AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಕ್ಕಿಗಳಿಂದಲೇ ಟೆಕ್ಕಿ ಕಿಡ್ನ್ಯಾಪ್! ಆರೋಪಿಗಳಿಗೆ ಹಣ ನೀಡಿ ಬಂಧಿಸಿದ ಬೆಂಗಳೂರು ಪೊಲೀಸರು

ಹಣದ ವಿಚಾರಕ್ಕೆ ವಿನೀತ್ ವರ್ಧನ್ ಕಿಡ್ನ್ಯಾಪ್ ಆಗಿತ್ತು. ಎಡ್ವಿನ್ ಪ್ರಶಾಂತ್ ಮತ್ತು ಆತನ ಟೀಮ್ ವಿನೀತ್​ನ ಕಿಡ್ನ್ಯಾಪ್ ಮಾಡಿದ್ದರು. ಕಿಡ್ನ್ಯಾಪರ್ಸ್ 50 ಕಿಲೋಮೀಟರ್ ಕ್ರಮಿಸಿ ಫೋನ್ ಕರೆ ಮಾಡಿದ್ದರು.

ಟೆಕ್ಕಿಗಳಿಂದಲೇ ಟೆಕ್ಕಿ ಕಿಡ್ನ್ಯಾಪ್! ಆರೋಪಿಗಳಿಗೆ ಹಣ ನೀಡಿ ಬಂಧಿಸಿದ ಬೆಂಗಳೂರು ಪೊಲೀಸರು
ಕಿಡ್ನ್ಯಾಪ್ ಆಗಿದ್ದ ವಿನೀತ್ ವರ್ಧನ್
TV9 Web
| Updated By: sandhya thejappa|

Updated on:Sep 23, 2021 | 12:28 PM

Share

ಬೆಂಗಳೂರು: ಹಣದ ಆಸೆಯಿಂದ ಟೆಕ್ಕಿಗಳು ಇನ್ನೊರ್ವ ಟೆಕ್ಕಿಯನ್ನು ಕಿಡ್ನ್ಯಾಪ್ (Kidnap) ಮಾಡಿದ್ದು, ಕಿಡ್ನ್ಯಾಪ್ ಆಗಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಕಿಡ್ನ್ಯಾಪ್ ಆಗಿದ್ದ ಟೆಕ್ಕಿ ವಿನೀತ್ ವರ್ಧನ್ ಎಂಬುವವರನ್ನು ರಕ್ಷಣೆ ಮಾಡಲಾಗಿದೆ. ಚೆನ್ನೈನಲ್ಲಿ ಬೆಂಗಳೂರು ಪೊಲೀಸರು ವಿನೀತ್​ನ ರಕ್ಷಣೆ ಮಾಡಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಕೋರಮಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹಣದ ವಿಚಾರಕ್ಕೆ ವಿನೀತ್ ವರ್ಧನ್​ನ ಕಿಡ್ನ್ಯಾಪ್ ಆಗಿತ್ತು. ಎಡ್ವಿನ್ ಪ್ರಶಾಂತ್ ಮತ್ತು ಆತನ ಟೀಮ್ ವಿನೀತ್​ನ ಕಿಡ್ನ್ಯಾಪ್ ಮಾಡಿದ್ದರು. ಕಿಡ್ನ್ಯಾಪರ್ಸ್ 50 ಕಿಲೋಮೀಟರ್ ಕ್ರಮಿಸಿ ಫೋನ್ ಕರೆ ಮಾಡಿದ್ದರು. ಫೋನ್ ಕರೆ ಮಾಡಿದ ಬಳಿಕ ಸ್ವಿಚ್ ಆಫ್ ಮಾಡುತ್ತಿದ್ದರು. ಫಾಸ್ಟ್​ಟ್ಯಾಗ್​ ಮೂಲಕ ಕಿಡ್ನ್ಯಾಪರ್ಸ್ ಸುಳಿವು ಪತ್ತೆಯಾಗಿತ್ತು. ಕೋರಮಂಗಲ ಪೊಲೀಸರು ಕಾರ್ಯಚರಣೆ ನಡೆಸಿ ಎಡ್ವಿನ್ ಪ್ರಶಾಂತ್, ಸಂತೋಷ್, ಅರಿವೇಗಲನ್ ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಆರೋಪಿಗಳಿಗೆ ಹಣ ವರ್ಗಾವಣೆ ಕೃತ್ಯಕ್ಕೆ ಬಳಸಿದ್ದ ಕಾರ್ ಮಾಲೀಕನಿಂದ ಮಾಹಿತಿ ಕಲೆ ಹಾಕಲಾಗಿತ್ತು. ಕಿಡ್ನಾಪ್ ಬಳಿಕ ಕಾರು ಚೆನ್ನೈಗೆ ಹೊಗಿರುವುದು ದೃಢವಾಗಿತ್ತು. ಟೋಲ್​ನಲ್ಲಿ ಫಾಸ್ಟ್​ಟ್ಯಾಗ್​ ಆಪರೇಟ್ ಆದಾಗ, ಆ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಬಳಿಕ, ಸಂತ್ರಸ್ತ ವಿನೀತ್ ಕಡೆಯವರ ಮೂಲಕ ಪೊಲೀಸರಿಂದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಲಾಯಿತು. ಹಣ ಜಮೆಯಾದ ಬಳಿಕ ಆರೋಪಿಗಳು ಕಾರ್ಡ್ ಸ್ವೈಪ್ ಮಾಡುತ್ತಿದ್ದರು. ಆಗ ಪೊಲೀಸರು ಕಾರ್ಡ್ ಸ್ವೈಪ್ ಆದ ಜಾಗದ ಮಾಹಿತಿಯನ್ನು ಪಡೆದರು.

ಜೊತೆಗೆ ಆರೋಪಿಗಳು ಪ್ರತಿ 5 ಗಂಟೆಗಳಿಗೊಮ್ಮೆ 50 ಕಿಲೋಮೀಟರ್ ವ್ಯಾಪ್ತಿಯಿಂದ ಫೋನ್ ಮಾಡುತ್ತಿದ್ದರು. ಬಳಿಕ ಫೋನ್ ಸ್ವಿಚ್ ಆಫ್ ಮಾಡುತ್ತಿದ್ದರು. ಹೀಗೆ ಪ್ರತಿ ಬಾರೀ ಯಾವ ಕಡೆಗಳಿಂದ ಕರೆ ಬರುತ್ತಿದೆ ಎಂದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದರು. ಹೊಟೆಲ್​ನಲ್ಲಿ ಇದ್ದುಕೊಂಡು ಕರೆ ಮಾಡಲು 50 ಕಿಲೋಮೀಟರ್ ದೂರ ಹೋಗುತ್ತಿರುವುದು ಬೆಳಕಿಗೆ ಬಂತು.

ಆಗಸ್ಟ್ 25ಕ್ಕೆ 5 ಕೋಟಿ ಹಣ ವಿನೀತ್ ಕೈ ಸೇರಬೇಕಿತ್ತು. ಈ ವಿಷಯ ತಿಳಿದ ಆರೋಪಿಗಳು ವಿನೀತ್ ಕಿಡ್ನ್ಯಾಪ್​ಗೆ ಸ್ಕೆಚ್ ಹಾಕಿದ್ದರು. ಪಾರ್ಟಿ ಮಾಡುವ ನೆಪದಲ್ಲಿ ವಿನೀತ್​ನ ಕಿಡ್ನಾಪ್ ಮಾಡಿದ್ದಾರೆ. ಬೆಂಗಳೂರಿನಿಂದ ನೇರವಾಗಿ ತಮಿಳುನಾಡಿಗೆ ಶಿಫ್ಟ್ ಮಾಡಿದ್ದಾರೆ. ಆಗಸ್ಟ್ 25ರೊಳಗೆ ವಿನಿತ್​ಗೆ ಹಣ ಬರತ್ತೆ. ಅಲ್ಲಿಯವರಗೆ ವಿನೀತ್​ನ ಇಟ್ಟುಕೊಳ್ಳುಣ ಅಂತ ಆರೋಪಿಗಳು ಯೋಚಿಸಿದ್ದರು.

ಠಾಣೆಯಲ್ಲಿ ಇರುವಾಗಲೇ ಬೆದರಿಕೆ ಕರೆ ಪಾರ್ಟಿ ಮಾಡೋಣ ಅಂತ ಹೇಳಿ, ಎಣ್ಣೆ ಸಮೇತ ವಿನೀತ್ ಮನೆ ಬಳಿ ಆರೋಪಿಗಳು ಬಂದಿದ್ದರು. ನಂತರ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಎಲೆಕ್ಟ್ರಾನಿಕ್ ಸಿಟಿ ಟೋಲ್ ದಾಟಿದಾಗ ಅನುಮಾನಗೊಂಡ ವಿನೀತ್ ವರ್ಧನ್, ಎಲ್ಲಿಗೆ ಹೋಗುತ್ತಿರುವುದು ಅಂತ ಕೇಳಿದಾಗ ಬಾಯಿಗೆ ಬಟ್ಟೆ ಸುತ್ತಿದ್ದಾರೆ. ಎರಡು ದಿನವಾದರೂ ವಿನೀತ್ ಮನೆಗೆ ಬರದಿದ್ದಾಗ ಕುಟುಂಬಸ್ಥರು ಕೋರಮಂಗಲ ಠಾಣೆಗೆ ದೂರು ನೀಡಿದರು. ಕುಟುಂಬಸ್ಥರು ಠಾಣೆಯಲ್ಲಿ ಇರುವಾಗಲೇ 2 ಕೋಟಿ ಕೊಟ್ಟರೆ ಬಿಡುತ್ತೇವೆ ಎಂದು ಆರೋಪಿಗಳು ಬೆದರಿಕೆ ಕರೆ ಹಾಕಿದ್ದರು.

ಆರೋಪಿಗಳು ಕುಟುಂಬಸ್ಥರಿಗೆ ವಾಟ್ಸಾಪ್ ಕಾಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಎರಡು ದಿನಕ್ಕೆ ಒಂದೊಂದು ಕಾಲ್ ಮಾಡಿ ಹಣ ನೀಡುವಂತೆ ಹೇಳಿದ್ದರು. ದೂರು ದಾಖಲಾಗಿರುವ ವಿಚಾರ ಆರೋಪಿಗಳಿಗೆ ತಿಳಿಯುತ್ತಿದ್ದಂತೆ ವಿನೀತ್​ನ ಕೊಲೆ ಮಾಡಿ, ನಾವು ಸಾಯುತ್ತೇವೆ ಅಂದಿದ್ದರು. ಎರಡು ದಿನದಲ್ಲಿ ಹಣ ಕೊಡಲಿಲ್ಲ ಅಂದರೆ ನಾವು ಸಾಯುತ್ತೀವಿ, ಅವನನ್ನು ಸಾಯಿಸುತ್ತೇವೆ ಅಂತ ಹೇಳಿದ್ದರು. ತಕ್ಷಣವೇ ಪೊಲೀಸರ ಎರಡು ತಂಡಗಳು ತಮಿಳುನಾಡಿನತ್ತ ಪ್ರಯಾಣ ಬೇಳೆಸಿತು.

ಮರುದಿನ ಕಾಲ್ ಮಾಡುವಷ್ಟರಲ್ಲಿ ಪೊಲೀಸರ ತಂಡ ಹೋಟೆಲ್​ನ ಸುತ್ತವರಿದಿತ್ತು. ಸಿನಿಮೀಯ ಶೈಲಿಯಲ್ಲಿ ಪೊಲೀಸರು ಆರೋಪಿಗಳನ್ನ ಬಂಧಿಸಿದರು. ಆರೋಪಿಗಳಿಗೆ ತಮಿಳುನಾಡಿನಲ್ಲಿ ಸಹಾಯ ಮಾಡಿದ್ದವರಿಗಾಗಿ ಹುಡುಕಾಟ ಮಡೆಯುತ್ತಿದೆ. ಟೋಲ್ ಪಾಸ್ ಆಗುವ, ಕಿಡ್ನಾಪರ್ಸ್ ಟೆಕ್ಕಿ ಇರುವ ಜಾಗಕ್ಕೆ ಬರುವ ಎಲ್ಲಾ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ

ಭಾರಿ ಮುಖಭಂಗ ತಪ್ಪಿಸಿಕೊಂಡ ಮೈಸೂರು ವಿಶ್ವವಿದ್ಯಾಲಯ: ನ್ಯಾಕ್ ಪರೀಕ್ಷೆಯಲ್ಲಿ ಜಸ್ಟ್ ಪಾಸ್, ಕಾರಣ ಏನು?

ಸರ್ಕಾರಿ ಉರ್ದು ಶಾಲೆ ಪ್ರಾರ್ಥನಾ ಮಂದಿರವಾಗಿ ಬದಲಾವಣೆ; ಧಾರ್ಮಿಕ ಮುಖಂಡರ ಅತಿಕ್ರಮಣಕ್ಕೆ ಸಾಥ್ ಕೊಟ್ತಾ ಗ್ರಾಮ ಪಂಚಾಯಿತಿ?

(Tekkis kidnap another Tekki in Bengaluru Police have protected the man in cinematic style)

Published On - 11:57 am, Thu, 23 September 21

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್