AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಕ್ತಿ ಯೋಜನೆ ಎಫೆಕ್ಟ್; ತುಂಬಿ ತುಳುಕುತ್ತಿವೆ ದೇವಾಲಯಗಳು, ಭಕ್ತರ ಮತ್ತಷ್ಟು ಅನುಕೂಲಕ್ಕೆ ಮುಜರಾಯಿ ಹೊಸ ಪ್ಲಾನ್

ಕಾಂಗ್ರೆಸ್ ಆಡಳಿತಕ್ಕೆ ಬರ್ತಿದ್ದಂತೆ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಮಾಡಿದೆ. ಶಕ್ತಿ ಯೋಜನೆ ಜಾರಿಯಾಗುತ್ತಿದ್ದಂತೆ ರಾಜ್ಯದ ಬಸ್ ಪುಲ್ ರಶ್ ಜೊತೆಗೆ ರಾಜ್ಯದ ಪ್ರಮುಖ ದೇವಸ್ಥಾನಗಳು ಹೌಸ್ ಪುಲ್ ಆಗುತ್ತಿವೆ. ಹೀಗಾಗಿ ರಾಜ್ಯದ ಜನರು ಹರಕೆ, ಪೂಜೆ ಸಲ್ಲಿಸಲು ಪರದಾಡುವಂತಾಗಿದ್ದು ಜನರ ಪರದಾಟ ತಪ್ಪಿಸಲು ಸರ್ಕಾರ ಹೊಸ ಪ್ಲಾನ್​ಗೆ ಮುಂದಾಗಿದೆ.

ಶಕ್ತಿ ಯೋಜನೆ ಎಫೆಕ್ಟ್; ತುಂಬಿ ತುಳುಕುತ್ತಿವೆ ದೇವಾಲಯಗಳು, ಭಕ್ತರ ಮತ್ತಷ್ಟು ಅನುಕೂಲಕ್ಕೆ ಮುಜರಾಯಿ ಹೊಸ ಪ್ಲಾನ್
ಸಚಿವ ರಾಮಲಿಂಗಾರೆಡ್ಡಿ
Follow us
Vinay Kashappanavar
| Updated By: ಆಯೇಷಾ ಬಾನು

Updated on: Aug 28, 2023 | 7:01 AM

ಬೆಂಗಳೂರು, ಆ.28: ರಾಜ್ಯದಲ್ಲಿ ಶಕ್ತಿ ಯೋಜನೆ(Shakti Scheme) ಜಾರಿಯಾದ ಬಳಿಕ ಯಾವ ದೇವಸ್ಥಾನಕ್ಕೆ ಕಾಲಿಟ್ಟರು ತುಂಬಿ ತುಳುಕುತ್ತಿವೆ. ಅದರಲ್ಲೂ ಮುಜರಾಯಿ ವ್ಯಾಪ್ತಿಯ ಪ್ರಮುಖ ದೇವಾಲಯಗಳಲ್ಲಿ(Temples) ಜನರು ಹರಕೆ, ಪೂಜೆ ಸಲ್ಲಿಸಲು ಪರದಾಡುವಂತಾಗುತ್ತಿದೆ. ಇನ್ನೊಂದೆಡೆ ವಸತಿ, ಲಾಡ್ಜ್ ಸಿಗದೆ ಭಾರೀ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಈ ಎಲ್ಲಾ ಪರದಾಟ ತಪ್ಪಿಸಲು ಮುಜರಾಯಿ ಇಲಾಖೆ ಹೊಸ ಪ್ಲಾನ್​ಗೆ ಮುಂದಾಗಿದೆ. ಭಕ್ತರಿಗೆ ಮತಷ್ಟು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಆನ್ಲೈನ್ ಯೋಜನೆ ಜಾರಿಗೆ ಮುಂದಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ(Ramalinga Reddy)ತಿಳಿಸಿದ್ದಾರೆ .

ಮುಜರಾಯಿ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಹಾಗೂ ದರ್ಶನಕ್ಕೆ ಇನ್ನು ಹೆಚ್ಚು ಪ್ರಯಾಸ ಪಡಬೇಕಾಗಿಲ್ಲ. ಹೌದು ಜನರ ಪರದಾಟ ತಪ್ಪಿಸಲು ಕೋಟ್ಯಾಂತರ ಭಕ್ತರ ಅನುಕೂಲದ ದೃಷ್ಟಿಯಿಂದ ಹಿಂದೂ ಧಾರ್ಮಿಕ ಹಾಗೂ ಧರ್ಮದಾಯಿ ದತ್ತಿ ಇಲಾಖೆ ಮಹತ್ವದ ಹೆಜ್ಜೆಗೆ ಮುಂದಾಗಿದೆ. ಮುಜರಾಯಿ ಇಲಾಖೆ ಅಡಿಯಲ್ಲಿ ಹಾಗೂ ಸೇವಾ ಸೌಲಭ್ಯ ಇರುವ ದೇವಸ್ಥಾನಗಳಲ್ಲಿ ಆನ್ಲೈನ್ ಸೇವೆ ನೀಡಲು ಮುಂದಾಗಿದೆ. ಮುಜರಾಯಿ ಇಲಾಖೆಯ ವಸತಿ ಗೃಹ ಇರುವ ದೇವಸ್ಥಾನಗಳಲ್ಲಿಯೂ ಈ ಅವಕಾಶ ನೀಡಲು ಮುಂದಾಗಿದೆ.

ತಿರುಪತಿ ಸೇರಿದಂತೆ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಚಾಮುಂಡೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಎಲ್ಲವನ್ನು ಮುಗಂಡ ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ಮುಂದಾಗಿದೆ. ಯಾವುದೇ ಹರಕೆ ಪೂಜೆ, ವಿಶೇಷ ಸೇವೆ, ವಸತಿ ಗೃಹಗಳ ಬುಕ್ಕಿಂಗ್, ಮದುವೆ ಅಥವಾ ಯಾವುದೇ ಶುಭ ಸಮಾರಂಭಗಳಿಗೆ ಮೊದಲೆ ನೀವು ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದರಿಂದ ನೀವು ದೇವಸ್ಥಾಗಳಲ್ಲಿ ತುರ್ತು ಸೇವೆ ಹಾಗೂ ವಸತಿ ಸೌಲಭ್ಯ ಪಡೆಯಬಹುದಾಗಿದೆ.

ಇದನ್ನೂ ಓದಿ: ಬೆಂಗಳೂರು ಟು ಕಾಶಿಗೆ ಹೊರಟ ನಾಲ್ಕನೇ ರೈಲಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಸಿರು ನಿಶಾನೆ

ಏನಿದು ಇ ಸೇವೆ?

  • ವಾಸ್ತವ್ಯಕ್ಕೆ ಕೊಠಡಿ, ದೇವರ ದರ್ಶನ ಹಾಗೂ ಸೇವೆಗೆ ಮೊದಲೇ ಕಾಯ್ದಿರಿಸುವುದು
  • ಇ-ಸೇವಾ ಪುಟದಲ್ಲಿ ದೇವಸ್ಥಾನದ ಮಾಹಿತಿ, ಸೇವಾ ವಿವರ, ಸಂಪರ್ಕ ಸಂಖ್ಯೆಗಳು, ಸ್ಥಳ ಪುರಾಣ, ಜಾತ್ರೆ, ಉತ್ಸವದ ವಿವರ ಇರುತ್ತದೆ
  • ದೇವಸ್ಥಾನಕ್ಕೆ ಬರಲು ರೂಟ್ ಮ್ಯಾಪ್, ಸುತ್ತಮುತ್ತಲಿನ ಪ್ರವಾಸಿ ತಾಣಗಳ ಜತೆಗೆ ದೇವಸ್ಥಾನದ ಛಾಯಾಚಿತ್ರ ಹಾಗೂ ವಿಡಿಯೋ ಕ್ಲಿಪಿಂಗ್‌ಗಳನ್ನು ಅಳವಡಿಸಿ ಮಾಹಿತಿ
  • ದೇವಸ್ಥಾನಗಳೊಂದಿಗೆ ಆರ್ಥಿಕ ವಹಿವಾಟು ಇಟ್ಟುಕೊಂಡಿರುವ ಬ್ಯಾಂಕ್‌ಗಳನ್ನು ಇ-ಸೇವೆಗೆ ಜೋಡಿಸಲಾಗುತ್ತಿದೆ.
  • ಇದರಿಂದ ಭಕ್ತರು ನೇರವಾಗಿ ಅಲ್ಲಿಂದ ಸೇವೆಯನ್ನು ಮುಂಗಡ ಬುಕ್ಕಿಂಗ್ ಮಾಡಿಸಬಹುದು

ಗೃಹ ಶಕ್ತಿ ಯೋಜನೆಯ ಎಫೆಕ್ಟ್ ಎಲ್ಲ ದೇವಸ್ಥಾನಗಳು ಪುಲ್ ರಶ್ ಹಿನ್ನಲೆ ಜನರು ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಸತಿ, ಹಾಗೂ ಹರಕೆ ಮತ್ತಿತರ ಸೇವೆಗೆ ಪರದಾಡಬೇಕಿದೆ. ಇದನ್ನ ತಪ್ಪಿಸಲು ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಆನ್ಲೈನ್ ಸೇವೆ ನೀಡಲು ಮುಂದಾಗಿದೆ. ಇದಕ್ಕಾಗಿ ಆನ್ಲೈನ್ ಕಂಪ್ಲೀಟ್ ಸೇವೆ ನೀಡಲು ಬೆಂಗಳೂರಿನಲ್ಲಿ ಬುಕ್ಕಿಂಗ್ ಹಾಗೂ ಕಮಾಡಿಂಗ್ ಸೆಂಟರ್ ತೆರದು ನಿರ್ವಹಣೆಗೆ ಮುಂದಾಗಿದೆ. ಈ ಮೂಲಕ ಖಾಸಗಿ ವಸತಿ ಗೃಹಗಳಿಗೆ ಸೋರಿಕೆಯಾಗುತ್ತಿದ್ದ ಹಣ ಮತ್ತು ಹೆಚ್ಚು ತುರ್ತು ಸೇವಯಿಂದ ಭಕ್ತರಿಗೆ ಹೆಚ್ಚಿನ ಅವಕಾಶ ಹಿನ್ನಲೆ ಭಕ್ತರಿಗೆ ವಿಶೇಷ ಅನಕೂಲದ ಜೊತೆ ಹುಂಡಿ ಹಣ ಡಬಲ್ ಮಾಡುವ ಯೋಜನೆಗೆ ಮುಜರಾಯಿ ಇಲಾಖೆ ಕೈಹಾಕಿದೆ.

ಒಟ್ನಲ್ಲಿ ಮುಜರಾಯಿ ಇಲಾಖೆ ಭಕ್ತರಿಗೆ ಇ-ಸೌಲಭ್ಯದ ಜೊತೆ ಜನರ ಪರದಾಟ ದೂರು ಮಾಡುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ಸುಲಭ ಸೇವೆ ನೀಡುವುದರ ಮೂಲಕ ದೇವಸ್ಥಾನದ ಹುಂಡಿ ಹಣ ಡಬಲ್ ಮಾಡಿಕೊಳ್ಳುವ ತಂತ್ರಕ್ಕೆ ಸರ್ಕಾರ ಮುಂದಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ
ವಿಧಾನಸೌಧದ ಗೇಟ್ ಹತ್ತಿ ಆರ್​ಸಿಬಿ ಅಭಿಮಾನಿಗಳ ಹುಚ್ಚಾಟ
ವಿಧಾನಸೌಧದ ಗೇಟ್ ಹತ್ತಿ ಆರ್​ಸಿಬಿ ಅಭಿಮಾನಿಗಳ ಹುಚ್ಚಾಟ