AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷ ಹೊಸ್ತಿಲಲ್ಲಿ ಹೆಚ್ಚಾದ ಡ್ರಗ್ಸ್ ದಂಧೆ; ಪೊಲೀಸ್ ಆಯುಕ್ತರಿಂದ ಸಿಟಿ ಪೊಲೀಸರಿಗೆ ಹೊಸ ಟಾಸ್ಕ್

ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚು ಪ್ರಮಾಣದಲ್ಲಿ ಡ್ರಗ್ಸ್ ಸಪ್ಲೈ ಆಗ್ತಿದೆ. ಹೀಗಾಗಿ ನಗರ ಪೊಲೀಸ್ ಆಯುಕ್ತರು ಸಿಟಿ ಪೊಲೀಸರಿಗೆ ಹೊಸ ಟಾಸ್ಕ್ ನೀಡಿದ್ದಾರೆ. ಗಾಂಜಾ ಹಾಗೂ ಡ್ರಗ್ಸ್ ಹೆಚ್ಚಾಗಿ ಸಪ್ಲೈ ಆಗುವ ಸ್ಥಳಗಳ ಮಾಹಿತಿ ಕಲೆ ಹಾಕಲು ಸೂಚನೆ ನೀಡಿದ್ದಾರೆ.

ಹೊಸ ವರ್ಷ ಹೊಸ್ತಿಲಲ್ಲಿ ಹೆಚ್ಚಾದ ಡ್ರಗ್ಸ್ ದಂಧೆ; ಪೊಲೀಸ್ ಆಯುಕ್ತರಿಂದ ಸಿಟಿ ಪೊಲೀಸರಿಗೆ ಹೊಸ ಟಾಸ್ಕ್
ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ ದಯಾನಂದ
ಜಗದೀಶ ಬಿ.
| Edited By: |

Updated on:Dec 20, 2023 | 3:34 PM

Share

ಬೆಂಗಳೂರು, ಡಿ.14: ಹೊಸ ವರ್ಷ ಹೊಸ್ತಿಲಲ್ಲಿರುವಾಗಲೇ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ. ಈ ವರ್ಷ ದಾಖಲೆ ಮಟ್ಟದಲ್ಲಿ ಪೊಲೀಸರು ಡ್ರಗ್ಸ್ (Drugs) ಸೀಜ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚು ಪ್ರಮಾಣದಲ್ಲಿ ಡ್ರಗ್ಸ್ ಸಪ್ಲೈ ಆಗ್ತಿದೆ. ಹೀಗಾಗಿ ನಗರ ಪೊಲೀಸ್ ಆಯುಕ್ತರು (Bengaluru Police commissioner) ಸಿಟಿ ಪೊಲೀಸರಿಗೆ ಹೊಸ ಟಾಸ್ಕ್ ನೀಡಿದ್ದಾರೆ. ಗಾಂಜಾ ಹಾಗೂ ಡ್ರಗ್ಸ್ ಹೆಚ್ಚಾಗಿ ಸಪ್ಲೈ ಆಗುವ ಸ್ಥಳಗಳ ಮಾಹಿತಿ ಕಲೆ ಹಾಕಲು ಸೂಚನೆ ನೀಡಿದ್ದಾರೆ.

ಈಗಾಗಲೇ ಸೆಂಟ್ರಲ್ ಜೈಲಿಂದ ಒಂದೇ ತಿಂಗಳಲ್ಲಿ 103 ಮಂದಿ ಫೆಡ್ಲರ್ಸ್ ರಿಲೀಸ್ ಆಗಿದ್ದಾರೆ. ರಿಲೀಸ್ ಆದವರಲ್ಲಿ 12 ಮಂದಿ ನೈಜೀರಿಯನ್ ಪ್ರಜೆಗಳಿದ್ದಾರೆ. ರಿಲೀಸ್ ಆದವರ ಮೇಲೆ ನಿಗಾ ಇಡಲು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರು ಸೂಚಿಸಿದ್ದಾರೆ. ಆಯಾ ವಿಭಾಗದಲ್ಲಿ ರಿಲೀಸ್ ಆಗಿ ಬಂದಿರುವ ಡ್ರಗ್ ಫೆಡ್ಲರ್​ಗಳ ಲಿಸ್ಟ್ ಮಾಡಲು ಇನ್ಸ್ ಪೆಕ್ಟರ್​ಗಳಿಗೆ ತಿಳಿಸಲಾಗಿದೆ. ಸ್ಟೇಷನ್ ಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ಕೊಡಿ. ಪ್ರಮುಖವಾಗಿ ನೈಜೀರಿಯನ್ ಪ್ರಜೆಗಳು ವಾಸವಿರುವ ಸ್ಥಳಗಳಲ್ಲಿ ಮಫ್ತಿ ಕಾರ್ಯಾಚರಣೆ ಮಾಡಿ. ರೆಸಾರ್ಟ್, ರೇವ ಪಾರ್ಟಿ ಸ್ಥಳ, ಫಾರ್ಮ್ ಹೌಸ್, ಸ್ಟಾರ್ ಹೋಟೆಲ್, ಪಬ್ ಬಾರ್​ಗಳ ಮಾಲೀಕರನ್ನ ಕರೆಸಿ ಎಚ್ಚರಿಕೆ ನೀಡಿ ಎಂದು ಕಮಿಷನರ್ ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಪಾಸ್​ಪೋರ್ಟ್​ ಪರಿಶೀಲನೆಗೆಂದು ಪೊಲೀಸ್​ಠಾಣೆಗೆ ಬಂದಿದ್ದ ಮಹಿಳೆಗೆ ಗುಂಡು ತಗುಲಿ ಸಾವು

ಚಾಕು ಹಾಗು ಡ್ರ್ಯಾಗರ್ ತೋರಿಸಿ ಸಿಗರೇಟ್ ದೋಚಿದ್ದ ಐವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಅಕ್ಮಲ್, ವಸೀಂ, ಬಕಾಸ್, ಅಝರ್ ಮತ್ತು ಅಲಿ ಬಂಧಿತ ಆರೋಪಿಗಳು. ಆರೋಪಿಗಳು ಯಲಹಂಕ ಕೊಂಡಪ್ಪ ಲೇಔಟ್ ಬಳಿ‌ ಇರುವ ಶಿವಚೇತನಾ ಪ್ರಾವಿಷನ್ ಸ್ಟೋರ್​ನಲ್ಲಿ ಸುಮಾರು 66 ಸಾವಿರ ಮೌಲ್ಯದ ಸಿಗರೇಟ್ ದೋಚಿದ್ದರು. ಪ್ರಮುಖ ಗ್ಯಾಂಗ್ ಲೀಡರ್ ರಾಬರಿ ಮಾಡಿಸಿ ವಿಲೇವಾರಿ ಮಾಡ್ತಿದ್ದ. ಕೃತ್ಯ ಎಸಗಿದವರಿಗೆ ಕಮೀಷನ್ ರೂಪದಲ್ಲಿ‌ ಹಣ ನೀಡ್ತಿದ್ದ. ಸಿಗರೇಟ್ ನ್ನು ಕೂಡ ವಿಲೇವಾರಿ ಮಾಡಿ 66 ಸಾವಿರ ಹಂಚಿಕೊಂಡಿದ್ದರು.

ಇನ್ನು ಸಮೀರ್ ಎಂಬಾತ ತನ್ನ ಹುಡುಗರನ್ನ ಬಿಟ್ಟು ರಾಬರಿ ಮಾಡಿಸುತ್ತಿದ್ದ. ತನಗೆ ದುಡ್ಡು ಬೇಕು ಅಂದಾಗ ಹುಡುಗರನ್ನ ಒಟ್ಟು ಮಾಡಿ ಕಾನ್ಸ್ಪಿರೆಸಿ ಮೂಲಕ ರಾಬರಿ ಮಾಡಿಸ್ತಿದ್ದ. ಅಕ್ಮಲ್ ನಾಲ್ಕು ಕೊಲೆ ಯತ್ನ, ರಾಬರಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಒಬ್ಬೊಬ್ಬರ ಮೇಲೆ ಹತ್ತಾರು ಕೇಸುಗಳಿವೆ. ಈ ಆರೋಪಿಗಳು ಲಾಂಗ್ ಹಿಡಿದು ನಿಂತರೆ ಅವರ ವಸ್ತುಗಳು ಕೊಡುವವರೆಗೂ ಬಿಡಲ್ಲ. ಸಮೀರ್, ದೋಚಿ ತಂದ ವಸ್ತುಗಳನ್ನ ವಿಲೇವಾರಿ ಮಾಡ್ತಾನೆ. ಬ್ಲಾಕ್ ಮಾರ್ಕೆಟ್​ನಲ್ಲಿ ವಿಲೇವಾರಿ ಮಾಡ್ತಾನೆ. ನಂತರ ತನ್ನ ಗ್ಯಾಂಗ್ ನ ಜೊತೆ ಸಮಾನಾಗಿ ಹಣ ಹಂಚಿಕೆ ಮಾಡ್ತಾನೆ. ಎಷ್ಟೇ ಸಲ ಜೈಲಿಗೆ ಹೋದ್ರು ಈ ಆರೋಪಿಗಳು ಮಾತ್ರ ಬದಲಾಗಿಲ್ಲ. ಆರೋಪಿಗಳ ವಿರುದ್ಧ ರೌಡಿಶೀಟರ್ ತೆರೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:45 am, Thu, 14 December 23

Follow Us
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ