AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಷ್ಟು ಮಕ್ಕಳಿಗೆ ಆನ್​ಲೈನ್ ಪಾಠ ಅರ್ಥವಾಗಿದೆಯೆಂದು ಸರ್ವೆ ನಡೆಸಲು ಪೋಷಕರ ಒತ್ತಾಯ

ಕಳೆದ ವರ್ಷ ಸರ್ಕಾರದ ಆದೇಶದಂತೆ 70 ರಷ್ಟು ಶುಲ್ಕ ಕಟ್ಟಿದ್ದೇವೆ. ಈಗ ಪೂರ್ಣ ಹಣ ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿದೆ. ಈ ವರ್ಷ ಶುಲ್ಕ ಕಟ್ಟದ ಮಕ್ಕಳನ್ನ ಆನ್ ಲೈನ್ ಕ್ಲಾಸ್ ನಿಂದ ತೆಗೆದುಹಾಕಿದ್ದಾರೆ. ಅರ್ಧ ಶುಲ್ಕ ಕಟ್ಟಿದ ಮಕ್ಕಳನ್ನು ಆನ್​ಲೈನ್​​ ಕ್ಲಾಸಿನಿಂದ ಮ್ಯೂಟ್ ಮಾಡಿದ್ದಾರೆ ಎಂದು ಪೋಷಕರು ತಮ್ಮ ಸಮಸ್ಯೆಯನ್ನು ಪ್ರತಿಭಟನೆಯ ವೇಳೆ ತೋಡಿಕೊಂಡಿದ್ದಾರೆ.

ಎಷ್ಟು ಮಕ್ಕಳಿಗೆ ಆನ್​ಲೈನ್ ಪಾಠ ಅರ್ಥವಾಗಿದೆಯೆಂದು ಸರ್ವೆ ನಡೆಸಲು ಪೋಷಕರ ಒತ್ತಾಯ
ಪಾಲಕರ ಪ್ರತಿಭಟನೆ
TV9 Web
| Edited By: |

Updated on: Jun 10, 2021 | 3:03 PM

Share

ಬೆಂಗಳೂರು: ಲಾಕ್‌ಡೌನ್ ಎಂದು ಆರ್ಡರ್​ ಮಾಡಿದ ಬಿರಿಯಾನಿಯನ್ನು ಮನೆಗೆ ತಂದುಕೊಡದೇ ವಾಟ್ಸ್​ಆ್ಯಪ್​ನಲ್ಲಿ ಫೋಟೋ ಕಳಿಸಿದರೆ ಹೇಗೆ? ಈಗಿನ ಆನ್​ಲೈನ್ ತರಗತಿಗಳು ಆರ್ಡರ್ ಮಾಡಿದ ಬಿರಿಯಾನಿಯ ಫೊಟೋವನ್ನು ವಾಟ್ಸ್​ಆ್ಯಪ್​ನಲ್ಲಿ ಕಳಿಸಿದಂತೆಯೇ ಶಿಕ್ಷಣವೂ ಆಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹೊರಮಾವು ಸಮೀಪದ ವಿಬ್​ಗಯಾರ್ ಶಾಲೆ ಸೇರಿದಂತೆ ಹಲವು ಖಾಸಗಿ ಶಾಲೆಗಳ ಬಳಿ ಪೋಷಕರು ಖಾಸಗಿ ಶಾಲೆಗಳ ಆನ್​ಲೈನ್ ತರಗತಿಗಳು ಮತ್ತು ಶುಲ್ಕ ನೀತಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಆನ್​ಲೈನ್​ ಪಾಠ ಎಷ್ಟು ಮಕ್ಕಳಿಗೆ ಅರ್ಥ ಆಗಿದೆ ಅಂತ ಸರ್ವೇ ಮಾಡಲಿ. ಶಿಕ್ಷಕರ ಮಾಡುವ ಪಾಠ ಅರ್ಥ ಆಗಿಲ್ಲ. ಶಿಕ್ಷಕರಿಗಿಂತ ನಾವೇ ಹೆಚ್ಚು ಪಾಠ ಮಕ್ಕಳಿಗೆ ಮಾಡುತ್ತಿದ್ದೇವೆ. ಮಕ್ಕಳ ಜೊತೆ ಕೂತು ಅವರಿಗೆ ನಾವೇ ಪಾಠ ಮಾಡುತ್ತಿದ್ದೇವೆ. ಹೊಟೇಲ್​ನಿಂದ ಬಿರಿಯಾನಿ ಆರ್ಡರ್ ಮಾಡಿ, ಲಾಕ್ ಡೌನ್ ಇದೆ ಬರೋಕೆ ಆಗಲ್ಲ, ಅಂತ ಬಿರಿಯಾನಿ ಫೋಟೊವನ್ನು ವಾಟ್ಸ್​ಆ್ಯಪ್​ ಕಳಿಸಿದರೆ ಹೇಗೆ? ಎಂದು ಪ್ರತಿಭಟನಾ ನಿರತ ಪಾಲಕರು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಸರ್ಕಾರದ ಆದೇಶದಂತೆ 70 ರಷ್ಟು ಶುಲ್ಕ ಕಟ್ಟಿದ್ದೇವೆ. ಈಗ ಪೂರ್ಣ ಹಣ ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿದೆ. ಈ ವರ್ಷ ಶುಲ್ಕ ಕಟ್ಟದ ಮಕ್ಕಳನ್ನ ಆನ್ ಲೈನ್ ಕ್ಲಾಸ್ ನಿಂದ ತೆಗೆದುಹಾಕಿದ್ದಾರೆ. ಅರ್ಧ ಶುಲ್ಕ ಕಟ್ಟಿದ ಮಕ್ಕಳನ್ನು ಆನ್​ಲೈನ್​​ ಕ್ಲಾಸಿನಿಂದ ಮ್ಯೂಟ್ ಮಾಡಿದ್ದಾರೆ. ಶಾಲೆಯ ಬೇರೆ ಶಾಖೆಯ ಮಕ್ಕಳನ್ನೆಲ್ಲಾ ಸೇರಿಸಿ ಒಟ್ಟಿಗೆ ಆನ್​ಲೈನ್ ಕ್ಲಾಸ್ ಮಾಡುತ್ತಿದ್ದಾರೆ. ಇದರಲ್ಲಿ ಅನ್ಯ ರಾಜ್ಯದ ಮಕ್ಕಳನ್ನೂ ಸೇರಿಸಿ ಪಾಠ ಮಾಡುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಅರ್ಥ ಆಗದಿದ್ದರೆ ಪ್ರಶ್ನೆ ಕೇಳೋಕೆ ಆಗುತ್ತಿಲ್ಲ ಎಂದು ಪೋಷಕರು ತಮ್ಮ ಸಮಸ್ಯೆಯನ್ನು ಪ್ರತಿಭಟನೆಯ ವೇಳೆ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕೊವಿಡ್ ಮಾರ್ಗಸೂಚಿ ಪುನರ್​ಪರಿಶೀಲಿಸಿದ ಡಿಜಿಎಚ್ಎಸ್: 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್ ಅಗತ್ಯವಿಲ್ಲ

ಕೊವಿಡ್ 19 ಲಸಿಕೆ ಪಡೆದವರಿಗೆ ‘ನಾನು ದೇಶಭಕ್ತ’ ಎಂಬ ಬ್ಯಾಡ್ಜ್​ ನೀಡಿ ಗೌರವಿಸುತ್ತಿರುವ ಮಧ್ಯಪ್ರದೇಶ ಪೊಲೀಸರು

(Parents protest against online classes and fee structure against Private schools in Horamavu Bengaluru)

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ