ಯಾದಗಿರಿ: ಬೈಕ್ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮರಣ ಹೊಂದಿರುವ ಘಟನೆ ಶಹಾಪುರ ನಗರದಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತರಾದ ವ್ಯಕ್ತಿ ಶಿವಕುಮಾರ್(26) ಎಂದು ತಿಳಿದು ಬಂದಿದೆ. ಶಿವಕುಮಾರ್ ಸುರಪುರ ತಾಲೂಕಿನ ಪೇಟಅಮ್ಮಾಪುರ ನಿವಾಸಿಯಾಗಿದ್ದರು. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓವರ್ಟೇಕ್ ಮಾಡುವ ವೇಳೆ ಲಾರಿಗೆ ಡಿಕ್ಕಿ: ಚಕ್ರದಡಿ ಸಿಲುಕಿದ ಬೈಕ್ ಸವಾರ ಸ್ಥಳದಲ್ಲೇ ಸಾವು, ಯಾವೂರಲ್ಲಿ?