೋಟಿ ರೂ ಗೂ ಹೆಚ್ಚು ವಂಚನೆ (fraud) ಮಾಡಿರುವುದು ದೃಢಪಟ್ಟಿದೆ. ಇದನ್ನು ಸ್ವತಃ ಕರ್ನಾಟಕ ಬ್ಯಾಂಕ್ ಹೇಳಿಕೊಂಡಿದೆ. ರಿಲಯನ್ಸ್​ ಕಂಪನಿಯ ಈ ಎರಡೂ ಬಾಬತ್ತುಗಳನ್ನು ಈಗಾಗಲೇ ಅನುತ್ಪಾದಕ ಆಸ್ತಿ (non performing assets -NPA) ಎಂದು ಘೋಷಿಸಲಾಗಿದೆ ಎಂದು ಕರ್ನಾಟಕ ಬ್ಯಾಂಕ್ ಸ್ಪಷ್ಟಪಡಿಸಿದೆ.

2015ರಿಂದ ರಿಲಯನ್ಸ್​ ಹೋಂ ಫೈನಾನ್ಸ್ (Reliance Home Finance)​ ಮತ್ತು 2014ರಿಂದ ರಿಲಯನ್ಸ್​ ಕಮರ್ಷಿಯಲ್​ ಫೈನಾನ್ಸ್​ (Reliance Commercial Finance) ಕಂಪನಿಗಳೆರಡೂ ನಮ್ಮ ಜೊತೆ ವ್ಯವಹರಿಸುತ್ತಿದೆ. ಇದೀಗ ವಂಚನೆ ಪ್ರಕರಣಗಳು ನಡೆದಿವೆ ಎಂದು ಕರ್ನಾಟಕ ಮೂಲದ ಖಾಸಗಿ ಬ್ಯಾಂಕ್ ಕರ್ನಾಟಕ ಬ್ಯಾಂಕ್​​ ತಿಳಿಸಿದೆ.

ನಾನಾ ಬ್ಯಾಂಕಿಂಗ್​ ಆರ್ಥಿಕ ಒಪ್ಪಂದಗಳಡಿ ರಿಲಯನ್ಸ್​ ಹೋಂ ಫೈನಾನ್ಸ್ ಸಂಸ್ಥೆಯ ಜೊತೆ ಶೇ. 0.39 ಷೇರು ಪ್ರಮಾಣ ಮತ್ತು ರಿಲಯನ್ಸ್​ ಕಮರ್ಷಿಯಲ್​ ಫೈನಾನ್ಸ್​ ಶೇ. 1.98 ರಷ್ಟು ಷೇರು ಪಾಲನ್ನು ಕರ್ನಾಟಕ ಬ್ಯಾಂಕ್ ಹೊಂದಿದೆ. ಇವೆರಡರ ಬಾಬತ್ತಿನಲ್ಲಿ 160 ಕೋಟಿ ರೂ ಸಾಲ ವಂಚನೆ ನಡೆದಿದೆ. ರಿಲಯನ್ಸ್​ ಹೋಂ ಫೈನಾನ್ಸ್ ವತಿಯಿಂದ 21.94 ಕೋಟಿ ರೂ ಸಾಲ ಮತ್ತು ರಿಲಯನ್ಸ್​ ಕಮರ್ಷಿಯಲ್​ ಫೈನಾನ್ಸ್ 138.41 ಕೋಟಿ ರೂ ಸಾಲ ವಾಪಸಾಗಬೇಕಿದೆ ಎಂದು ಸೆಬಿಗೆ ಸಲ್ಲಿಸಿರುವ ವರದಿಯಲ್ಲಿ ಕರ್ನಾಟಕ ಬ್ಯಾಂಕ್ ಹೇಳಿಕೊಂಡಿದೆ.

(Karnataka Bank loans over Rs 160 crore to Reliance Home Finance and Reliance Commercial Finance fraud NPA non performing assets)

Syndicate Bank: ಸಿಂಡಿಕೇಟ್ ಬ್ಯಾಂಕ್ ಗ್ರಾಹಕರೇ ಗಮನಿಸಿ, ಜುಲೈ 1ರಿಂದ ಆಗುವಂಥ ಮಹತ್ತರ ಬದಲಾವಣೆಗಳಿವು

Published On - 11:45 am, Mon, 21 June 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್