AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚಾದ ಸೈಬರ್ ಕ್ರೈಂ ಪ್ರಕರಣ; ಬೆಂಗಳೂರಲ್ಲಿ ಆ್ಯಪ್ ಡೌನ್​ಲೋಡ್ ಮಾಡಿಸಿ ನಿವೃತ್ತ ಯೋಧನಿಗೆ 1 ಲಕ್ಷ ಹಣ ವಂಚನೆ

ಅಮೇಜಾನ್​​​ ಆರ್ಡರ್ ಕ್ಯಾನ್ಸಲ್ ಆಗಿ ಹಣ ಜಮೆ ಆಗದ ಕಾರಣ ಗೂಗಲ್ ಮಾಡಿ ಸಹಾಯವಾಣಿಗೆ ಕರೆ ಮಾಡಿದ್ದ ನಿವೃತ್ತ ಯೋಧ ಮಹೇಶರಿಗೆ ಖದೀಮರು ಕರೆ ಮಾಡಿ ಹಂತ ಹಂತವಾಗಿ ಹಣ ಎಗರಿಸಿದ್ದಾರೆ.

ಹೆಚ್ಚಾದ ಸೈಬರ್ ಕ್ರೈಂ ಪ್ರಕರಣ; ಬೆಂಗಳೂರಲ್ಲಿ ಆ್ಯಪ್ ಡೌನ್​ಲೋಡ್ ಮಾಡಿಸಿ ನಿವೃತ್ತ ಯೋಧನಿಗೆ 1 ಲಕ್ಷ ಹಣ ವಂಚನೆ
ಸಾಂದರ್ಭಿಕ ಚಿತ್ರ
ರಾಚಪ್ಪಾಜಿ ನಾಯ್ಕ್
| Edited By: |

Updated on: Jul 29, 2023 | 7:01 AM

Share

ಬೆಂಗಳೂರು, ಜುಲೈ 29: ಟೆಕ್ನಾಲಜಿ ಎಷ್ಟು ಸ್ಮಾರ್ಟ್ ಆಗುತ್ತಾ ಹೋಗುತ್ತಿದೆಯೋ ಸೈಬರ್ ಖದೀಮರು ಕೂಡ ಅಷ್ಟೇ ಸ್ಮಾರ್ಟ್ ಆಗುತ್ತಿದ್ದಾರೆ. ನಕಲಿ ಬ್ಯಾಂಕ್ ಐಡಿ ನೀಡಿ 1 ಲಕ್ಷ ಹಣ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖದೀಮನೋರ್ವ ಮೋಸ ಮಾಡಲೆಂದೇ MOSA1122@SBI ಯುಪಿಐ ಐಡಿ ಕ್ರಿಎಟ್ ಮಾಡಿದ್ದಾನೆ. ಫೋನ್ ಮಾಡುವವರಿಗೆ, ಅಕೌಂಟ್ ಚೆಕ್ ಮಾಡಿ ಅಂತಾನೆ. ಬ್ಯಾಂಕ್ ಅಪ್ಲಿಕೇಶನ್ ಓಪನ್ ಮಾಡ್ತಿದ್ದಂತೆ ಹಣ ಮಂಗಮಾಯ ಆಗಿಬಿಡುತ್ತೆ. ಇಂತಹದೊಂದು ವಂಚನೆ ಬೆಂಗಳೂರಿನಲ್ಲಿ ನಡೆದಿದ್ದು ವಂಚನೆಗೊಳಗಾದ ನಿವೃತ್ತ ಯೋಧ ಮಹೇಶ್ ಎಂಬುವವರು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿವೃತ್ತ ಯೋಧ ಮಹೇಶ್ ಅಮೇಜಾನ್​​​ನಲ್ಲಿ ₹5,499 ಮೌಲ್ಯದ ಸ್ಪೀಕರ್ ಬುಕ್​ ಮಾಡಿದ್ದರು. ನಂತರ ಬುಕ್ಕಿಂಗ್ ಕ್ಯಾನ್ಸಲ್ ಆಗಿತ್ತು. ಬುಕ್ಕಿಂಗ್​ ಕ್ಯಾನ್ಸಲ್ ಆಗಿ 3 ದಿನದಲ್ಲಿ ಹಣ ವಾಪಸ್​ ಬರುತ್ತೆಂದು ಮೊಬೈಲ್​ಗೆ ಸಂದೇಶ ಬಂದಿತ್ತು. ಹಣ ಜಮೆ ಆಗದಿದ್ದಕ್ಕೆ ಗೂಗುಲ್​​ನಲ್ಲಿ ಸಹಾಯವಾಣಿ ಹುಡುಕಿ ಮಹೇಶ್ ಕರೆ ಮಾಡಿದ್ದರು. ಬಳಿಕ ಮತ್ತೊಂದು ನಂಬರ್​​ನಿಂದ ವಂಚಕರು ಕರೆ ಮಾಡಿದ್ದಾರೆ. RUSKDESK ಅಪ್ಲಿಕೇಶನ್ ಡೌನ್​​​​ಲೋಡ್ ಮಾಡಲು ಹೇಳಿದ್ದಾರೆ. ಌಪ್​​ ಡೌನ್​​​​ಲೋಡ್ ಮಾಡಿ ಬಟನ್​ ಪ್ರೆಸ್​ ಮಾಡಲು ಹೇಳಿದ್ದಾರೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಕಷ್ಟಕ್ಕೆ ಮರುಗಿದ ರ್ಯಾಪಿಡೋ ಚಾಲಕನಿಗೇ ವಂಚಿಸಿದ ಗ್ರಾಹಕ

ವಂಚಕರ ಜಾಲ ತಿಳಿಯದೆ ಇದನ್ನು ನಂಬಿದ ಮಹೇಶ್ ಖದೀಮರು ಹೇಳಿದನ್ನು ಫಾಲೋ ಮಾಡಿದ್ದಾರೆ. ಆ್ಯಪ್ ಡೌನ್​​​​ಲೋಡ್ ಮಾಡಿ ಓಕೆ ಬಟನ್​ ಪ್ರೆಸ್​ ಮಾಡುತ್ತಿದ್ದಂತೆ ಮಹೇಶ್ ಅವರ ಬ್ಯಾಂಕ್ ಖಾತೆಯಿಂದ 81 ಸಾವಿರ ಹಣ ಕಡಿತಗೊಂಡಿದೆ. ಬಳಿಕ ವಂಚಕರು ಮಾತನಾಡಿ ಫೋನ್ ಇಟ್ಟಿದ್ದಾರೆ. ಬ್ಯಾಂಕ್​ನಿಂದ ಹಣ ಕಟ್ ಆದ ಬಗ್ಗೆ ತಿಳಿದ ಮಹೇಶ್ ಮತ್ತೆ ಕರೆ ಮಾಡಿ ವಿಚಾರಿಸಿದಾಗ ತಪ್ಪಾಗಿ ನಂಬರ್ ಟೈಪ್ ಮಾಡಿದ್ದೀರಿ ಎಂದಿದ್ದಾರೆ. ಹಣ ನಿಮ್ಮ ಖಾತೆಗೆ ಬರುತ್ತೆ ಎಂದು ಪದೇ ಪದೇ ಅಕೌಂಟ್ ಪರೀಕ್ಷಿಸಲು ಹೇಳಿದ್ದಾರೆ. ಹೀಗೆ ಹಂತ ಹಂತವಾಗಿ 1 ಲಕ್ಷ ಹಣವನ್ನು ಅಕೌಂಟ್ ನಿಂದ ಮಾಯ ಮಾಡಲಾಗಿದೆ. ಸದ್ಯ ಮೋಸ ಮಾಡಲೆಂದೇ ಬ್ಯಾಂಕ್​ನ ನಕಲಿ ಯುಪಿಐ ಐಡಿ ನೀಡಿ ವಂಚನೆ ಮಾಡಿರುವ ಬಗ್ಗೆ ಮಹೇಶ್ ಅವರು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್