AQI
  • ತಾಜಾ ಸುದ್ದಿ
  • ರಾಜ್ಯ
  • ಸಿನಿಮಾ
  • ಕ್ರಿಕೆಟ್​
  • ಫೋಟೋಗ್ಯಾಲರಿ
  • ಕ್ರೀಡೆ
  • ದೇಶ
  • ವಿದೇಶ
  • ಜೀವನಶೈಲಿ
  • ಆರೋಗ್ಯ
  • ವೈರಲ್​
  • ಅಧ್ಯಾತ್ಮ
  • ವಾಣಿಜ್ಯ
  • ಜ್ಯೋತಿಷ್ಯ
  • ಕ್ರೈಂ
  • ಅಧಿವೇಶನ Live
  • ವಿಡಿಯೋ
  • ಹವಾಮಾನ
  • ಶಾರ್ಟ್ಸ್​
  • #ಡಿಕೆ ಶಿವಕುಮಾರ್​
  • ಜಲಾಶಯಗಳ ನೀರಿನ ಮಟ್ಟ
  • ವೆಬ್​ಸ್ಟೋರಿ
  • #ಬೆಂಗಳೂರು ಸುದ್ದಿ
  • #ನರೇಂದ್ರ ಮೋದಿ
  • ಉದ್ಯೋಗ
  • TV9 Kannada Karnataka ಸ್ವಾಮೀಜಿ ಮೂಲಕ ಪೋಷಕರ ಮೇಲೆ ಒತ್ತಡ: ಯುವತಿ ಪರ ವಕೀಲ ಸೂರ್ಯ ಮುಕುಂದರಾಜ್

ಸ್ವಾಮೀಜಿ ಮೂಲಕ ಪೋಷಕರ ಮೇಲೆ ಒತ್ತಡ: ಯುವತಿ ಪರ ವಕೀಲ ಸೂರ್ಯ ಮುಕುಂದರಾಜ್

ಸಂತ್ರಸ್ತೆಯ ಪರ ಹೋರಾಡುತ್ತಿರುವ ವಕೀಲ ಸೂರ್ಯ ಮುಕುಂದ್​ರಾಜ್​ ಸಂತ್ರಸ್ತೆಯ ಸಮುದಾಯದ ಸ್ವಾಮೀಜಿ ವಿರುದ್ಧ ಮಾತನಾಡಿ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ಸ್ವಾಮೀಜಿ ಮೂಲಕ ಪೋಷಕರ ಮೇಲೆ ಒತ್ತಡ: ಯುವತಿ ಪರ ವಕೀಲ ಸೂರ್ಯ ಮುಕುಂದರಾಜ್
ಪ್ರಾತಿನಿಧಿಕ ಚಿತ್ರ
ಡಾ. ಭಾಸ್ಕರ ಹೆಗಡೆ Edited By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 01, 2021 | 10:33 PM

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆಯ ಪರವಾಗಿ ಹೋರಾಡುತ್ತಿರುವ ಅನೇಕ ವಕೀರಲ್ಲಿ ಒಬ್ಬರಾದ ಸೂರ್ಯ ಮುಕುಂದ್​ರಾಜ್​ ಈಗ ಹೊಸ ಬಾಂಬ್ ಒಂದನ್ನ ಸಿಡಿಸಿದ್ದಾರೆ. ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಸಂತ್ರಸ್ತೆಯ ತಂದೆ ಮನೆಗೆ ಹೋಗಿ ಆಮೇಲೆ ಮಾಧ್ಯಮಕ್ಕೆ ನೀಡಿದ ಹೇಳಿಕೆ ಬಗ್ಗೆ ಮುಕುಂದ್​ರಾಜ್​ ಪ್ರತಿಕ್ರಿಯಿಸಿದ್ದಾರೆ. ‘ನಮ್ಮ ಪೋಷಕರ ಮೇಲೆ ಸಮಾಜ ಸ್ವಾಮಿಜಿಯೊಬ್ಬರು ಕೂಡ ಒತ್ತಡ ಹೇರುತ್ತಿದ್ದು, ನಮ್ಮ ನಿವಾಸಕ್ಕೆ ಕಳುಹಿಸಿ ಪೋಷಕರ ಮನಪರಿವರ್ತನೆ ಮಾಡಲಾಗುತ್ತಿದೆ’ ಎಂದು ತಮ್ಮ ಕಕ್ಷಿದಾರರಾದ ಸಂತ್ರಸ್ತ ಯುವತಿಯ ಪರವಾಗಿ ವಕೀಲ ಸೂರ್ಯ ಮುಕುಂದರ್​ರಾಜ್ ಹೇಳಿದ್ದಾರೆ. ಆದರೆ ಸಂತ್ರಸ್ತೆ ಈ ರೀತಿ ಹೇಳಿದ್ದಾಳೆ ಎನ್ನಲು ಅವರು ಯಾವುದೇ ಸಾಕ್ಷ್ಯ ನೀಡಲಿಲ್ಲ.

ಹೈಕೋರ್ಟ್​ಗೆ ಬುಧವಾರ (ಮಾರ್ಚ್ 31) ಅರ್ಜಿ ಹಾಕಿಕೊಂಡಿರುವ ಸಂತ್ರಸ್ತೆಯ ತಂದೆ, ‘ಇನ್ನೊಬ್ಬರ ಒತ್ತಡಕ್ಕೆ ಮಣಿದು ಸೆಕ್ಷನ್ 164ರ ಅಡಿ  ನನ್ನ ಮಗಳು ಹೇಳಿಕೆ ನೀಡಿದ್ದಾಳೆ. ಆದ್ದರಿಂದ ಅದನ್ನು ತಿರಸ್ಕರಿಸಬೇಕು ಎಂದು ಹೇಳಿದ್ದರು. ಈ ಹೇಳಿಕೆಗೆ ವಕೀಲ ಮುಕುಂದರಾಜ್​ ಪ್ರತಿಕ್ರಿಯಿಸಿದ್ದಾರೆ.

ಯುವತಿ ಹೇಳಿಕೆ ನೀಡುವಾಗ ವಕೀಲರ ಹಾಜರಿಯನ್ನು ಪ್ರಶ್ನಿಸಿರುವ ಪೋಷಕರ ಆರೋಪಕ್ಕೆ ಸಂಬಂಧಿಸಿದಂತೆ, ಟಿವಿ9 ಜೊತೆ ಮಾತನಾಡಿರುವ ಸೂರ್ಯ ಮುಕುಂದ್ ರಾಜ್, ತಾಯಿತಂದೆಯೇ ಇಂತಹ ಸಂದರ್ಭದಲ್ಲಿ ಮಾನಸಿಕವಾಗಿ ಸಂತ್ರಸ್ತೆಯ ಜೊತೆಗಿರಬೇಕಾಗಿತ್ತು. ಆದರೆ ಪೋಷಕರು ಇನ್ನೊಬ್ಬರ ಒತ್ತಡಕ್ಕೆ ಮಣಿದು ಸೆಕ್ಷನ್ 164 ಅಡಿ ಸಂತ್ರಸ್ತೆ ಹೇಳಿಕೆ ನೀಡದಂಥ ಸಂದರ್ಭ ಸೃಷ್ಠಿಸಲು ಯತ್ನಿಸುತ್ತಿದ್ದಾರೆ. ಅಲ್ಲದೇ ಸಂತ್ರಸ್ತೆಯೇ ತಮ್ಮ ಪೋಷಕರ ವರ್ತನೆಗೆ ಅಚ್ಚರಿ ವ್ಯಕ್ತಪಡಿಸಿದ್ದಾಳೆ ಎಂದು ಮುಕುಂದ್​ರಾಜ್​ ​ ಗಂಭೀರ ಆರೋಪ ಮಾಡಿದ್ದಾರೆ.

ಸಂತ್ರಸ್ತೆ ತಮ್ಮ ಪೋಷಕರು ಇದುವರೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದವರಲ್ಲ. ಅವರೇ ಈ ರೀತಿ ಹೇಳುತ್ತಾರೆ ಅಂದರೆ ನಂಬಲು ಸಾಧ್ಯವಿಲ್ಲ. ನಮ್ಮ ಭಾಗದ ಬಲಾಡ್ಯ ವ್ಯಕ್ತಿ, ಹಣವಂತರು ನನ್ನ ಪೋಷಕರ ಮೇಲೆ ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ ಎಂದು ಅಳಲನ್ನ ತೋಡಿಕೊಂಡಿದ್ದಾರೆ ಎಂದು ತಮ್ಮ ಬಳಿ ಹೇಳಿರುವುದಾಗಿ ಸೂರ್ಯ ಮುಕುಂದ್ ರಾಜ್ ತಿಳಿಸಿದ್ದಾರೆ. ಇದಕ್ಕಿಂತ ಶಾಕಿಂಗ್ ಅಂದರೆ, ನಮ್ಮ ಪೋಷಕರ ಮೇಲೆ ಸಮಾಜ ಸ್ವಾಮಿಜಿಯೊಬ್ಬರು ಕೂಡ ಒತ್ತಡ ಹೇರುತ್ತಿದ್ದು, ನಮ್ಮ ನಿವಾಸಕ್ಕೆ ಕಳುಹಿಸಿ ಪೋಷಕರ ಮನಪರಿವರ್ತನೆ ಮಾಡಲಾಗುತ್ತಿದೆ ಎಂದು ಕೂಡ ಸಂತ್ರಸ್ತೆಯ ಪರವಾಗಿ ಮುಕುಂದ್​ರಾಜ್ ಹೇಳಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ: ಮುಕುಂದ್ ರಾಜ್
ಈ ನಡುವೆ ನನಗೆ ಜೀವ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿದೆ. ನಮ್ಮ ಎಸ್ಟಿ ಸಮಾಜದ ಹುಡುಗ ಹುಡುಗಿ. ಮಧ್ಯದಲ್ಲಿ ನಿಮ್ಮದೇನು ಎಂದು ನೇರವಾಗಿಯೇ ಕೆಲವರು ಬೆದರಿಕೆ ಹಾಕಿದ್ದಾರೆ. ಆದರೆ ನಾನು ಇದನ್ನು ಇಷ್ಟು ದಿನ ಯಾರ ಮುಂದೆಯೂ ಹೇಳಿರಲಿಲ್ಲ. ಹಾಗಂತ ನನಗೆ ಬೆದರಿಕೆ ಇದೆ ಅಂದ ಮಾತ್ರಕ್ಕೆ ನಾನು ಈ ಗೊಡ್ಡು ಬೆದರಿಕೆ ಹೆದರುವವನು ಅಲ್ಲ ಎಂದು ಟಿವಿ9ಗೆ ಸಂತ್ರಸ್ತೆ ಪರ ವಕೀಲ ಸೂರ್ಯ ಮುಕುಂದ್​ರಾಜ್ ಹೇಳಿದ್ದಾರೆ.

ಇದನ್ನೂ ಓದಿ: ಸಿಡಿ ಸಂತ್ರಸ್ತೆಯ ಬಟ್ಟೆ ತೆಗೆದುಕೊಂಡ ಎಸ್​ಐಟಿ; ಎಫ್​​ಎಸ್​​ಎಲ್​​ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ

ಇದನ್ನೂ ಓದಿ: ಪೋಷಕರ ಮಾತನಾಡಿಸಬೇಕೆಂದು ಹಟ, ಬಿಕ್ಕಿಬಿಕ್ಕಿ ಅತ್ತ ಸಿಡಿ ಸಂತ್ರಸ್ತೆ: ಅನುಮತಿ ನೀಡಲ್ಲ ಎಂದ ಎಸ್​ಐಟಿ

YouTube video player

(CD lady advocate makes serious allegation against Valmiki community swamiji)

Published On - 9:37 pm, Thu, 1 April 21

Add TV9 Kannada As A Trusted Source
Loading...
Unable to load recommendations.
Follow Us
LIVETV
Related Stories
ಹೊಸಕೋಟೆ ಬಿರಿಯಾನಿ ಕ್ರೇಜ್‌ಗೆ ಅಪಘಾತ, ಗಲಾಟೆ: 4ಗಂಟೆ ಬಿರಿಯಾನಿಗೆ ಬ್ರೇಕ್
KPSC ಎಕ್ಸಾಂ ಕಂಟ್ರೋಲರ್, IAS ಮನೆ ಮೇಲೆ ಇಡಿ ದಾಳಿ
ಕೋಮು ಸಂಘರ್ಷಕ್ಕೆ ತಿರುಗಿದ ಪುತ್ತೂರು ಡಿಜಿಟಲ್ ಸೇವಾ ಕೇಂದ್ರ ಗಲಾಟೆ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
Photo Gallery
2ನೇ ಟೆಸ್ಟ್​ನಲ್ಲೂ ಮಿಂಚಿದ ದೇವದತ್ ಪಡಿಕ್ಕಲ್
ಕಂಚಿಗೆ ಮುತ್ತಿಕ್ಕಿದ ತ್ರಿಶಾ- ಗಾಯತ್ರಿ ಜೋಡಿ
ಮೊದಲ ಎಸೆತದಲ್ಲೇ ವಿಕೆಟ್; ಇತಿಹಾಸ ಸೃಷ್ಟಿಸಿದ ಮಿಚೆಲ್ ಸ್ಟಾರ್ಕ್
ಮನೆಯಲ್ಲೇ ಪರಿಸರ ಸ್ನೇಹಿ ಮಣ್ಣಿನ ಗಣಪತಿ ತಯಾರಿಸುವುದು ಹೇಗೆ?
Short Videos View more

ವಿಜಯಲಕ್ಷ್ಮಿ ದರ್ಶನ್​ಗೆ ಸಿಕ್ತು ದೈವದ ಅಭಯ

ಬಾಗಲಕೋಟೆ ಸುತ್ತಮುತ್ತ ಆಟೋ, ಬೈಕ್​ನಲ್ಲಿ ಸುತ್ತಾಡಿ ದರೋಡೆ ಮಾಡ್ತಿದ್ದ 6 ಮಂದಿ ಅರೆಸ್ಟ್

ಯಶ್ ಫ್ಯಾನ್ಸ್ ಹುಚ್ಚಾಟ: ಹೈದರಾಬಾದ್ ಘಟನೆ ಇದು

ಪ್ರವಾಸಕ್ಕೆ ಬಂದಿದ್ದ ತಾಯಿ, ಮಗಳು ತುಂಗಭದ್ರಾ ನದಿಯಲ್ಲಿ ನಾಪತ್ತೆ

Kannada Webstories ಇನ್ನಷ್ಟು ಓದಿ
‘ಟಾಕ್ಸಿಕ್’ ಪ್ರಚಾರದಲ್ಲಿ ಫ್ಯಾನ್ಸ್ ...
‘ಟಾಕ್ಸಿಕ್’ ಸಿನಿಮಾದ ಮುಖ್ಯ ...
‘ಟಾಕ್ಸಿಕ್’ನಲ್ಲಿ ನಟಿಸಿರುವುದು ಕನಸು ...
ತಮ್ಮ ಬಂದ ಆರೋಪಕ್ಕೆ ...
Follow US ON
Contact Us About Us Advertise With Us Complaint Redressal Privacy & Cookies Notice
Network Sites
  • TV9 Bharatvarsh
  • TV9 Marathi
  • TV9 Telugu
  • TV9 Bangla
  • TV9 Gujarati
  • TV9 Punjabi
  • TV9 Tamil
  • TV9 Malayalam
  • TV9 UP
  • News9 LIVE
  • Money9 LIVE
Copyright © 2026 TV9 Kannada All Rights Reserved.

ತಾಜಾ ಸುದ್ದಿ

    ರಾಜ್ಯ

    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ
    • ಬೆಳಗಾವಿ
    • ಬಾಗಲಕೋಟೆ
    • ಬೀದರ್​
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ

    ಮನರಂಜನೆ

    • ಸ್ಯಾಂಡಲ್​ವುಡ್
    • ಬಾಲಿವುಡ್
    • ಹಾಲಿವುಡ್
    • ಸಿನಿ ವಿಮರ್ಶೆ
    • ಕಿರುತೆರೆ
    • ott

    ಕ್ರೀಡೆ

    • ಕ್ರಿಕೆಟ್
    • ಇತರೇ ಕ್ರೀಡೆ

    ಚುನಾವಣೆ 2026

      ಫೋಟೋ ಗ್ಯಾಲರಿ

        ಜೀವನಶೈಲಿ

          ಆರೋಗ್ಯ

            ಜ್ಯೋತಿಷ್ಯ

              ಅಧ್ಯಾತ್ಮ

                ವೈರಲ್​

                  ವಾಣಿಜ್ಯ

                    ಶಿಕ್ಷಣ

                      ದೇಶ

                        ವಿದೇಶ

                          ಕ್ರೈಂ

                            ರಾಜಕೀಯ

                              ವಿಡಿಯೋ

                                ಅಭಿಮತ

                                  ಮೆನು
                                  ಫೋಟೋ
                                  ಶಾರ್ಟ್ಸ್
                                  ವಿಡಿಯೋ
                                  ವೆಬ್​ ಸ್ಟೋರಿ