AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ ಜಿಲ್ಲಾಡಳಿತದಿಂದ ಕೊವಿಡ್ ತಡೆಗೆ ವಿನೂತನ ಪ್ರಯೋಗ; ಕೊರೊನಾ ಸುರಕ್ಷಾ ಪಡೆಗೆ ಚಾಲನೆ

ಕೆಂಪು ಬಣ್ಣದ ಶರ್ಟ್ ಮತ್ತು ಟೋಪಿ ಧರಿಸುವ ಸುರಕ್ಷಾ ಪಡೆ ಸಿಬ್ಬಂದಿ ನಗರದ ಪ್ರಮುಖ ಸರ್ಕಲ್​ಗಳಲ್ಲಿ ನಿಂತು ಮೈಕ್ ಮೂಲಕ ಹೇಳಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಗರದ ಜೈ ಭುವನೇಶ್ವರಿ ವೃತ್ತದಲ್ಲಿ ಈ ಸುರಕ್ಷಾ ಪಡೆಗೆ ಚಾಲನೆ ನೀಡಿದರು.

ಚಾಮರಾಜನಗರ ಜಿಲ್ಲಾಡಳಿತದಿಂದ ಕೊವಿಡ್ ತಡೆಗೆ ವಿನೂತನ ಪ್ರಯೋಗ; ಕೊರೊನಾ ಸುರಕ್ಷಾ ಪಡೆಗೆ ಚಾಲನೆ
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಗರದ ಜೈ ಭುವನೇಶ್ವರಿ ವೃತ್ತದಲ್ಲಿ ಸುರಕ್ಷಾ ಪಡೆಗೆ ಚಾಲನೆ ನೀಡಿದರು
Follow us
preethi shettigar
| Updated By: Digi Tech Desk

Updated on:Apr 19, 2021 | 1:00 PM

ಚಾಮರಾಜನಗರ: ಕೊರೊನಾ ಎರಡನೇ ಅಲೆ ಶುರುವಾಗುತ್ತಿದ್ದಂತೆ ಚಾಮರಾಜನಗರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾರಂಭಿಸಿದೆ. ರಾಜ್ಯದಲ್ಲಿಯೇ ಮೊದಲನೇ ಬಾರಿಗೆ ಕೊರೊನಾ ಸುರಕ್ಷಾ ಪಡೆ ರಚಿಸಿದೆ. ಜಿಲ್ಲೆಯಾದ್ಯಂತ 20 ಪಡೆಗಳ ರಚನೆ ಮಾಡಲಾಗಿದ್ದು, ಕೊರೊನಾ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಿದೆ. ಪ್ರತಿ ಅಂಗಡಿ ಮುಂಗಟ್ಟುಗಳಿಗೂ ಹೋಗಿ ಮಾಸ್ಕ್ ಮಹತ್ವ ಮತ್ತು ದಂಡ ವಿಧಿಸುವ ಕಾರ್ಯವನ್ನ ಕೊರೊನಾ ಸುರಕ್ಷಾ ಪಡೆ ಮಾಡಲಿದೆ.

ಕೊವಿಡ್ ಶಿಷ್ಟಾಚಾರ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವುದು ಮತ್ತು ಕೊವಿಡ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಚಾಮರಾಜನಗರ ಜಿಲ್ಲಾಡಳಿತ ನೂತನ ಕ್ರಮಕ್ಕೆ ಮುಂದಾಗಿದೆ. ಚಾಮರಾಜನಗರ ಜಿಲ್ಲೆಯಾದ್ಯಂತ ಇರುವ ಐದು ಸ್ಥಳೀಯ ಸಂಸ್ಥೆಗಳಲ್ಲೂ  ಕೊರೊನಾ ಸುರಕ್ಷಾ ಪಡೆ ರಚಿಸಲಾಗಿದೆ. ಪ್ರತಿಯೊಂದು ಸುರಕ್ಷಾ ಪಡೆಯಲ್ಲೂ ನಾಲ್ಕರಿಂದ ಐದು ಸ್ಕೌಟ್ಸ್ ಆ್ಯಂಡ್ ಗೈಡ್ಸ್​ನ ಸದಸ್ಯರು ಇರಲಿದ್ದಾರೆ. ಇವರ ಜೊತೆ ಓರ್ವ ಪೊಲೀಸ್ ಅಧಿಕಾರಿ, ನಗರಸಭೆಯ ಆರೋಗ್ಯ ಅಧಿಕಾರಿಗಳು ಇರಲಿದ್ದಾರೆ.

ಕೆಂಪು ಬಣ್ಣದ ಶರ್ಟ್ ಮತ್ತು ಟೋಪಿ ಧರಿಸುವ ಸುರಕ್ಷಾ ಪಡೆ ಸಿಬ್ಬಂದಿ ನಗರದ ಪ್ರಮುಖ ಸರ್ಕಲ್​ಗಳಲ್ಲಿ ನಿಂತು ಮೈಕ್ ಮೂಲಕ ಹೇಳಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಗರದ ಜೈ ಭುವನೇಶ್ವರಿ ವೃತ್ತದಲ್ಲಿ ಈ ಸುರಕ್ಷಾ ಪಡೆಗೆ ಚಾಲನೆ ನೀಡಿದರು. ಈ ವೇಳೆ ಮಾಸ್ಕ್ ಧರಿಸದೇ ವಾಹನ ಸವಾರಿ ಮಾಡುತ್ತಿದ್ದವರನ್ನು ತಡೆದು ದಂಡ ವಿಧಿಸಲಾಯಿತು. ಇನ್ನು ಅಂಗಡಿ ಮುಂಗಟ್ಟುಗಳಲ್ಲಿ ಮಾಸ್ಕ್ ಹಾಕದೇ ಇರುವವರ ವಿರುದ್ಧ ಜಿಲ್ಲಾಧಿಕಾರಿ ಅವರ ಸಮ್ಮುಖದಲ್ಲಿಯೇ ದಂಡ ವಿಧಿಸಲಾಯಿತು.

ಪಟ್ಟಣದ ಕೆಲವೆಡೆ ಅಂತರ ಕಾಯ್ದುಕೊಳ್ಳದ ಹಾಗೂ ಮಾಸ್ಕ್ ಧರಿಸದೇ ಬಂದ ಗ್ರಾಹಕರಿಗೆ ವ್ಯಾಪಾರ ಖರೀದಿಗೆ ಅವಕಾಶ ನೀಡಿದ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಅಂಗಡಿ ಮುಚ್ಚಲು ಆದೇಶಿಸಿದರು. ಕೊವಿಡ್ ಶಿಷ್ಟಾಚಾರ ಉಲ್ಲಂಘಿಸಿದ ಕೆಲವು ಅಂಗಡಿಗಳನ್ನು ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಮುಚ್ಚಿಸಲಾಯಿತು. ಅಂಗಡಿ ಮಾಲೀಕರು, ರಸ್ತೆ ಬದಿ ವ್ಯಾಪಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಮ್ಮ ಅಂಗಡಿ ಮುಂಗಟ್ಟು, ವ್ಯಾಪಾರ ಸ್ಥಳದಲ್ಲಿ ಮಾಸ್ಕ್ ಧರಿಸುವ ಬಗ್ಗೆ ಫಲಕಗಳನ್ನು ಹಾಕಬೇಕು. ಮಾಸ್ಕ್ ಹಾಕದೇ ಅಂಗಡಿಗಳಿಗೆ ಬರುವವರಿಗೆ ವ್ಯಾಪಾರ, ಖರೀದಿಗೆ ಅವಕಾಶ ನೀಡಬಾರದೆಂದು ತಿಳಿಸಿದರು.

ಕೊವಿಡ್ ಆರಂಭ ಆದಾಗಿಂದ ಇದೇ ಮೊದಲ ಬಾರಿಗೆ ಶನಿವಾರ 130 ಕೊರೊನಾ ಪ್ರಕರಣ ಒಂದೇ ದಿನ ದಾಖಲಾಗಿರುವುದು ಜಿಲ್ಲಾಡಳಿತಕ್ಕೆ ಆತಂಕ ಉಂಟು ಮಾಡಿದೆ. ಜನರಲ್ಲಿ ಎಷ್ಟೇ ಅರಿವು ಮೂಡಿಸಿದರೂ ಎಚ್ಚೆತ್ತು ಕೊಳ್ಳದೆ, ಕೊರೊನಾ ಕೈ ಮೀರುತ್ತಿರುವುದನ್ನ ಅರಿತ ಪೊಲೀಸ್ ಇಲಾಖೆ ಕೂಡ ದಂಡ ಹಾಕಲು ಮುಂದಾಗಿದೆ.‌ ಇನ್ನು ಮುಂದೆ ಅಂಗಡಿ ಮುಂಗಟ್ಟು, ಕಲ್ಯಾಣ ಮಂಟಪ, ಸಾರ್ವಜನಿಕ ಸ್ಥಳಗಳಿಗೆ ಸುರಕ್ಷಾ ಪಡೆ ಭೇಟಿ ನೀಡಲಿದೆ.

ಈ ವೇಳೆ ಮಾಸ್ಕ್ ಧರಿಸದ ಯುವಕ ತಂಡ ಹಿಡಿದು ತರಲಿದ್ದು, ನಗರಸಭೆ ಆರೋಗ್ಯಾಧಿಕಾರಿ 100 ರುಪಾಯಿ ದಂಡ ಹಾಕಲಿದ್ದಾರೆ.‌ ಇನ್ನೂ ಯುವಕರಿಗೆ ಈಗಾಗಲೇ ಐದು ದಿನಗಳ ಕಾಲ ತರಭೇತಿ ನೀಡಲಾಗಿದ್ದು, ಪೊಲೀಸರು ಇಡೀ ಸುರಕ್ಷಾ ಪಡೆಗೆ ಬೆಂಗಾವಲಾಗಿ ಇರಲಿದ್ದಾರೆ ಎಂದು ಎಸ್​ಪಿ ದಿವ್ಯ ಥಾಮಸ್ ಹೇಳಿದ್ದಾರೆ.

ಒಟ್ಟಿನಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ಹೆಮ್ಮಾರಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಅಧಿಕಾರಿಗಳ ಶ್ರಮಕ್ಕೆ ಸಾರ್ವಜನಿಕರು, ವರ್ತಕರು ಕೈ ಜೋಡಿಸಿದರೆ ಆದಷ್ಟು ಬೇಗ ಕೊರೊನಾ ಹೆಮ್ಮಾರಿಯನ್ನ ಓಡಿಸಬಹುದಾಗಿದೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಕೊರೊನಾ ಕರ್ಫ್ಯೂ; ಗಣಿನಾಡಿನಲ್ಲಿ ನಿಯಂತ್ರಣಕ್ಕೆ ಬಾರದ ಕೊವಿಡ್ 19

Covid-19 Karnataka Update: ಕರ್ನಾಟಕದಲ್ಲಿ ಇಂದು 19,067 ಜನರಿಗೆ ಕೊರೊನಾ ದೃಢ, 81 ಸಾವು

(Chamarajanagar district administration Corona Safety Force has started new methods to control covid)

Published On - 12:34 pm, Mon, 19 April 21

Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?