AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಕಿಂಗ್​ಗಾಗಿ ಸರ್ಕಾರ, ಮಹಾನಗರ ಪಾಲಿಕೆ ಸರಿಯಾದ ಯೋಜನೆ ರೂಪಿಸಿಲ್ಲ:ಟ್ರಾಫಿಕ್​ ಸ್ಪೆಷಲ್ ಕಮಿಷನರ್​ಗೆ ಟೆಕ್ಕಿ ಪತ್ರ

ಜೆಪಿನಗರ ನಿವಾಸಿ ಸಾಪ್ಟ್​ವೇರ್ ಇಂಜಿನಿಯರ್ ಧನಂಜಯ ಪದ್ಮನಾಭಚಾರ್ ಎಂಬುವರು ಬೆಂಗಳೂರಿನಲ್ಲಿನ ಪಾರ್ಕಿಂಗ್ ಅವ್ಯವಸ್ಥೆ ಕುರಿತು ಬೆಂಗಳೂರು ಸಂಚಾರಿ ವಿಶೇಷ ಆಯುಕ್ತ ಎಂ.ಎ.ಸಲೀಂ ಅವರಿಗೆ ಪತ್ರ ಬರೆದಿದ್ದಾರೆ

ಪಾರ್ಕಿಂಗ್​ಗಾಗಿ ಸರ್ಕಾರ, ಮಹಾನಗರ ಪಾಲಿಕೆ ಸರಿಯಾದ ಯೋಜನೆ ರೂಪಿಸಿಲ್ಲ:ಟ್ರಾಫಿಕ್​ ಸ್ಪೆಷಲ್ ಕಮಿಷನರ್​ಗೆ ಟೆಕ್ಕಿ ಪತ್ರ
ಟಿಕ್ಕಿ ಬರೆದಿರುವ ಪತ್ರ, ಸಂಚಾರಿ ವಿಶೇಷ ಆಯುಕ್ತ ಎಂ ಎ ಸಲೀಂ
Follow us
TV9 Web
| Updated By: ವಿವೇಕ ಬಿರಾದಾರ

Updated on: Jan 14, 2023 | 11:07 AM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿನ ಪಾರ್ಕಿಂಗ್ (Bengaluru Parking) ಅವ್ಯವಸ್ಥೆ ಕುರಿತು ಟೆಕ್ಕಿ (Tekky) ಧನಂಜಯ ಪದ್ಮನಾಭಚಾರ್ ಎಂಬುವರು ಬೆಂಗಳೂರು ಸಂಚಾರಿ ವಿಶೇಷ ಆಯುಕ್ತ ಎಂ.ಎ.ಸಲೀಂ (Bengaluru Traffic Special officer ma Saleem) ಅವರಿಗೆ ಪತ್ರ ಬರೆದಿದ್ದಾರೆ.

ಜೆಪಿನಗರ ನಿವಾಸಿ ಸಾಪ್ಟ್​ವೇರ್ ಇಂಜಿನಿಯರ್ ಆದ ಧನಂಜಯ ಪದ್ಮನಾಭಚಾರ್ ಪತ್ರದಲ್ಲಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪಾರ್ಕಿಂಗ್​ಗಾಗಿ ಸರ್ಕಾರ ಮತ್ತು ಮಹಾನಗರ ಪಾಲಿಕೆ ಸರಿಯಾದ ಯೋಜನೆ ರೂಪಿಸಿಲ್ಲ. ವಾಣಿಜ್ಯ ಮತ್ತು ವಸತಿ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಪ್ರತ್ಯೇಕವಾಗಿಲ್ಲ. ಶಾಪಿಂಗ್ ಹೋಗುವ ಗ್ರಾಹಕರು ತಮ್ಮ ವಾಹನವನ್ನು ಅಂಗಡಿ ಮುಂದೆ ನಿಲ್ಲಿಸುತ್ತಾರೆ. ಸರ್ಕಾರ ಮತ್ತು ಪಾಲಿಕೆ ಮಾಡುವ ತಪ್ಪಿಗೆ ನಾಗರಿಕರು ಯಾಕೆ ಶಿಕ್ಷೆ ಅನುಭವಿಸಬೇಕು? ಬಿಬಿಎಂಪಿ ಬೈಲಾ ಪ್ರಕಾರ ವಾಣಿಜ್ಯ ಕಟ್ಟಡ ಮತ್ತು ಅಂಗಡಿ ಮುಂದೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.

ಇದನ್ನೂ ಓದಿ: ಕರ್ನಾಟಕಕ್ಕೆ ಸ್ಯಾಂಟ್ರೋ ರವಿ: ಗುಜರಾತ್​ನಿಂದ ಬೆಂಗಳೂರಿಗೆ ಕರೆತಂದ ಪೊಲೀಸರು, ಅಜ್ಞಾತ ಸ್ಥಳದಲ್ಲಿ ವಿಚಾರಣೆ

ಬಿಬಿಎಂಪಿ ಕಚೇರಿ ಹಾಗೂ ಸರ್ಕಾರಿ ಕಚೇರಿಗೆ ಪಾರ್ಕಿಂಗ್ ವ್ಯವಸ್ಥೆ ಇರಲ್ಲ. ಖಾಸಗಿ ಕಂಪನಿಗಳಿಗೆ ಭೇಟಿ ನೀಡಿದಾಗ ಅಲ್ಲೂ ಪಾರ್ಕಿಂಗ್ ವ್ಯವಸ್ಥೆ ಇರಲ್ಲ. ಪಾರ್ಕಿಂಗ್ ವ್ಯವಸ್ಥೆಯನ್ನು ಅವರು ಕಲ್ಪಿಸದೆ ಮಾಡುವ ತಪ್ಪಿಗೆ ವಾಹನ ಸವಾರರಿಗೆ ಶಿಕ್ಷೆ ಆಗುತ್ತಿದೆ. ತೆರಿಗೆ ಕಟ್ಟಿದರೂ ವಾಹನ ಸವಾರರು ಬಹುದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ಹೆಚ್ಚು ಜನ ಪೊಲೀಸರು ಬಾಡಿವೋರ್ನ್ ಕ್ಯಾಮೆರಾ ಧರಿಸುತ್ತಿಲ್ಲ. ಇದರಿಂದ ಭ್ರಷ್ಟಾಚಾರ ತಡೆಯೋಕೆ ಅಗಲ್ಲ ಎಂದು ಪಾರ್ಕಿಂಗ್ ಅವಾಂತರದ ಪ್ರಮುಖ ಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಿ ಇಮೇಲ್ ಮೂಲಕ ಎಂ.ಎ. ಸಲೀಂ ಅವರಿಗೆ ಕಳುಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ