AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ವಿಚಿತ್ರ ಮಂಕಿ ಕ್ಯಾಪ್ ಕಳ್ಳರು; ಮೆಡಿಕಲ್ ಸ್ಟೋರ್​ಗಳೇ ಇವರ ಟಾರ್ಗೆಟ್

ಈ ಖತರ್ನಾಕ್​ ಕಳ್ಳರು, ಔಷಧಿ ಖರೀದಿ ನೆಪದಲ್ಲಿ ಬರುತ್ತಾರೆ. ಮೊದಲಿಗೆ ಕಡಿಮೆ ಪ್ರಮಾಣದ ವಸ್ತುವೊಂದನ್ನು ಕೊಂಡುಕೊಳ್ಳುತ್ತಾರೆ. ಖರೀದಿ ನೆಪದಲ್ಲಿ ಬಂದ ಇವರು ಫಾರ್ಮಸಿಯಲ್ಲಿ ಎಷ್ಟು ಜನ ಇದ್ದಾರೆ ಎನ್ನುವುದನ್ನು ಗಮನಿಸುತ್ತಾರೆ. ಬಳಿಕ ಏಕಾಎಕಿ ಬಂದು ದರೋಡೆ ಮಾಡುವ ಖದೀಮರು, ಕೊತ್ತನೂರು, ಹೆಚ್​ಎಸ್​ಆರ್ ಲೇಔಟ್, ಮಾರತ್ತಹಳ್ಳಿ ಅಪೊಲೋ ಫಾರ್ಮಸಿಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.

ಬೆಂಗಳೂರಿನಲ್ಲಿ ವಿಚಿತ್ರ ಮಂಕಿ ಕ್ಯಾಪ್ ಕಳ್ಳರು; ಮೆಡಿಕಲ್ ಸ್ಟೋರ್​ಗಳೇ ಇವರ ಟಾರ್ಗೆಟ್
ಬೆಂಗಳೂರಿನಲ್ಲಿ ಮಂಕಿ ಕ್ಯಾಪ್​ ಕಳ್ಳರು
Jagadisha B
| Edited By: |

Updated on: Sep 06, 2023 | 3:25 PM

Share

ಬೆಂಗಳೂರು, ಸೆ.06: ಮಹಾನಗರದಲ್ಲಿ ಕಳ್ಳತನ ಹೆಚ್ಚಾಗಿದ್ದು, ಪೊಲೀಸರು ಖದೀಮರಿಗೆ ಬ್ರೇಕ್ ಹಾಕಲು ಹರಸಾಹಸ ಪಡುತ್ತಿದ್ದಾರೆ. ಅದರಂತೆ ಇದೀಗ ಅಪೋಲೋ ಫಾರ್ಮಸಿಗಳನ್ನೆ ರಾಬರಿಕೋರರು ಟಾರ್ಗೇಟ್ ಮಾಡುತ್ತಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಮೂರು ಕಡೆ ಅಪೋಲೋ ಫಾರ್ಮಸಿಗಳಲ್ಲಿ ಕಳ್ಳತನ ನಡೆದಿದೆ. ಕೊತ್ತನೂರು, ಹೆಚ್​ಎಸ್​ಆರ್ ಲೇಔಟ್, ಮಾರತ್ತಹಳ್ಳಿ ಅಪೊಲೋ ಫಾರ್ಮಸಿಗಳಲ್ಲಿ ಖದೀಮರು ಕೈಚಳಕ ತೋರಿಸಿದ್ದಾರೆ.

ಖದೀಮರು ಮಾಡಿದ ಪ್ಲ್ಯಾನ್​ ಹೀಗಿದೆ

ಈ ಖತರ್ನಾಕ್​ ಕಳ್ಳರು, ಔಷಧಿ ಖರೀದಿ ನೆಪದಲ್ಲಿ ಬರುತ್ತಾರೆ. ಮೊದಲಿಗೆ ಕಡಿಮೆ ಪ್ರಮಾಣದ ವಸ್ತುವೊಂದನ್ನು ಕೊಂಡುಕೊಳ್ಳುತ್ತಾರೆ. ಖರೀದಿ ನೆಪದಲ್ಲಿ ಬಂದ ಇವರು ಫಾರ್ಮಸಿಯಲ್ಲಿ ಎಷ್ಟು ಜನ ಇದ್ದಾರೆ ಎನ್ನುವುದನ್ನು ಗಮನಿಸುತ್ತಾರೆ. ಒಬ್ಬರೇ ಇದ್ದಲ್ಲಿ ಹತ್ತು ನಿಮಿಷದಲ್ಲಿ ಮತ್ತೆ ವಾಪಸ್ ಬರುವ ಕಳ್ಳರು, ಮೊದಲು ಖರೀದಿ ಮಾಡಿದ ವಸ್ತು ಬೇಡವೆಂದು ಹಣ ವಾಪಸ್ ಕೇಳುತ್ತಾರೆ. ಬಳಿಕ ಗಲ್ಲಾಪೆಟ್ಟಿಗೆ ಓಪನ್ ಮಾಡ್ತಿದ್ದಂತೆ ಚಾಕು ತೋರಿಸಿ ರಾಬರಿಗೆ ಇಳಿಯುವ ಖರ್ತನಾಕ್ ಕಳ್ಳರ ಮೇಲೆ ಇದೀಗ ಮಾರತ್ತಹಳ್ಳಿ, HSR ಲೇಔಟ್, ಕೊತ್ತನೂರು ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

ಇದನ್ನೂ ಓದಿ:ಪೊಲೀಸರೆಂದು ಹೇಳಿ ಮನೆಗೆ ನುಗ್ಗಿದ ಖದೀಮರು; ಚಾಕು ತೋರಿಸಿ ಕೈಯಲ್ಲಿದ್ದ ಉಂಗುರ, ಇತರೆ ವಸ್ತುಗಳನ್ನು ದೋಚಿದ ಕಳ್ಳರು

ಮಾರತ್ತಹಳ್ಳಿ ಬಳಿ ಫಾರ್ಮಸಿ ಸಿಬ್ಬಂದಿಗೆ ‍‍ಚಾಕು ಇರಿದು ಹಣ ಕಸಿದಿರೋ ರಾಬರಿಕೋರರು

ಮೆಡಿಕಲ್ ಸ್ಟೋರ್​ಗಳಿಗೆ ಟಾರ್ಗೆಟ್ ಇವರು ಮಂಕಿ ಕ್ಯಾಪ್ ಹಾಕಿಕೊಂಡು ಮೆಡಿಕಲ್ ಸಿಬ್ಬಂದಿ ಒಳಗಿದ್ದಾಗಲೇ ಶೆಟರ್ ಮುರಿದು ಒಳಗೆ ಎಂಟ್ರಿ ಕೊಟ್ಟು, ಒಬ್ಬ ರೋಡ್​ನಲ್ಲಿ ಅಬ್ಸರ್ವ್ ಮಾಡುತ್ತಾನೆ. ಮತ್ತೊಬ್ಬ ಶೆಟರ್ ಮುರಿದು, ದರೋಡೆ ಮಾಡುತ್ತಾರೆ. ಇದಕ್ಕೆ ನಿರಾಕರಿಸಿದ ಹಿನ್ನಲೆ ಮಾರತ್ತಹಳ್ಳಿ ಬಳಿ ಫಾರ್ಮಸಿ ಸಿಬ್ಬಂದಿಗೆ ‍‍ಚಾಕು ಇರಿದು ರಾಬರಿಕೋರರು ಹಣ ಕಸಿದು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ. ಆರೋಪಿಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ