AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tomato Rate: ಟೊಮೆಟೊ ದರದಲ್ಲಿ ಮತ್ತೆ ಏರಿಕೆ! ರೇಟ್ ಹೀಗಿದೆ

ರಾಜ್ಯದ ಹಲವು ಕಡೆ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ರೈತರು ಬೆಳೆದ ತರಕಾರಿ ನಾಶವಾಗುತ್ತಿದೆ. ಅಲ್ಲದೇ ಹೊರ ರಾಜ್ಯಗಳಿಂದ ಬರುತ್ತಿದ್ದ ಟೊಮೆಟೊ ಸದ್ಯ ಬರುತ್ತಿಲ್ಲ.

Tomato Rate: ಟೊಮೆಟೊ ದರದಲ್ಲಿ ಮತ್ತೆ ಏರಿಕೆ! ರೇಟ್ ಹೀಗಿದೆ
ಟೊಮೆಟೊ
TV9 Web
| Updated By: sandhya thejappa|

Updated on: Oct 11, 2021 | 9:13 AM

Share

ಬೆಂಗಳೂರು: ಟೊಮೆಟೊ ದರ (Tomato Rate) ಮತ್ತೆ ಏರಿಕೆಯಾಗಿದ್ದು, ಜನ ಸಾಮಾನ್ಯರಿಗೆ ಹೊಡೆತ ಬಿದ್ದಿದೆ. ನಿನ್ನೆಗಿಂತ ಇಂದಿನ ದರದಲ್ಲಿ ಏರಿಕೆ ಕಂಡಿದೆ. ನಿನ್ನೆ 1 ಕೆ.ಜಿ ಟೊಮೆಟೊ ಬೆಲೆ 60 ರಿಂದ 70 ರೂ ವರೆಗೆ ಇತ್ತು. ಇಂದು ಮತ್ತೆ ದರ ಹೆಚ್ಚಳವಾಗಿದೆ. ಒಂದು ಕೆ.ಜಿ ಟೊಮೆಟೊ ಬೆಲೆ 70ರೂ. ನಿಂದ 80ರೂ.ಗೆ ಏರಿಕೆಯಾಗಿದೆ. ಪ್ರತಿ ತರಕಾರಿ ಮೇಲೂ ಕೆ.ಜಿಗೆ 10 ರಿಂದ 20 ರೂಪಾಯಿ ಏರಿಕೆಯಾಗಿದೆ. ಕೆ ಆರ್ ಮಾರ್ಕೆಟ್​ನಲ್ಲಿ ಸುನಾಮಿ ಟೊಮೆಟೊ ದರ 30 ರಿಂದ 40 ರೂ. ಇದೆ. ಮಳೆ ಹೀಗೆ ಮುಂದುವರೆದರೆ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗುತ್ತದೆ.

ರಾಜ್ಯದ ಹಲವು ಕಡೆ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ರೈತರು ಬೆಳೆದ ತರಕಾರಿ ನಾಶವಾಗುತ್ತಿದೆ. ಅಲ್ಲದೇ ಹೊರ ರಾಜ್ಯಗಳಿಂದ ಬರುತ್ತಿದ್ದ ಟೊಮೆಟೊ ಸದ್ಯ ಬರುತ್ತಿಲ್ಲ. ಹೀಗಾಗಿ ಒಂದು ಕೆ.ಜಿಗೆ 10ರಿಂದ 15 ರೂ. ಇದ್ದ ಟೊಮೆಟೊ ದರ ದಿಢೀರನೆ ಏರಿಕೆಯಾಗಿದೆ. ಯಶವಂತಪುರ ಎಪಿಎಂಸಿಯಲ್ಲಿ 20-22 ಕೆ.ಜಿಯ ಒಂದು ಬಾಕ್ಸ್ ಟೊಮೆಟೊ ದರ 1,200 ರಿಂದ 1,400ಕ್ಕೆ ಹೆಚ್ಚಳವಾಗಿದೆ.

ಆನ್ಲೈನ್ನಲ್ಲೂ ಒಂದು ಕೆ.ಜಿ ಟೊಮೆಟೊ ದರ 90 ರೂ. ದಾಟಿದೆ. ಉತ್ತಮ ಕ್ವಾಲಿಟಿಯ ಟೊಮೆಟೊ ಕೆಲವೆಡೆ ಮಾತ್ರ ಲಭ್ಯವಾಗಿದೆ. ಟೊಮೆಟೊ ಜೊತೆಗೆ ಕೆಲ ತರಕಾರಿ ಬೆಲೆಯೂ ಹೆಚ್ಚಳವಾಗಿದೆ. ಹೂವುಗಳ ದರದಲ್ಲೂ ಏರಿಕೆ ಕಂಡಿದೆ.

ನಿನ್ನೆ ತರಕಾರಿಗಿದ್ದ ದರ ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 30 ರಿಂದ 40 ರೂ ಹಸಿ ಮೆಣಸಿನಕಾಯಿ ಕೆ.ಜಿ 50 ರಿಂದ 70 ರೂ ಬೆಂಡೇಕಾಯಿ 40 ರಿಂದ 60 ರೂ ಹೂಕೋಸು ಕೆಜಿ 30 ರಿಂದ 40 ರೂ ಬದನೆಕಾಯಿ 30 ರಿಂದ 40 ರೂ ಹಾಗಲಕಾಯಿ 40 ರಿಂದ 50 ರೂ

ಇದನ್ನೂ ಓದಿ

Bengaluru Vegetable Price List: ತರಕಾರಿ ಬೆಲೆಗಳಲ್ಲಿ ದಿಢೀರ್ ಏರಿಕೆ; ಯಾವ ತರಕಾರಿಗೆ ಎಷ್ಟು? ಬೆಲೆ ಏರಿಕೆಗೆ ಕಾರಣವೇನು?

Tomato Rate Increase: ದಿಢೀರ್ ಏರಿಕೆ ಕಂಡ ಟೊಮೆಟೊ; ಕೆ.ಜಿಗೆ 60 ರಿಂದ 70 ರೂ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ