AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಪೊಲೀಸ್​​ರಿಂದ ಸುಲಿಗೆ ಆರೋಪ; ಟ್ವೀಟ್​​ ಮಾಡಿ ಅಳಲು ತೋಡಿಕೊಂಡ ಸಂತ್ರಸ್ತೆ

ಜನವರಿ 29 ರಂದು ವೈಟ್ ಫೀಲ್ಡ್​​ನ ಕುಂದನಹಳ್ಳಿ ಲೇಕ್ ಪಾರ್ಕ್​ನಲ್ಲಿ ಯುವತಿಯಿಂದ ಪೊಲೀಸ್​​​ 1000 ರೂ. ಸಲಿಗೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರು: ಪೊಲೀಸ್​​ರಿಂದ ಸುಲಿಗೆ ಆರೋಪ; ಟ್ವೀಟ್​​ ಮಾಡಿ ಅಳಲು ತೋಡಿಕೊಂಡ ಸಂತ್ರಸ್ತೆ
ಯುವತಿಯ ಟ್ವೀಟ್​​ (ಎಡಚಿತ್ರ) ಪ್ರತಿನಿಧಿಕ ಚಿತ್ರ (ಬಲಗಡೆ)
TV9 Web
| Edited By: |

Updated on:Jan 31, 2023 | 8:48 AM

Share

ಬೆಂಗಳೂರು: ಕಳೆದ ತಿಂಗಳು ಡಿಸೆಂಬರ್​ನಲ್ಲಿ ನಗರದ ಸಂಪಿಗೆಹಳ್ಳಿಯಲ್ಲಿ ದಂಪತಿಗಳಿಂದ ಆಡುಗೋಡಿ ಪೊಲೀಸರು ಹಣ ವಸೂಲಿ ಮಾಡಿದ್ದ ಪ್ರಕರಣ ವರದಿಯಾಗಿತ್ತು. ಇದು ಮಾಸುವ ಮುನ್ನವೇ ಜನವರಿ 29 ರಂದು ವೈಟ್ ಫೀಲ್ಡ್​​ನ ಕುಂದನಹಳ್ಳಿ ಲೇಕ್ ಪಾರ್ಕ್​ನಲ್ಲಿ ಯುವತಿಯಿಂದ ಪೊಲೀಸ್​​​ 1000 ರೂ. ಸುಲಿಗೆ ಮಾಡಿರುವ ಘಟನೆ ನಡೆದಿದೆ.

ನಡೆದ ಘಟನೆ ಬಗ್ಗೆ ಯುವತಿ ಟ್ವೀಟ್​​ ಮಾಡಿದ್ದು “ಜನವರಿ 29 ರವಿವಾರದಂದು ವೈಟ್​ಫೀಲ್ಡ್ ವಿಭಾಗದ ಕುಂದನಹಳ್ಳಿ ಲೇಕ್ ಪಾರ್ಕ್​ನಲ್ಲಿ ಸಂತ್ರಸ್ತ ಯುವತಿ (ಹರ್ಷ ಲತೀಪ್) ಮತ್ತು ನನ್ನ ಗೆಳೆಯ ಕುಳಿತಿದ್ದೇವು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್​​ ನನ್ನ ಮತ್ತು ನನ್ನ ಗೆಳೆಯನ ಪೋಟೋ ಕ್ಲಿಕ್ಕಿಸಿ, ಪಾರ್ಕ್​​ನಲ್ಲಿ ಕುಳಿತುಕೊಳ್ಳಲು ಪರ್ಮಿಷನ್ ಬೇಕೆಂದು ಕಿರುಕುಳ ನೀಡಿದ್ದಾರೆ”.

ನಂತರ ಹೆಸರು, ವೃತ್ತಿ, ಊರು ಮತ್ತು ಇಲ್ಲಿ ಯಾಕೆ ಬಂದಿದ್ದೀರಿ ಎಂದು ವಿಚಾರಸಿದ್ದಾನೆ. ನಂತರ ಅನುಮತಿ ಇಲ್ಲದೆ ಕೂತಿದ್ದಕ್ಕೆ 1000 ರೂ. ದಂಡ ಕಟ್ಟುವಂತೆ ಹೇಳಿದರು. ಆಗ ಹರ್ಷ ಲತೀಪ್ ನಾವೇನು ತಪ್ಪು ಮಾಡಿಲ್ಲ ನಾವೇಕೆ ದಂಡ ಕಟ್ಟಬೇಕು ಎಂದಿದ್ದಾಳೆ. ಅದಕ್ಕೆ ಪೊಲೀಸ್​ ನೀವು ಅನುಮತಿ ಇಲ್ಲದೆ ಇಲ್ಲಿ ಕೂತಿದ್ದೀರಿ ಮತ್ತು ನೀವು ಧೂಮಪಾನ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಹೊಯ್ಸಳ ಪೊಲೀಸರ ವಿರುದ್ಧ ಸುಲಿಗೆ ಆರೋಪ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

ಅದಕ್ಕೆ ಹರ್ಷ ಲತೀಪ್ ನಮ್ಮ ಹತ್ತಿರ ಸಿಗರೇಟ್​​ ಇಲ್ಲ ಮತ್ತು ಹಾಗೆ ಕುಳಿತಿದ್ದೇವೆ ಎಂದು ಉತ್ತರ ನೀಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಪೊಲೀಸ್​​ ತನ್ನ ವಿಚಾರಣೆ ಮುಂದುವರೆಸಿದ್ದಾರೆ. ನೀವು ಅನುಮತಿ ಇಲ್ಲದೆ ಕುಳಿತಿರುವುದು ತಪ್ಪು ಹೀಗಾಗಿ ನೀವು ಪೊಲೀಸ್​ ಠಾಣೆಗೆ ಬನ್ನಿ ಎಂದಿದ್ದಾರೆ. ನಂತರ ಠಾಣೆಗೆ ಬಂದರೇ ಹಿರಿಯ ಅಧಿಕಾರಿಗಳಿಗೆ ಉತ್ತರಿಸಬೇಕಾಗುತ್ತದೆ. ಹೀಗಾಗಿ 1000 ರೂ. ನೀಡಿ ಎಂದು ಪೊಲೀಸ್​ ಕೇಳಿದ್ದಾರೆ.

ಕೊನೆಯದಾಗಿ ಪೊಲೀಸ್​ ಪಾರ್ಕ್​ನಿಂದ ಹೊರ ಹೋಗಬೇಕಾದರೇ 1000ರೂ. ನೀಡಲೇಬೇಕು ಎಂದಿದ್ದಾನೆ. ಅಂತಿಮವಾಗಿ ವಿಧಿ ಇಲ್ಲದೆ 1000 ರೂ. ಕೊಟ್ಟಿದ್ದೇವೆ. ಯಾವುದೇ ತಪ್ಪು ಮಾಡದ ನಾವು ಈ ನೈತಿಕ ಪೊಲೀಸ್‌ಗಿರಿಯನ್ನು ಏಕೆ ಸಹಿಸಿಕೊಳ್ಳಬೇಕಾಗಿತ್ತು?. ನೊಂದ ಯುವತಿ ಹರ್ಷ ಲತೀಪ್ ಪೊಲೀಸರ ಬೈಕ್​ ನಂಬರ್​ ಪ್ಲೇಟ್​​ನ್ನು ಫೋಟೋ ತೆಗೆದು, ಪೊಲೀಸರ ನಡವಳಿಕೆ ಕುರಿತು ಟ್ವಿಟರ್​ನಲ್ಲಿ ಬೆಂಗಳೂರು ಕಮಿಷನರ್​ ಮತ್ತು ಕಮಿಷನರ್​ ಆಫೀಸ್​​ಗೆ ಟ್ಯಾಗ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:37 am, Tue, 31 January 23

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ