ಚಾಮರಾಜನಗರ: ಅರಣ್ಯ ಇಲಾಖೆ‌ ವಾಹನದ ಮೇಲೆ ಕಾಡಾನೆ ದಾಳಿ, ಜೀಪ್​ ನುಚ್ಚುನೂರು, ಅಧಿಕಾರಿ-ಸಿಬ್ಬಂದಿಗೆ ಗಾಯ

ಆನೆ ದಾಳಿಯಿಂದ ವಾಹನ ಚಾಲಕ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಓಂಕಾರ ಒಲಯಕ್ಕೆ ಸೇರಿದ ಶಿವಕುಮಾರಪುರ ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ಆನೆಯನ್ನು ಕಾಡಿಗಟ್ಟಲು ಹರಸಾಹಸ ಪಡುವಂತಾಗಿದೆ.

ಚಾಮರಾಜನಗರ: ಅರಣ್ಯ ಇಲಾಖೆ‌ ವಾಹನದ ಮೇಲೆ ಕಾಡಾನೆ ದಾಳಿ, ಜೀಪ್​ ನುಚ್ಚುನೂರು,  ಅಧಿಕಾರಿ-ಸಿಬ್ಬಂದಿಗೆ ಗಾಯ
ವಾಹನದ ಮೇಲೆ ಕಾಡಾನೆ ದಾಳಿ
Updated By: ಸಾಧು ಶ್ರೀನಾಥ್​

Updated on: Jan 07, 2022 | 11:28 AM

ಚಾಮರಾಜನಗರ: ಬೆಳ್ಳಂಬೆಳಗ್ಗೆ ಜಮೀನಿಗೆ ನುಗ್ಗಿದ ಆನೆಯನ್ನು ಕಾಡಿಗೆ ಓಡಿಸಲು ಬಂದ ಅರಣ್ಯ ಇಲಾಖೆ (Forest department) ವಾಹನದ ಮೇಲೆ ಆನೆ ದಾಳಿ (Elephant) ಮಾಡಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಕುಮಾರಪುರದಲ್ಲಿ ಅರಣ್ಯ ಇಲಾಖೆ‌ ವಾಹನದ ಮೇಲೆ ಕಾಡಾನೆ ದಾಳಿ ಮಾಡಿದೆ. ದಾಳಿಯಿಂದ ವಾಹನ ಚಾಲಕ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಓಂಕಾರ ಒಲಯಕ್ಕೆ ಸೇರಿದ ಶಿವಕುಮಾರಪುರ ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ಆನೆಯನ್ನು ಕಾಡಿಗಟ್ಟಲು ಹರಸಾಹಸ ಪಡುವಂತಾಗಿದೆ.

ಕಲಬುರಗಿ: ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬಿದಿ ನಾಯಿಗಳ ದಾಳಿ
ಕಲಬುರಗಿ ಜಿಲ್ಲೆಯ ತಾಜ್ ನಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬಿದಿ ನಾಯಿಗಳು ದಾಳಿ ಮಾಡಿವೆ. ಐವರು ಮಕ್ಕಳಿಗೆ ಬೀದಿ ನಾಯಿ ಕಚ್ಚಿದ್ದು, ಗಾಯಗೊಂಡ ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ನಾಯಿಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

ದಾವಣಗೆರೆ: 4 ತಿಂಗಳಿಂದ ಗ್ರಾಮದಲ್ಲಿ ಹೆಚ್ಚಾದ ಕೋತಿಗಳ ಉಪಟಳ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ್ ಗ್ರಾಮದಲ್ಲಿ ಸಿಕ್ಕಸಿಕ್ಕವರ ಮೇಲೆ ಕೋತಿಗಳು ದಾಳಿ ನಡೆಸುತ್ತಿವೆ. ಕಳೆದ 4 ತಿಂಗಳಿಂದ ಗ್ರಾಮದಲ್ಲಿ ಕೋತಿಗಳ ಉಪಟಳ ಹೆಚ್ಚಾಗಿದೆ. ಆದಷ್ಟು ಬೇಗ ಈ ಬಗ್ಗೆ ಕ್ರಮವಹಿಸಿ ಎಂದು ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಪಿಡಿಓಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸೂಕ್ತ ಕ್ರಮಕೈಗೊಳ್ಳದ ಹಿನ್ನೆಲೆ ಬೆಳಗಾಗುತ್ತಿದ್ದಂತೆ ಮನೆಗಳ ಮೇಲೆ ಕೋತಿಗಳು ಓಡಾಡುತ್ತಿವೆ. ಹತ್ತಾರು ಮನೆಗಳ ಹಂಚು ನಾಶ ಮಾಡಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಂಡು ಅರಣ್ಯಕ್ಕೆ ಕೋತಿಗಳನ್ನು ಅಟ್ಟುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:
ಬೈಕ್ ಸವಾರನೊಬ್ಬ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದು ರೋಚಕ ಅದರೆ ಬೈಕ್  ತೆಗೆದುಕೊಳ್ಳಲು ಹೋಗಿದ್ದು ಮಾತ್ರ ಮೂರ್ಖತನ!

ಕೊಡಗು: ಕಾಡಾನೆ ದಾಳಿಗೆ ಬ್ರೇಕ್​; ಸೈರನ್ ಮತ್ತು ಸೆನ್ಸಾರ್ ಅಳವಡಿಕೆಯೇ ಹೊಸ ಆಶಾಕಿರಣ

Published On - 11:04 am, Fri, 7 January 22