ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆ; ಇಲ್ಲಿದೆ ದರ ಪಟ್ಟಿ

Vegetable Price in Bangalore Today; ಶ್ರಾವಣ ಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳಿಗೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಹಬ್ಬಕ್ಕೆ ಬೇಕಾದ ಎಲ್ಲಾ ವಸ್ತುಗಳ ದರ ಒಂದೇ ವಾರದಲ್ಲಿ ಡಬಲ್ ಆಗಿ ಹೋಗಿವೆ. ಬೆಂಗಳೂರಿನಲ್ಲಿ ತರಕಾರಿ, ಹಣ್ಣು ಹಂಪಲು ದರ ತುಟ್ಟಿಯಾಗಿವೆ. ಪರಿಷ್ಕೃತ ದರ ವಿವರ ಇಲ್ಲಿದೆ.

ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆ; ಇಲ್ಲಿದೆ ದರ ಪಟ್ಟಿ
ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆ
Follow us
| Updated By: Digi Tech Desk

Updated on:Aug 06, 2024 | 8:55 AM

ಬೆಂಗಳೂರು, ಆಗಸ್ಟ್ 6: ದಿನದಿಂದ ದಿನಕ್ಕೆ ಆಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ.‌ ತರಕಾರಿ ಬೆಲೆಗೆಂತೂ ಮೂಗುದಾರವೇ ಇಲ್ಲದಂತಾಗಿದೆ.‌ ಇಷ್ಟು‌ ದಿನ ಮಳೆ ಕಾರಣದಿಂದ ಬೆಲೆ‌ ಏರಿಕೆ ಮಾಡಿದ್ದ ವ್ಯಾಪಾರಸ್ಥರು, ಇದೀಗ ಶ್ರಾವಣ ಮಾಸ ಆರಂಭವಾಗಿದೆ ಎನ್ನುವ ಕಾರಣಕ್ಕೆ ಹೂ, ಹಣ್ಣು, ತರಕಾರಿಗಳ ಬೆಲೆ ಏರಿಕೆ ಮಾಡಿದ್ದಾರೆ.‌ ಹೀಗಾಗಿ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ತರಕಾರಿಗಳ ಬೆಲೆ‌ 10 ರಿಂದ 20 ರೂಪಾಯಿ ಏರಿಕೆಯಾಗಿದ್ದು, ಹೂವಿನ ಬೆಲೆ 200 ರೂಪಾಯಿಯಷ್ಟು ಏರಿಕೆಯಾಗಿದೆ.

Vegetables Price in Bangalore

ಶ್ರಾವಣ‌ಮಾಸ ಆಭವಾಗುತ್ತಿದ್ದಂತೆಯೇ ನಾಗಾರ ಪಂಚಮಿ, ವರಮಹಲಕ್ಷ್ಮಿ, ಶ್ರಾವಣ ಶನಿವಾರ, ಗೌರಿ – ಗಣೇಶ ಚತುರ್ಥಿಗಳು ಒಂದರ ಮೇಲೊಂದು ಬರುತ್ತಲೇ ಇರುತ್ತವೆ.‌ ಈ ಅವಧಿಯಲ್ಲಿ ತರಕಾರಿ, ಹೂ, ಹಣ್ಣುಗಳಿಗೆ ಬೇಡಿಕೆ ಹೆಚ್ಚು.‌ ಹೀಗಾಗಿ ತರಕಾರಿಗಳ ಬೆಲೆ ದುಪ್ಪಟ್ಟಾಗಿ ಹೋಗಿವೆ.‌ ಟೊಮೆಟೊ, ಈರುಳ್ಳಿ, ಬೆಳ್ಳಳ್ಳಿ, ಆಲೂಗಡ್ಡೆ, ಕ್ಯಾರೆಟ್ ಬಿಟ್ರೂಟ್ ಬೆಲೆ ವಿಪರೀತ ಜಾಸ್ತಿಯಾಗಿದೆ.

ತರಕಾರಿ ಬೆಲೆ ಪಟ್ಟಿ (ಕೆಜಿಗೆ ರೂಪಾಯಿಗಳಲ್ಲಿ)

ತರಕಾರಿ ಬೆಲೆ
ನಾಟಿ ಬೀನ್ಸ್ 100
ಟೊಮೆಟೊ 50
ಬಿಳಿ ಬದನೆ 120
ಮೆಣಸಿನಕಾಯಿ 80
ನುಗ್ಗೆಕಾಯಿ 200
ಊಟಿ ಕ್ಯಾರೆಟ್ 200
ನವಿಲುಕೋಸು 60
ಮೂಲಂಗಿ 60
ಹೀರೇಕಾಯಿ 80
ಆಲೂಗಡ್ಡೆ 60
ಈರುಳ್ಳಿ 60
ಕ್ಯಾಪ್ಸಿಕಂ 85
ಹಾಗಲಕಾಯಿ 85
ಕೊತ್ತಂಬರಿ ಸೊಪ್ಪು 70
ಶುಂಠಿ 185
ಬೆಳ್ಳುಳ್ಳಿ 350
ಪಾಲಕ್ 46
ಪುದಿನ 92
ನಾಟಿ ಬಟಾಣಿ 300
ಫಾರಂ ಬಟಾಣಿ 200

ಹಣ್ಣುಗಳ ಬೆಲೆ ಪಟ್ಟಿ (ಕೆಜಿಗೆ ರೂಪಾಯಿಗಳಲ್ಲಿ)

ಹಣ್ಣು ಬೆಲೆ
ಸೇಬು 350
ದ್ರಾಕ್ಷಿ 300
ಮೂಸಂಬಿ 140
ಸಪೋಟ 200
ಡ್ರಾಗಾನ್ ಪ್ರೋಟ್ 200
ಬಟರ್ ಫ್ರೋಟ್ 250
ಏಲಕ್ಕಿ ಬಾಳೆಹಣ್ಣು 80
ಪೊಪ್ಪಾಯ 50
ಕಲ್ಲಂಗಡಿ 50
ಅನಾನಸ್ 120
ಕಿವಿ ಫ್ರೋಟ್ 120
ಕಿತ್ತಳೆ 200

ಹೂಗಳ ಬೆಲೆ ಹೀಗಿದೆ

ಸೇವಂತಿಗೆ 250, ಗುಲಾಬಿ 200, ಅಣಗಲು  200, ಸುಗಂದರಾಜ 100, ಮಲ್ಲಿಗೆ 300, ಕನಕಾಂಬರ 300, ಚೆಂಡೂ ಹೂ 20, ತುಳುಸಿ 40, ವೈಟ್ ಸೇವಂತಿಗೆ 150, ಹಳದಿ ಸೇವಂತಿಗೆ  ಮೊಳಕ್ಕೆ 250, ಕಾಕಡ ಕೆಜಿಗೆ 400, ಸಂಪಿಗೆ  200 ರೂ. ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ, ಹಲವೆಡೆ ನಾನಾ ಸಮಸ್ಯೆ, ವಾಹನ ಸವಾರರ ಪರದಾಟ

Vegetables Price in Bangalore

ತರಕಾರಿ, ಹಣ್ಣುಗಳ ಜತೆ ಹೂಗಳ ಬೆಲೆ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಹಬ್ಬಗಳ‌ ಕಾರಣದಿಂದ ಈ ವಾರ ಕೊಂಚ ಬೆಲೆ ಏರಿಕೆಯಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.‌ ಸದ್ಯ ಮಳೆ ಇರುವ ಕಾರಣ‌ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ.‌ ಜೊತೆಗೆ ಹೂಗಳೂ ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:39 am, Tue, 6 August 24

ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್