AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಸೇವಂತಿ ತೋಟಕ್ಕೆ ವಿದ್ಯುತ್ ಅಲಂಕಾರ; ಧಾರಾಕಾರ ಮಳೆಯಿಂದ ಬೆಳೆ ರಕ್ಷಿಸಲು ರೈತರ ಹೊಸ ಪ್ರಯೋಗ

ರೈತ ರಾಮಾಂಜಿ ತಮ್ಮ ನಾಲ್ಕು ಎಕರೆಯಲ್ಲಿ ಐಶ್ವರ್ಯ ಎನ್ನುವ ವಿನೂತನ ಸೇವಂತಿ ತಳಿಯನ್ನು ನಾಟಿ ಮಾಡಿದ್ದು, ಸಾವಿರದ ನೂರು ವಿದ್ಯುತ್ ಬಲ್ಬ್​ಗಳನ್ನು ಇದಕ್ಕೆ ಅಳವಡಿಸಿದ್ದಾರೆ. ಒಂದು ಎಕರೆ ಜಮೀನಿಗೆ ವಿದ್ಯುತ್ ಬಲ್ಬ್​ಗಳನ್ನು ಅಳವಡಿಸಿಲು 30 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ.

ಚಿಕ್ಕಬಳ್ಳಾಪುರ: ಸೇವಂತಿ ತೋಟಕ್ಕೆ ವಿದ್ಯುತ್ ಅಲಂಕಾರ; ಧಾರಾಕಾರ ಮಳೆಯಿಂದ ಬೆಳೆ ರಕ್ಷಿಸಲು ರೈತರ ಹೊಸ ಪ್ರಯೋಗ
ವಿದ್ಯುತ್ ದೀಪ
TV9 Web
| Edited By: |

Updated on:Nov 30, 2021 | 1:12 PM

Share

ಚಿಕ್ಕಬಳ್ಳಾಪುರ: ಇತ್ತೀಚೆಗೆ ಸುರಿದ ಧಾರಾಕಾರ ಮಳೆ (Karnataka rain) ಹಾಗೂ ಸೈಕ್ಲೋನ್​ನಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಸಿಲಂತೂ ಇಲ್ಲವೆ ಇಲ್ಲ ಎನ್ನುವಂತಾಗಿದೆ. ಹೀಗಾಗಿ ಬೆಳೆದ ಸೇವಂತಿ (chrysanthemum) ಹೂವಿಗೆ ಅವಶ್ಯಕವಾಗಿರುವ ಕನಿಷ್ಠ ತಾಪಮಾನವಿಲ್ಲದೆ ಬೆಳೆ ಹಾಳಾಗುತ್ತಿರುವುದನ್ನು ಕಂಡ ರೈತರು ನೂತನ ಪ್ರಯೋಗ ಮಾಡಿದ್ದು, ಸೇವಂತಿ ತೋಟಗಳಿಗೆ ವಿದ್ಯುತ್ ದೀಪಗಳನ್ನು (electric light) ಅಳವಡಿಸಿದ್ದಾರೆ. ಇದರಿಂದ ತಾಪಮಾನ ಏರಿಕೆ ಮಾಡುವುದರ ಮೂಲಕ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.

ಸೇವಂತಿ ತೋಟಕ್ಕೆ ಅಲಂಕಾರ ಮಾಡಿದ ಹಾಗೆ ಜಗ ಮಗ ವಿದ್ಯುತ್ ದೀಪಾಲಂಕಾರ ಮಾಡಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಪ್ರಗತಿಪರ ರೈತ ರಾಮಾಂಜಿ ತೋಟದಲ್ಲಿ. ಹೌದು ಇತ್ತಿಚಿಗೆ ಸುರಿದ ಧಾರಾಕರ ಮಳೆಯಿಂದ ಭೂಮಿ ತಂಪಾಗಿದೆ. ಹೊಗಲಿ ಮಳೆ ನಿಂತಿದೆ ಎನ್ನುವಷ್ಟರಲ್ಲಿ ಮತ್ತೆ ಸೈಕ್ಲೋನ್ ಬಂದು ಸೇವಂತಿ ಬೆಳೆ ಕೈ ಕೊಡುವ ಆತಂಕ ಹೆಚ್ಚಾಗಿತ್ತು. ಹೀಗಾಗಿ ರೈತ ರಾಮಾಂಜಿ ನಾಲ್ಕು ಎಕರೆ ಸೇವಂತಿ ತೋಟಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಿ ಭೂಮಿಯಲ್ಲಿ ತಾಪಮಾನ ಏರಿಕೆ ಮಾಡಿದ್ದಾರೆ.

ರೈತ ರಾಮಾಂಜಿ ತಮ್ಮ ನಾಲ್ಕು ಎಕರೆಯಲ್ಲಿ ಐಶ್ವರ್ಯ ಎನ್ನುವ ವಿನೂತನ ಸೇವಂತಿ ತಳಿಯನ್ನು ನಾಟಿ ಮಾಡಿದ್ದು, ಸಾವಿರದ ನೂರು ವಿದ್ಯುತ್ ಬಲ್ಬ್​ಗಳನ್ನು ಇದಕ್ಕೆ ಅಳವಡಿಸಿದ್ದಾರೆ. ಒಂದು ಎಕರೆ ಜಮೀನಿಗೆ ವಿದ್ಯುತ್ ಬಲ್ಬ್​ಗಳನ್ನು ಅಳವಡಿಸಿಲು 30 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಹೀಗೆ ಹೂ ಬೆಳೆಗಳಿಗೆ ವಿದ್ಯುತ್ ದೀಪ ಅಳವಡಿಸಿ ಭೂಮಿಯ ತಾಪಮಾನವನ್ನು 28 ಡಿಗ್ರಿಯಿಂದ 30 ಡಿಗ್ರಿ ವರೆಗೂ ಕಾಪಾಡುವುದರಿಂದ ಸೇವಂತಿ ಹೂವಿನ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಅವಧಿಗೂ ಮುನ್ನ ಹೂ ಬಿಡುವುದು ನಿಲ್ಲತ್ತದೆ. ಹೂ ಬಿಡುವ ಅವಧಿಯನ್ನು ವಿಸ್ತರಿಸಬಹುದು, ಹೂ ಬಂದಾಗ ಕಲರ್ ಗುಣಮಟ್ಟ ಶೈನಿಂಗ್ ಬಂದು ರೈತರ ಹೂಗಳಿಗೆ ಉತ್ತಮ ಬೆಲೆ ಬರುತ್ತದೆ ಎಂದು ತೋಟಗಾರಿಕೆ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಅಧಿಕಾರಿ ರಮೇಶ ಹೇಳಿದ್ದಾರೆ.

ಇತ್ತಿಚಿಗೆ ಸುರಿದ ಧಾರಾಕರ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ನಾಲ್ಕು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ಹೂ ಹಾಳಾಗಿದೆ. ಅಳಿದುಳಿದ ಹೂ ಬೆಳೆಯ ರಕ್ಷಣೆ ಕಷ್ಟವಾಗುತ್ತಿದೆ. ಭೂಮಿಯ ಮೇಲೆ ಕೆಳಗೆ ತಂಪಾದ ಹವಾಗುಣ ಇರುವ ಕಾರಣ ಬೆಳೆಗಳು ಭೂಮಿಯಲ್ಲೆ ಕಮರುತ್ತಿವೆ. ಇದಕ್ಕೆ ರೈತರೆ ಉಪಾಯ ಹುಡುಕಿಕೊಂಡಿದ್ದು, ವಿದ್ಯುತ್ ಮೊರೆ ಹೋಗಿದ್ದಾರೆ.

ವರದಿ: ಭೀಮಪ್ಪ ಪಾಟೀಲ್

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮಳೆಗೆ ಬೆಳೆ ನಾಶ; ದುಬಾರಿಯಾಗಲಿದೆ ತರಕಾರಿ, ಹೂವು, ಹಣ್ಣಿನ ಬೆಲೆ

ಚಿಕ್ಕಬಳ್ಳಾಪುರ ಎಪಿಎಮ್​ಸಿಯಲ್ಲಿ ಹೂವು ಮಾರಲು ಅವಕಾಶ ಸಿಗದೇ ಹೋಗಿದ್ದಕ್ಕೆ ರೊಚ್ಚಿಗೆದ್ದ ಬೆಳೆಗಾರರು ರಸ್ತೆಗೆ ಹೂ ಬಿಸಾಡಿ ಪ್ರತಿಭಟಿಸಿದರು

Published On - 1:04 pm, Tue, 30 November 21

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?