AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಲಾಸ ಪರ್ವತವೇರಿ ಶಿವನ ದರ್ಶನ ಪಡೆಯಲಾಗದವರು ರಾಜಧಾನಿ ಪಕ್ಕದಲ್ಲೆ ಇರುವ ವಿಶ್ವಪ್ರಸಿದ್ದ ಗಿರಿಧಾಮಕ್ಕೆ ಪ್ರದಕ್ಷಿಣೆ ಹಾಕಿದರು!

Pancha Giri Walking: ಪ್ರತಿದಿನ ಮನೆಯ ಬಳಿ ಒಂದು ಕೀಲೋ ಮೀಟರ್ ವಾಕಿಂಗ್ ಮಾಡಲು ಬೇಸರ ಮಾಡಿಕೊಳ್ಳುವ ಮಹಿಳೆಯರಂತೂ... ಮುಗಿಬಿದ್ದು 16 ಕೀಲೋ ಮೀಟರ್ ಪ್ರದಕ್ಷಣೆ ಹಾಕಿದ್ದು ವಿಶೇಷವಾಗಿತ್ತು.

ಕೈಲಾಸ ಪರ್ವತವೇರಿ ಶಿವನ ದರ್ಶನ ಪಡೆಯಲಾಗದವರು ರಾಜಧಾನಿ ಪಕ್ಕದಲ್ಲೆ ಇರುವ ವಿಶ್ವಪ್ರಸಿದ್ದ ಗಿರಿಧಾಮಕ್ಕೆ ಪ್ರದಕ್ಷಿಣೆ ಹಾಕಿದರು!
ಕೈಲಾಸ ದರ್ಶನ! ನಂದಿಗಿರಿಧಾಮ ಸೇರಿದಂತೆ ಪಂಚಗಿರಿಗಳ ಸಾಲಿನಲ್ಲಿ 16 ಕಿ.ಮೀ. ಗಿರಿ ಪ್ರದಕ್ಷಿಣೆ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Jul 11, 2023 | 2:13 PM

Share

ಕೈಲಾಸ ಪರ್ವತವೇರಿ ಶಿವನ ದರ್ಶನ ಪಡೆಯಲಾಗದವರು ರಾಜಧಾನಿ ಪಕ್ಕದಲ್ಲೆ ಇರುವ ವಿಶ್ವ ಪ್ರಸಿದ್ದ ಗಿರಿಧಾಮವೊಂದನ್ನು ಪ್ರದಕ್ಷಿಣೆ ಹಾಕಿದ್ರೆ… ಮುಕ್ತಿ ಸಿಗುತ್ತೆ ಅಂತಾ ನಂಬಿಕೆ ಇಟ್ಟಿರೋ ಸಾವಿರಾರು ಜನ ಶಿವನ ಭಕ್ತರು, 16 ಕೀಲೋ ಮೀಟರ್ ಸುತ್ತಳತೆಯ ಗಿರಿಧಾಮವೊಂದನ್ನು ಪ್ರದಕ್ಷಿಣೆ ಹಾಕಿದ್ದು ವಿಶೇಷವಾಗಿತ್ತು. ಅಷ್ಟಕ್ಕೂ ಅದ್ಯಾವ ಧಾಮ ಅಂತೀರಾ ಈ ವರದಿ ನೋಡಿ!! ತಣ್ಣನೆ ಬೀಸುವ ಚುಮುಚುಮು ಚಳಿಯಲ್ಲಿ ಹರಿನಾಮ ಸ್ಮರಣೆ ಮಾಡುತ್ತಾ ಕಾಲ್ನಡಿಗೆಯಲ್ಲಿ ಗಿರಿಗಳಿಗೆ ಪ್ರದಕ್ಷಿಣೆ ಹಾಕುತ್ತಿರುವುದು ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಪಂಚಗಿರಿಗಳ ಸಾಲಿನಲ್ಲಿ. ನಂದಿಬೆಟ್ಟದ (Nandi Hills) ಮೇಲೆ ಯೋಗ ನಂದೀಶ್ವರ, ಬೆಟ್ಟದ ಕೆಳಗೆ ಭೋಗ ನಂದೀಶ್ವರ, ಇವರಿಬ್ಬರ ಮಧ್ಯೆ ವಿಶಾಲವಾಗಿ ಹರಡಿರುವ ಸ್ಕಂದಗಿರಿ, ದಿಬ್ಬಗಿರಿ, ಚಂದ್ರಗಿರಿ ಸೇರಿದಂತೆ ಐದು ಬೆಟ್ಟಗಳ (Pancha Giri) ಸಾಲಿನ ನಡುವೆ ಭಕ್ತ ಸಮೂಹ, ಶಿವನನ್ನು ನೆನೆಯುತ್ತಾ ಹಾಡು ಭಜನೆ ಮಾಡುತ್ತಾ ಸಾಗ್ತಿದ್ರೆ ಕೈಲಾಸವೆ ಧರೆಗಿಳಿದಂತಾಗಿತ್ತು. ಮಕ್ಕಳಿಂದ ವೃದ್ದರವರೆಗೂ 16 ಕೀಲೋ ಮೀಟರ್ ಸುತ್ತಳತೆಯ ನಂದಿಗಿರಿಧಾಮವನ್ನು ಪ್ರದಕ್ಷಿಣೆ ಹಾಕಿ ಶಿವನ ಭಕ್ತರು ಸಂತಸ ಪಟ್ಟರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ, ಬೆಂಗಳೂರು ಗ್ರಾಮಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ನೆರೆಯ ಆಂಧ್ರದ ಹಿಂದೂಪುರ, ಅನಂತಪುರದಿಂದಲೂ ಭಕ್ತ ಸಮೂಹ ನಂದಿಹಿಲ್ಸ್ ಗಿರಿ ಪ್ರದಕ್ಷಿಣೆಗೆ ಹರಿದು ಬಂದಿತ್ತು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರಲ್ಲಿ ದೇವಾಂಗ ಜನಾಂಗಕ್ಕೆ ಸೇರಿದ ಭಕ್ತ ಸಮೂಹ ಹೆಚ್ಚಾಗಿತ್ತು. ಪ್ರತಿ ವರ್ಷ ಆಶಾಢ ಮಾಸದ ಕೊನೆ ಸೋಮವಾರ ದಿನದಂದು ಈ ರೀತಿ ಗಿರಿಪ್ರದಕ್ಷಿಣೆ ಹಾಕುತ್ತಾರೆ. ಪ್ರತಿದಿನ ಮನೆಯ ಬಳಿ ಒಂದು ಕೀಲೋ ಮೀಟರ್ ವಾಕಿಂಗ್ ಮಾಡಲು ಬೇಸರ ಮಾಡಿಕೊಳ್ಳುವ ಮಹಿಳೆಯರಂತೂ… ಮುಗಿಬಿದ್ದು 16 ಕೀಲೋ ಮೀಟರ್ ಪ್ರದಕ್ಷಣೆ ಹಾಕಿದ್ದ ವಿಶೇಷವಾಗಿತ್ತು.

ಶಿವನ ಭಕ್ತರಿಗೆ ಬೇಸರವಾಗದಿರಲಿ ಎಂದು ಆಗಾಗ ತುಂತುರು ಮಳೆ ಸುರಿದು, ರಸ್ತೆ ತಂಪಾಗುವಂತೆ ಮಾಡಿದ್ದು ವಿಶೇಷವಾಗಿತ್ತು! ನಂದಿಯ ಶ್ರೀ ಭೋಗನಂಧಿಶ್ವರ ಸ್ವಾಮಿ ದೇವಸ್ಥಾನದಿಂದ ಹೊರಟು ಮತ್ತೆ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಮಾಡುವುದರ ಮೂಲಕ ಗಿರಿ ಪ್ರದಕ್ಷಿಣೆ ಮುಕ್ತಾಯ ಮಾಡಿದ್ರು.

ಚಿಕ್ಕಬಳ್ಳಾಪುರ ಜಿಲ್ಲೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​