AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tank irrigation: ಒಣಗುತಿರುವ ರಾಗಿ ಬೆಳೆ ಉಳಿಸಿಕೊಳ್ಳಲು ದುಬಾರಿ ಟ್ಯಾಂಕರ್ ನೀರಿಗೆ ಮೊರೆ! ಚಿಕ್ಕಬಳ್ಳಾಪುರ ರೈತರ ಪಾಡು ಯಾರಿಗೂ ಬೇಡ

Chikkaballapur drought: 1 ಟ್ಯಾಂಕರ್ ನೀರಿಗೆ 600 ರೂ. ಆದ್ರೂ ಪರವಾಗಿಲ್ಲ, ಹಸಿವಿನಿಂದ ಬಳಲುತ್ತಿರುವ ಹಸುಗಳಿಗೆ ಮೇವು ಆದ್ರೂ ಆಗಲಿ ಅಂತ ದುಬಾರಿ ಹಣ ತೆತ್ತು ಪ್ರತಿದಿನ 6 ಟ್ಯಾಂಕರ್ ತರಿಸಿ ರಾಗಿ ಜಮೀನಿಗೆ ನೀರು ಹರಿಸುತ್ತಿದ್ದಾರೆ ರೈತಾಪಿ ಜನ. ಜನರು ಎಲ್ಲಿಯಾದ್ರೂ ಕೂಲಿಗೆ ಹೋಗಿ ದುಡಿದು ತಿನ್ನಬಹುದು ಹಸುಗಳನ್ನು ಏನ್ ಮಾಡೊದು ಅನ್ನೊ ಚಿಂತೆ ರೈತರಿಗೆ ಕಾಡುತ್ತಿದೆ.

Tank irrigation: ಒಣಗುತಿರುವ ರಾಗಿ ಬೆಳೆ ಉಳಿಸಿಕೊಳ್ಳಲು ದುಬಾರಿ ಟ್ಯಾಂಕರ್ ನೀರಿಗೆ ಮೊರೆ! ಚಿಕ್ಕಬಳ್ಳಾಪುರ ರೈತರ ಪಾಡು ಯಾರಿಗೂ ಬೇಡ
ಒಣಗುತಿರುವ ರಾಗಿ ಬೆಳೆ ಉಳಿಸಿಕೊಳ್ಳಲು ದುಬಾರಿ ಟ್ಯಾಂಕರ್ ನೀರಿಗೆ ಮೊರೆ!
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Oct 28, 2023 | 2:07 PM

Share

ಆ ಜಿಲ್ಲೆಯ ಆರು ತಾಲೂಕುಗಳು ತೀವ್ರ ಬರಪೀಡಿತವಾಗಿದ್ದು (drought) ಬಿತ್ತಿದ್ದ ಬೆಳೆಗಳು ಒಣಗಿ ನಿಂತಿವೆ. ಅಲ್ಲಿಷ್ಟು ಇಲ್ಲಷ್ಟು ಬೆಳೆಗಳು ಜೀವ ಹಿಡಿದು ನಿಂತಿವೆ, ರಾಗಿ ಫಸಲು ಒಣಗುತ್ತಿದೆ, ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ಅಲ್ಲಿಯ ರೈತರು, ಟ್ಯಾಂಕರ್ (tank irrigation) ಗಳ ಮೂಲಕ ನೀರು ಖರೀದಿಸಿ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿರುವ ದೃಶ್ಯ ಬರಗಾಲದ ಬವಣೆಯನ್ನು ಎತ್ತಿ ತೋರಿಸುತ್ತಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ಕುರಿತು ಒಂದು ವರದಿ.

ಬಿತ್ತಿದ್ದ ರಾಗಿ ಪೈರು, ಇನ್ನೇನು ಒಂದಿಷ್ಟು ಮಳೆ ಬಂದಿದ್ರೆ… ರೈತರ ಹಸಿವು ನೀಗಿಸಬೇಕಿತ್ತು, ಆದ್ರೆ ಮಳೆರಾಯ ಕೈಕೊಟ್ಟ ಕಾರಣ ಜಮೀನಿನಲ್ಲಿ ರಾಗಿ ಪೈರು ಒಣಗುತ್ತಿದೆ. ಇದ್ರಿಂದ ಕನಿಷ್ಠ ಮನೆಯಲ್ಲಿರುವ ಹಸುಗಳಿಗೆ ಮೇವು ಆಗಲಿ ಅಂತ ಚಿಕ್ಕಬಳ್ಳಾಪುರ (Chikkaballapur) ತಾಲೂಕು ಕೊಳವನಹಳ್ಳಿ ರೈತ ದೇವರಾಜ್… ದೂರದ ಬೋರ್ ವೇಲ್ ಗಳಲ್ಲಿ ನೀರು ಖರೀದಿ ಮಾಡಿ ಟ್ಯಾಂಕರ್ ಗಳ ಮೂಲಕ ಒಣಗುತ್ತಿರುವ ರಾಗಿಗೆ ನೀರು ಹರಿಸುತ್ತಿದ್ದಾನೆ. ಈ ಕುರಿತು ನಮ್ಮ ಪ್ರತಿನಿಧಿ ಭೀಮಪ್ಪ ಪಾಟೀಲ ರೈತನ ಜಮೀನಿನಿಂದ ಪ್ರತ್ಯಕ್ಷ ವರದಿ ನೀಡಿದ್ದಾರೆ.

ಒಂದು ಟ್ಯಾಂಕರ್ ನೀರಿಗೆ ಆರು ನೂರು ರೂಪಾಯಿ ಬೆಲೆ ಆಗುತ್ತಿದೆ, ಆದ್ರೂ ಪರವಾಗಿಲ್ಲ, ಹಸಿವಿನಿಂದ ಬಳಲುತ್ತಿರುವ ಹಸುಗಳಿಗೆ ಮೇವು ಆದ್ರೂ ಆಗಲಿ ಅಂತ ದುಬಾರಿ ಹಣ ತೆತ್ತು ಪ್ರತಿದಿನ ಆರು ಟ್ಯಾಂಕರ್ ನೀರು ತರಿಸಿ ರಾಗಿ ಜಮೀನಿಗೆ ನೀರು ಹರಿಸುತ್ತಿದ್ದಾನೆ, ಜನರು ಎಲ್ಲಿಯಾದ್ರೂ ಕೂಲಿಗೆ ಹೋಗಿ ದುಡಿದು ತಿನ್ನಬಹುದು ಹಸುಗಳನ್ನು ಏನ್ ಮಾಡೊದು ಅನ್ನೊ ಚಿಂತೆ ರೈತರಿಗೆ ಕಾಡುತ್ತಿದೆ.

ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿದೆ. ಆದ್ರೆ ಇನ್ನೂ ಸೂಕ್ತ ಬರ ಪರಿಹಾರ ಕ್ರಮಕೈಗೊಂಡಿಲ್ಲ, ಗೋ ಶಾಲೆಗಳ ಆರಂಭ ಮಾಡಿದ ಬಗ್ಗೆ ಮಾಹಿತಿ ಇಲ್ಲ, ಇದ್ರಿಂದ ಒಂದೆಡೆ ರೈತರು, ಮತ್ತೊಂದೆಡೆ ಜಾನುವಾರುಗಳು ಪರದಾಡ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:45 pm, Sat, 28 October 23

Follow Us
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು