AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಳಿ ನೊರೆಯ ಹಾಲಿನಂತೆ ಧುಮ್ಮಿಕ್ಕುತ್ತಿದ್ದಾಳೆ ಕಾವೇರಿ, ಪ್ರವಾಸಿಗರನ್ನು ಮೋಡಿ ಮಾಡುತ್ತಿದೆ ಭರಚುಕ್ಕಿ

ಸುತ್ತಲು ಹಸಿರಸಿರಿ... ಭೂಮಾತೆಗೆ ಮುಕಟವಿಟ್ಟಂತೆ ಕಾಣೋ ಗಿರಿಶಿಖರಗಳ ಸಾಲು.. ತಂಪಾಗಿ ಬೀಸೋ ಗಾಳಿ.. ಭೂರಮೆಯನ್ನ ಮುತ್ತಿಕ್ಕೋ ಜಲರಾಶಿ... ಬಿಳಿ ನೊರೆಯ ಹಾಲಿನಂತೆ ಚಿತ್ತಾರ... ಪ್ರಕೃತಿಯ ಸೊಬಗು ಹೆಚ್ಚಿಸೋ ನೀರಿನ ವೈಯ್ಯಾರ... ಇದು ಜಲಲ ಜಲಲ ಜಲಧಾರೆ.. ಭರಚುಕ್ಕಿಯ ಸೌಂದರ್ಯಧಾರೆ.

ಬಿಳಿ ನೊರೆಯ ಹಾಲಿನಂತೆ ಧುಮ್ಮಿಕ್ಕುತ್ತಿದ್ದಾಳೆ ಕಾವೇರಿ, ಪ್ರವಾಸಿಗರನ್ನು ಮೋಡಿ ಮಾಡುತ್ತಿದೆ ಭರಚುಕ್ಕಿ
ಭರಚುಕ್ಕಿ
TV9 Web
| Updated By: ಆಯೇಷಾ ಬಾನು|

Updated on: Jul 26, 2021 | 7:39 AM

Share

ಚಾಮರಾಜನಗರ: ಕನ್ನಡ ನಾಡಿನ ಜೀವ ನದಿ ಕಾವೇರಿ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಲ್ಲಿ ಮೈದುಂಬಿ ಹರಿಯುತ್ತಿದ್ದಾಳೆ. ಹಸಿರು ಸೀರೆಯುಟ್ಟ ನವಸಿರಿ ನಡುವೆ ಭರಚುಕ್ಕಿಯಲ್ಲಿ ಧುಮ್ಮಿಕ್ಕುತ್ತಿದ್ದಾಳೆ. ಸುಮಾರು 80 ಅಡಿ ಎತ್ತರದಿಂದ ಧುಮ್ಮಿಕ್ಕುವ ಕಾವೇರಿ ನೀರು ಹಾಲ್ನೋರೆಯಂತೆ ಕಾಣುತ್ತಿದೆ. ಪ್ರಕೃತಿ ಸೊಬಗಿನ ಮಧ್ಯೆ ಹರಿಯುವ ಕಾವೇರಿ ವಯ್ಯಾರಕ್ಕೆ ಎಲ್ಲರೂ ಮನಸೋಲುವಂತೆ ಮಾಡಿದ್ದಾಳೆ. ಇಷ್ಟು ದಿನ ಕೊರೊನಾ ಕಾಟದಿಂದ ಮನೆಯಲ್ಲಿ ಕುಳಿತಿದ್ದ ಪ್ರವಾಸಿಗರು ಈಗ ಭರಚುಕ್ಕಿಯ ಅಂದವನ್ನ ಸವಿಯುತ್ತಿದ್ದಾರೆ.

ಮುಂಗಾರು ಮಳೆ ಚುರುಕಾಗಿರುವುದರಿಂದ ಭರಚುಕ್ಕಿ ಜಲಪಾತಕ್ಕೆ ಜೀವ ಕಳೆ ಬಂದಿದೆ. ಬೆಂಗಳೂರಿನಿಂದ 100 ಕಿಲೋಮೀಟರ್, ಮೈಸೂರಿನಿಂದ 80 ಕಿಲೋಮೀಟರ್ ದೂರದಲ್ಲಿ ಇರುವ ಭರಚುಕ್ಕಿ ಪ್ರವಾಸಿಗರ ಅಚ್ಚುಮೆಚ್ಚಿನ ಕೇಂದ್ರವಾಗಿದೆ. ಪ್ರವಾಸಿಗರು ಭರಚುಕ್ಕಿಯ ಅಂದ ಸವಿಯುತ್ತಾ, ಸೆಲ್ಫಿ ತೆಗೆದುಕೊಳ್ಳುತ್ತಾ ಮಸ್ತ್ ಮಜಾ ಮಾಡುತ್ತಿದ್ದಾರೆ. ಆದ್ರೆ ದೈಹಿಕ ಅಂತರ.. ಮಾಸ್ಕ್ ಕಾಣೆಯಾಗಿದೆ.

ಒಟ್ನಲ್ಲಿ, ಕಾನನದ ನಡುವೆ ಬೀಳ್ತಿರೋ ಕಾವೇರಿಯ ಅಂದ ಕಣ್ತುಂಬಿಕೊಳ್ಳಲು, ದಿನ ನಿತ್ಯ ಸಾವಿರಾರು ಪ್ರವಾಸಿಗರು ಜನ ಬರುತ್ತಿದ್ದಾರೆ. ಜಾಲಿ ರೈಡ್ ಮುಗಿಸಿ, ಜಲಪಾತದ ಸೊಬಗು ಕಂಡು ಎಲ್ರೂ ಖುಷ್ ಆಗ್ತಿದ್ದಾರೆ.

bharachukki falls

ಭರಚುಕ್ಕಿ

bharachukki falls

ಪ್ರವಾಸಿಗರನ್ನು ಮೋಡಿ ಮಾಡುತ್ತಿದೆ ಭರಚುಕ್ಕಿ

bharachukki falls

ಭರಚುಕ್ಕಿ

ಇದನ್ನೂ ಓದಿ: Weight Loss Tips: ರಾತ್ರಿ ಮಲಗುವ ಮೊದಲು ಮಾಡುವ ಈ ತಪ್ಪುಗಳು ದೇಹದ ತೂಕ ಹೆಚ್ಚಾಗುವಂತೆ ಮಾಡುತ್ತವೆ

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!