AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ ಪಿಲ್ಲರ್ ದುರಂತ: IISc ತಜ್ಞರಿಂದ BMRCL ಎಂಜಿನಿಯರ್​​ಗಳಿಗೆ ಸ್ಪೆಷಲ್ ಸಿವಿಲ್ ಎಂಜಿನಿಯರಿಂಗ್ ಕ್ಲಾಸ್!

IISc ತಜ್ಞರಿಂದ ಈ ವಾರದಲ್ಲೇ ಇಂಜಿನಿಯರ್​​ಗಳಿಗೆ ತರಬೇತಿ ನೀಡಲು ಬಿಎಂಆರ್​ಸಿಎಲ್​​ ನಿರ್ಧಾರ ಮಾಡಿದೆ. ಮೆಟ್ರೋ ಇಂಜಿನಿಯರ್ಸ್, ಗುತ್ತಿಗೆ ಪಡೆದ ಕಂಪನಿ ಸಿಬ್ಬಂದಿಗೆ ಕಾಮಗಾರಿ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ಕೊಡಿಸಲು ಬಿಎಂಆರ್​ಸಿಎಲ್​ ಮುಂದಾಗಿದೆ.

ನಮ್ಮ ಮೆಟ್ರೋ ಪಿಲ್ಲರ್ ದುರಂತ: IISc ತಜ್ಞರಿಂದ BMRCL ಎಂಜಿನಿಯರ್​​ಗಳಿಗೆ ಸ್ಪೆಷಲ್ ಸಿವಿಲ್ ಎಂಜಿನಿಯರಿಂಗ್ ಕ್ಲಾಸ್!
ಕುಸಿದು ಬಿದ್ದ ಮೆಟ್ರೋ ಪಿಲ್ಲರ್ ರಾಡ್​ಗಳು
Follow us
TV9 Web
| Updated By: ಆಯೇಷಾ ಬಾನು

Updated on:Jan 23, 2023 | 10:49 AM

ಬೆಂಗಳೂರು: ನಾಗವಾರ ಬಳಿಯ ಮೆಟ್ರೋ ಪಿಲ್ಲರ್​ನ ಚೌಕಟ್ಟು ಬಿದ್ದು ತಾಯಿ, ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ದುರಂತ ನಡೆದ ಬೆನ್ನಲ್ಲೇ ಕೊನೆಗೂ ಬಿಎಂಆರ್​ಸಿಎಲ್​ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. IISc ತಜ್ಞರಿಂದ ಈ ವಾರದಲ್ಲೇ ಇಂಜಿನಿಯರ್​​ಗಳಿಗೆ ತರಬೇತಿ ನೀಡಲು ಬಿಎಂಆರ್​ಸಿಎಲ್​​ ನಿರ್ಧಾರ ಮಾಡಿದೆ. ಮೆಟ್ರೋ ಇಂಜಿನಿಯರ್ಸ್, ಗುತ್ತಿಗೆ ಪಡೆದ ಕಂಪನಿ ಸಿಬ್ಬಂದಿಗೆ ಕಾಮಗಾರಿ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ಕೊಡಿಸಲು ಬಿಎಂಆರ್​ಸಿಎಲ್​ ಮುಂದಾಗಿದೆ.

ಐಐಎಸ್ಸಿ ಅಧಿಕಾರಿಗಳಿಂದ ಬಿಎಂಆರ್ಸಿಎಲ್ ಗೆ 27 ಪುಟದ ವರದಿ

ಇನ್ನು ಮೊನ್ನೆಯಷ್ಟೆ ಈ ಪ್ರಕರಣ ಸಂಬಂಧ ಐಐಎಸ್ಸಿ ಅಧಿಕಾರಿಗಳು ಬಿಎಂಆರ್ಸಿಎಲ್ ಗೆ 27 ಪುಟದ ವರದಿ ಸಲ್ಲಿಸಿತ್ತು. ವರದಿಯಲ್ಲಿ ಗುತ್ತಿಗೆ ಕಂಪನಿ ನಿರ್ಲಕ್ಷ್ಯ ವಹಿಸಿರೋದಾಗಿ ತಜ್ಞರ ತಂಡ ಉಲ್ಲೇಖಿಸಿತ್ತು. ಮತ್ತೊಂದೆಡೆ BMRCL ಎಂಡಿ ಅಂಜು ಫರ್ವೆಜ್ ರನ್ನ ಗೋವಿಂದಪುರ ಪೊಲೀಸರು 2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ರು.

ನಾಗವಾರದ ಹೆಣ್ಣೂರು ರಸ್ತೆಯ ಬಳಿ ಜನವರಿ 10 ರಂದು 218 ನೇ ನಿರ್ಮಾಣ ಹಂತದ ಪಿಲ್ಲರ್‌ ಕುಸಿದು ತಾಯಿ, ಮಗು ದಾರುಣವಾಗಿ ಮೃತಪಟ್ಟಿದ್ದರು. ಸ್ಟ್ರಕ್ಚರ್‌ ಉರುಳಲು ತಾಂತ್ರಿಕ ಕಾರಣವೇನು ಎಂಬುದರ ಕುರಿತು ಐಐಎಸ್ಸಿ ತಜ್ಞರು ಕಳೆದ 10 ದಿನಗಳಿಂದ ತನಿಖೆ ನಡೆಸಿದ್ದರು. ಸ್ಥಳ ಪರಿಶೀಲನೆ, ಘಟನೆಯ ಹತ್ತು ದಿನಗಳ ಮೊದಲಿನ ದಾಖಲೆ ಮಾಹಿತಿ ಪಡೆದಿದ್ದ ಐಐಎಸ್‌ಸಿ, ಕಬ್ಬಿಣ, ಸ್ಟೀಲ್‌, ಸಿಮೆಂಟ್‌, ತುಂಡಾದ ಗೈರ್‌ ವೈರ್‌ ಸೇರಿ ಕಚ್ಚಾವಸ್ತುಗಳನ್ನು ತಪಾಸಣೆ ಮಾಡಿತ್ತು. ಈ ವೇಳೆ ವಸ್ತುಗಳಲ್ಲಿ ಕಳಪೆ ಗುಣಮಟ್ಟ ಕಂಡು ಬಂದಿಲ್ಲ ಎಂದು ಪ್ರೊ.ಚಂದ್ರ ಕಿಶನ್‌ ತಿಳಿಸಿದ್ದರು. ಹೀಗಾಗಿ ಎತ್ತರದ ಸ್ಟ್ರಕ್ಚರ್‌ ಬಲವರ್ಧನೆಗೆ ಸುತ್ತ ಕಂಬಿಗಳನ್ನು ನಿಲ್ಲಿಸದಿರುವುದೇ ಘಟನೆಗೆ ಕಾರಣ ಹಾಗೂ ಸ್ಟೇಜಿಂಗ್‌ ಮಾಡಿಕೊಳ್ಳದಿರುವುದು ಗೈರ್‌ ವೈರ್‌ ಕಟ್ಟುವಲ್ಲಿ ನಿರ್ಲಕ್ಷ್ಯ, ವಿನ್ಯಾಸ ಲೋಪ ಎಂದು 27 ಪುಟಗಳ ವರದಿಯಲ್ಲಿ ಸಲ್ಲಿಕೆ ಮಾಡಿದ್ರು‌‌.

ಘಟನೆಗೆ ಗುತ್ತಿಗೆ ಕಂಪನಿಯ ನಿರ್ಲಕ್ಷ್ಯ

ಮೆಟ್ರೋ ನಿರ್ಮಾಣ ಹಂತದ ಪಿಲ್ಲರ್‌ ಕುಸಿಯಲು ನಿರ್ಮಾಣ ಕಾಮಗಾರಿಯಲ್ಲಿ ಯಾವುದೇ ಕಳಪೆಯಾಗಿಲ್ಲ. ಆದರೆ ಕಾಮಗಾರಿ ಕೈಗೊಳ್ಳುವಾಗಿನ ಸಂದರ್ಭದ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಬಿಎಂಆರ್‌ಸಿಎಲ್‌ಗೆ ಶನಿವಾರ ವರದಿ ಸಲ್ಲಿಸಿದೆ. ಈ ಮೂಲಕ ಘಟನೆಗೆ ಗುತ್ತಿಗೆ ಕಂಪನಿಯ ನಿರ್ಲಕ್ಷ್ಯ ಕಾರಣ ಅನ್ನೋದನ್ನ ವರದಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ IISc ತಜ್ಞರಿಂದ ಇಂಜಿನಿಯರ್​​ಗಳಿಗೆ ತರಬೇತಿ ನೀಡಲು ಬಿಎಂಆರ್​ಸಿಎಲ್​​ ನಿರ್ಧಾರ ಮಾಡಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:49 am, Mon, 23 January 23

Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ