AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಮೈದಾನದಲ್ಲಿ ಕುಳಿತುಕೊಂಡೆ ಬೆಟ್ಟಿಂಗ್ ದಂಧೆ; ಕೇವಲ 10 ಸೆಕೆಂಡ್ ಅಂತರದಲ್ಲಿ ಸಾವಿರ ಸಾವಿರ ಹಣ, ಇದೀಗ ಪೊಲೀಸ್​ ಬಲೆಗೆ

ಐಪಿಎಲ್ ಶುರುವಾಗುತಿದ್ದಂತೆ ಬೆಟ್ಟಿಂಗ್​ ದಂಧೆ ಬಲು ಜೋರಾಗಿ ನಡೆಯುತ್ತಿದೆ. ಕೇವಲ 10 ಸೆಕೆಂಡ್ ಅಂತರದಲ್ಲಿ ಸಾವಿರ ಸಾವಿರ ಜೇಬಿಗೆ ಹಾಕಿಕೊಳ್ಳುತಿದ್ದ ಖತರ್ನಾಕ್​ ಗ್ಯಾಂಗ್​ನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.

Bengaluru: ಮೈದಾನದಲ್ಲಿ ಕುಳಿತುಕೊಂಡೆ ಬೆಟ್ಟಿಂಗ್ ದಂಧೆ; ಕೇವಲ 10 ಸೆಕೆಂಡ್ ಅಂತರದಲ್ಲಿ ಸಾವಿರ ಸಾವಿರ ಹಣ, ಇದೀಗ ಪೊಲೀಸ್​ ಬಲೆಗೆ
ಸಾಂದರ್ಭಿಕ ಚಿತ್ರ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 14, 2023 | 11:20 AM

ಬೆಂಗಳೂರು: ಐಪಿಎಲ್(IPL) ಶುರುವಾಗುತಿದ್ದಂತೆ ಬೆಟ್ಟಿಂಗ್​ ದಂಧೆ ಬಲು ಜೋರಾಗಿ ನಡೆಯುತ್ತಿದೆ. ಕೇವಲ 10 ಸೆಕೆಂಡ್ ಅಂತರದಲ್ಲಿ ಸಾವಿರ ಸಾವಿರ ಜೇಬಿಗೆ ಹಾಕಿಕೊಳ್ಳುತಿದ್ದ ಖತರ್ನಾಕ್​ ಗ್ಯಾಂಗ್​ನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ. ಹೌದು ದೇಶದಲ್ಲಿ ಎಲ್ಲಿಯೇ ಮ್ಯಾಚ್ ನಡೆದರೂ ಅಲ್ಲಿಗೆ ಎಂಟ್ರಿ ಕೊಟ್ಟು, ಮೈದಾನದಲ್ಲಿ ಕುಳಿತುಕೊಂಡೆ ಬೆಟ್ಟಿಂಗ್ ದಂಧೆ ನಡೆಸಿ, ಮ್ಯಾಚ್ ಶುರುವಾಗಿ ಮುಗಿಯೋ ವೇಳೆಗೆ ಕೋಟಿ ಸಂಪಾದಿಸುತಿದ್ದ ಹರಿಯಾಣ ಮೂಲದ ಮೂವರು ಕಬ್ಬನ್ ಪಾರ್ಕ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಗ್ರೌಂಡ್​ನ ಲೈವ್ ಮ್ಯಾಚ್​ಗೂ ಟಿವಿಯ ಲೈವ್ ಮ್ಯಾಚ್​ಗೂ 10 ಸೆಕೆಂಡ್​ ಅಂತರ; ಇದೇ ಈ ಗ್ಯಾಂಗ್​ನ ಬೆಟ್ಟಿಂಗ್​ ಅಸ್ತ್ರ

ಈ ಬೆಟ್ಟಿಂಗ್​ ಗ್ಯಾಂಗ್​ ಬಂಧಿತರನ್ನ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಶಾಕಿಂಗ್​ ಮಾಹಿತಿ ಗೊತ್ತಾಗಿದೆ. ದೇಶದ ವಿವಿಧ ಕಡೆ ತಮ್ಮ ಸದಸ್ಯರನ್ನ ಹೊಂದಿರುವ ಇವರು, ಐಪಿಎಲ್ ಮ್ಯಾಚ್ ಸಂದರ್ಭದಲ್ಲಿ ಇವರ ಸಹಚರರು ಮೈದಾನಕ್ಕೆ ಹೋಗಿ, ಪ್ರತಿ ಬಾಲ್ ಕುರಿತು ಮೆಸೇಜ್ ಮೂಲಕ ತಮ್ಮ ಗ್ಯಾಂಗ್​ನ ಇತರರಿಗೆ ಮಾಹಿತಿ ನೀಡುತ್ತಾರೆ. ಬಳಿಕ ಅವರ ಮಾಹಿತಿ ಆಧರಿಸಿ ಟಿವಿ ನೋಡಿಕೊಂಡು ಬೆಟ್ಟಿಂಗ್ ಆಡುತ್ತಿರುವವರನ್ನ ಸಂಪರ್ಕಿಸಿ ಬೆಟ್ಟಿಂಗ್​ ಮಾಡುತ್ತಾರೆ. ಅದರಲ್ಲಿ ಎನಿದೆ? ಅಂತ ನೀವು ಕೇಳಬಹುದು ಅಲ್ಲಿಯೇ ಇರುವುದು ಟ್ವಿಸ್ಟ್​, ಹೌದು ಗ್ರೌಂಡ್​ನ ಲೈವ್ ಮ್ಯಾಚ್​ಗೂ ಟಿವಿಯ ಲೈವ್ ಮ್ಯಾಚ್​ಗೂ 10 ಸೆಕೆಂಡ್​ ಅಂತರವಿದೆ. ಇದನ್ನೇ ಬಳಸಿಕೊಂಡಿರುವ ಈ ಗ್ಯಾಂಗ್​ ಹಲವು ಕಡೆ ವಂಚನೆ ಮಾಡುತ್ತಿದ್ದರು.

ಇದನ್ನೂ ಓದಿ:Bangalore: ಬೆಟ್ಟಿಂಗ್​ ಅಡ್ಡೆ ಮೇಲೆ ಪೊಲೀಸ್ ದಾಳಿ; ಸೂಕ್ತ ತನಿಖೆ ನಡೆಸದ ಪಿಎಸ್​ಐ ಸೇರಿ ಐವರು ಅಮಾನತು

ಹೌದು ಈ ಅಂತರವನ್ನೇ ಎನ್ಕ್ಯಾಶ್ ಮಾಡಿಕೊಂಡು ದೇಶದ ಹಲವು ಕಡೆಗಳಲ್ಲಿ ಬೆಟ್ಟಿಂಗ್ ಕಳ್ಳಾಟ ತಿಳಿಯದೇ ಹಣ ಹೂಡಿದ ಜನರಿಗೆ ನಾಮ ಹಾಕುತಿದ್ದರು. ಸದ್ಯ ಗ್ಯಾಂಗ್​ನ ಮೂವರು ಸದಸ್ಯರನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಪ್ರಕರಣದ ಕುರಿತು ಮತ್ತಷ್ಟು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಬೆಟ್ಟಿಂಗ್ ಕಳ್ಳಾಟಕ್ಕೆ ದೆಹಲಿ ಲಿಂಕ್ ಇದ್ದು, ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್