ಜೈಪುರ್ ಗ್ಯಾಂಗ್​ಗೆ ಸುಪಾರಿ ಕೊಟ್ಟು ಚಿನ್ನದ ಅಂಗಡಿ ಕಳ್ಳತನ; 9 ಆರೋಪಿಗಳು ಅರೆಸ್ಟ್, ಮೂವರು ಎಸ್ಕೇಪ್

ಪರಿಚಿತ ಕಳ್ಳರನ್ನು ಕರೆಸಿ ಚಿನ್ನದ ಅಂಗಡಿ ಕಳ್ಳತನ ಮಾಡಲು ಸುಪಾರಿ ಕೊಟ್ಟು ಖದೀಮ ಸಿಕ್ಕಿಬಿದಿದ್ದಾನೆ. ಗಣೇಶ್ ಕಾರ್ಪ್ ಗೋಲ್ಡ್ ಶಾಪ್ನಲ್ಲಿ ಕಳ್ಳತನ ನಡೆದಿದೆ. ಆರೋಪಿ ಸುನಿಲ್ ಮಾಲಿ, ಗಣೇಶ್ ಕಾರ್ಪ್ ಗೋಲ್ಡ್ ಶಾಪ್ನ ಮಾಲಿಕನ ಜೊತೆಗೆ ವ್ಯವಹಾರ ಮಾಡ್ತಿದ್ದ.

ಜೈಪುರ್ ಗ್ಯಾಂಗ್​ಗೆ ಸುಪಾರಿ ಕೊಟ್ಟು ಚಿನ್ನದ ಅಂಗಡಿ ಕಳ್ಳತನ; 9 ಆರೋಪಿಗಳು ಅರೆಸ್ಟ್, ಮೂವರು ಎಸ್ಕೇಪ್
ಪ್ರಾತಿನಿಧಿಕ ಚಿತ್ರ
Edited By: ಆಯೇಷಾ ಬಾನು

Updated on: Dec 13, 2021 | 1:51 PM

ಬೆಂಗಳೂರು: ಸುಪಾರಿ ಕೊಟ್ಟು ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಹಾಗೂ ಮಾಡಿಸಿದ್ದ ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಟ್ಟು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ರಾಜೇಂದ್ರ, ಧೀರಜ್, ರವಿ, ದೇವರಾಮ್, ಡವರಲಾಲ್, ವಿನೋದ್, ಗೊವರ್ಧನ್, ಆಶೋಕ್, ಕುಮಾರ್, ದಿನೇಶ್, ಶ್ರಿರಾಮ್ ಬಂಧಿತ ಅರೋಪಿಗಳು.

ಪರಿಚಿತ ಕಳ್ಳರನ್ನು ಕರೆಸಿ ಚಿನ್ನದ ಅಂಗಡಿ ಕಳ್ಳತನ ಮಾಡಲು ಸುಪಾರಿ ಕೊಟ್ಟು ಖದೀಮ ಸಿಕ್ಕಿಬಿದಿದ್ದಾನೆ. ಗಣೇಶ್ ಕಾರ್ಪ್ ಗೋಲ್ಡ್ ಶಾಪ್ನಲ್ಲಿ ಕಳ್ಳತನ ನಡೆದಿದೆ. ಆರೋಪಿ ಸುನಿಲ್ ಮಾಲಿ, ಗಣೇಶ್ ಕಾರ್ಪ್ ಗೋಲ್ಡ್ ಶಾಪ್ನ ಮಾಲಿಕನ ಜೊತೆಗೆ ವ್ಯವಹಾರ ಮಾಡ್ತಿದ್ದ. ಹೀಗಾಗಿ ಆರೋಪಿ ಸುನಿಲ್ಗೆ ಗೋಲ್ಡ್ ಶಾಪ್ನಲ್ಲಿ ಚಿನ್ನ ಇಟ್ಟಿರುವ ಬಗ್ಗೆ ಸುಳಿವಿತ್ತು. ಇದರ ಸಹಾಯದಿಂದ ಚಿನ್ನ ಕಳ್ಳತನ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಅಮಾವಾಸ್ಯೆ ದಿನ ಗಣೇಶ್ ಕಾರ್ಪ್ ಶಾಪ್ ತೆರೆಯಲ್ಲ ಎನ್ನುವುದನ್ನು ತಿಳಿದಿದ್ದ ಆರೋಪಿ ಸುನೀಲ್ ಆ ದಿನವೇ ಕಳ್ಳತನ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದ.

ಮೊದಲಿಗೆ ಕಳ್ಳತನ ಮಾಡಲು ಸುನಿಲ್ ಬೆಂಗಳೂರು ಮೂಲದ ಮೂವರು ಕಳ್ಳರನ್ನು ಸಂಪರ್ಕ ಮಾಡಿದ್ದ. ಬಳಿಕ ಲೋಕಲ್ ಕಳ್ಳರು ಕಳ್ಳತನ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ ಅಂತ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ರಾಜಸ್ಥಾನದ ಜೈಪುರ್ನ ಗ್ಯಾಂಗ್ಗೆ ಸುಪಾರಿ ಕೊಟ್ಟು ಕಳ್ಳತನಕ್ಕೆ ಒಪ್ಪಿಸಿದ್ದಾನೆ. ಕದ್ದಿದರಲ್ಲಿ 50% 50% ಹಂಚಿಕೊಳ್ಳಲು ಮಾತುಕತೆ ನಡೆದಿದೆ. ಬಳಿಕ ಅಗಡಿಯೊಳಗೆ ನುಗ್ಗಿದ ಕಳ್ಳರು ಗ್ಯಾಸ್ ಕಟರ್ ಬಳಸಿ ಲಾಕರ್ ಒಡೆದು ಇಪತ್ತ ನಾಲ್ಕು ಲಕ್ಷ ಮೌಲ್ಯದ ಚಿನ್ನದ ಗಟ್ಟಿ ಕಳ್ಳತನ ಮಾಡಿದ್ದಾರೆ. ಸದ್ಯ ಪೊಲೀಸರು ಖದೀಮರನ್ನು ಅರೆಸ್ಟ್ ಮಾಡಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ನಿಮ್ಮ ಮನೆಯ ಗೋವುಗಳ ರಕ್ಷಣೆಗಾಗಿ ಯಾವುದಕ್ಕೂ ಒಂದು ಕತ್ತಿ ಖರೀದಿಸಿಟ್ಟುಕೊಳ್ಳಿ: ವಿಎಚ್​ಪಿ ನಾಯಕಿ ಸಾದ್ವಿ ಸರಸ್ವತಿ

Web contact

TV9 Kannada

Read More
Follow Us