AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

30 ವರ್ಷ ಹಿಂದೆ ತಾನೇ ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲಿ 85 ವರ್ಷದ ವೃದ್ಧನ ಅಂತ್ಯಸಂಸ್ಕಾರ ನೆರವೇರಿತು!

ಮೃತ 85 ವರ್ಷದ ಪುಟ್ಟನಂಜಪ್ಪಗೆ ಮೂವರು ಮಕ್ಕಳಿದ್ದರು. ಮಕ್ಕಳಿಗೆ ತೊಂದರೆಯಾಗಬಾರದೆಂದು ತಮ್ಮ ಅಂತ್ಯಸಂಸ್ಕಾರ, ತಿಥಿ ಕಾರ್ಯಕ್ಕೆಂದು 1 ಲಕ್ಷ ರೂ ಹಣ ಮೀಸಲಿಟ್ಟಿದ್ದರು.

30 ವರ್ಷ ಹಿಂದೆ ತಾನೇ ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲಿ 85 ವರ್ಷದ ವೃದ್ಧನ ಅಂತ್ಯಸಂಸ್ಕಾರ ನೆರವೇರಿತು!
30 ವರ್ಷ ಹಿಂದೆ ತಾನೇ ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲಿ 85 ವರ್ಷದ ವೃದ್ಧನ ಅಂತ್ಯಸಂಸ್ಕಾರ ನೆರವೇರಿತು!
TV9 Web
| Edited By: |

Updated on:Jul 25, 2022 | 5:43 PM

Share

ಚಾಮರಾಜನಗರ: ಚಾಮರಾಜನಗರ (chamarajanagar) ತಾಲೂಕಿನ ನಂಜೇದೇವನಪುರದಲ್ಲಿ ತಾನೇ ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲಿ ವೃದ್ಧರೊಬ್ಬರ (old man) ಅಂತ್ಯಸಂಸ್ಕಾರ (last rites) ನೆರವೇರಿಸಲಾಯಿತು! ಇಂದು ನಿಧನರಾದ 85 ವರ್ಷದ ಪುಟ್ಟನಂಜಪ್ಪ ಅವರು 30 ವರ್ಷಗಳ ಹಿಂದೆಯೇ ತಮ್ಮ ಸಮಾಧಿ ನಿರ್ಮಿಸಿಕೊಂಡಿದ್ದರು. ಸಿಮೆಂಟ್‌ನಿಂದ ಸಮಾಧಿ ನಿರ್ಮಿಸಿ, ಮರಳು ತುಂಬಲಾಗಿತ್ತು. ಇಂದು ಮರಳು ತೆಗೆದು, ಸಮಾಧಿಯಲ್ಲಿ (grave) ಪುಟ್ಟನಂಜಪ್ಪ ಅಂತ್ಯಸಂಸ್ಕಾರ ಮಾಡಲಾಯಿತು.

ಮೃತ 85 ವರ್ಷದ ಪುಟ್ಟನಂಜಪ್ಪಗೆ ಮೂವರು ಮಕ್ಕಳಿದ್ದರು. ಮಕ್ಕಳಿಗೆ ತೊಂದರೆಯಾಗಬಾರದೆಂದು ತಮ್ಮ ಅಂತ್ಯಸಂಸ್ಕಾರ, ತಿಥಿ ಕಾರ್ಯಕ್ಕೆಂದು 1 ಲಕ್ಷ ರೂ ಹಣ ಮೀಸಲಿಟ್ಟಿದ್ದರು. ಅಂತ್ಯಸಂಸ್ಕಾರಕ್ಕೆ ಬೇಕಾದ ಪೂಜಾ ಸಾಮಗ್ರಿ ಸಹ ತೆಗೆದಿಟ್ಟಿದ್ದರು.

ಸಮಾಧಿಯಿರುವ ಜಾಗದ ಕಡೆ ಈ 30 ವರ್ಷಗಳಲ್ಲಿ ಓಡಾಡುವಾಗ…

ವ್ಯಕ್ತಿಯೊಬ್ಬರು 30 ವರ್ಷದ ಹಿಂದೆಯೇ ತಮ್ಮ ಸಮಾಧಿ ನಿರ್ಮಿಸಿಕೊಂಡಿದ್ದರು ಎಂಬುದು ನಿಜಕ್ಕೂ ಸೋಜಿಗದ ವಿಷಯ. ಕುತೂಹಲಕಾರಿ ಸಂಗತಿ. ಜೊತೆಗೆ ಆತಂಕಕಾರಿಯೂ ಹೌದು. 30 ವರ್ಷದ ಹಿಂದೆ ತಮ್ಮದೇ ಸಮಾಧಿ ಹೀಗಿರಲಿ ಎಂದು ನಿರ್ಮಿಸಿಕೊಂಡಾಗ ಅವರ ಮನಸ್ಥಿತಿ ಹೇಗಿತ್ತು. ಸಮಾಧಿ ನಿರ್ಮಾಣವಾದ ಮಾರನೆಯ ದಿನವೇ ಅವರು ಮೃತಪಟ್ಟಿದ್ದರೆ ಅದೊಂದು ರೀತಿ. ಆದರೆ 3 ದಶಕಗಳ ಸುದೀರ್ಘ ಕಾಲ ಅವರು ತಮ್ಮದೇ ಸಮಾಧಿಯನ್ನು ನೋಡಿ ನೋಡಿ ಹೇಗೆ ಜೀವನ ದೂಡುತ್ತಿದ್ದರು. ಅದಿನ್ನೆಂಥಹಾ ಅಭಾವ ವೈರಾಗ್ಯ ಅವರನ್ನ ಕಾಡಿರಬಹುದು. ಜೊತೆಗೆ ತಮ್ಮ ಸಮಾಧಿಯಿರುವ ಜಾಗದ ಕಡೆ ಈ 30 ವರ್ಷಗಳಲ್ಲಿ ಓಡಾಡುವಾಗ ಪುಟ್ಟನಂಜಪ್ಪ ಅವರಲ್ಲಿ ಅದಿನ್ನೆಂಥಾ ಭಾವ ಮೂಡಿರಬಹುದು… ಅಲ್ಲವಾ!?

Published On - 5:35 pm, Mon, 25 July 22

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ