Karnataka Breaking Kannada News Highlights: ಒಬ್ಬನೇ ಒಬ್ಬ ವ್ಯಕ್ತಿ ವಿಪಕ್ಷ ನಾಯಕ ಸಿಗಲಿಲ್ಲವೇ ಬಿಜೆಪಿಯಲ್ಲಿ? ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ ಕಾಂಗ್ರೆಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Jun 19, 2023 | 10:30 PM

Karnataka News Highlights: ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು ಜನ ಮುಗಿಬಿದ್ದು ಅರ್ಜಿ ಸಲ್ಲಿಸುತ್ತಿದ್ದಾರೆ. ಉಳಿದ ಯೋಜನೆಗಳಿಗೆ ಕಾಂಗ್ರೆಸ್ ತಲೆ ಕೆಡಿಸಿಕೊಂಡಿದೆ. ಕರ್ನಾಟಕದ ರಾಜಕೀಯ, ಹವಾಮಾನ ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಕುರಿತಾದ ಲೇಟೆಸ್ಟ್​​ ಅಪ್​ಡೇಟ್ಸ್ ಟಿವಿ9 ಡಿಜಿಟಲ್​​ನಲ್ಲಿ...

Karnataka Breaking Kannada News Highlights: ಒಬ್ಬನೇ ಒಬ್ಬ ವ್ಯಕ್ತಿ ವಿಪಕ್ಷ ನಾಯಕ ಸಿಗಲಿಲ್ಲವೇ ಬಿಜೆಪಿಯಲ್ಲಿ? ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ ಕಾಂಗ್ರೆಸ್
ಪ್ರಾತಿನಿಧಿಕ ಚಿತ್ರ

ರಾಜ್ಯ ಕಾಂಗ್ರೆಸ್(Congress)​ ಸರ್ಕಾರ ಚುನಾವಣೆ ವೇಳೆ ಘೋಷಿಸಿದ್ದ 5 ಗ್ಯಾರಂಟಿಗಳಲ್ಲೊಂದಾದ ಗೃಹಜ್ಯೋತಿ ಯೋಜನೆ (Gruha Jyothi Scheme)ಗೆ ಅರ್ಜಿ ಸಲ್ಲಿಕೆ ಶುರುವಾಗಿದ್ದು ಮೊದಲ ದಿನವೇ ರಾಜ್ಯದಲ್ಲಿ 55,000 ಅರ್ಜಿಗಳು ಸಲ್ಲಿಕೆಯಾಗಿದೆ. ಜೊತೆಗೆ ಶಕ್ತಿ ಯೋಜನೆ(Shakti Yojana) ಕೂಡ ಭರ್ಜರಿ ಯಶಸ್ಸು ಕಾಣುತ್ತಿದೆ. ಮನೆ ಗೋಜು ಬಿಟ್ಟು ಮಹಿಳಾ ಮಣಿಯರು ಪುಣ್ಯ ಕ್ಷೇತ್ರಗಳಿಗೆ, ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ. ಇದರೆಲ್ಲದರ ಜೊತೆಗೆ ಇತರೆ ಯೋಜನೆಗಳ ಜಾರಿಗೆ ಕಾಂಗ್ರೆಸ್ ಕಂಗಾಲಾಗಿದೆ. ಪೂರ್ವ ಸಿದ್ದತಗಳಿಲ್ಲದೇ ಗ್ಯಾರಂಟಿ(Congress Guarantee) ಘೋಷಿಸಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದೆ. ಇದು ಒಂದು ಕಡೆ ಆದ್ರೆ ಮತ್ತೊಂದೆಡೆ ರಾಜ್ಯಾದ್ಯಂತ ಮುಂಗಾರು (Monsoon) ಚುರುಕುಗೊಂಡಿದ್ದು ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ(Karnataka Rain). ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬನ್ನಿ ರಾಜ್ಯದಲ್ಲಾಗುತ್ತಿರುವ ಪ್ರಮುಖ ಘಟನೆಗಳ ಲೈವ್​ ಅಪ್ಡೇಟ್ಸ್​ಗಳನ್ನು ಇಲ್ಲಿ ಪಡೆಯಿರಿ.

LIVE NEWS & UPDATES

The liveblog has ended.
  • 19 Jun 2023 08:56 PM (IST)

    Karnataka Breaking Kannada News Live: ಸಿಎಂ ಅಧಿಕಾರ ಹಂಚಿಕೆ ವಿಚಾರ ಹೈಕಮಾಂಡ್​ಗೆ ಬಿಟ್ಟದ್ದು

    ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿಚಾರ ಹೈಕಮಾಂಡ್​ಗೆ ಬಿಟ್ಟದ್ದು ಎಂದು ಗದಗದಲ್ಲಿ ಕನ್ನಡ & ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಯಾರೂ ಸಹ ಅಸಮಾಧಾನ ಹೊರಹಾಕಿದ್ದು ನನಗೇನು ಕಾಣಿಸಿಲ್ಲ. ಗ್ಯಾರಂಟಿ ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿ ಚಿಂತನೆಯಲ್ಲಿದ್ದಾರೆ ಎಂದು ಹೇಳಿದರು.

  • 19 Jun 2023 08:20 PM (IST)

    Karnataka Breaking Kannada News Live: ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ ಕಾಂಗ್ರೆಸ್

    ಬಿಜೆಪಿಯಲ್ಲಿ ಸೋತು ಸುಣ್ಣವಾದವರು, ರಿಟೈರ್ಮೆಂಟ್ ತೆಗೆದುಕೊಂಡವರು, ಮನೆಯಲ್ಲಿ ಕುಂತವರು,
    ಕೆಲಸಕ್ಕೆ ಬಾರದವರೇ ನಮ್ಮ ಸರ್ಕಾರದ ಬಗ್ಗೆ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್​ ವ್ಯಂಗ್ಯವಾಡಿದೆ. ಒಬ್ಬನೇ ಒಬ್ಬ ವ್ಯಕ್ತಿ ವಿರೋಧ ಪಕ್ಷದ ನಾಯಕ ಸಿಗಲಿಲ್ಲವೇ ಬಿಜೆಪಿಯಲ್ಲಿ ಎಂದು ಪ್ರಶ್ನಿಸಿದೆ.

  • 19 Jun 2023 08:05 PM (IST)

    Karnataka Breaking Kannada News Live: ಮಹಿಳಾ ಪ್ರಯಾಣಿಕರಿ ಪೊಲೀಸ್ ಅಧಿಕಾರಿಗಳಿಂದ ಅರಿವು ಕಾರ್ಯಕ್ರಮ

    ಬೆಂಗಳೂರು: ಕಾಂಗ್ರೆಸ್​ ಸರ್ಕಾರದ ಶಕ್ತಿ ಯೋಜನೆ ಜಾತಿ ಹಿನ್ನಲೆ ಉಚಿತವಾಗಿ ಬಸ್​ನಲ್ಲಿ​ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಉಚಿತ ಬಸ್ ಪ್ರಾರಂಭದ ನಂತರ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಪ್ರಯಾಣದ ವೇಳೆ ಏನೆಲ್ಲ ತೊಂದರೆಗಳು ಎದುರಾದಾಗ ಏನು ಮಾಡಬೇಕು ಎಂದು ಬೆಂಗಳೂರು ಪೊಲೀಸರಿಂದ ಮಹಿಳಾ ಪ್ರಯಾಣಿಕರಿಗೆ ಅರಿವು ಕಾರ್ಯಕ್ರಮ ಕೈಗೊಂಡಿದ್ದಾರೆ. ಮಹಿಳಾ ಪ್ರಯಾಣಿಕರಿಗಾಗಿ ನಗರದ ಇನ್ಸ್ ಪೆಕ್ಟರ್ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳಿಂದ ಅರಿವು ಕಾರ್ಯಕ್ರಮ ಮಾಡಲಾಗುತ್ತಿದೆ.

  • 19 Jun 2023 07:30 PM (IST)

    Karnataka Breaking Kannada News Live: ಲಕ್ಷ್ಮಣ ಸವದಿಗೂ ಮುಂದಿನ ದಿನದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ

    ಲಕ್ಷ್ಮಣ ಸವದಿಗೂ ಮುಂದಿನ ದಿನದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ. ಬಿಜೆಪಿಯಲ್ಲಿ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ. ಕಾಂಗ್ರೆಸ್​ ನಾಯಕರು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಸೋತರೂ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಗ್ಯಾರಂಟಿಗಳು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಎಂದು ಜಗದೀಶ್​ ಶೆಟ್ಟರ್​ ಹೇಳಿದರು.

  • 19 Jun 2023 07:02 PM (IST)

    Karnataka Breaking Kannada News Live: ಯಾವುದೇ ಷರತ್ತಿಲ್ಲದೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ

    ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಶ್ರಮಿಸುತ್ತೇನೆ. ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಯಾವುದೇ ಷರತ್ತಿಲ್ಲದೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

  • 19 Jun 2023 06:35 PM (IST)

    Karnataka Breaking Kannada News Live: ವಿಧಾನಪರಿಷತ್​ ಟಿಕೆಟ್​​ ನೀಡಿದ್ದಕ್ಕೆ ಖುಷಿಯಾಗಿದೆ: ಶೆಟ್ಟರ್​

    ವಿಧಾನಪರಿಷತ್​ ಟಿಕೆಟ್​​ ನೀಡಿದ್ದಕ್ಕೆ ಖುಷಿಯಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.

  • 19 Jun 2023 06:30 PM (IST)

    Karnataka Breaking Kannada News Live: ಖರ್ಗೆ ಬೆಂಬಲಿಗ ತಿಪ್ಪಣ್ಣಪ್ಪ ಕಮಕನೂರ್​ಗೆ ಎಂಎಲ್​ಸಿ ಟಿಕೆಟ್

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗ ತಿಪ್ಪಣ್ಣಪ್ಪ ಕಮಕನೂರ್​ಗೆ ಎಂಎಲ್​ಸಿ ಟಿಕೆಟ್​ ನೀಡಲಾಗಿದೆ.​ ಈ ಹಿಂದೆ 10 ತಿಂಗಳು ಎಂಎಲ್​ಸಿ ಆಗಿದ್ದರು. ಲೋಕಸಭೆ ಚುನಾವಣೆ ದೃಷ್ಟಿಯಿಂದ ತಿಪ್ಪಣ್ಣಪ್ಪ ಕಮಕನೂರ್​​ಗೆ ಮಣೆ ಹಾಕಲಾಗಿದೆ. ಕೋಲಿ ಸಮಾಜದ ಚಿಂಚನಸೂರ್ MLC ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  • 19 Jun 2023 06:28 PM (IST)

    Karnataka Breaking Kannada News Live: ಪರಿಷತ್​ ಉಪ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಹೆಸರು ಘೋಷಣೆ

    ಜೂನ್​ 30ರಂದು ವಿಧಾನಪರಿಷತ್​ನ 3 ಸ್ಥಾನಗಳಿಗೆ ಉಪ ಚುನಾವಣೆ ನಡಯಲಿದ್ದು, ಪರಿಷತ್​ ಉಪ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಜಗದೀಶ್​​ ಶೆಟ್ಟರ್​, ಬೋಸರಾಜು, ತಿಪ್ಪಣ್ಣಪ್ಪ ಕಮಕನೂರ್​ಗೆ ಟಿಕೆಟ್​ ನೀಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್​ರಿಂದ ಘೋಷಣೆ ಮಾಡಲಾಗಿದೆ.

  • 19 Jun 2023 05:51 PM (IST)

    Karnataka Breaking Kannada News Live: ಡಿಕೆ ಶಿವಕುಮಾರ್​ರನ್ನು ಹಿಮಾಲಯಕ್ಕೆ ಕಳುಹಿಸಲಿದೆ

    ಸಿದ್ದರಾಮಯ್ಯ ಗುಂಪು ಡಿ‌ಕೆರನ್ನು ಸನ್ಯಾಸಿ ಮಾಡಲು ಹೊರಟಿದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಕಾಲ ಸನ್ನಿಹಿತ ಆಗಲಿದೆ. ಸಿದ್ದರಾಮಯ್ಯ ಟೀಂ ಡಿಕೆರನ್ನು ಹಿಮಾಲಯಕ್ಕೆ ಕಳುಹಿಸಲಿದೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್​ ವಿರುದ್ಧ ಆರ್​.ಅಶೋಕ್​ ಕಿಡಿಕಾರಿದ್ದಾರೆ.

  • 19 Jun 2023 05:22 PM (IST)

    Karnataka Breaking Kannada News Live: ಹಿಂದೂ ವಿರೋಧಿ ಯಾರಾದ್ರೂ ಇದ್ದರೆ ಅದು ಕಾಂಗ್ರೆಸ್ಸಿಗರು

    ಉಚಿತ ಬಸ್​ನಿಂದಲೇ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಇದು ಹಿಂದುತ್ವ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಆರ್.ಅಶೋಕ್​ ಯಾರಾದ್ರೂ ಹಿಂದೂ ವಿರೋಧಿ ಇದ್ದರೆ ಅದು ಕಾಂಗ್ರೆಸ್ಸಿಗರು. ಟಿಪ್ಪು ಜಯಂತಿ ಮಾಡಿದವರು ಹಿಂದೂ ಪರ ಆಗುತ್ತಾರಾ? ಹೀಗಿರುವಾಗ ಹಿಂದೂ ಪರ ಕಾಂಗ್ರೆಸ್ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

  • 19 Jun 2023 05:15 PM (IST)

    Karnataka Breaking Kannada News Live: ಕಾಂಗ್ರೆಸ್​ ವಿರುದ್ಧ ಆರ್​.ಅಶೋಕ್​ ಲೇವಡಿ

    ಕಾಂಗ್ರೆಸ್​ ಸಂಸದ ಡಿ.ಕೆ.ಸುರೇಶ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ​ಅಣ್ಣ ಸಿಎಂ ಆಗಲ್ಲ ಅಂತಾ ಡಿ.ಕೆ.ಸುರೇಶ್​ ಕಣ್ಣೀರಿಡುತ್ತಿದ್ದಾರೆ. ಸಿದ್ದರಾಮಯ್ಯ 5 ವರ್ಷಗಳ ಕಾಲ ಮುಖ್ಯಮಂತ್ರಿ ಅಷ್ಟೇ ಅಲ್ಲ. ಇನ್ನೂ 5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ರಾಜಣ್ಣ ಹೇಳಿದ್ದಾರೆ. ಪಾಪ ಡಿಸಿಎಂ ಡಿ‌.ಕೆ.ಶಿವಕುಮಾರ್ ಎಲ್ಲಿಗೆ ಹೋಗಬೇಕು ಎಂದು ಕಾಂಗ್ರೆಸ್​ ವಿರುದ್ಧ ಆರ್​.ಅಶೋಕ್​ ಲೇವಡಿ ಮಾಡಿದ್ದಾರೆ.

  • 19 Jun 2023 04:23 PM (IST)

    Karnataka Breaking Kannada News Live: ಸಿಎಂ ಜತೆ ಎಲ್ಲರೂ ವಿಶ್ವಾಸದಿಂದ ಇದ್ದಾರೆ-ಹೆಚ್​.ಕೆ.ಪಾಟೀಲ್

    ಸಿಎಂ ಜತೆ ಎಲ್ಲರೂ ವಿಶ್ವಾಸದಿಂದ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪರ್ಕದಲ್ಲೂ ಇದ್ದೇನೆ. ಪಕ್ಷದ ವಿಷಯವಾಗಿ ಹೈಕಮಾಂಡ್ ಸಂಪರ್ಕದಲ್ಲೂ ಇದ್ದೇನೆ ಎಂದು ಸಚಿವ ಹೆಚ್​.ಕೆ.ಪಾಟೀಲ್ ಹೇಳಿದರು.

  • 19 Jun 2023 04:02 PM (IST)

    Karnataka Breaking Kannada News Live: ಇದೆಲ್ಲ ಸುಳ್ಳು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸೃಷ್ಟಿಸಿದ್ದಾರೆ

    ಮುಖ್ಯಮಂತ್ರಿ ಬದಲಾವಣೆ ವಿಷಯ ವರಿಷ್ಠರಿಗೆ ಬಿಟ್ಟಿದ್ದು. ಅನಗತ್ಯವಾಗಿ ವಿವಾದ ಸೃಷ್ಟಿಸಿ ಸಮಯ ಹಾಳು ಮಾಡಲ್ಲ ಎಂದು ಗದಗದಲ್ಲಿ ಕಾನೂನು ಸಚಿವ ಹೆಚ್​.ಕೆ.ಪಾಟೀಲ್ ಹೇಳಿದರು. ಡಿಸಿಎಂ ಡಿಕೆ ಬಗ್ಗೆ ಸಿಎಂ ಅಸಮಾಧಾನ ಎಂಬ ವದಂತಿ ವಿಚಾರ, ಇದೆಲ್ಲ ಸುಳ್ಳು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸೃಷ್ಟಿಸಿದ್ದಾರೆ. ಜನರ ಗಮನ ಬೇರೆಡೆ ತಿರುಗಿಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.

  • 19 Jun 2023 03:38 PM (IST)

    Karnataka Breaking Kannada News Live: ಸಿಲಿಕಾನ್ ಸಿಟಿ ಈಗ ಸೇಫ್ ಸಿಟಿಯತ್ತ ಬದಲಾವಣೆ

    ಬೆಂಗಳೂರು: ಸಿಲಿಕಾನ್ ಸಿಟಿ ಈಗ ಸೇಫ್ ಸಿಟಿಯತ್ತ ಬದಲಾವಣೆಗೊಳ್ಳುತ್ತಿದ್ದು, ಬೆಂಗಳೂರಿನ ಜನರ ಸಹಾಯಕ್ಕೆ ಎಮರ್ಜೆನ್ಸಿ ಸೇವೆಯನ್ನು ಜಾರಿ ತರಲಾಗುತ್ತಿದೆ. ಸಿಲಿಕಾನ್​ ಸಿಟಿಯಲ್ಲಿ ತುರ್ತು ಸಹಾಯವಾಣಿ ಸೇವೆ ಆರಂಭವಾಗಿವೆ. ಹಾಗಾಗಿ ನಗರ ವಾಸಿಗಳ ರಕ್ಷಣೆಗೆ ಸಿಲಿಕಾನ್ ಸಿಟಿ ಪೊಲೀಸರು ನೂತನ ಪ್ಲಾನ್​ ಮಾಡಿದ್ದಾರೆ.

  • 19 Jun 2023 03:03 PM (IST)

    Karnataka Breaking Kannada News Live: ಬಡವರಿಗೆ ಅಕ್ಕಿ ನೀಡದೆ ಕೇಂದ್ರವು ತೊಂದರೆ

    ಬಡವರಿಗೆ ಅಕ್ಕಿ ನೀಡದೆ ಕೇಂದ್ರವು ತೊಂದರೆ ನೀಡಲು ಹೊರಟಿದೆ. ಅಕ್ಕಿ ನೀಡಲು ನಿಯಮ, ಪದ್ಧತಿ ಇದೆ, ಪುಕ್ಕಟೆ ಏನು ಕೊಡಲ್ಲ ಎಂದಿದ್ದಾರೆ. ಹೈಕಮಾಂಡ್​ ಭೇಟಿಗೆ ಎಲ್ಲಾ ಸಚಿವರು ಸಮಯ ಕೇಳಿದ್ದೇವೆ. ಸಮಯ ನೀಡಿದರೆ ಎಲ್ಲಾ ಸಚಿವರು ಹೈಕಮಾಂಡ್ ಭೇಟಿಯಾಗುತ್ತೇವೆ ಎಂದು ಹೇಳಿದರು.

  • 19 Jun 2023 02:40 PM (IST)

    Karnataka Breaking Kannada News Live: ಕೇಂದ್ರದ ನಡೆ ಖಂಡಿಸಿ ನಾಳೆ ಕಾಂಗ್ರೆಸ್ ಪ್ರತಿಭಟನೆ

    ಬೆಂಗಳೂರು: ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ಮಾಡುತ್ತಿದ್ದು, ಹಾಗಾಗಿ ಕೇಂದ್ರದ ನಡೆ ಖಂಡಿಸಿ ನಾಳೆ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಮಾಡುತ್ತೇವೆ. ನಾನು ನಗರದ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಸದಾಶಿವನಗರದಲ್ಲಿ ಮಾತನಾಡಿದ ಅವರು, ನಾಳೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ.

  • 19 Jun 2023 02:26 PM (IST)

    Karnataka Breaking Kannada News Live: ಈಗ 6ನೇ ಗ್ಯಾರಂಟಿ ಬಗ್ಗೆ ಚರ್ಚೆ ಶುರುವಾಗಿದೆ-ವಿಜಯೇಂದ್ರ

    ರಾಜ್ಯ ಸರ್ಕಾರ 5 ಗ್ಯಾರಂಟಿ ಪೂರೈಸಲು ಸಂಕಷ್ಟಕ್ಕೆ ಸಿಲುಕಿದೆ. ಈಗ 6ನೇ ಗ್ಯಾರಂಟಿ ಬಗ್ಗೆ ಚರ್ಚೆ ಶುರುವಾಗಿದೆ ಎಂದು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಡಿಕೆ ಶಿವಕುಮಾರ್​ ಮುಂದಿನ ಸಿಎಂ ವಿಚಾರವಾಗಿ ಸಚಿವರ ನಡುವೆ ಚರ್ಚೆ ಶುರುವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ನೋವು ಅರ್ಥ ಮಾಡಿಕೊಳ್ಳಬೇಕು. ಡಿಕೆ ಸಿಎಂ ಸ್ಥಾನಕ್ಕೆ ಹೋರಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ನಾಳೆ ಕೇಂದ್ರದ ವಿರುದ್ಧ ಕಾಂಗ್ರೆಸ್​ನವರು ಪ್ರತಿಭಟನೆ ಮಾಡಿದ್ದಾರೆ ಎಂದಿದ್ದಾರೆ.

  • 19 Jun 2023 01:56 PM (IST)

    Karnataka Breaking Kannada News Live: ಮಳೆಯಾಗದಿದ್ರೆ ಸರ್ಕಾರ ಮೋಡ ಬಿತ್ತನೆಗೆ ಚಿಂತನೆ -ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    ಕರ್ನಾಟಕದಲ್ಲಿ ಕೆಲವೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ಹವಾಮಾನ ಇಲಾಖೆ ವರದಿ ಪ್ರಕಾರ ಮುಂಗಾರು ಚುರುಕು ಆಗುತ್ತೆ ಎಂದು ಬೆಳಗಾವಿ ನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಮಾಹಿತಿ ನಿಡಿದ್ದಾರೆ. ಮುಂದಿನ 7 ದಿನ ರಾಜ್ಯದಲ್ಲಿ ಮಳೆ ಆಗುತ್ತೆ ಅಂತಾ ವರದಿಯಲ್ಲಿದೆ. ನೀರಿನ ಸಮಸ್ಯೆ ಬಗೆಹರಿಸಲು ಆಯಾ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತೆ. ಬೆಳಗಾವಿ ಜಿಲ್ಲೆಯ ರಕ್ಕಸಕೊಪ್ಪ ಜಲಾಶಯ ಸಹ ಖಾಲಿ ಆಗಿದೆ. ಜಲಾಶಯ ಮಟ್ಟ ಕುಸಿದಿದ್ರೂ ಟ್ಯಾಂಕರ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತೆ. ಮಳೆಯಾಗದಿದ್ರೆ ಸರ್ಕಾರ ಮೋಡ ಬಿತ್ತನೆಗೆ ಚಿಂತನೆ ಮಾಡುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.

  • 19 Jun 2023 01:51 PM (IST)

    Karnataka Breaking Kannada News Live: ಕೇಂದ್ರ ಸರ್ಕಾರದ ನಿಲುವು ಖಂಡಿಸಿ ನಾಳೆ ಕಾಂಗ್ರೆಸ್ ಪ್ರತಿಭಟನೆ -ಸಚಿವ ಡಾ.ಮಹದೇವಪ್ಪ

    ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ನಿಲುವು ಖಂಡಿಸಿ ನಾಳೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತೆ ಎಂದು ಮೈಸೂರಿನಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡುವುದಾಗಿ ತಿಳಿಸಿತ್ತು. ಆ ನಂತರ ಅಕ್ಕಿ ಪೂರೈಸಲ್ಲ ಎಂದು ಹೇಳಿದೆ. ಎಲ್ಲಾ ಜಿಲ್ಲೆಗಳಲ್ಲೂ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತೆ. ನಾಳೆ ದೆಹಲಿಗೆ ಹೋಗ್ತಿದ್ದೇನೆ, ಪ್ರತಿಭಟನೆಯಲ್ಲಿ ಭಾಗಿಯಾಗುವುದಿಲ್ಲ. ಹೀಗಾಗಿ ನಮ್ಮ ಜಿಲ್ಲೆಯ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

  • 19 Jun 2023 01:29 PM (IST)

    Karnataka Breaking Kannada News Live: ವಿದ್ಯುತ್​ ದರ ಏರಿಕೆ ಖಂಡಿಸಿ ನೇಕಾರರಿಂದ ಬೃಹತ್ ಪ್ರತಿಭಟನೆ

    ಬೆಂಗಳೂರು ಗ್ರಾ. ಜಿಲ್ಲೆ ದೊಡ್ಡಬಳ್ಳಾಪುರದ ಬೆಸ್ಕಾಂ ಕಚೇರಿ ಬಳಿ ವಿದ್ಯುತ್​ ದರ ಏರಿಕೆ ಖಂಡಿಸಿ ನೇಕಾರರಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ವಿದ್ಯುತ್ ದರ ಇಳಿಸುವಂತೆ ಆಗ್ರಹಿಸಿ ಬೆಸ್ಕಾಂ ಕಚೇರಿಗೆ ದೊಡ್ಡಬಳ್ಳಾಪುರ ನೇಕಾರರ ಸಂಘದಿಂದ ಮುತ್ತಿಗೆ ಹಾಕಲಾಗಿದೆ.

  • 19 Jun 2023 01:28 PM (IST)

    Karnataka Breaking Kannada News Live: ಕೆಎಸ್​ಡಿಎಲ್​ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ

    ಕೋರ್ಟ್​ನಿಂದ ಸರ್ಚ್​ ವಾರಂಟ್ ಪಡೆದು ಕೆಎಸ್​ಡಿಎಲ್​ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. KSDL ನೌಕರರ ಸಂಘದ ಶಿವಶಂಕರ್​ ದೂರಿನ ಅನ್ವಯ ಸೋಪ್ ತಯಾರಿಕೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ದೂರು ದಾಖಲಾಗಿದ್ದು ಓರ್ವ DySP, ಇಬ್ಬರು ಇನ್ಸ್​ಪೆಕ್ಟರ್​ ಸೇರಿ 10 ಸಿಬ್ಬಂದಿ ಕೆಎಸ್​ಡಿಎಲ್​ಗೆ ಸಂಬಂಧಿಸಿದ ಎಲ್ಲಾ ವಿಭಾಗಗಳ ಮೇಲೆ ದಾಳಿ ನಡೆಸಿದ್ದಾರೆ.

  • 19 Jun 2023 01:26 PM (IST)

    Karnataka Breaking Kannada News Live: ಫರ್ನ್ಸ್ ಸಿಟಿಯಲ್ಲಿ ಅಕ್ರಮ ತೆರವು ಕಾರ್ಯಾಚರಣೆ

    ಫರ್ನ್ಸ್ ಸಿಟಿಯಲ್ಲಿ ಅಕ್ರಮ ಒತ್ತುವರಿ ತೆರವು ಮಾಡಲಾಗುತ್ತಿದೆ. ಸ್ವಿಮ್ಮಿಂಗ್ ಪೂಲ್ ಬಳಿಕ ಐಶಾರಮಿ ಕ್ಲಬ್ ನತ್ತ ಜೆಸಿಬಿ ತೆರಳಿದ್ದು ಕ್ಲಬ್ ಗೊಡೆ ಒಡೆಯಲು ಪಾಲಿಕೆ ಮುಂದಾಗಿದೆ. ಅಕ್ರಮ ರಾಜಕಾಲುವೆ ಮಾರ್ಗವನ್ನ ಸಂಪೂರ್ಣ ತೆರವಿಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.

  • 19 Jun 2023 01:22 PM (IST)

    Karnataka Breaking Kannada News Live: ರಾಹುಲ್ ಗಾಂಧಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ

    ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ಟ್ವೀಟ್ ಮೂಲಕ ಹುಟ್ಟಹಬ್ಬದ ಶುಭಾಶಯ ತಿಳಿಸಿದ್ದಾರೆ.

  • 19 Jun 2023 01:20 PM (IST)

    Karnataka Breaking Kannada News Live: ಒತ್ತುವರಿ ತೆರವಿಗೆ ಬಂದ ಅಧಿಕಾರಿಗಳಿಗೆ ನಂದೀಶ್​ ರೆಡ್ಡಿ ಆವಾಜ್

    ತೆರವಿಗೆ ಬಂದ ಅಧಿಕಾರಿಗಳಿಗೆ ನಂದೀಶ್​ ರೆಡ್ಡಿ ಆವಾಜ್ ಹಾಕಿದ್ದಾರೆ. ತೆರವು ಮಾಡದಂತೆ ಬಿಜೆಪಿ ನಾಯಕ ನಂದೀಶ್​ ರೆಡ್ಡಿ ತಡೆದಿದ್ದು ಏರು ಧ್ವನಿಯಲ್ಲಿ ಆವಾಜ್ ಹಾಕಿದ್ದಾರೆ. ಜೆಸಿಬಿ ಮೇಲೆ ಹತ್ತಿ ಬೀಗ ಕಿತ್ತುಕೊಂಡಿದ್ದಾರೆ. JCB ಮುಂದೆ ನಾನೇ ಅಡ್ಡ ಕೂರುತ್ತೇನೆ, ತೆರವು ಮಾಡಿ. ನೀವು ಪಕ್ಷಪಾತ ಮಾಡ್ತಿದ್ದೀರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

  • 19 Jun 2023 01:11 PM (IST)

    Karnataka Breaking Kannada News Live: ಬಿಜೆಪಿಗೆ ಸ್ವಲ್ಪನಾದ್ರೂ ಮಾನ ಮರ್ಯಾದೆ ಇದ್ಯಾ -ಸಿಎಂ ಸಿದ್ದರಾಮಯ್ಯ ವಾಗ್ದಾಳಿ

    ನಮ್ಮ ಸರ್ಕಾರ ಬಡವರಿಗೆ ಅಕ್ಕಿ ಕೊಡುವ ಕೆಲಸ ಮಾಡೇ ಮಾಡುತ್ತೆ ಎಂದು ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಜೆಪಿಗೆ ಸ್ವಲ್ಪನಾದ್ರೂ ಮಾನ ಮರ್ಯಾದೆ ಇದ್ಯಾ. ದುಡ್ಡು ಕೊಡ್ತೀವಿ ಅಂದರೂ ಅಕ್ಕಿ ಕೊಡಲ್ಲ ಅಂತಾ ಹೇಳುತ್ತಿದ್ದಾರೆ. ಖಾಸಗಿಯವರಿಗೆ ಬೇಕಾದರೆ ಅಕ್ಕಿ ಪೂರೈಕೆ ಮಾಡುತ್ತಾರೆ. ಇದು‌ ದ್ವೇಷದ ರಾಜಕೀಯ, ಬಿಜೆಪಿಯವರು ಬಡವರ ವಿರೋಧಿ. ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

  • 19 Jun 2023 12:39 PM (IST)

    Karnataka Breaking Kannada News Live: KSRTC ಬಸ್ ಕಂಡಕ್ಟರ್ ಜೊತೆ ಮಹಿಳೆಯರ ಜಟಾಪಟಿ

    ಧರ್ಮಸ್ಥಳ ಬಳಿ ಸಾರಿಗೆ ಬಸ್ ನಿರ್ವಾಹಕನಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಧರ್ಮಸ್ಥಳ ಬಳಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಮಹಿಳೆಯರಿಗೆ ಅವಕಾಶ ನೀಡದೆ ಸಾರಿಗೆ ಬಸ್ ಸಂಚಾರ ಆರೋಪಿಸಿ ಸಾರಿಗೆ ಬಸ್ ನಿರ್ವಾಹಕನಿಗೆ ಮುಗಿಬಿದ್ದು ಮಹಿಳೆಯರು ಕಿಡಿಕಾರಿದ್ದಾರೆ.

  • 19 Jun 2023 12:35 PM (IST)

    Karnataka Breaking Kannada News Live: ಉಚಿತ ಬಸ್ 10 ವರ್ಷ ಇರುತ್ತೆ, ಎಲ್ಲರೂ ಪ್ಲಾನ್ ಮಾಡಿಕೊಂಡು ಓಡಾಡಿ -ರಾಮಲಿಂಗಾರೆಡ್ಡಿ ಸಲಹೆ

    ಸುಮಾರು 3 ಕೋಟಿ‌ ಜನ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಜನರು ಪ್ರಯಾಣ ಮಾಡಲಿ. ಎಲ್ಲರೂ ಒಂದೇ ಬಾರಿಗೆ ಹೋಗುವುದರಿಂದ ಜನದಟ್ಟಣೆ ಆಗ್ತಿದೆ. ಇನ್ನು 10 ವರ್ಷ ಇದೇ ಕಾರ್ಯಕ್ರಮ ಇರುತ್ತೆ. ಎಲ್ಲರೂ ಒಂದೇ ದಿನ ಹೋಗಬೇಡಿ. ಟ್ರಿಪ್ ಮಾಡಿಕೊಂಡು ಓಡಾಡಿ. ಚಾಲಕರು, ನಿರ್ವಾಹಕರಿಗೂ ಕಷ್ಟವಾಗ್ತಿದೆ. ಹೆಚ್ಚು ಒತ್ತಡವೂ ಇರಬಾರದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಹಿಳೆಯರಿಗೆ ಸಲಹೆ ಕೊಟ್ಟಿದ್ದಾರೆ.

  • 19 Jun 2023 12:32 PM (IST)

    Karnataka Breaking Kannada News Live: ಕೋಮು ದ್ವೇಷಕ್ಕೆ ಬಲಿಯಾದ ಕುಟುಂಬಗಳಿಗೆ ಸಿಎಂ ಪರಿಹಾರ ವಿತರಣೆ

    ಕೋಮು ದ್ವೇಷಕ್ಕೆ ಬಲಿಯಾದ ಕುಟುಂಬಗಳಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಪರಿಹಾರ ವಿತರಣೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವಧಿಯಲ್ಲಿ ಗಲಭೆಯಲ್ಲಿ ಮೃತಪಟ್ಟವರಿಗೆ ಬಿಜೆಪಿಯವರು ₹25 ಲಕ್ಷ ಪರಿಹಾರ ನೀಡಿದ್ದಾರೆ. ಆದರೆ ಎಲ್ಲರಿಗೂ ಪರಿಹಾರ ನೀಡಿಲ್ಲ, ಹಿಂದುಗಳಿಗೆ ಮಾತ್ರ ನೀಡಲಾಗಿದೆ. ಪ್ರವೀಣ್ ನೆಟ್ಟಾರು, ಹರ್ಷ ಸತ್ತಾಗ 25 ಲಕ್ಷ ಪರಿಹಾರ ನೀಡಿದ್ರು. ಯಾವುದೇ ಸರ್ಕಾರವಾಗಲಿ ಎಲ್ಲರನ್ನೂ ಒಂದೇ ರೀತಿ ನೋಡಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿ ಎಲ್ಲರನ್ನೂ ಒಂದೇ ರೀತಿ ಕಾಣಬೇಕು. ಸರ್ಕಾರದ ದುಡ್ಡು ಅಂದ್ರೆ ಅದು ತೆರಿಗೆ ಹಣ, ಜನರ ದುಡ್ಡು ಎಂದರು.

  • 19 Jun 2023 12:13 PM (IST)

    Karnataka Breaking Kannada News Live: ಕೇಂದ್ರ ಸರ್ಕಾರಕ್ಕೆ ‌ಯಾಕೆ ಇಷ್ಟೊಂದು ದ್ವೇಷ? -ಪ್ರಿಯಾಂಕ್​ ಖರ್ಗೆ

    ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿ ಕನ್ನಡಿಗರ ಮೇಲೆ ಕೇಂದ್ರ ಸರ್ಕಾರಕ್ಕೆ ‌ಯಾಕೆ ಇಷ್ಟೊಂದು ದ್ವೇಷ ಎಂದು ವಿಧಾನಸೌಧದಲ್ಲಿ ಕೇಂದ್ರದ ವಿರುದ್ಧ ಪ್ರಿಯಾಂಕ್​ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಆಡಳಿತ ಹೇಗೆ ಮಾಡೋದು ಅನ್ನೋದು BJPಗೆ ಮರೆತು ಹೋಗಿದೆ. ಕಾಂಗ್ರೆಸ್ ಟೀಕೆ ಮಾಡ್ತಿರೋದಕ್ಕೆ ಜನ ಅವರನ್ನು ಮನೆಗೆ ಕಳಿಸಿದ್ದು, ಮೊದಲು ಅಕ್ಕಿ ಕೊಡ್ತೇವೆ ಎಂದಿದ್ದರು, ಬಳಿಕ ಕೊಡಲ್ಲ ಅಂತಿದ್ದಾರೆ. ಬಿಜೆಪಿಗೆ ಮತ ಹಾಕಿಲ್ಲ ಎಂದು ಕನ್ನಡಿಗರಿಗೆ ಮೋಸ ಮಾಡ್ತಿದ್ದೀರಾ? ನಾಳೆ ನಡೆಯುವ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರು ಕೈಜೋಡಿಸಿ ಎಂದು ಕರೆ ನೀಡಿದ್ದಾರೆ.

  • 19 Jun 2023 12:10 PM (IST)

    Karnataka Breaking Kannada News Live: ಸಚಿವ ಎಂಬಿ ಪಾಟೀಲ್ ವಿರುದ್ದ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

    ಪ್ರತಾಪ್ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ ಎಂಬ ಎಂ‌ಬಿ ಪಾಟೀಲ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಎಂಬಿ ಪಾಟೀಲ್ ಗೆ ಈಗ ಸಿಕ್ಕಿರುವ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತದೆ. ಕೂತ ಕಡೆ ಕಂತೆ, ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ ಅಂತಾ ವಿಲವಿಲ ಒದ್ದಾಡುತ್ತಿದ್ದಾರೆ. ಎಂಬಿ ಪಾಟೀಲ್ ಗೆ ಬರೀ ಚಿಲ್ಲರೆ, ನೋಟು ಇದರ ಬಗ್ಗೆ ಮಾತ್ರ ಚಿಂತೆ. ಸಿದ್ದರಾಮಯ್ಯರನ್ನು ಓಲೈಕೆ ಮಾಡುವುದು ತಮ್ಮ ಖಾತೆ ಜವಾಬ್ದಾರಿ ಅಂತಾ ಪಾಟೀಲ್ ಅಂದು ಕೊಂಡಿದ್ದಾರೆ. ಸಿದ್ದರಾಮಯ್ಯ ಬಂದೂಕಿಗೆ ಹೆಗಲು ಕೊಡೋದೆ ನಿಮ್ಮ ಕೆಲಸನಾ? ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

  • 19 Jun 2023 11:48 AM (IST)

    Karnataka Breaking Kannada News Live: ಪ್ರೈವೇಟ್ ಬಸ್ ನಲ್ಲಿ ಮಕ್ಕಳು ನೇತಾಡಿಕೊಂಡು ಹೋಗುವ ವಿಡಿಯೋ ವೈರಲ್

    ಪ್ರೈವೇಟ್ ಬಸ್​ನಲ್ಲಿ ಮಕ್ಕಳು ನೇತಾಡಿಕೊಂಡು ಹೋಗುವ ವಿಡಿಯೋ ವೈರಲ್ ಆಗಿದೆ. ಬೈಂದೂರು ಟು ಕುಂದಾಪುರ ಮಾರ್ಗದ ಖಾಸಗಿ ಬಸ್​ನಲ್ಲಿ ದಿನ ನಿತ್ಯ ನೂಕು ನುಗ್ಗಲಿನ ನಡುವೆಯೇ ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಈ ಭಾಗದಲ್ಲಿ ಸರಕಾರಿ ಬಸ್ ಗಳ ಸಂಚಾರ ವಿರಳವಾಗಿರುವ ಹಿನ್ನಲೆ ಖಾಸಗಿ ಬಸ್ ಗಳನ್ನೆ ವಿದ್ಯಾರ್ಥಿಗಳು ಅವಲಂಬಿಸಿದ್ದಾರೆ. ನಿತ್ಯವು ಕಿಕ್ಕಿರಿದು ತುಂಬುವ ಬಸ್ ನಲ್ಲೆ ನೇತಾಡಿಕೊಂಡು ಸಾಗುತ್ತಾರೆ. ಕಾಲೇಜು ಶಿಕ್ಷಣಕ್ಕಾಗಿ ಬೈಂದೂರು ಭಾಗದಿಂದ ಕುಂದಾಪುರಕ್ಕೆ ನಿತ್ಯವು ವಿದ್ಯಾರ್ಥಿಗಳು ಆಗಮಿಸುತ್ತಾರೆ.

  • 19 Jun 2023 11:39 AM (IST)

    Karnataka Breaking Kannada News Live: ಬಸ್​ಗಳಿಲ್ಲದೇ ವಿದ್ಯಾರ್ಥಿಗಳು, ಸಾರ್ವಜನಿಕರ ಪರದಾಟ

    ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದಲ್ಲಿ ಬೆಳಗ್ಗೆ 7 ಘಂಟೆಯಿಂದ ಬಸ್​ಗಳಿಗೆ ವಿದ್ಯಾರ್ಥಿಗಳು ಕಾಯುತ್ತಿದ್ದು ಬಸ್ ಬಂದರೂ ನಿಲ್ಲಿಸಿದೇ ತೆರಳುತ್ತಿದೆ. ಹೀಗಾಗಿ ಮಾಜಿ ಶಾಸಕ ರೇಣುಕಾಚಾರ್ಯ ಖುದ್ದು ಪೀಲ್ಡಿಗಳಿದು ಬಸ್ ನಿಲ್ಲಿಸಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳುಹಿಸಿ ಕೊಟ್ಟಿದ್ದಾರೆ. ಸರ್ಕಾರ ಕೂಡಲೇ ಬಸ್​ಗಳನ್ನ ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ.

  • 19 Jun 2023 11:36 AM (IST)

    Karnataka Breaking Kannada News Live: ತೆರವು ಕಾರ್ಯಾಚರಣೆ ವೇಳೆ ಜೆಸಿಬಿ ಮುಂದೆ ನಿವಾಸಿಗಳ ಹೈಡ್ರಾಮಾ

    ಬೆಂಗಳೂರಿನಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಜೆಸಿಬಿ ಮುಂದೆ ನಿಂತು ನಿವಾಸಿಗಳು ಹೈಡ್ರಾಮಾ ಮಾಡಿದ್ದಾರೆ. ನಮಗೆ ಏನಾದ್ರೂ ಆದ್ರೆ ನೀವೆ ಹೊಣೆ ಎಂದು ತೆರವಿಗೆ ಅಡ್ಡಿ ಮಾಡ್ತಿದ್ದಾರೆ. ದೊಡ್ಡವರ ಮನೆ ಒಡೆಯೋದಕ್ಕೆ ತಾಕತ್ತು ಇಲ್ವಾ ನಿಮ್ಗೆ?
    ಬಾಗ್ಮನೆ ಒತ್ತುವರಿಯಾಗಿದೆ ಎಂದು ಅಧಿಕಾರಿಗಳಿಗೆ ಅವಾಜ್ ಹಾಕುತ್ತಿದ್ದಾರೆ.

  • 19 Jun 2023 11:04 AM (IST)

    Karnataka Breaking Kannada News Live: ಕಿಮ್ಸ್​ ಆಸ್ಪತ್ರೆಗೆ ಸಚಿವ ಸಂತೋಷ್ ಲಾಡ್​ ದಿಢೀರ್ ಭೇಟಿ

    ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ಸಚಿವ ಸಂತೋಷ್ ಲಾಡ್​ ದಿಢೀರ್ ಭೇಟಿ ಕೊಟ್ಟು ಆಸ್ಪತ್ರೆಯ ಸ್ವಚ್ಛತೆ ಪರಿಶೀಲಿಸಿದ್ದಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ​ಸೂಚನೆ ನೀಡಿದ್ದಾರೆ. ಇದೇ ವೇಳೆ ಸಂತೋಷ್ ಲಾಡ್​ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಕಿಮ್ಸ್​​ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಔಷಧಗಳಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ​​​ಎಚ್ಚರಿಕೆ ಕೊಟ್ಟಿದ್ದಾರೆ.

  • 19 Jun 2023 11:02 AM (IST)

    Karnataka Breaking Kannada News Live: ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ -ಮಧು ಬಂಗಾರಪ್ಪ

    ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಹೊಂದಾಣಿಕೆ ಇರಬೇಕು. ಆದರೆ, ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ ಎಂದು ಶಿವಮೊಗ್ಗದಲ್ಲಿ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. ನಾವು ಬೇರೆ ಯಾವುದೇ ಬ್ಯುಸಿನೆಸ್​ ಮಾಡ್ತಿಲ್ಲ. ಕೇಂದ್ರಕ್ಕೆ 3 ಲಕ್ಷ ಕೋಟಿಯಷ್ಟು GST ರಾಜ್ಯದಿಂದಲೇ ಹೋಗುತ್ತೆ. ಆದ್ರೆ ಕೇಂದ್ರ ನಮಗೆ $50-60 ಸಾವಿರ ಕೋಟಿ ಕೊಡುತ್ತೆ ಅಷ್ಟೇ. ಬಿಜೆಪಿ ನಾಯಕರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಬಡವರಿಗೆ ತಲಾ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದರು.

  • 19 Jun 2023 10:59 AM (IST)

    Karnataka Breaking Kannada News Live: ಗದಗದಲ್ಲಿ ಕುಡಿಯುವ ನೀರಿಗಾಗಿ ಜನರ ಹಾಹಾಕಾರ

    ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಹಮಾಲರ ಕಾಲೋನಿಯಲ್ಲಿ ಕುಡಿಯುವ ನೀರು ಸಿಗದೆ ಲಕ್ಷ್ಮೇಶ್ವರ ನಿವಾಸಿಗಳ ಪರದಾಡುತ್ತಿದ್ದಾರೆ. ನೀರು ಸರಬರಾಜು ಟ್ಯಾಂಕ್ ಏರಿ ನೀರು ತಗೆದುಕೊಂಡು ಹೋಗುತ್ತಿದ್ದಾರೆ. ಇಲ್ಲಿ ತಿಂಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತೆ. ಅಲ್ಲದೆ ದೈನಂದಿನ ಜೀವನಕ್ಕೂ ನೀರು ಇಲ್ಲ. ಹೀಗಾಗಿ ಮಹಿಳೆಯರು, ವೃದ್ದರು ಹಾಗೂ‌ ಮಕ್ಕಳು ಹನಿ ನೀರಿಗಾಗಿಯೂ ಪರದಾಡುತ್ತಿದ್ದಾರೆ.

  • 19 Jun 2023 10:52 AM (IST)

    Karnataka Breaking Kannada News Live: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

    ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಚಿಕ್ಕಮಗಳೂರು BJP ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ನಗರದ ಜೂನಿಯರ್ ಕಾಲೇಜು ಸಮೀಪ ಬಿಜೆಪಿ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಪಠ್ಯದ ಜೆರಾಕ್ಸ್ ಪ್ರತಿ ಹಂಚಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

  • 19 Jun 2023 10:08 AM (IST)

    Karnataka Breaking Kannada News Live: ಕಾಂಗ್ರೆಸ್ ಸರ್ಕಾರಕ್ಕೆ ಬಿಬಿಎಂಪಿ ಗುತ್ತಿಗೆದಾರರಿಂದ ಶಾಕ್

    ಫ್ರೀಂ ಸ್ಕೀಂ ಬಗ್ಗೆ ತಲೆ ಕೆಡಿಸಿಕೊಂಡಿರುವ ಸರ್ಕಾರಕ್ಕೆ ಬಿಬಿಎಂಪಿ ಗುತ್ತಿಗೆದಾರರು ಶಾಕ್ ಕೊಟ್ಟಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘ ಬಿಬಿಎಂಪಿಗೆ ಮುಷ್ಕರದ ಎಚ್ಚರಿಕೆ ಕೊಟ್ಟಿದೆ. ಬೆಂಗಳೂರು ವ್ಯಾಪ್ತಿಯ ಕಸ ವಿಲೇವಾರಿ ಸೇರಿದಂತೆ ಎಲ್ಲಾ ವಲಯಗಳ ಕೆಲಸ ಕಾಮಗಾರಿ ಚಾಲ್ತಿಯಲ್ಲಿರುವ ಕಾಮಗಾರಿ ಕೆಲಸ ಸ್ಥಗಿತ ಮಾಡುವ ಎಚ್ಚರಿಕೆ ನೀಡಿದ್ದಾರೆ. ಪಾಲಿಕೆಯ ವ್ಯಾಪ್ತಿಯಲ್ಲಿನ ಕಾಮಗಾರಿಯ ಬಿಲ್ 650 ಕೋಟಿ ಬಿಡುಗಡೆ ಮಾಡದೇ ಹೋದ್ರೆ ಬೆಂಗಳೂರಿನ ಎಲ್ಲ ಕಾಮಗಾರಿ ಹಾಗೂ ಕೆಲಸ ತಡೆ ಹಿಡಿಯುವುದಾಗಿ ಬಿಬಿಎಂಪಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.

  • 19 Jun 2023 09:58 AM (IST)

    Karnataka Breaking Kannada News Live: ಇಂದಿರಾ ಕ್ಯಾಂಟೀನ್ ಊಟದ ಬಗ್ಗೆ ಜನರ ಕಂಪ್ಲೇಂಟ್

    ಇಂದಿರಾ ಕ್ಯಾಂಟೀನ್ ಊಟದ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ನಡೆಸಿದ್ದು ಜನ ಕಂಪ್ಲೇಂಟ್ ಮಾಡಿದ್ದಾರೆ. ಇತ್ತೀಚೆಗೆ ಬರುವ ಊಟದಲ್ಲಿ ರುಚಿಯೇ ಇಲ್ಲ, ಕ್ವಾಲಿಟಿಯೂ ಇಲ್ಲ. ಮುಂಚೆ ಹಲವು ಬಗೆಯ ತಿಂಡಿ ತರುಸುತ್ತಿದ್ರು. ಈಗ ಬೆಳ್ಳಗ್ಗಿನ ತಿಂಡಿಗೆ ಫಲಾವ್ ಬಿಟ್ರೆ ಇನ್ನೇನು ಬರೋದೆ ಇಲ್ಲ. ಅನ್ನ ಸರಿಯಾಗಿ ಬೆಂದಿರೋದೆ ಇಲ್ಲ. ಸಂಬಾರ್ ರುಚಿಯು ಇರೋದಿಲ್ಲ. ಸರ್ಕಾರ ಇಂದಿರಾ ಕ್ಯಾಂಟೀನ್ ಗಳನ್ನ ಕೊಡುವುದಕ್ಕಾಗಿಯೇ ಸಾಕಷ್ಟು ಹಣ ಖರ್ಚು ಮಾಡುತ್ತೆ. ಒಳ್ಳೆಯ ಕ್ವಾಲಿಟಿಯ ಊಟ ಕೊಟ್ರೆ ಜನರಿಗೆ ಸಂತೋಷವಾಗುತ್ತೆ. ನಮ್ಮ ಹತ್ರ ಹಣ ಇಲ್ಲ. ಹೀಗಾಗಿ ಊಟ ಚೆನ್ನಾಗಿದ್ರು, ಚೆನ್ನಾಗಿಲ್ಲದಿದ್ರು ಊಟ ಮಾಡ್ತಿದ್ದೀವಿ. ಇನ್ಮೆಲಾದ್ರು ಊಟದ ಗುಣಮಟ್ಟದ ಬದಲಾಗಬೇಕು. ಬರಿ ಅನ್ನ ಸಂಬಾರ್ ಬದಲು, ಮುದ್ದೆಯನ್ನ ಮಾಡ್ಬೇಕು ಎಂದು ಜನ ಊಟದ ವಿಚಾರಕ್ಕೆ ಸಮಾಧಾನ ಹೊರ ಹಾಕಿದ್ದಾರೆ.

  • 19 Jun 2023 09:10 AM (IST)

    Karnataka Breaking Kannada News Live: ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಇಂದು 2ನೇ ದಿನ

    ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಇಂದು 2ನೇ ದಿನ. ನಿನ್ನೆ ಗೃಹಜ್ಯೋತಿ ಯೋಜನೆಗೆ 50 ಸಾವಿರ ಜನರು ಅರ್ಜಿ ಸಲ್ಲಿಸಿದ್ದರು. ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದೆ. ವೆಬ್​ಸೈಟ್​ ವಿಳಾಸ sevasindhugs.karnataka.gov.in ಲಾಗ್ ಇನ್ ಮಾಡಿ ಮೊಬೈಲ್, ಕಂಪ್ಯೂಟರ್, ಲ್ಯಾಪ್​ಟಾಪ್​ನಲ್ಲೂ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾ.ಪಂ. ಕಚೇರಿ, ವಿದ್ಯುತ್​ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

  • 19 Jun 2023 08:32 AM (IST)

    Karnataka Breaking Kannada News Live: ಅಪ್ಪ ಚಾಕಲೇಟ್​ಗೆ ದುಡ್ಡು ಕೊಡಲಿಲ್ಲ ಎಂದು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಪುತ್ರಿಯರು

    ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಚಿತ ಬಸ್ ಸೇವೆ ಯೋಜನೆ ಪೋಷಕರಿಗೆ ಸಂಕಷ್ಟ ತಂದಿತ್ತು. ಪೊಲೀಸರಿಗೆ ಪೀಕಲಾಟವಾಗಿತ್ತು. ತಂದೆ ಚಾಕಲೇಟ್​ಗೆ ಹಣ ಕೊಡದಿದ್ದಕ್ಕೆ 10 ಮತ್ತು 9 ನೇ ತರಗತಿ ಓದುತ್ತಿದ್ದ ಇಬ್ಬರು ಪುತ್ರಿಯರು ಮನೆ ಬಿಟ್ಟು ಹೋಗಿದ್ದಾರೆ.

  • 19 Jun 2023 08:31 AM (IST)

    Karnataka Breaking Kannada News Live: ಕೊಯ್ನಾ ಡ್ಯಾಂ ಖಾಲಿ, ರಾಜ್ಯದ 6 ಜಿಲ್ಲೆಗಳಿಗೆ ಬರ

    ಮುಂಗಾರು ಮಳೆ ವಿಳಂಬ ಹಿನ್ನೆಲೆ ರಾಜ್ಯದಲ್ಲಿ 2019ರ ಬರದ ಛಾಯೆ ಎದ್ದು ಕಾಣ್ತಿದೆ. ಬರಗಾಲ ವೇಳೆ ರಾಜ್ಯದ 6 ಜಿಲ್ಲೆಗಳ ದಾಹ ತಣಿಸುತ್ತಿದ್ದ ಕೊಯ್ನಾ ಡ್ಯಾಂ ಖಾಲಿ ಖಾಲಿಯಾಗಿದ್ದು, ಡ್ಯಾಂನ ನೀರಿನ ಮಟ್ಟ ಡೆಡ್ ಸ್ಟೋರೆಜ್ ಹಂತ ತಲುಪಿದೆ. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿ ಕೊಯ್ನಾ ಜಲಾಶಯವಿದ್ದು, ಸದ್ಯ 11.74 ಟಿ ಎಂ ಸಿ ನೀರು ಮಾತ್ರ ಬಾಕಿ ಉಳಿದಿದೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಸೇರಿ 6 ಜಿಲ್ಲೆಗಳಲ್ಲಿ ಜೀವಜಲ ನೀಡ್ತಿದ್ದ ಕಡ್ಯಾಂ ಖಾಲಿಯಾಗಿದ್ದು, ಇತ್ತ ಚಟುವಟಿಕೆ ಸೇರಿ ಕುಡಿಯುವ ‌ನೀರಿಗೂ ಜಿಲ್ಲೆಗಳಲ್ಲಿ ಹಾಹಾಕಅರ ಎದುರಾಗಿದೆ.

  • 19 Jun 2023 08:29 AM (IST)

    Karnataka Breaking Kannada News Live: ಅಕ್ಕಿ ಪೂರೈಕೆ ವಿಚಾರಕ್ಕೆ ಕೇಂದ್ರದ ನಡೆ ಖಂಡಿಸಿ ನಾಳೆ ಕಾಂಗ್ರೆಸ್ ಪ್ರತಿಭಟನೆ

    ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿ ಕೇಂದ್ರದ ನಡೆ ಖಂಡಿಸಿ ನಾಳೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. FCI ಮೊದಲು ಅಕ್ಕಿ ನೀಡುವುದಾಗಿ ಹೇಳಿ ಬಳಿಕ ನೀಡಲ್ಲ ಎಂದಿದೆ. ಕೇಂದ್ರದವರು ಕೊಟ್ಟ ಮಾತು ವಾಪಸ್ ಪಡೆದ ಹಿಂದಿನ ಉದ್ದೇಶವೇನು? ದೇಶದ ಜನ ಇದೆಲ್ಲವನ್ನೂ ನೋಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆ ಯಶಸ್ವಿಯಾಗಬಾರದೆಂದು ಹೀಗೆ ಮಾಡ್ತಿದ್ದಾರೆ. ಹೊರರಾಜ್ಯಗಳಿಂದ ಅಕ್ಕಿ ಖರೀದಿಸಲು ಸಿಎಂ ನಿರ್ಧಾರ ಕೈಗೊಂಡಿದ್ದಾರೆ. ಬಹುತೇಕ ನಿಗದಿತ ಸಮಯದೊಳಗೆ ಅಕ್ಕಿ ನೀಡುತ್ತೇವೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ.

Published On - 8:27 am, Mon, 19 June 23

Follow us on