ಹೆಚ್ಚಾದ ಸೈಬರ್ ಕ್ರೈಂ ಪ್ರಕರಣ; ಬೆಂಗಳೂರಲ್ಲಿ ಆ್ಯಪ್ ಡೌನ್​ಲೋಡ್ ಮಾಡಿಸಿ ನಿವೃತ್ತ ಯೋಧನಿಗೆ 1 ಲಕ್ಷ ಹಣ ವಂಚನೆ

ಅಮೇಜಾನ್​​​ ಆರ್ಡರ್ ಕ್ಯಾನ್ಸಲ್ ಆಗಿ ಹಣ ಜಮೆ ಆಗದ ಕಾರಣ ಗೂಗಲ್ ಮಾಡಿ ಸಹಾಯವಾಣಿಗೆ ಕರೆ ಮಾಡಿದ್ದ ನಿವೃತ್ತ ಯೋಧ ಮಹೇಶರಿಗೆ ಖದೀಮರು ಕರೆ ಮಾಡಿ ಹಂತ ಹಂತವಾಗಿ ಹಣ ಎಗರಿಸಿದ್ದಾರೆ.

ಹೆಚ್ಚಾದ ಸೈಬರ್ ಕ್ರೈಂ ಪ್ರಕರಣ; ಬೆಂಗಳೂರಲ್ಲಿ ಆ್ಯಪ್ ಡೌನ್​ಲೋಡ್ ಮಾಡಿಸಿ ನಿವೃತ್ತ ಯೋಧನಿಗೆ 1 ಲಕ್ಷ ಹಣ ವಂಚನೆ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Jul 29, 2023 | 7:01 AM

ಬೆಂಗಳೂರು, ಜುಲೈ 29: ಟೆಕ್ನಾಲಜಿ ಎಷ್ಟು ಸ್ಮಾರ್ಟ್ ಆಗುತ್ತಾ ಹೋಗುತ್ತಿದೆಯೋ ಸೈಬರ್ ಖದೀಮರು ಕೂಡ ಅಷ್ಟೇ ಸ್ಮಾರ್ಟ್ ಆಗುತ್ತಿದ್ದಾರೆ. ನಕಲಿ ಬ್ಯಾಂಕ್ ಐಡಿ ನೀಡಿ 1 ಲಕ್ಷ ಹಣ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖದೀಮನೋರ್ವ ಮೋಸ ಮಾಡಲೆಂದೇ MOSA1122@SBI ಯುಪಿಐ ಐಡಿ ಕ್ರಿಎಟ್ ಮಾಡಿದ್ದಾನೆ. ಫೋನ್ ಮಾಡುವವರಿಗೆ, ಅಕೌಂಟ್ ಚೆಕ್ ಮಾಡಿ ಅಂತಾನೆ. ಬ್ಯಾಂಕ್ ಅಪ್ಲಿಕೇಶನ್ ಓಪನ್ ಮಾಡ್ತಿದ್ದಂತೆ ಹಣ ಮಂಗಮಾಯ ಆಗಿಬಿಡುತ್ತೆ. ಇಂತಹದೊಂದು ವಂಚನೆ ಬೆಂಗಳೂರಿನಲ್ಲಿ ನಡೆದಿದ್ದು ವಂಚನೆಗೊಳಗಾದ ನಿವೃತ್ತ ಯೋಧ ಮಹೇಶ್ ಎಂಬುವವರು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿವೃತ್ತ ಯೋಧ ಮಹೇಶ್ ಅಮೇಜಾನ್​​​ನಲ್ಲಿ ₹5,499 ಮೌಲ್ಯದ ಸ್ಪೀಕರ್ ಬುಕ್​ ಮಾಡಿದ್ದರು. ನಂತರ ಬುಕ್ಕಿಂಗ್ ಕ್ಯಾನ್ಸಲ್ ಆಗಿತ್ತು. ಬುಕ್ಕಿಂಗ್​ ಕ್ಯಾನ್ಸಲ್ ಆಗಿ 3 ದಿನದಲ್ಲಿ ಹಣ ವಾಪಸ್​ ಬರುತ್ತೆಂದು ಮೊಬೈಲ್​ಗೆ ಸಂದೇಶ ಬಂದಿತ್ತು. ಹಣ ಜಮೆ ಆಗದಿದ್ದಕ್ಕೆ ಗೂಗುಲ್​​ನಲ್ಲಿ ಸಹಾಯವಾಣಿ ಹುಡುಕಿ ಮಹೇಶ್ ಕರೆ ಮಾಡಿದ್ದರು. ಬಳಿಕ ಮತ್ತೊಂದು ನಂಬರ್​​ನಿಂದ ವಂಚಕರು ಕರೆ ಮಾಡಿದ್ದಾರೆ. RUSKDESK ಅಪ್ಲಿಕೇಶನ್ ಡೌನ್​​​​ಲೋಡ್ ಮಾಡಲು ಹೇಳಿದ್ದಾರೆ. ಌಪ್​​ ಡೌನ್​​​​ಲೋಡ್ ಮಾಡಿ ಬಟನ್​ ಪ್ರೆಸ್​ ಮಾಡಲು ಹೇಳಿದ್ದಾರೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಕಷ್ಟಕ್ಕೆ ಮರುಗಿದ ರ್ಯಾಪಿಡೋ ಚಾಲಕನಿಗೇ ವಂಚಿಸಿದ ಗ್ರಾಹಕ

ವಂಚಕರ ಜಾಲ ತಿಳಿಯದೆ ಇದನ್ನು ನಂಬಿದ ಮಹೇಶ್ ಖದೀಮರು ಹೇಳಿದನ್ನು ಫಾಲೋ ಮಾಡಿದ್ದಾರೆ. ಆ್ಯಪ್ ಡೌನ್​​​​ಲೋಡ್ ಮಾಡಿ ಓಕೆ ಬಟನ್​ ಪ್ರೆಸ್​ ಮಾಡುತ್ತಿದ್ದಂತೆ ಮಹೇಶ್ ಅವರ ಬ್ಯಾಂಕ್ ಖಾತೆಯಿಂದ 81 ಸಾವಿರ ಹಣ ಕಡಿತಗೊಂಡಿದೆ. ಬಳಿಕ ವಂಚಕರು ಮಾತನಾಡಿ ಫೋನ್ ಇಟ್ಟಿದ್ದಾರೆ. ಬ್ಯಾಂಕ್​ನಿಂದ ಹಣ ಕಟ್ ಆದ ಬಗ್ಗೆ ತಿಳಿದ ಮಹೇಶ್ ಮತ್ತೆ ಕರೆ ಮಾಡಿ ವಿಚಾರಿಸಿದಾಗ ತಪ್ಪಾಗಿ ನಂಬರ್ ಟೈಪ್ ಮಾಡಿದ್ದೀರಿ ಎಂದಿದ್ದಾರೆ. ಹಣ ನಿಮ್ಮ ಖಾತೆಗೆ ಬರುತ್ತೆ ಎಂದು ಪದೇ ಪದೇ ಅಕೌಂಟ್ ಪರೀಕ್ಷಿಸಲು ಹೇಳಿದ್ದಾರೆ. ಹೀಗೆ ಹಂತ ಹಂತವಾಗಿ 1 ಲಕ್ಷ ಹಣವನ್ನು ಅಕೌಂಟ್ ನಿಂದ ಮಾಯ ಮಾಡಲಾಗಿದೆ. ಸದ್ಯ ಮೋಸ ಮಾಡಲೆಂದೇ ಬ್ಯಾಂಕ್​ನ ನಕಲಿ ಯುಪಿಐ ಐಡಿ ನೀಡಿ ವಂಚನೆ ಮಾಡಿರುವ ಬಗ್ಗೆ ಮಹೇಶ್ ಅವರು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!