AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬ್ಬಿಗಾಗಿ ಹೆದ್ದಾರಿಯಲ್ಲಿ ನಿಲ್ಲುವ ಮದವೇರಿದ ಆನೆಗಳ ಮಧ್ಯೆ ಕಾಳಗ! ಮೈನವಿರೇಳಿಸುವ ದೃಶ್ಯ ಮೊಬೈಲ್​ಗಳಲ್ಲಿ ಸೆರೆ

ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಬ್ಬು ತುಂಬಿದ ಲಾರಿಗಳು ಓಡಾಡುತ್ತಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ಗ್ರಾಹಕರ ರೀತಿಯಲ್ಲಿ ನಿಂತು ಕೊಂಡಿರುವ ಆನೆಗಳು ಲಾರಿ ಅಡ್ಡಗಟ್ಟಿ ಕಬ್ಬನ್ನು ತಿನ್ನುತ್ತವೆ. ಕೆಲವೊಮ್ಮೆ ಲಾರಿ ಚಾಲಕರೇ ಆನೆಗಳಿಗೆ ಕಬ್ಬನ್ನ ಕೊಡುತ್ತಾರೆ.

ಕಬ್ಬಿಗಾಗಿ ಹೆದ್ದಾರಿಯಲ್ಲಿ ನಿಲ್ಲುವ ಮದವೇರಿದ ಆನೆಗಳ ಮಧ್ಯೆ ಕಾಳಗ! ಮೈನವಿರೇಳಿಸುವ ದೃಶ್ಯ ಮೊಬೈಲ್​ಗಳಲ್ಲಿ ಸೆರೆ
ಆನೆಗಳೇರಡು ಕಾದಾಡುತ್ತಿರುವ ದೃಶ್ಯ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Dec 29, 2020 | 5:14 PM

ಚಾಮರಾಜನಗರ: ಮದವೇರಿದ ಎರಡು ಆನೆಗಳು ಕಾಳಗ ನಡೆಸಿ, ವಾಹನ ಸವಾರರನ್ನು ತಮ್ಮತ್ತ ಸೆಳೆದಿರುವ ಘಟನೆಯೊಂದು ಬೆಂಗಳೂರಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ, ಚಾಮರಾಜನಗರ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ನಡೆದಿದೆ.

ಮನರಂಜನೆ ಪಡೆದ ಪ್ರಯಾಣಿಕರು: ರಾಷ್ಟ್ರೀಯ ಹೆದ್ದಾರಿ 209ರಿಂದ ಸುಮಾರು 50 ಮೀಟರ್ ದೂರದಲ್ಲಿ ಕಾಡಾನೆಗಳು ಕಾಳಗ‌ ನಡೆಸಿದ್ದು, ಸುಮಾರು ಒಂದು ಗಂಟೆಗೂ ಅಧಿಕ ಸಮಯ ಮದಗಜಗಳೆರಡು ಫೈಟಿಂಗ್ ನಡೆಸಿವೆ. ಈ ಕಾಳಗದಿಂದ ಚಾಮರಾಜನಗರದಿಂದ ತಮಿಳುನಾಡಿಗೆ ಹೋಗುತ್ತಿದ್ದ ಪ್ರಯಾಣಿಕರು ಬಿಟ್ಟಿ ಮನರಂಜನೆ ಪಡೆದುಕೊಂಡಿದ್ದು ತಮ್ಮ ಮೊಬೈಲ್​ಗಳಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು ಆನಂದಿಸಿದ್ದಾರೆ.

ಕಬ್ಬಿಗಾಗಿ ರಾಷ್ಟ್ರೀಯ ಹೆದ್ದಾರಿಗೆ ಆಗಮಿಸುವ ಆನೆಗಳು.. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಬ್ಬು ತುಂಬಿದ ಲಾರಿಗಳು ಓಡಾಡುತ್ತಿರುತ್ತವೆ. ಈ ವೇಳೆ ರಸ್ತೆ ಬದಿಯಲ್ಲಿ ಗ್ರಾಹಕರ ರೀತಿಯಲ್ಲಿ ನಿಲ್ಲುವ ಈ ಮದವೇರಿದ ಆನೆಗಳು ಲಾರಿಗಳನ್ನು ಅಡ್ಡಗಟ್ಟಿ ಕಬ್ಬನ್ನು ಕಿತ್ತು ತಿನ್ನುತ್ತವೆ. ಕೆಲವೊಮ್ಮೆ ಲಾರಿ ಚಾಲಕರೇ ಆನೆಗಳಿಗೆ ಕಬ್ಬನ್ನ ಕೊಡುತ್ತಾರೆ. ಹೀಗಾಗಿ ಆನೆಗಳು ಸಂಜೆ ಮತ್ತು ಮುಂಜಾನೆಯ ವೇಳೆ ರಸ್ತೆಯ ಬದಿ ಬಂದು ನಿಲ್ಲುವುದನ್ನು ಅಭ್ಯಾಸ ಮಾಡಿಕೊಂಡಿವೆ.

ಆನೆಗಳ ಕಾದಾಟದ ದೃಶ್ಯ

ಇಲ್ಲಿಯವರೆಗೆ ತೊಂದರೆ ಕೊಡದ ಆನೆಗಳು: ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುಮಾರು 3,500 ಆನೆಗಳಿವೆ. ಸುವರ್ಣಾವತಿ ಜಲಾಶಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವುದರಿಂದ ಆನೆಗಳು ಕಾಡಿನಿಂದ ನೀರು ಕುಡಿಯಲು ಅಲ್ಲಿಗೆ ಬರುತ್ತವೆ. ನೀರು ಕುಡಿದು ರಸ್ತೆ ಬದಿ ನಿಂತು ಕೊಳ್ಳುವ ಆನೆಗಳು ಕಬ್ಬಿನ ಸಿಹಿ ಸವಿಯುತ್ತವೆ. ಆದರೆ ಇವು ಇಲ್ಲಿ ಸಂಚಾರ ಮಾಡುವವರಿಗೆ ಈವರೆಗೆ ಯಾವುದೇ ತೊಂದರೆ ಮಾಡಿಲ್ಲ ಎನ್ನುವುದು ಖುಷಿಯ ವಿಚಾರ.

ಮೈನವಿರೇಳಿಸುವ ಆನೆಗಳ ಕಾಳಗ: ಸದ್ಯ ಪುಣಜನೂರು ಚೆಕ್ ಪೋಸ್ಟ್ ಬಳಿ 2 ಆನೆಗಳು ಪರಸ್ಪರ ಘೀಳಿಟ್ಟು, ಸೊಂಡಿಲುಗಳನ್ನು‌ ಸುತ್ತಿಕೊಂಡು ಕಾದಾಡುತ್ತಿದ್ದನ್ನು ಕಂಡ ವಾಹನ ಸವಾರರು ರೋಮಾಂಚಕ ಅನುಭವ ಪಡೆದಿದ್ದಾರೆ‌. ಬಣ್ಣಾರಿ ದೇಗುಲಕ್ಕೆ ತೆರಳಿದ್ದ ಪ್ರವಾಸಿಗರು ಆನೆಗಳ ಕಾಳಗದ ವಿಡಿಯೋವನ್ನು ಸೆರೆಹಿಡಿದಿದ್ದಾರೆ.

ಸವಾರರು, ವಾಹನ ಚಾಲಕರು ಈ ಕಾಳಗ ನೋಡಲು ಜಮಾಯಿಸಿದ್ದರಿಂದ ಸ್ವಲ್ಪ ಹೊತ್ತಿನ ಮಟ್ಟಿಗೆ ಇಲ್ಲಿ ಜನಜಂಗುಳಿ ಉಂಟಾಗಿದ್ದು, ನಂತರ ಅರಣ್ಯ ಸಿಬ್ಬಂದಿಯೊಬ್ಬರು ಸ್ಥಳಕ್ಕಾಗಮಿಸಿ ಎಲ್ಲರನ್ನೂ ಚದುರಿಸುವ ಪರಿಸ್ಥಿತಿ ಎದುರಾಯಿತು. ಆನೆಗಳ‌ ಘೀಳಿನ ಶಬ್ಧ, ಅವುಗಳ ಕಾದಾಟ ನೋಡಿದರೇ ಭಯವಾಗುವಂತಿತ್ತು ಎಂದು ಅಲ್ಲಿ ನೆರೆದಿದ್ದ ಪ್ರತ್ಯಕ್ಷದರ್ಶಿ ಜನರು ತಿಳಿಸಿದ್ದಾರೆ.

ಇದೇ ರೀತಿಯಾದರೆ ಮುಂದಿನ ದಿನಗಳಲ್ಲಿ ಆನೆಗಳಿಗೆ ದಂತಗಳೇ ಇರುವುದಿಲ್ಲ……!

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್