AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ: ಕೆ.ಆರ್​.ಮಾರ್ಕೆಟ್​​ ಫ್ಲೈಓವರ್ ಬೋಲ್ಟ್​​ ಸರಿಪಡಿಸಿದ ಏಜೆನ್ಸಿ

ಬಿಬಿಎಂಪಿ ಎಇಇ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಫೈಓವರ್​ ರಸ್ತೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಏಜೆನ್ಸಿಗೆ ಸೂಚಿಸಿದ್ದು ಏಜೆನ್ಸಿ ಸಿಬ್ಬಂದಿ ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​​ ಸರಿಪಡಿಸಿದ್ದಾರೆ.

ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ: ಕೆ.ಆರ್​.ಮಾರ್ಕೆಟ್​​ ಫ್ಲೈಓವರ್ ಬೋಲ್ಟ್​​ ಸರಿಪಡಿಸಿದ ಏಜೆನ್ಸಿ
ಕೆ.ಆರ್​.ಮಾರ್ಕೆಟ್​​ ಫ್ಲೈಓವರ್ ಬೋಲ್ಟ್ ಹೊರ ಬರುತ್ತಿವೆ.
TV9 Web
| Edited By: |

Updated on:Nov 23, 2022 | 2:44 PM

Share

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳೆಲ್ಲಾ ಗುಂಡಿಮಯ(Pothole) ಆಗಿ ವಾಹನ ಸವಾರರು ಪ್ರಾಣ ಭಯದಲ್ಲೇ ಸಂಚಾರ ನಡೆಸುವಂತಹ ಸ್ಥಿತಿ ಇದೆ. ಅದು ಸಾಲ್ದು ಅಂತಾ ಈಗ ಪ್ಲೈಓವರ್​ಗಳು ಹೊಸ ಅವಾಂತರ ಸೃಷ್ಟಿಸಿವೆ. ಕೆ.ಆರ್​.ಮಾರ್ಕೆಟ್​​ ಫ್ಲೈಓವರ್​ನಲ್ಲಿ(KR Market Flyover) ಬೋಲ್ಟ್​ಗಳು ಹೊರಬಂದಿದ್ದು ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಈಗ ಈ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಿಬಿಎಂಪಿ(BBMP) ಎಇಇ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಫೈಓವರ್​ ರಸ್ತೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಏಜೆನ್ಸಿಗೆ ಸೂಚಿಸಿದ್ದು ಏಜೆನ್ಸಿ ಸಿಬ್ಬಂದಿ ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​​ ಸರಿಪಡಿಸಿದ್ದಾರೆ.

ನಗರದ ಕೇಂದ್ರ ಭಾಗದಲ್ಲಿರುವ ಕೆ.ಆರ್ ಮಾರ್ಕೆಟ್ ಫ್ಲೈಓವರ್ ಮೇಲೆ ಸುಮಾರು ನಾಲ್ಕು ಇಂಚು ತನಕ ಬೋಲ್ಟ್​ಗಳು ಮೇಲೆದ್ದಿದ್ದವು. ನಿರ್ವಹಣೆ ಸರಿ ಇಲ್ಲದ ಕಾರಣ ಬೋಲ್ಟ್​ಗಳು ಮೇಲೆ ಬಂದಿದ್ದು 8 ವಾಹನಗಳ ಚಕ್ರಗಳು ಪಂಕ್ಚರ್ ಆಗಿವೆ. ವಿಷಯ ತಿಳಿದ ಸ್ಥಳೀಯ ಪೋಲಿಸರು ನಿನ್ನೆ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿದ್ದರು. ಬೃಹತ್ ವಾಹನದ ಸಂಚಾರದಿಂದ ಮೇಲ್ಸೇತುವೆ ಮೇಲೆ ಜಾಯಿಂಟ್​ಗಳ ಮಧ್ಯೆ ಬಿರುಕು ಮೂಡಿ ಪ್ಯಾನಲ್​ಗಳ ನಡುವಿನ ಬೋಲ್ಟ್​ಗಳು ಲೂಸ್ ಆಗಿದ್ದವು.

ಇದನ್ನೂ ಓದಿ: ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ

ಟಿವಿ9ನಲ್ಲಿ ಸುದ್ದಿ ಪ್ರಸಾರವಾಗ್ತಿದ್ದಂತೆ ಬಿಬಿಎಂಪಿ AEE ಚಂದ್ರಪ್ಪ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಈ ವೇಳೆ ಮಾತನಾಡಿದ ಚಂದ್ರಪ್ಪ ನಾವು ಪ್ರತಿ ತಿಂಗಳು ಈ ಬೋಲ್ಟ್​ಗಳನ್ನ ಟೈಟ್ ಮಾಡ್ತೇವೆ. ಇದಕ್ಕೆಂದೇ ಮೇಂಟೇನೆನ್ಸ್ ಏಜೆನ್ಸಿ ಇದೆ ಅಂದ್ರು. ಸದ್ಯ AEE ಚಂದ್ರಪ್ಪ ಸೂಚನೆ ವೇರೆಗೆ ಏಜೆನ್ಸಿ ಸಿಬ್ಬಂದಿ ಫ್ಲೈಓವರ್​ಗೆ ಅಳವಡಿಸಿದ್ದ ಬೋಲ್ಟ್​​ ಸರಿಪಡಿಸಿದ್ದಾರೆ.

Published On - 12:24 pm, Wed, 23 November 22

Follow Us
Web contact
Web contact

TV9 Kannada

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!