ಬೆಂಗಳೂರಿನ ಪಬ್​​ಗಳಲ್ಲಿ ಎಣ್ಣೆ, ಡಿಜೆ ಜೊತೆ ಮತ್ತೊಂದು ಮನರಂಜನೆ ಕಾರ್ಯಕ್ರಮ: ಏನದು?

ಇತ್ತೀಚಿಗೆ ಬೆಂಗಳೂರಿನ ಕೆಲವು ಪಬ್​​ಗಳಲ್ಲಿ "ರಸಪ್ರಶ್ನೆ ರಾತ್ರಿ" ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಪ್ರಶ್ನೆಗಳನ್ನು ಕೇವಲ ಉತ್ತಮ ಆಹಾರ ಮತ್ತು ಪಾನೀಯಗಳ ಬಗ್ಗೆ ಕೇಳುವುದಿಲ್ಲ. ಎಲ್ಲದರ ಬಗ್ಗೆಯೂ ಕೇಳಲಾಗುತ್ತದೆ.

ಬೆಂಗಳೂರಿನ ಪಬ್​​ಗಳಲ್ಲಿ ಎಣ್ಣೆ, ಡಿಜೆ ಜೊತೆ ಮತ್ತೊಂದು ಮನರಂಜನೆ ಕಾರ್ಯಕ್ರಮ: ಏನದು?
ಸಾಂದರ್ಭಿಕ ಚಿತ್ರ
Follow us
| Updated By: ವಿವೇಕ ಬಿರಾದಾರ

Updated on:Oct 06, 2023 | 8:24 AM

ಬೆಂಗಳೂರು ಅ.06: ಪಬ್​​ಗಳೆಂದರೇ (PUB) ಮೊದಲು ನೆನಪಾಗೋದು ಲೀಟರ್​ಗಟ್ಟಲೆ ಕುಡಿಯಲು ಸಿಗುವ ಬಿಯರ್​​. ಹಾಗೆ ಜಗಮಗಿಸುವ ಲೈಟ್​​, ಡಿಜೆ ಹಾಡುಗಳು ಮತ್ತು ಕುಣಿಯುವ ಯುವಕರು. ಕೆಲವೊಂದು ಪಬ್​ಗಳಲ್ಲಿ ಊಟವೂ ಸಿಗುತ್ತದೆ. ಪಬ್​ಗಳೆಂದರೇ ಇಷ್ಟಕ್ಕೆ ಸೀಮತವಾಗಿಬಿಟ್ಟಿವೆ ಎಂದು ಸಾಕಷ್ಟು ಜನರು ಬೇಸರ ಹೊರಹಾಕುತ್ತಾರೆ. ಆದರೆ ಈ ಮಧ್ಯೆ ಪಬ್​​ಗಳಲ್ಲಿ ಹೊಸದೊಂದು ಟ್ರೆಂಡ್​​​ ಶರುವಾಗಿದೆ. ಈ ಟ್ರೆಂಡ್​ ಎಲ್ಲ ವಯಸ್ಕರರನ್ನು ಆಕರ್ಷಿಸುತ್ತಿದೆ. ಅದೇನು ಹೊಸ ಟ್ರೆಂಡ್​ ಇಲ್ಲಿದೆ ಓದಿ.

ಇತ್ತೀಚಿಗೆ ಬೆಂಗಳೂರಿನ ಕೆಲವು ಪಬ್​​ಗಳಲ್ಲಿ “ರಸಪ್ರಶ್ನೆ ರಾತ್ರಿ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ರಸಪ್ರಶ್ನೆ ರಾತ್ರಿಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿವೆ. ಈ ವಿಷಯಾಧಾರಿತ ರಸಪ್ರಶ್ನೆಗಳು ಎಲ್ಲಾ ವಯಸ್ಸಿನ ಪೋಷಕರನ್ನು ಸೆಳೆಯುತ್ತಿವೆ, ವಾರದಲ್ಲಿ ವಿಭಿನ್ನ ರೀತಿಯ ಮನರಂಜನೆಯನ್ನು ಒದಗಿಸುತ್ತಿವೆ.

ಈ ಬಗ್ಗೆ ಸುರೇಶ್ ಮತ್ತು ಮಾಯಾ (ಹೆಸರು ಬದಲಾಯಿಸಲಾಗಿದೆ) ದಂಪತಿ ಮಾತನಾಡಿ “ಸಮಾನ್ಯವಾಗಿ ಪಬ್​​ಗಳಿಗೆ ವೀಕ್​ಎಂಡ್​​​ ಸಮಯದಲ್ಲಿ ಹೋಗುತ್ತಾರೆ. ಆದರೆ ನಾವು ಮಿಡ್​ವೀಕ್​​ನಲ್ಲೇ ಪಬ್​​ಗಳಿಗೆ ಹೋಗುತ್ತೇವೆ. ಪ್ರತಿ ಬುಧವಾರ ನಾವು ಪಬ್​ಗೆ ಹೋಗುತ್ತೇವೆ. ಅಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ಮೊದಲಿಗೆ ಇದನ್ನು ಕಂಡು ಆಶ್ಚರ್ಯವಾಯಿತು ಮತ್ತು ಕೂತೂಹಲ ಮೂಡಿಸಿತು. ಹೀಗಾಗಿ ಪ್ರತಿ ಬುಧವಾರ ನಾವು ಪಬ್​​ಗೆ ಹೋಗುತ್ತೇವೆ” ಎಂದು ಹೇಳಿದರು.

ಪ್ರಶ್ನೆಗಳನ್ನು ಕೇವಲ ಉತ್ತಮ ಆಹಾರ ಮತ್ತು ಪಾನೀಯಗಳ ಬಗ್ಗೆ ಕೇಳುವುದಿಲ್ಲ. ಎಲ್ಲದರ ಬಗ್ಗೆಯೂ ಕೇಳಲಾಗುತ್ತದೆ. ಇದರಿಂದ ಸಮಾನ್ಯ ಜ್ಞಾನ ವೃದ್ಧಿಯಾಗುತ್ತದೆ ಮತ್ತು ನಮ್ಮ ಮಿದುಳು ಚುರುಕಾಗುತ್ತದೆ ಎಂದು ದಂಪತಿ ಹೇಳಿದರು.

ಇದನ್ನೂ ಓದಿ: ಆರೋಗ್ಯ ಸರಿ ಇಲ್ಲ ಎಂದು ರಜೆ ಪಡೆದು, ಪಬ್​ಗೆ ಹೋಗಿ ಕಂಠಪೂರ್ತಿ ಕುಡಿದು, ಪೊಲೀಸ್ ಅಧಿಕಾರಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಅಲ್ಲದೆ ಕ್ರೈಸ್ಟ್ ಡೀಮ್ಡ್-ಟು-ಬಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ದಿವ್ಯ (21) ಎಂಬುವರು ಈ ರಸಪ್ರಶ್ನೆ ರಾತ್ರಿಗಳಲ್ಲಿ ತನ್ನ ಸ್ನೇಹಿತರ ಜೊತೆಗೂಡಿ ಪಬ್​​​ಗಳಿಗೆ ಹೋಗುತ್ತಾರೆ. ಅಲ್ಲಿ ತನ್ನ ಸ್ನೇಹಿತರೊಂದಿಗೆ ಸೇರಿ ಪಬ್​​ನಲ್ಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಈ ಸಮಯದಲ್ಲಿ ಡ್ರಿಂಕ್ಸ್​ ಮಾಡಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಈ ಕಾರ್ಯಕ್ರಮ ಎಲ್ಲ ವಯಸ್ಸಿನ ಜನರನ್ನು ಆಕರ್ಷಿಸುತ್ತಿದೆ.

ಇಂದಿರಾನಗರದಲ್ಲಿರುವ 21st ಅಮೆಂಡ್​​ಮೆಂಟ್​ ಗ್ಯಾಸ್ಟ್ರೋಬಾರ್‌ನಲ್ಲಿ, ಪ್ರತಿ ಬುಧವಾರ ವಿಷಯಾಧಾರಿತ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ಮಿಡ್‌ವೀಕ್ ತುಂಬಾ ರೋಮಾಂಚನಕಾರಿಯಿಂದ ಕೂಡಿರುತ್ತದೆ ಎಂದು ಬಾರ್​ ಮಾಲೀಕರು ತಿಳಿಸಿದ್ದಾರೆ.

ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಟ್ರಿಪ್ಪಿ ಗೋಟ್ ಕೆಫೆಯಲ್ಲಿ, ರಸಪ್ರಶ್ನೆ ರಾತ್ರಿಯು ಸಾಕಷ್ಟು ಕುತೂಹಲದಿಂದ ಕೂಡಿರುತ್ತದೆ. ಈ ಬಗ್ಗೆ ಕೆಫೆಯ ಮ್ಯಾನೇಜರ್ ಅರಿಜಿತ್ ಬ್ಯಾನರ್ಜಿ ಮಾತನಾಡಿ ರಸಪ್ರಶ್ನೆ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇದು ನಂಬಲಸಾಧ್ಯವಾಗಿತ್ತು – ನಮ್ಮ ಗ್ರಾಹಕರ ಪ್ರತಿಕ್ರಿಯೆಯು ನಮ್ಮನ್ನು ಸಂತೋಷ ನೀಡಿದೆ. ನಾವು ಈ ತಿಂಗಳು ಇನ್ನೊಂದು ಸುತ್ತಿಗೆ ಸಜ್ಜಾಗುತ್ತಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 am, Fri, 6 October 23

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ