AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮಹಿಳಾ ಸಹೋದ್ಯೋಗಿಯ ವೈಯಕ್ತಿಕ ಡೇಟಾ ಕದ್ದು 2 ಲಕ್ಷ ರೂ. ಸಾಲ ಪಡೆದ ಭೂಪ

ಮಹಿಳಾ ಸಹೋದ್ಯೋಗಿಯೊಬ್ಬರ ವೈಯಕ್ತಿಕ ಡೇಟಾವನ್ನು ಕದ್ದು, ಬ್ಯಾಂಕ್‌ನಿಂದ ಅವರ ಹೆಸರಿನಲ್ಲಿ 2 ಲಕ್ಷ ರೂ. ವೈಯಕ್ತಿಕ ಸಾಲ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು: ಮಹಿಳಾ ಸಹೋದ್ಯೋಗಿಯ ವೈಯಕ್ತಿಕ ಡೇಟಾ ಕದ್ದು 2 ಲಕ್ಷ ರೂ. ಸಾಲ ಪಡೆದ ಭೂಪ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Sep 15, 2023 | 9:26 AM

Share

ಬೆಂಗಳೂರು: ನಗರದ ಬಿಸಿನೆಸ್ ಪ್ರೊಸೆಸಿಂಗ್ ಔಟ್‌ಸೋರ್ಸಿಂಗ್ (BPO) ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬ, ಮಹಿಳಾ ಸಹೋದ್ಯೋಗಿಯೊಬ್ಬರ (Employee) ವೈಯಕ್ತಿಕ ಡೇಟಾವನ್ನು ಕದ್ದು, ಅವರ ಹೆಸರಿನಲ್ಲಿ ಬ್ಯಾಂಕ್‌ನಿಂದ (Bank) 2 ಲಕ್ಷ ರೂ. ವೈಯಕ್ತಿಕ ಸಾಲ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿ ಲೋಕೇಶ್ವರ್ ಸುಗುಮಾರನ್‌ಗಾಗಿ ಬಲೆ ಬೀಸಿದ್ದಾರೆ.

ಉದ್ಯೋಗಿಗಳು ಕಂಪನಿ ಒಳಗೆ ಹೋಗುವ ಮುನ್ನ, ಅವರ ಮೊಬೈಲ್​ ಫೋನ್​ಗಳನ್ನು ಲೋಕೇಶ್ವರ್ ಸುಗುಮಾರನ್‌ ಅವರಿಗೆ ನೀಡಬೇಕಿತ್ತು. ಲೋಕೇಶ್ವರ್ ಸುಗುಮಾರನ್‌ ಈ ಮೊಬೈಲ್​ಗಳನ್ನು ಸೇಫ್ಟಿ ಲಾಕರ್​​ನಲ್ಲಿ ಇಡುವುದು ದಿನನಿತ್ಯದ ಕೆಲಸವಾಗಿದೆ.

ಕಳೆದ ವರ್ಷ 2022ರಲ್ಲಿ ಒಂದು ದಿನ ಆರೋಪಿ ಲೋಕೇಶ್ವರ್ ಸುಗುಮಾರನ್‌, ಮಹಿಳಾ ಸಹೋದ್ಯೋಗಿ ಫೋನ್ ಅನ್​​ಲಾಕ್​ ಮಾಡುವ ಮಾದರಿಯನ್ನು ಗಮನಿಸಿದ್ದಾನೆ. ನಂತರ ಯಥಾಪ್ರಕಾರ ಮಹಿಳಾ ಉದ್ಯೋಗಿ ಈತನ ಕೈಯಲ್ಲಿ ಮೊಬೈಲ್​​ ಕೊಟ್ಟು ಕಂಪನಿ ಒಳಗಡೆ ಹೋಗಿದ್ದಾರೆ. ಈ ವೇಳೆ ಲೋಕೇಶ್ವರ್ ಸುಗುಮಾರನ್‌ ಇವರ ಮೊಬೈಲ್​ ಅನ್​ಲಾಕ್​​ ಮಾಡಿ ಅವರ ಆಧಾರ್ ಮತ್ತು ಪ್ಯಾನ್ ಮಾಹಿತಿಯನ್ನು ತಿಳಿದುಕೊಂಡಿದ್ದಾನೆ.

ಇದನ್ನೂ ಓದಿ: ಪ್ರೇಮಿಗಳ ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್​ ಮೇಲ್, ರೂಮ್ ಕೊಟ್ಟು ಬಲೆ ಬೀಸಿದ್ದ ಹೋಟೆಲ್​ ಒಡತಿ ಅಂದರ್

ಕದ್ದ ಮಾಹಿತಿಯಿಂದ ಲೋಕೇಶ್ವರ್ ಸುಗುಮಾರನ್‌ ಮಹಿಳಾ ಉದ್ಯೋಗಿಯ ಹೆಸರಿನಲ್ಲಿ ಬ್ಯಾಂಕ್​ ಖಾತೆ ತೆರೆದಿದ್ದಾನೆ. ಬಳಿಕ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ ಬ್ಯಾಂಕ್ ಕೂಡ ಸಂಪೂರ್ಣ ಪರಿಶೀಲನೆ ನಡೆಸದೆ 2 ಲಕ್ಷ ರೂ. ಸಾಲವನ್ನು ಮಂಜೂರು ಮಾಡಿದೆ. ಈ ಹಣ ಮಹಿಳೆಯ ಹೆಸರಿನಲ್ಲಿ ಲೋಕೇಶ್ವರ್ ಸುಗುಮಾರನ್‌ ತೆರೆದಿದ್ದ ಬ್ಯಾಂಕ್ ಖಾತೆಗೆ ಜಮಾ ಆಗಿದೆ.

ಸಾಲದ ಮಾಸಿಕ ಕಂತು ತುಂಬುವಂತೆ ಮಹಿಳಾ ಉದ್ಯೋಗಿಗೆ ಬ್ಯಾಂಕ್​ನವರು ​ಮೆಸೆಜ್​ ಮತ್ತು ಕರೆಗಳನ್ನು ಮಾಡಲು ಆರಂಭಿಸಿದ್ದಾರೆ. ಆದರೆ ಇದರ ಕಡೆ ಮಹಿಳಾ ಉದ್ಯೋಗಿ ಗಮನ ಕೊಡದೆ ಸುಮಾರು ಒಂದು ವರ್ಷದವರೆಗೆ ನಿರ್ಲಕ್ಷ್ಯವಹಿಸಿದ್ದಾರೆ. ಒಂದು ದಿನ ಮಹಿಳಾ ಉದ್ಯೋಗಿ ಈ ಬಗ್ಗೆ ಕಚೇರಿಯಲ್ಲಿ ವಿಷಯ ಪ್ರಸ್ತಾಪಿಸಿದಾಗ, ಸುಗುಮಾರನ್ ತನ್ನ ತಪ್ಪನ್ನು ಒಪ್ಪಿಕೊಂಡು ಮತ್ತು ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವುದಾಗಿ ಭರವಸೆ ನೀಡಿದನು. ಆದರೆ ಕಂತು ತುಂಬದೆ ಆರೋಪಿ ಎಸ್ಕೆಪ್​ ಆಗಿದ್ದಾನೆ.

ಇನ್ನು ಕಂತು ತುಂಬುವಂತೆ ಮಹಿಳಾ ಉದ್ಯೋಗಿ ಸುಗುಮಾರನ್​​ಗೆ ಎಷ್ಟೇ ಕರೆ ಮಾಡಿದರೂ ಆರೋಪಿ ಸ್ವೀಕರಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:26 am, Fri, 15 September 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!