ಒಂದು ಹೆಣ್ಣಿಗಾಗಿ ಕೋರ್ಟ್ ಅಟೆಂಡರ್ನನ್ನು ಕೊಲ್ಲಿಸಿದನೇ ವಕೀಲ?
ಚಿಕ್ಕಬಳ್ಳಾಪುರ ಕೋರ್ಟ್ ಅಟೆಂಡರ್ ನವೀನ್ ಹತ್ಯೆ ಪ್ರಕರಣ ಜಿಲ್ಲಾ ಪೊಲೀಸರು ಭೇದಿಸಿದ್ದು ಕೊಲೆ ಆರೋಪದಲ್ಲಿ ಒಬ್ಬ ವಕೀಲ, ಒಬ್ಬ ಮಹಿಳಾ ಅಟೆಂಡರ್, ಹಾಗೂ ಇಬ್ಬರು ಕಕ್ಷಿದಾರರನ್ನು ಬಂಧಿಸಲಾಗಿದೆ ಬಂಧಿತರನ್ನು ವೃತ್ತಿಯಲ್ಲಿ ವಕೀಲನಾಗಿರುವ ಜಿ.ನವೀನ್ (ಕೊಲೆಯಾದವನ ಹೆಸರು ಸಹ ನವೀನ್) ನ್ಯಾಯಾಲಯದ ಅಟೆಂಡರ್ ದೀಪಾ, ಕಕ್ಷಿದಾರರಾದ ಕೃಷ್ಣಮೂರ್ತಿ, ಅನಿಲ್ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ವಕೀಲ ನವೀನ್ ದೀಪಾ ಜತೆ ಅನೈತಿಕ ಸಂಪರ್ಕಹೊಂದಿದ್ದ. ಆದರೆ, ಕೆಲ ದಿನಗಳ ಮಟ್ಟಿಗೆ ಅವನು ಬೆಂಗಳೂರಿಗೆ ತೆರಳಿದ್ದಾಗ ಅಟೆಂಡರ್ ನವೀನ್ ದೀಪಾ […]


ವಕೀಲ ಜಿ ನವೀನ್
ಚಿಕ್ಕಬಳ್ಳಾಪುರ ಕೋರ್ಟ್ ಅಟೆಂಡರ್ ನವೀನ್ ಹತ್ಯೆ ಪ್ರಕರಣ ಜಿಲ್ಲಾ ಪೊಲೀಸರು ಭೇದಿಸಿದ್ದು ಕೊಲೆ ಆರೋಪದಲ್ಲಿ ಒಬ್ಬ ವಕೀಲ, ಒಬ್ಬ ಮಹಿಳಾ ಅಟೆಂಡರ್, ಹಾಗೂ ಇಬ್ಬರು ಕಕ್ಷಿದಾರರನ್ನು ಬಂಧಿಸಲಾಗಿದೆ
ಬಂಧಿತರನ್ನು ವೃತ್ತಿಯಲ್ಲಿ ವಕೀಲನಾಗಿರುವ ಜಿ.ನವೀನ್ (ಕೊಲೆಯಾದವನ ಹೆಸರು ಸಹ ನವೀನ್) ನ್ಯಾಯಾಲಯದ ಅಟೆಂಡರ್ ದೀಪಾ, ಕಕ್ಷಿದಾರರಾದ ಕೃಷ್ಣಮೂರ್ತಿ, ಅನಿಲ್ ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ವಕೀಲ ನವೀನ್ ದೀಪಾ ಜತೆ ಅನೈತಿಕ ಸಂಪರ್ಕಹೊಂದಿದ್ದ. ಆದರೆ, ಕೆಲ ದಿನಗಳ ಮಟ್ಟಿಗೆ ಅವನು ಬೆಂಗಳೂರಿಗೆ ತೆರಳಿದ್ದಾಗ ಅಟೆಂಡರ್ ನವೀನ್ ದೀಪಾ ಜತೆ ಅಕ್ರಮ ಸಂಪರ್ಕ ಬೆಳೆಸಿದನೆನ್ನಲಾಗಿದೆ. ಸದರಿ ವಿಷಯ ಗೊತ್ತಾದಾಗ ಕೆಂಡಾಮಂಡಲನಾದ ವಕೀಲ ನವೀನ್ ಅಟೆಂಡರ್ನೊಂದಿಗೆ ಮೊದಲಿಗೆ ಜಗಳ ಮಾಡಿ ನಂತರ ಹತ್ಯೆಗೈಯಲು ತನ್ನ ಕಕ್ಷಿದಾರರಾದ ಕೃಷ್ಣಮೂರ್ತಿ, ಅನಿಲ್ಗೆ ಸುಪಾರಿ ನೀಡಿದ್ದನಂತೆ.
ಸುಪಾರಿ ಪಡೆದ ಕೃಷ್ಣಮೂರ್ತಿ ಹಾಗೂ ಅನಿಲ್ ಅಟೆಂಡರ್ ನವೀನ್ನ ಕುತ್ತಿಗೆ ಬಿಗಿದು ಕೊಲೆಗೈದರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಚಾಣಾಕ್ಷತನದಿಂದ ಕೊಲೆ ಪ್ರಕರಣ ಬೇದಿಸಿದ ಚಿಕ್ಕಬಳ್ಳಾಪುರ ಪೊಲೀಸರನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

ದೀಪಾ

ಅನಿಲ್

ಕೃಷ್ಣಮೂರ್ತಿ




