AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳ್ಳುಳ್ಳಿ ರೀತಿ ಕಾಣಿಸುವ ಈ ವಸ್ತು ಮಾದಕ ಲೋಕದ ರಾಣಿ; ಸಿಲಿಕಾನ್ ಸಿಟಿಯಲ್ಲಿ ಹೊಸ ಮಾದರಿ ಡ್ರಗ್ಸ್ ಹವಾ, ಬೇಟೆಗಿಳಿದ ಪೊಲೀಸರು

ಗಾಂಜಾ ಆಯ್ತು, ಬ್ರೌನ್ ಎಂಡಿಎಂಎ ಆಯ್ತು ಈಗ ನಾನ್ ಸಿಂಥೆಟಿಕ್ ಡ್ರಗ್ಸ್ ಎಂಬ ಹೊಸ ಮಾದರಿಯ ಮಾದಕ ವಸ್ತು ಬೆಂಗಳೂರಿನ ವ್ಯಸನಿಗಳಿಗೆ ನಶೆಯಲ್ಲಿ ತೇಲಾಡಿಸುತ್ತಿದೆ.

ಬೆಳ್ಳುಳ್ಳಿ ರೀತಿ ಕಾಣಿಸುವ ಈ ವಸ್ತು ಮಾದಕ ಲೋಕದ ರಾಣಿ; ಸಿಲಿಕಾನ್ ಸಿಟಿಯಲ್ಲಿ ಹೊಸ ಮಾದರಿ ಡ್ರಗ್ಸ್ ಹವಾ, ಬೇಟೆಗಿಳಿದ ಪೊಲೀಸರು
ಡ್ರಗ್ಸ್
Follow us
Jagadisha B
| Updated By: ಆಯೇಷಾ ಬಾನು

Updated on: Jul 05, 2023 | 8:33 AM

ಬೆಂಗಳೂರು: ಐಟಿ ಬಿಟಿ ಸಿಟಿಯಾದ ಬೆಂಗಳೂರಿನಲ್ಲಿ ಡ್ರಗ್ಸ್(Drugs) ಹಾವಳಿ ಹೆಚ್ಚಾಗಿದ್ದು ಪೊಲೀಸರು ಒಂದಲ್ಲಾ ಒಂದು ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಸತತ ಪ್ರಯತ್ನಪಡುತ್ತಿದ್ದಾರೆ. ಆದರೆ ಬೆಂಗಳೂರಿನ ಮಾದಕಲೋಕಕ್ಕೆ ಮತ್ತೊಂದು ಡ್ರಗ್ ಎಂಟ್ರಿ ಕೊಟ್ಟಿದೆ(Non Synthetic Drugs). ಪೊಲೀಸರ ಸಾಲು ಸಾಲು ಭೇಟೆಗಳ ನಡುವೆಯೂ ಡ್ರಗ್ ಹಾವಳಿ ನಿಂತಿಲ್ಲ. ರಾಜಸ್ಥಾನದಿಂದ ಹೊಸ ಮಾದರಿಯ ಮಾದಕ ವಸ್ತು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಹೊಸ ಮಾದರಿಗೆ ಡ್ರಗ್ಸ್​ಗೆ ವಿದೇಶದಲ್ಲಿದೆ ಭಾರಿ ಬೆಲೆ ಇದೆ.

ಗಾಂಜಾ ಆಯ್ತು, ಬ್ರೌನ್ ಎಂಡಿಎಂಎ ಆಯ್ತು ಈಗ ನಾನ್ ಸಿಂಥೆಟಿಕ್ ಡ್ರಗ್ಸ್ ಎಂಬ ಹೊಸ ಮಾದರಿಯ ಮಾದಕ ವಸ್ತು ಬೆಂಗಳೂರಿನ ವ್ಯಸನಿಗಳಿಗೆ ನಶೆಯಲ್ಲಿ ತೇಲಾಡಿಸುತ್ತಿದೆ. ಪಪ್ಪಿಸ್ಟ್ರಾ, ಮಾರ್ಫೀನ್​ ಎಂಬ ಮಾದಕ ವಸ್ತುಗಳು ರಾಜಸ್ಥಾನದಿಂದ ಸದ್ದಿಲ್ಲದೇ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿವೆ.

ಇದನ್ನೂ ಓದಿ: International day against drug abuse: ಬೆಂಗಳೂರಲ್ಲಿ ಕಳೆದ ಒಂದು ವರ್ಷದಲ್ಲಿ 57 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶ

ನಾನ್ ಸಿಂಥೆಟಿಕ್ ಡ್ರಗ್ಸ್ ಬಳಕೆ ಹೇಗೆ?

ಬೆಳ್ಳುಳ್ಳಿ ಆಕಾರದಲ್ಲಿ ಸಿಗುವ ಈ ನಾನ್ ಸಿಂಥೆಟಿಕ್ ಡ್ರಗ್ಸ್​ಗೆ ಎಲ್ಲಿಲ್ಲದ ಡಿಮ್ಯಾಂಡ್ ಇದೆ. ಬೆಳ್ಳುಳ್ಳಿ ಮಾದರಿ ಇರುವ ಪಪ್ಪಿಸ್ಟ್ರಾವನ್ನು ಜಜ್ಜಿ ಪೌಡರ್ ಆಗಿ ಬದಲಾವಣೆ ಮಾಡಿ ಬಳಿಕ ಅದನ್ನು ಬಹಳಷ್ಟು ದಿನ ಒಣಗಿಸಿ ನಂತರ ಅದನ್ನು ನೀರಿಗೆ ಹಾಕಿ ಕುದಿಸಿ ಕುಡಿಯುತ್ತಾರೆ. ನಾನ್ ಸಿಂಥೆಟಿಕ್ ಪಪ್ಪಿ ಸ್ಟ್ರಾ ಹೆಚ್ಚು ಪಾರ್ಟಿಗಳಲ್ಲಿ ಬಳಕೆ ಮಾಡಲಾಗುತ್ತೆ.

ಮತ್ತೊಂದೆಡೆ ಪಪ್ಪಿ ಸ್ಟ್ರಾ ಗಳಿಂದ ಮಾರ್ಫಿನ್ ಎಂಬ ಮತ್ತೊಂದು ರೀತಿಯ ಡ್ರಗ್ಸ್ ತಯಾರಿಸಲಾಗುತ್ತೆ. ಪಪ್ಪಿ ಸ್ಟ್ರಾ ನಿಂದ ಎಣ್ಣೆಯನ್ನು ತೆಗೆದು ಬಳಿಕ ಅದನ್ನು ನಶೆ ಏರಿಸೊ ವಸ್ತುವಾಗಿ ಬಳಕೆ ಮಾಡಲಾಗುತ್ತೆ. ಮಾರ್ಫಿನ್ ಕ್ಯಾನ್ಸರ್ ರೋಗಕ್ಕೂ ಸಹ ಮದ್ದಾಗಿ ಬಳಸುತ್ತಾರೆ. ಸದ್ಯ ಬೆಂಗಳೂರಿನಲ್ಲಿ ಈ ಎರಡು ಮಾದರಿಯ ಡ್ರಗ್ಸ್​ಗಳಿ ವ್ಯಸನಿಗಳಿಗೆ ನಶೆಯಲ್ಲಿ ತೇಲಿಸುತ್ತಿವೆ. ಹೀಗಾಗಿ ಪೊಲೀಸರು ಕೂಡ ಅಲರ್ಟ್ ಆಗಿದ್ದು ನಾನ್ ಸಿಂಥೇಟಿಕ್ ಡ್ರಗ್ ಭೇಟೆಗೆ ಇಳಿದಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಒಪ್ಪಿಕೊಳ್ಳೋದು ನಮ್ಮ ಧರ್ಮ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಒಪ್ಪಿಕೊಳ್ಳೋದು ನಮ್ಮ ಧರ್ಮ: ಸಾ.ರಾ. ಗೋವಿಂದು
ಕೇರಳ ಮಾದರಿ ಹತ್ಯೆ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿವೆ: ಸಿಂಹ
ಕೇರಳ ಮಾದರಿ ಹತ್ಯೆ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿವೆ: ಸಿಂಹ
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ