AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್​ನಲ್ಲೇ ಮದ್ಯ ಪ್ರಿಯರಿಗೆ ಶಾಕ್: ಜೂ.1ರಿಂದ ಬೆಂಗಳೂರಿನಲ್ಲಿ 5 ದಿನ ಬಾರ್​ಗಳು ಕ್ಲೋಸ್!

ವೀಕೆಂಡ್​ನಲ್ಲೇ ಮದ್ಯ ಪ್ರಿಯರಿಗೆ ಬರ ಎದುರಾಗಿದೆ. ಶನಿವಾರ, ಭಾನುವಾರ ನಶೆ ಏರಿಸುತ್ತಾ ಎಂಜಾಯ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದವರಿಗೆ ಡ್ರೈ ಡೇ ಎದುರಾಗಿದೆ. ಹೌದು...ನಾಳೆಯಿಂದ ಅಂದರೆ ಜೂನ್ 1ರಿಂದ (ಜುನ್ 5 ಒಂದು ದಿನ ಹೊರತುಪಡಿಸಿ) ಜೂನ್ 6ರ ವರೆಗೆ ಬಾರ್​ಗಳು ಬಂದ್ ಆಗಲಿವೆ.

ವೀಕೆಂಡ್​ನಲ್ಲೇ ಮದ್ಯ ಪ್ರಿಯರಿಗೆ ಶಾಕ್: ಜೂ.1ರಿಂದ ಬೆಂಗಳೂರಿನಲ್ಲಿ 5 ದಿನ ಬಾರ್​ಗಳು ಕ್ಲೋಸ್!
ಸಾಂದರ್ಭಿಕ ಚಿತ್ರ
Vinayak Hanamant Gurav
| Edited By: |

Updated on: May 31, 2024 | 10:44 PM

Share

ಬೆಂಗಳೂರು, (ಮೇ 31): ಪಾರ್ಟಿ ಪ್ರಿಯರು, ಮದ್ಯ (liquor) ಪ್ರಿಯರಿಗೆ ಇದು ಅಕ್ಷರಶಃ ಕಹಿ ಸುದ್ದಿ. ಯಾಕಂದ್ರೆ ನಾಳೆ (ಜೂನ್ 01) ಸಂಜೆ 4 ಗಂಟೆಯಿಂದಲೇ ಬಾರ್​ಗಳು (Bar) ಬಂದ್​ ಆಗಲಿವೆ. .ಎಂಎಲ್‌ಸಿ ಚುನಾವಣೆ ಹಾಗೂ ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ  ಬೆಂಗಳೂರು (Bengaluru) ನಗರದಲ್ಲಿ ಜೂನ್ 1ರಿಂದ ಸಂಜೆಯಿಂದ ಜೂನ್ 6ರವರೆಗೆ ಬಾರ್​ಗಳು ಬಂದ್ ಆಗಲಿವೆ. ವೀಕೆಂಡ್​ನಲ್ಲೇ ಬಾರ್​ ಅಂಗಡಿಗಳು ಬಾಗಿಲು ಹಾಕುತ್ತಿರುವುದರಿಂದ ಮದ್ಯ ಪ್ರಿಯರಿಗೆ ಬರ ಎದುರಾಗಿದೆ.

ಜೂನ್‌ 3ರಂದು ಪದವೀಧರರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಜೂನ್‌ 1ರ ಸಂಜೆ 4 ಗಂಟೆಯಿಂದ ಜೂನ್‌ 3ರವರೆಗೆ ಬಾರ್‌ಗಳು ಕ್ಲೋಸ್‌ ಇರಲಿವೆ. ಜೂನ್ 4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಇದ್ದು, ಅಂದು ಸಹಾ ಎಣ್ಣೆ ಸಿಗಲ್ಲ.. ಕಿಕ್ ಏರಿಸುವಂತಿಲ್ಲ.. ಇನ್ನು ಜೂನ್‌ 5ಅಂದ್ರೆ.. ಬುಧವಾರ ಬಾರ್‌ಗಳು ಎಂದಿನಂತೆ ಓಪನ್‌ ಇರುತ್ತವೆ. ಆದ್ರೆ ಜೂನ್‌ 6 ರಂದು ಎಂಎಲ್‌ಸಿ ಮತ ಎಣಿಕೆ ಇರೋದ್ರಿಂದ ಅಂದು ಮತ್ತೆ ಬಾರ್ ಕ್ಲೋಸ್ ಆಗಲಿವೆ.

ಬೆಂಗಳೂರಿನಲ್ಲಿ ಪದವಿ ಕ್ಷೇತ್ರ ಚುನಾವಣೆಗೆ 36 ಸಾವಿರದಷ್ಟು ಮಾತ್ರ ಮತದಾರರಿದ್ದಾರೆ. ಆದ್ರೆ 5 ದಿನ ಬಾರ್ ಬಂದ್ ಮಾಡುವುದರಿಂದ ಹೊಡೆತ ಬೀಳಲಿದೆ ಎಂದು ಬಾರ್ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ. 5 ದಿನ ಎಣ್ಣೆ ಸಿಗಲ್ಲ ಎನ್ನುವ ನೋವು ಒಂದ್ಕಡೆ ಆದ್ರೆ, ಬಾರ್ ಮಾಲೀಕರು ಕದ್ದು ಮುಚ್ಚಿ ದುಪ್ಪಟ್ಟು ಹಣಕ್ಕೆ ಮದ್ಯ ಮಾರಾಟ ಮಾಡುತ್ತಾರೆ ಎನ್ನುವ ನೋವು ಮದ್ಯ ಪ್ರಿಯರದ್ದು.

ಅದೇನೆ ಇರಲಿ ವೀಕೆಂಡ್​ನಲ್ಲೇ ಡ್ರೈ ಡೇ ಶಾಕ್ ಎದುರಾಗಿದೆ. ಹೀಗಾಗಿ ನಾಳೆ ಬಾರ್​ಗಳ ಮುಂದೆ ಎಣ್ಣೆ ಪ್ರಿಯರು ಕ್ಯೂ ನಿಂತರೂ ಅಚ್ಚರಿ ಇಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವೇಗ ಅತೀ ವೇಗ... ಅತ್ಯಂತ ವೇಗದಲ್ಲಿ ಚೆಂಡೆಸದ 23 ವರ್ಷದ ಯುವ ವೇಗಿ
ವೇಗ ಅತೀ ವೇಗ... ಅತ್ಯಂತ ವೇಗದಲ್ಲಿ ಚೆಂಡೆಸದ 23 ವರ್ಷದ ಯುವ ವೇಗಿ
ವಿದ್ಯಾರ್ಥಿಗಳು ತಾಂಬೂಲ ಸೇವನೆ ಮಾಡಬಾರದು ಯಾಕೆ?
ವಿದ್ಯಾರ್ಥಿಗಳು ತಾಂಬೂಲ ಸೇವನೆ ಮಾಡಬಾರದು ಯಾಕೆ?
ಇಂದು ಈ ರಾಶಿಯವರಿಗೆ ಪ್ರೀತಿಪಾತ್ರರೊಂದಿಗೆ ಭಿನ್ನಾಭಿಪ್ರಾಯಗಳು ಬರಬಹುದು
ಇಂದು ಈ ರಾಶಿಯವರಿಗೆ ಪ್ರೀತಿಪಾತ್ರರೊಂದಿಗೆ ಭಿನ್ನಾಭಿಪ್ರಾಯಗಳು ಬರಬಹುದು
ಪೆಟ್ರೋಲ್ ಬಂಕ್​ನಲ್ಲಿ ಡೀಸೆಲ್​ನಿಂದ ಗಾಡಿ ತೊಳೆದ ಯುವಕ!
ಪೆಟ್ರೋಲ್ ಬಂಕ್​ನಲ್ಲಿ ಡೀಸೆಲ್​ನಿಂದ ಗಾಡಿ ತೊಳೆದ ಯುವಕ!
ಬಾಗಲಕೋಟೆ ಬೈ ಎಲೆಕ್ಷನ್​​: ಬಿಜೆಪಿ, ಕಾಂಗ್ರೆಸ್​​ ನಡುವೆ ಕರಪತ್ರ ಫೈಟ್
ಬಾಗಲಕೋಟೆ ಬೈ ಎಲೆಕ್ಷನ್​​: ಬಿಜೆಪಿ, ಕಾಂಗ್ರೆಸ್​​ ನಡುವೆ ಕರಪತ್ರ ಫೈಟ್
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ