AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಜೆಸಿ ನಗರ, ಆರ್​ಟಿ ನಗರದಲ್ಲಿ ವಿಜಯದಶಮಿ ಉತ್ಸವ: ದಸರಾ ಮೆರವಣಿಗೆಯಲ್ಲಿ ಪುಂಡರ ಅಟ್ಟಹಾಸ

ಬೆಂಗಳೂರು ಮತ್ತು ಕೋಲಾರದಲ್ಲಿ ದಸರಾ ಮೆರವಣಿಗೆ ವೇಳೆ ಗುಂಪು ಘರ್ಷಣೆ, ಗಲಾಟೆ ನಡೆದಿದೆ.

ಬೆಂಗಳೂರಿನ ಜೆಸಿ ನಗರ, ಆರ್​ಟಿ ನಗರದಲ್ಲಿ ವಿಜಯದಶಮಿ ಉತ್ಸವ: ದಸರಾ ಮೆರವಣಿಗೆಯಲ್ಲಿ ಪುಂಡರ ಅಟ್ಟಹಾಸ
ಕೋಲಾರದ ದಾನವಹಳ್ಳಿ ಗ್ರಾಮದಲ್ಲಿ ದಸರಾ ಮೆರವಣಿಗೆ ವಿಚಾರವಾಗಿ ಗ್ರಾಮಸ್ಥರು ಇಟ್ಟಿಗೆಗಳಿಂದ ಹೊಡೆದಾಡಿದರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 06, 2022 | 7:38 AM

ಬೆಂಗಳೂರು: ವಿಜಯದಶಮಿ ಪ್ರಯುಕ್ತ ನಗರದ ಜೆ.ಸಿ.ನಗರ, ಆರ್‌.ಟಿ.ನಗರದಲ್ಲಿ ಬುಧವಾರ (ಅ 5) ಮಧ್ಯರಾತ್ರಿಯಿಂದ ಗುರುವಾರ ನಸುಕಿನವರೆಗೂ ಮೆರವಣಿಗೆ ನಡೆಯಿತು. ಸಾವಿರಾರು ಜನರು ಉತ್ಸಾಹದಿಂದ ಭಾಗಿಯಾಗಿದ್ದರು. ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. 3 ಡಿಸಿಪಿ, 6 ಎಸಿಪಿ, 26 ಇನ್​ಸ್ಪೆಕ್ಟರ್​ಗಳು, 111 ಸಬ್​ ಇನ್​ಸ್ಪೆಕ್ಟರ್​ಗಳು, 139 ಎಎಸ್​ಐಗಳು, 1200 ಪೊಲೀಸರು, 300 ಹೋಮ್‌ಗಾರ್ಡ್ಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಬೆಂಗಳೂರಿನ ಪಶ್ಚಿಮ ವಿಭಾಗದ ವಿಜಯನಗರ ಮತ್ತು ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಸರಾ ಮೆರವಣಿಗೆಯಲ್ಲಿ ಗುಂಪು ಘರ್ಷಣೆ, ಗಲಾಟೆ ನಡೆದಿದೆ. ಪುಂಡರ ಎರಡು ಗುಂಪುಗಳು ಮೆರವಣಿಗೆಯಲ್ಲಿ ನವ್ಯ ಬಾರ್ ಎದುರು ಗಲಾಟೆ ಮಾಡಿಕೊಂಡವು. ಈ ವೇಳೆ ದೀಪು ಎಂಬಾತನ ಮೇಲೆ ಹಲ್ಲೆ ನಡೆಸಿದ ಗುಂಪು, ಸ್ಥಳದಿಂದ ಪರಾರಿಯಾಗಿಯಿತು. ವಿಜಯನಗರದ ಎಂ.ಆರ್.ಗಾರ್ಡನ್ ಬಾರ್ ಮುಂದೆಯೂ ಗಲಾಟೆ ನಡೆಯಿತು. ಚೇತನ್ ಶೆಟ್ಟಿ, ಚೇತನ್ ಸೋಮಶೇಖರ್ ಎಂಬುವವರ ಮೇಲೆ ದಾಳಿ ನಡೆಯಿತು. ಗಾಯಗೊಂಡವರಿಗೆ ನಿಮ್ಹಾನ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಘಟನೆ ಸಂಬಂಧ ಮಾಗಡಿ ರಸ್ತೆ, ವಿಜಯನಗರ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಪುಂಡರ ಗುಂಪುಗಳು ದೊಣ್ಣೆಗಳಿಂದ ಪರಸ್ಪರ ಬಡಿದಾಡಿವು. ಈ ವೇಳೆ ಒಟ್ಟು ಮೂವರಿಗೆ ಗಂಭೀರ ಗಾಯಗಳಾದವು.

ದೇವರ ಉತ್ಸವದಲ್ಲಿ ಮಾರಾಮರಿ

ಕೋಲಾರ: ತಾಲ್ಲೂಕಿನ ದಾನವಹಳ್ಳಿ ಗ್ರಾಮದಲ್ಲಿ ದೇವರ ಉತ್ಸವ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಮಾರಾಮರಿ ನಡೆದಿದೆ. ದಲಿತರ ಮನೆಗಳಿಗೂ ಉತ್ಸವ ಮೂರ್ತಿ ಮೆರವಣೆಗೆ ಬರಬೇಕು ಎಂದು ಕೆಲವರು ಒತ್ತಾಯಿಸಿದ ನಂತರ ಗಲಾಟೆ ನಡೆಯಿತು. ಗ್ರಾಮದ ಹಿರಿಯರು ಪಂಚಾಯಿತಿ ನಡೆಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಆದರೆ ಅಷ್ಟುಹೊತ್ತಿಗೆ ಪರಿಸ್ಥಿತಿ ಕೈಮೀರಿತ್ತು. ಪೊಲೀಸರ ಎದುರೇ ಎರಡೂ ಗುಂಪುಗಳು ಇಟ್ಟಿಗೆಯಿಂದ ಹೊಡೆದಾಡಿದರು. ಎರಡು ಗುಂಪಿನ ಆರು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ವೇಮಗಲ್ ಠಾಣೆಯಲ್ಲಿ ಎರಡೂ ಗುಂಪುಗಳು ದೂರು-ಪ್ರತಿದೂರು ದಾಖಲಿಸಿವೆ. ಒಂದು ಗುಂಪಿನ ಮೇಲೆ ಜಾತಿ ನಿಂದನೆ ಪ್ರಕರಣ ಹಾಗೂ ಮತ್ತೊಂದು ಗುಂಪಿನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

Published On - 7:38 am, Thu, 6 October 22

ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ