ಉಕ್ರೇನ್​ನಿಂದ ಇಂದು ಬೆಂಗಳೂರಿಗೆ ಬಂದಿಳಿದ 12 ವಿದ್ಯಾರ್ಥಿಗಳು; ಏರ್​ಪೋರ್ಟ್​ನಲ್ಲಿ ಕನ್ನಡಿಗರಿಗೆ ಸ್ವಾಗತ ಕೋರಿದ ಸಚಿವ ಆರ್ ಅಶೋಕ್

ವಿದ್ಯಾರ್ಥಿಗಳು ನಿನ್ನೆ ರಾತ್ರಿ ಮುಂಬೈಗೆ ಆಗಮಿಸಿದ್ದರು. ಇಂದು ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಾರೆ. 12 ವಿದ್ಯಾರ್ಥಿಗಳು ಕೂಡ ರಾಜ್ಯದ ಬೇರೆ ಬೇರೆ ಜಿಲ್ಲೆಯವರಾಗಿದ್ದಾರೆ.

ಉಕ್ರೇನ್​ನಿಂದ ಇಂದು ಬೆಂಗಳೂರಿಗೆ ಬಂದಿಳಿದ 12 ವಿದ್ಯಾರ್ಥಿಗಳು; ಏರ್​ಪೋರ್ಟ್​ನಲ್ಲಿ ಕನ್ನಡಿಗರಿಗೆ ಸ್ವಾಗತ ಕೋರಿದ ಸಚಿವ ಆರ್ ಅಶೋಕ್
ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸುತ್ತಿರುವ ಆರ್ ಅಶೋಕ್
Edited By: sandhya thejappa

Updated on: Feb 27, 2022 | 9:36 AM

ಬೆಂಗಳೂರು: ವಿದ್ಯಾಭ್ಯಾಸಕ್ಕೆಂದು ಉಕ್ರೇನ್​ಗೆ (Ukraine) ತೆರಳಿದ್ದ ಕರ್ನಾಟಕ ವಿದ್ಯಾರ್ಥಿಗಳ ಪೈಕಿ 12 ಜನರು ಇಂದು (ಫೆ.27) ಬೆಂಗಳೂರಿಗೆ ಆಗಮಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ ಮಹಾಯುದ್ಧ ನಡೆಯುತ್ತಿರುವ ಹಿನ್ನೆಲೆ ಕನ್ನಡಿಗರು ಉಕ್ರೇನ್​ನಲ್ಲಿ ಸಿಲುಕಿದ್ದರು. ಊಟಕ್ಕಾಗಿ ಪರದಾಡಿದ್ದರು. ಸದ್ಯ ಇಂದು 12 ಜನರು ಮಾತ್ರ ಬೆಂಗಳೂರಿಗೆ ಬಂದು ಇಳಿದಿದ್ದಾರೆ. ಇನ್ನೂ ಹಲವು ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾರೆ. ವಿದ್ಯಾರ್ಥಿಗಳು ನಿನ್ನೆ ರಾತ್ರಿ ಮುಂಬೈಗೆ ಆಗಮಿಸಿದ್ದರು. ಇಂದು ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಾರೆ. 12 ವಿದ್ಯಾರ್ಥಿಗಳು ಕೂಡ ರಾಜ್ಯದ ಬೇರೆ ಬೇರೆ ಜಿಲ್ಲೆಯವರಾಗಿದ್ದಾರೆ.

ವಿಮಾನ ನಿಲ್ದಾಣಕ್ಕೆ ಬಂದಿಳಿದ ಕರ್ನಾಟಕ ವಿದ್ಯಾರ್ಥಿಗಳು, ಪೋಷಕರಿಗೆ ಕರೆ ಮಾಡಿದ್ದಾರೆ. ಕರೆ ಬಂದ ಕೂಡಲೆ ಪೋಷಕರು ಖುಷಿಯಾಗಿದ್ದಾರೆ. ಜೊತೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನ ಕಂದಾಯ ಸಚಿವ ಆರ್.ಅಶೋಕ್ ಸ್ವಾಗತಿಸಿ, ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು. ಏರ್​ಪೋರ್ಟ್​ ಲಾಂಜ್​ನಲ್ಲೆ ವಿದ್ಯಾರ್ಥಿಗಳಿಗೆ ತಿಂಡಿ, ಕಾಫಿ, ಟೀ ವ್ಯವಸ್ಥೆ ಮಾಡಲಾಗಿದೆ.

ಇನ್ನೂ ಹಲವು ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸ್ ಆಗಿಲ್ಲ. ವಾಪಸ್ ಆಗದ ವಿದ್ಯಾರ್ಥಿಗಳ ಪೋಷಕರು ಪಡಿಸುತ್ತಿದ್ದಾರೆ.

ತಾಯ್ನಾಡಿಗೆ ವಾಪಸ್ ಬಂದ ಇಂಚರಾ ಕೆಐಎಬಿಯಲ್ಲಿ ಮಾತನಾಡಿ, ನಾವು ಬೆಂಗಳೂರಿಗೆ ವಾಪಸ್ ಬಂದಿದ್ದಕ್ಕೆ ಖುಷಿಯಾಗಿದೆ. ನಮ್ಮನ್ನು ತುಂಬಾ ಸುರಕ್ಷಿತವಾಗಿ ಭಾರತಕ್ಕೆ ಕರೆತಂದರು. ಉಕ್ರೇನ್‌ನ ರಾಯಭಾರ ಕಚೇರಿಯಿಂದ ಧೈರ್ಯ ಹೇಳ್ತಿದ್ರು. ಕೆಲವರನ್ನು ಸ್ಥಳಾಂತರ ಮಾಡುವುದಕ್ಕೆ ಕಷ್ಟವಾಗುತ್ತಿದೆ. ಯುದ್ಧದ ಸ್ಥಳದಿಂದ ಸ್ಥಳಾಂತರ ಮಾಡುವುದು ಕಷ್ಟ. ನಮ್ಮ ವಿವಿಯವರು ಆನ್‌ಲೈನ್ ಕ್ಲಾಸ್ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಟಿವಿ9ಗೆ ಹೇಳಿಕೆ ನೀಡಿದ ಕೆ.ಆರ್.ಪುರಂನ ಪೂಜಾ, ನಾವು ಭಾರತಕ್ಕೆ ವಾಪಸ್ ಬಂದಿರುವುದಕ್ಕೆ ಖುಷಿ ಇದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ವಾಪಸ್ ಬರಬೇಕು. ಎಲ್ಲಾ ಭಾರತೀಯರು ವಾಪಸ್ ಬಂದರೆ ಖುಷಿಯಾಗುತ್ತದೆ ಅಂತ ಅಭಿಪ್ರಾಯಪಟ್ಟರು.

ಇದನ್ನೂ ಓದಿ

ಕರ್ನಾಟಕದಲ್ಲಿ 8 ಲಕ್ಷ ಮಕ್ಕಳಿಗೆ ಇನ್ನು ಸಿಕ್ಕಿಲ್ಲ ವ್ಯಾಕ್ಸಿನ್; ಮಕ್ಕಳಿಗೆ ಲಸಿಕೆ ನೀಡುವಲ್ಲಿ ಆರೋಗ್ಯ ಇಲಾಖೆ ಫೇಲ್

ಬೆಂಗಳೂರಿನ ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಭೀಕರ ಅಪಘಾತ; ಕಾರು ಬೈಕ್ ಮಧ್ಯೆ ಡಿಕ್ಕಿ, ಇಬ್ಬರು ಸವಾರರು ದುರ್ಮರಣ

Published On - 9:31 am, Sun, 27 February 22

Loading...
Unable to load recommendations.
Follow Us