AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡವಾಳ ಇಲ್ಲದೆ ಸಿಲಿಂಡರ್ ಬಿಸಿನೆಸ್​ಗೆ ಇಳಿದ ಖದೀಮರು; ಬಾಡಿಗೆ ಪಡೆದ 100 ಸಿಲಿಂಡರ್ಗಳನ್ನ ಮಾರಾಟ ಮಾಡಲು ಹೋಗಿ ಲಾಕ್ ಆದ್ರು

ಸಣ್ಣ ಪುಟ್ಟ ಗ್ಯಾಸ್ ಏಜೆನ್ಸಿಗಳಲ್ಲಿ ಕೆಲಸ ಮಾಡ್ತಿದ್ದ ಸುಹೇಲ್, ಸೈಯದ್, ಗಣೇಶ್ ಅನ್ನೋ ಇವ್ರಿಗೆ ಮೈ ಬಗ್ಗಿಸಿ ದುಡಿಯೋದು ಅಂದ್ರೆ ಆಗ್ತಿರ್ಲಿಲ್ಲ. ಕಟ್ ರೂಟ್ನಲ್ಲಿ ಬೇಗ ಹಣ ಮಾಡ್ಬೇಕು ಅನ್ಕೊಂಡಿದ್ದ ಖದೀಮರು, ಸಿಲಿಂಡರ್ ಕಳ್ಳತನದ ಪ್ಲ್ಯಾನ್ ಮಾಡಿದ್ರು.

ಬಂಡವಾಳ ಇಲ್ಲದೆ ಸಿಲಿಂಡರ್ ಬಿಸಿನೆಸ್​ಗೆ ಇಳಿದ ಖದೀಮರು; ಬಾಡಿಗೆ ಪಡೆದ 100 ಸಿಲಿಂಡರ್ಗಳನ್ನ ಮಾರಾಟ ಮಾಡಲು ಹೋಗಿ ಲಾಕ್ ಆದ್ರು
ಬಂಡವಾಳ ಇಲ್ಲದೆ ಸಿಲಿಂಡರ್ ಬುಸಿನೆಸ್​ಗೆ ಇಳಿದ ಖದೀಮರು; ಬಾಡಿಗೆ ಪಡೆದ 100 ಸಿಲಿಂಡರ್ಗಳನ್ನ ಮಾರಾಟ ಮಾಡಲು ಹೋಗಿ ಲಾಕ್ ಆದ್ರು
TV9 Web
| Edited By: |

Updated on:Apr 14, 2022 | 8:07 PM

Share

ಬೆಂಗಳೂರು: ಈಸಿಯಾಗಿ ದುಡ್ ಮಾಡ್ಬೇಕು. ಶ್ರಮ ಇಲ್ಲದೆ ಹಣ ಗಳಿಸಬೇಕು ಅಂತ ಕಳ್ಳದಾರಿ ಹಿಡಿದಿದ್ದ ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಡವಾಳ ಇಲ್ಲದೆ ಸಿಲಿಂಡರ್ ಬಿಸಿನೆಸ್ಗೆ ಇಳಿದ ಮೂರು ಖದೀಮರು ಬಾಡಿಗೆ ಪಡೆದ ಸಿಲಿಂಡರ್ಗಳನ್ನ ಮಾರಾಟ ಮಾಡಲು ಹೋಗಿ ಪೊಲೀಸರ ಅತಿಥಿ ಆಗಿದ್ದಾರೆ.  ಬಿಸಿನೆಸ್ ಮಾಡ್ಬೇಕಂದ್ರೆ ಸ್ವಲ್ಪ ಬಂಡವಾಳನಾದ್ರೂ ಇರ್ಬೇಕು. ಇಲ್ಲಾ ಶ್ರಮನಾದ್ರೂ ಹಾಕ್ಬೇಕು. ಆದ್ರೆ ಈ ಖದೀಮರು ಹಣ ಇಲ್ಲದೆ ಶ್ರಮ ಪಡದೆ ಬಿಸಿನೆಸ್ ಮಾಡೋ ಕಳ್ಳ ದಾರಿ ಹುಡುಕಿಕೊಂಡಿದ್ರು. ಗ್ಯಾಸ್ ಏಜೆನ್ಸಿಗೆ ಕಾಲ್ ಮಾಡಿ ಬಳಿಕ ಯಾಮಾರಿಸಿ ಲಕ್ಷ ಲಕ್ಷ ಸಂಪಾದಿಸೋಕೆ ಹೋಗಿ ಭವಿಷ್ಯದ ದಾರಿಗೆ ಕಲ್ಲು ಹಾಕ್ಕೊಂಡಿದ್ದಾರೆ.

ಸಣ್ಣ ಪುಟ್ಟ ಗ್ಯಾಸ್ ಏಜೆನ್ಸಿಗಳಲ್ಲಿ ಕೆಲಸ ಮಾಡ್ತಿದ್ದ ಸುಹೇಲ್, ಸೈಯದ್, ಗಣೇಶ್ ಅನ್ನೋ ಇವ್ರಿಗೆ ಮೈ ಬಗ್ಗಿಸಿ ದುಡಿಯೋದು ಅಂದ್ರೆ ಆಗ್ತಿರ್ಲಿಲ್ಲ. ಕಟ್ ರೂಟ್ನಲ್ಲಿ ಬೇಗ ಹಣ ಮಾಡ್ಬೇಕು ಅನ್ಕೊಂಡಿದ್ದ ಖದೀಮರು, ಸಿಲಿಂಡರ್ ಕಳ್ಳತನದ ಪ್ಲ್ಯಾನ್ ಮಾಡಿದ್ರು. ಆದ್ರೆ ಕಳ್ಳತನ ರಿಸ್ಕ್ ಜಾಸ್ತಿ ಅಂತಾ ಬಂಡವಾಳ ಇಲ್ಲದೆ ಏಕಾಏಕಿ ನೂರು ಸಿಲಿಂಡರ್ ಬಾಡಿಗೆಗೆ ಪಡೆದು ಮಾರಾಟಕ್ಕೆ ಇಳಿದು ಹಣ ಮಾಡಲು ಮುಂದಾಗಿದ್ರು. ಏಪ್ರಿಲ್ ಐದರಂದು ಬಾಣಸವಾಡಿಯ ಪ್ರತೀಕ್ ಗ್ಯಾಸ್ ಏಜೆನ್ಸಿಗೆ ಆರೋಪಿಗಳು ಕರೆ ಮಾಡಿದ್ರು. ನೂರು ಲೋಡೆಡ್ ಸಿಲಿಂಡರ್ ಬೇಕು ಅಂತಾ ಕೇಳಿದ್ರು.

ದೊಡ್ಡ ಕಸ್ಟಮರ್ ಸಿಕ್ರು ಅಂತಾ ಹಿಂದು ಮುಂದು ನೋಡದ ಏಜೆನ್ಸಿ ಮಾಲೀಕ ರಘು, ಹೆಬ್ಬಾಳದ ಕಾಫಿ ಬೋರ್ಡ್ ಬಳಿ 100 ಸಿಲಿಂಡರ್ ಡೆಲಿವರಿ ಕೊಟ್ಟಿದ್ರು. ಆದ್ರೆ ಸಿಲಿಂಡರ್ ಪಡೆದಿದ್ದ ಆರೋಪಿಗಳು ಹಣ ಆಮೇಲೆ ಕೊಡೋದಾಗಿ ಹೇಳಿ ಎಸ್ಕೇಪ್ ಆಗಿದ್ರು. ಬಳಿಕ ಪರಿಚಯಸ್ಥ ಗ್ರಾಹಕರಿಗೆ ಸಿಲಿಂಡರ್ ಮಾರಿ ಹಣ ಸಂಪಾದಿಸ್ತಿದ್ರು. ಆದ್ರೆ ಹಣ, ಖಾಲಿ ಸಿಲಿಂಡರ್ ಸಿಗದೆ ಕಂಗಲಾದ ಗ್ಯಾಸ್ ಏಜೆನ್ಸಿ ಮಾಲೀಕ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನ ಲಾಕ್ ಮಾಡಿದ್ದಾರೆ.

ಕೃತ್ಯಕ್ಕೆ ಬಳಸಿದ್ದ 3 ವಾಹನ ಸೇರಿ ಲೋಡೆಡ್ ಸಿಲಿಂಡರ್ಗಳನ್ನ ಪೊಲೀಸರು ರಿಕವರಿ ಮಾಡಿದ್ದಾರೆ. ಏನೇ ಇರ್ಲಿ. ಮೈ ಬಗ್ಗಿಸಿ ಕೆಲಸ ಮಾಡೋದ್ ಬಿಟ್ಟು ಶಾರ್ಟ್ ಟೈಮಲ್ಲಿ ಹಣ ಮಾಡೋಕೆ ಹೋಗಿ ಜೈಲು ಸೇರಿದ್ದು ಮೂವರ ಭವಿಷ್ಯಕ್ಕೆ ಕಪ್ಪು ಚುಕ್ಕೆ ಆಗಿದೆ.

ವರದಿ: ಪ್ರಜ್ವಲ್, ಟಿವಿ9, ಬೆಂಗಳೂರು

ಇದನ್ನೂ ಓದಿ: ಬಿಜೆಪಿ ಬಗ್ಗೆ ರಾಜ್ ಠಾಕ್ರೆ ಏಕೆ ಮೌನವಾಗಿದ್ದಾರೆ ಎಂಬುದು ಜನರಿಗೆ ಗೊತ್ತು: ಶರದ್ ಪವಾರ್

ಬಾಗಲಕೋಟೆಯಲ್ಲಿ 1 ಲಕ್ಷ 50 ಸಾವಿರ ರೂ ಮೌಲ್ಯದ 800 ಕೆಜಿ ತೂಕದ ಬೃಹತ್ ಸೇಬು ಹಾರಹಾಕಿ ಸಚಿವ S.R.ಪಾಟೀಲ್​ಗೆ ಸ್ವಾಗತ

Published On - 8:02 pm, Thu, 14 April 22

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?